Asianet Suvarna News Asianet Suvarna News

ಮಹಾಯಜ್ಞಕ್ಕೆ ಬಂದ ಪಾರ್ವತಿಯನ್ನು ದಕ್ಷ ಅವಮಾನಿಸಿದ್ದೇಕೆ? ದಕ್ಷನಿಗಾದ ಪ್ರಾಯಶ್ಚಿತವೇನು?

ಒಮ್ಮೆ ದಕ್ಷ ಪ್ರಜಾಪತಿ ಅತ್ಯಂತ ವೈಭವೋಪೇತವಾದ ಯಜ್ಞವನ್ನು ಪ್ರಾರಂಭ ಮಾಡುತ್ತಾನೆ. ಇದಕ್ಕೆ ದೇವತೆಗಳು, ಗಂಧರ್ವರು ಹೋಗಿರುತ್ತಾರೆ. ಇದು ಪಾರ್ವತಿಗೂ ಗೊತ್ತಾಗುತ್ತದೆ. ನಮಗೆ ಆಹ್ವಾನ ಬಂದಿಲ್ಲದಿದ್ದರೂ ತವರು ಮನೆಯಲ್ವಾ? ಹೋಗೋಣ ಅಂತ ಶಿವನಲ್ಲಿ ಪ್ರಾರ್ಥಿಸುತ್ತಾಳೆ. 

ಒಮ್ಮೆ ದಕ್ಷ ಪ್ರಜಾಪತಿ ಅತ್ಯಂತ ವೈಭವೋಪೇತವಾದ ಯಜ್ಞವನ್ನು ಪ್ರಾರಂಭ ಮಾಡುತ್ತಾನೆ. ಇದಕ್ಕೆ ದೇವತೆಗಳು, ಗಂಧರ್ವರು ಹೋಗಿರುತ್ತಾರೆ. ಇದು ಪಾರ್ವತಿಗೂ ಗೊತ್ತಾಗುತ್ತದೆ. ನಮಗೆ ಆಹ್ವಾನ ಬಂದಿಲ್ಲದಿದ್ದರೂ ತವರು ಮನೆಯಲ್ವಾ? ಹೋಗೋಣ ಅಂತ ಶಿವನಲ್ಲಿ ಪ್ರಾರ್ಥಿಸುತ್ತಾಳೆ. ಆದರೆ ಶಿವ, ಆಹ್ವಾನ ಬಂದಿಲ್ಲ. ಹೋಗದಿರುವುದೇ ಲೇಸು ಎನ್ನುತ್ತಾನೆ.

ಭಕ್ತಿ ಎಂದರೇನು? ಭಗವಂತನಲ್ಲಿ ನಮ್ಮ ಭಕ್ತಿ ಯಾವ ರೀತಿ ಇರಬೇಕು?

ತವರೆಂಬ ಮಮಕಾರದಲ್ಲಿ ಪಾರ್ವತಿ ಗಂಡನ ಮಾತು ಕೇಳದೇ ಅಲ್ಲಿಗೆ ಹೋಗುತ್ತಾಳೆ. ದಕ್ಷ, ಪಾರ್ವತಿಯನ್ನು ಅವಮಾನಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ಪಾರ್ವತಿ ದೇಹ ತ್ಯಾಗ ಮಾಡುತ್ತಾಳೆ. ಆಗ ಶಿವ ರೌದ್ರಾವತಾರ ತಾಳುತ್ತಾನೆ. ಮುಂದೆ ದೇವತೆಗಳು ಸಿವನನ್ನು ಪ್ರಾರ್ಥಿಸುತ್ತಾರೆ. ಆಗ ಶಾಂತನಾಗುತ್ತಾನೆ. ಈ ದಕ್ಷ ಪುರಾಣವನ್ನು ಕೇಳುವವರಿಗೆ, ಕೀರ್ತಿಸುವವರಿಗೆ ಯಶಸ್ಸು ಉಂಟಾಗುತ್ತದೆ. ಪಾಪಗಳು ದೂರವಾಗುವವು ಎಂದು ಹೇಳಲಾಗುತ್ತದೆ. 
 

Video Top Stories