Asianet Suvarna News Asianet Suvarna News

ಗಡಿಯಲ್ಲಿ ಡ್ರ್ಯಾಗನ್ ದುರಹಂಕಾರ, ಶಾಂತಿ ಮಾತುಕತೆ ಬೆನ್ನಲ್ಲೇ ಚೀನಾ ಕಿರಿಕ್!

ಶಾಂತಿ ಮಾತುಕತೆ ನಡೆದ ಕೇವಲ ಹತ್ತು ದಿನಗಳೊಳಗೆ ಗಡಿಯಲ್ಲಿ ಮತ್ತೆ ಚೀನಾ ತನ್ನ ನರಿ ಬುದ್ಧಿ ತೋರಿಸಿದೆ. ಸೋಮವಾರ ತಡ ರಾತ್ರಿ ಭಾರತದ ಗಡಿಯಲ್ಲಿ ಚೀನಾ ಯುದ್ಧೋನ್ಮಾನದ ವರ್ತನೆ ತೋರಿದೆ.

ಲಡಾಖ್(ಜೂ.16):  ಶಾಂತಿ ಮಾತುಕತೆ ನಡೆದ ಕೇವಲ ಹತ್ತು ದಿನಗಳೊಳಗೆ ಗಡಿಯಲ್ಲಿ ಮತ್ತೆ ಚೀನಾ ತನ್ನ ನರಿ ಬುದ್ಧಿ ತೋರಿಸಿದೆ. ಸೋಮವಾರ ತಡ ರಾತ್ರಿ ಭಾರತದ ಗಡಿಯಲ್ಲಿ ಚೀನಾ ಯುದ್ಧೋನ್ಮಾನದ ವರ್ತನೆ ತೋರಿದೆ.

ಚೀನಾ ಕಿರಿಕ್‌ನಿಇಂದಾಗಿ ಭಾರತೀಯ ಸೇನೆಯ ಸೇನಾಧಿಕಾರಿ ಸೇರಿ ಒಟ್ಟು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ತುರ್ತು ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಗ್ಯಾಲ್ವಾನ್ ಕಣಿವೆಯಲ್ಲಿ ಈ ಸಂಘರ್ಷ ನಡೆದಿದ್ದು, ಸದ್ಯ ಉಭಯ ರಾಷ್ಟ್ರಗಳ ಉನ್ನತ ಸೇನಾ ಅಧಿಕಾರಿಗಳು ಈ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಚೀನಾ ಹಾಗೂ ಭಾರತದ ಗಡಿಯುದ್ಧಕ್ಕೂ ಇರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೈ ಅಲರ್ಟ್ ಗೋಷಿಸಲಾಗಿದೆ.