ಪಿತೃ ಪಕ್ಷದ ಹಿನ್ನೆಲೆಯೇನು? ಯಾಕಾಗಿ ಪೂರ್ವಜರ ಪೂಜೆ ಮಾಡಬೇಕು?
ಪಿತೃಗಳೆಂದರೆ ಯಾರು? ಪಿತೃಗಳನ್ನು ಯಾಕೆ ಪೂಜಿಸಬೇಕು? ಪೂರ್ವಜರ ಶ್ರಾದ್ಧ ಮಾಡಬೇಕೇಕೆ? ಶ್ರಾದ್ಧ ಎಂದರೇನು? ವಿವರವಾಗಿ ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.
ದೇವಕಾರ್ಯ, ಪಿತೃಕಾರ್ಯದಿಂದ ಎಂದಿಗೂ ವಿಮುಖರಾಗಬಾರದು. ಚತುರ್ಮುಖ ಬ್ರಹ್ಮ ಎಲ್ಲ ದೇವತೆಗಳನ್ನೂ ಸೃಷ್ಟಿ ಮಾಡಿ ಒಂದೊಂದು ದೇವತೆಗೂ ಒಂದೊಂದು ಅಧಿಕಾರ ವಹಿಸಿ ಕೊಟ್ಟ. ಹಾಗೆಯೇ ಪ್ರಾಣಿ, ಪಕ್ಷಿ, ಸಸ್ಯಸಂಕುಲದ ಸೃಷ್ಟಿ, ಪರಿಪಾಲನೆಯನ್ನು ಮೂರು ದೇವತೆಗಳಿಗೆ ವಹಿಸಿದ. ಆ ಮೂರು ದೇವತೆಗಳೇ ಪಿತೃ ದೇವತೆಗಳು. ಆ ಪಿತೃ ದೇವತೆಗಳೇ ವಸು, ರುದ್ರ, ಆದಿತ್ಯ.. ಇವರೇ ಈ ಪಿತೃಪಕ್ಷದ ಪ್ರಧಾನ ದೇವತೆಗಳು. ಇವರು ತಂದೆ, ತಾತ, ಮುತ್ತಾತರನ್ನು ಪ್ರತಿನಿಧಿಸುತ್ತಾರೆ. ಈ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.