Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಬಳಗ ಅವರನ್ನು ಜೀವಂತ ದೇವರಂತೆ ಪೂಜಿಸುತ್ತಿದೆ. ಆಷಾಢ ಏಕಾದಶಿ ದಿನದಂದು ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರು ಪುನೀತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
- Home
- News
- State
- Karnatata Latest News Live: Mandya - ಆಷಾಢ ಏಕಾದಶಿಯಂದು ಪುನೀತ್ ರಾಜ್ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ
Karnatata Latest News Live: Mandya - ಆಷಾಢ ಏಕಾದಶಿಯಂದು ಪುನೀತ್ ರಾಜ್ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ

ಬೆಂಗಳೂರು (ಜುಲೈ 7): ಕಾಂಗ್ರೆಸ್ಸಿನತ್ತ ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯಲು ರಾಷ್ಟ್ರೀಯ ಸಲತಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದರ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಇದು ಎಂದು ಬಿಜೆಪಿ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ, ಒಬಿಸಿ ಸಲಹಾ ಮಂಡಳಿಗೆ ನಾನು ಮುಖ್ಯಸ್ಥ ಅಲ್ಲ, ನಾನೊಬ್ಬ ಸದಸ್ಯ. ಅದರ ನೇತೃತ್ವವನ್ನು ಬೇರೊಬ್ಬರು ಹೊತ್ತಿದ್ದಾರೆ. ನಾನು ಆತಿಥ್ಯ ಮಾತ್ರ ವಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 7th July:Mandya - ಆಷಾಢ ಏಕಾದಶಿಯಂದು ಪುನೀತ್ ರಾಜ್ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ
Karnataka News Live 7th July:ದೇವಸ್ಥಾನ ಬಳಿ ಸಿಕ್ಕಿತ್ತು 2 ರೂಪಾಯಿ, 55 ವರ್ಷ ಬಳಿಕ 10 ಸಾವಿರ ರೂ ಹುಂಡಿಗೆ ಹಾಕಿದ ಭಕ್ತ
ದೇವಸ್ಥಾನದ ಆವರಣದಿಂದ 2 ರೂಪಾಯಿ ಸಿಕ್ಕಿತ್ತು. ಇದು ಯಾರ ಹಣ ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ತಾನೆ ಇಟ್ಟುಕೊಂಡ ಭಕ್ತ, ಇದೀಗ 55 ವರ್ಷಗಳ ಬಳಿಕ 10,000 ರೂಪಾಯಿ ಹಣ ಹುಂಡಿಗೆ ಹಾಕಿ 5 ದಶಕಗಳ ಹಿಂದಿನ ಘಟನೆ ಹಾಗೂ ಇದೀಗ ಹುಂಡಿಗೆ ಹಾಕಿದ ಹಣದದ ಕಾರಣ ಬಹಿರಂಗಪಡಿಸಿದ್ದಾನೆ.
Karnataka News Live 7th July:ದೆವ್ವ ಬಿಡಿಸುವುದಾಗಿ ಕೋಲಿನಿಂದ ಹೊಡೆತ; ಶಿವಮೊಗ್ಗ ಮಹಿಳೆ ದಾರುಣ ಸಾವು!
Karnataka News Live 7th July:Apoorva Mukhija - ಹಗಲಿರುಳೂ ಓದಿ ಸಾಧಿಸಿದಾಗ ಸಿಕ್ಕಿದ್ದು ಶೂನ್ಯ - ರೀಲ್ಸ್ನಿಂದ 41 ಕೋಟಿ ಸಾಮ್ರಾಜ್ಯದ ಒಡತಿ!
ಹಗಲಿರುಳೂ ಓದಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಕಣ್ಣೆತ್ತಿ ನೋಡದ ಅದೇ ಜನ ಇಂದು ಅರೆಬರೆ ಡ್ರೆಸ್ನ ರೀಲ್ಸ್ಗೆ ಫಿದಾ ಆಗಿ ಫಾಲೋವರ್ಸ್ ಆಗಿದ್ದಾರೆ. ಯುವತಿಯ ಇಂಟರೆಸ್ಟಿಂಗ್ ಕಥೆ ಕೇಳಿ!
Karnataka News Live 7th July:ಕಾರಿನ ನಂಬರ್ ಬದಲು ಮಿ.ಬಾಸ್, ದಂಡದ ಜೊತೆ ಸರ್ಪ್ರೈಸ್ ಕೊಟ್ಟ ಬೆಂಗಳೂರು ಪೊಲೀಸ್
ಕಾರಿನ ನಂಬರ್ ಪ್ಲೇಟ್ ಮೇಲೆ ರಿಜಿಸ್ಟ್ರೇಶನ್ ನಂಬರ್ ಬಿಟ್ಟು ಇನ್ನೇನು ಬರೆಯುವಂತಿಲ್ಲ. ಆದರೆ ಕೆಲವರು ಈ ನಿಯಮ ಉಲ್ಲಂಘಿಸುತ್ತಾರೆ.ಬೆಂಗಳೂರಿನಲ್ಲಿ ಹ್ಯುಂಡೈ ಕ್ರೆಟಾ ಮಾಲೀಕ ನಂಬರ್ ಬದಲು ಮಿಸ್ಟರ್ ಬಾಸ್ ಎಂದು ಹಾಕಿದ್ದಾನೆ. ಬೆಂಗಳೂರು ಪೊಲೀಸರು ಮಾಲೀಕನಿಗೆ ಸರ್ಪ್ರೈಸ್ ನೀಡಿದ್ದಾರೆ.
Karnataka News Live 7th July:ವಿರಾಟ್ ಕೊಹ್ಲಿ ಇನ್ನೊಂದು ಮುಖದ ಅನಾವರಣ ಮಾಡಿದ ರವೀಂದ್ರ ಜಡೇಜ!
ರವೀಂದ್ರ ಜಡೇಜಾ ಅವರ ಥ್ರೋಬ್ಯಾಕ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರ ಮತ್ತೊಂದು ಮುಖವನ್ನು ಬಹಿರಂಗಪಡಿಸಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನನ್ನೂ ಅನುಕರಿಸುವ ಕೊಹ್ಲಿ, ಮೈದಾನದಲ್ಲೂ ವಾತಾವರಣ ಹೇಗೆ ಇಡುತ್ತಿದ್ದರು ಎಂದು ಜಡೇಜಾ ಹೇಳಿದ್ದಾರೆ.
Karnataka News Live 7th July:ಹಾಸನ ಸಂಸದ ಶ್ರೇಯಸ್ ಪಟೇಲ್, ಅಕ್ಷತಾ ದಂಪತಿಗೆ ಅವಳಿ ಹೆಣ್ಣು ಮಕ್ಕಳು!
Karnataka News Live 7th July:ಶೇ.35ರಷ್ಟು ತರಿಗೆ ಆದರೂ ಏನೂ ಸರಿಯಿಲ್ಲ, ವೈರಸ್ ಪೋಸ್ಟ್ನಿಂದ ಭಾರತ v ನಾರ್ಡಿಕ್ ಚರ್ಚೆ
ಭಾರತದಲ್ಲಿ ಕಟ್ಟುವ ತೆರಿಗೆ ಹಾಗೂ ಸಿಗುವ ಸೌಲಭ್ಯದ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಇದೀಗ ವೈರಲ್ ಪೋಸ್ಟ್ ಭಾರತದ ನಾರ್ಡಿಕ್ ಕಂಟ್ರಿ ನಡುವಿನ ಚರ್ಚೆ ಹುಟ್ಟು ಹಾಕಿದೆ. ಏನಿದು ಹೊಸ ಚರ್ಚೆ
Karnataka News Live 7th July:IVF Mother - ಪ್ರೆಗ್ನೆನ್ಸಿ ವಿಷ್ಯ ಕೇಳಿ ಮುಖ್ಯಮಂತ್ರಿ ಶಾಕ್ ಆಗೋದ್ರು ಎಂದ ನಟಿ ಭಾವನಾ!
ಅವಿವಾಹಿತೆಯಾಗಿರೋ ನಟಿ ಭಾವನಾ ಪ್ರೆಗ್ನೆನ್ಸಿ ವಿಷ್ಯ ಕೇಳಿ ಸಿಎಂ ಸಿದ್ದರಾಮಯ್ಯ ಶಾಕ್ ಆದರಂತೆ. ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ..
Karnataka News Live 7th July:ಎದೆನೋವೆಂದು ಆಸ್ಪತ್ರೆಗೆ ಬಂದರೆ ಡಾಕ್ಟ್ರೇ ಇರಲಿಲ್ಲ; ಹೃದಯಾಘಾತ ಹೊಡೆತಕ್ಕೆ ಪ್ರಾಣ ಉಳಿಯಲಿಲ್ಲ!
ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಎದೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಸಿಂಧನೂರಿಗೆ ಹೋಗುವಂತೆ ನರ್ಸ್ ತಿಳಿಸಿದ್ದಾರೆ. ಸಿಂಧನೂರಿಗೆ ಹೋಗುವ ದಾರಿ ಮಧ್ಯೆ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Karnataka News Live 7th July:Sleeping Challenge - 9 ಗಂಟೆ ಮಲಗಿ 9 ಲಕ್ಷ ಗೆದ್ದಳು! ನೀವೂ ಗೆಲ್ಬೋದು ಈ ಬೃಹತ್ ಮೊತ್ತ- ಡಿಟೇಲ್ಸ್ ಇಲ್ಲಿದೆ...
ಬೆಂಗಳೂರಿನಲ್ಲಿ ಈಚೆಗೆ ನಡೆದ ಸ್ಲೀಪಿಂಗ್ ಚಾಲೆಂಜ್ನಲ್ಲಿ ಭಾಗವಹಿಸಿ ಪುಣೆಯ ಯುವತಿ 9.1 ಲಕ್ಷ ರೂಪಾಯಿ ಗೆದ್ದಿದ್ದಾರೆ. ಏನಿದು ಚಾಲೆಂಜ್? ನೀವೂ ಗಳುಹಿಸಬಹುದು ಈ ಮೊತ್ತ!
Karnataka News Live 7th July:ದಾಖಲೆ ಬರೆದ ಟಾಟಾ ಹ್ಯಾರಿಯರ್ ಇವಿ ಕಾರು 24 ಗಂಟೆಯಲ್ಲಿ 10,000 ಬುಕಿಂಗ್
ಬಿಡುಗಡೆಯಾದ ಮೊದಲ ದಿನದಲ್ಲೇ 10,000 ಕ್ಕೂ ಹೆಚ್ಚು ಬುಕಿಂಗ್ಗಳೊಂದಿಗೆ, ಟಾಟಾ ಹ್ಯಾರಿಯರ್ EV ದಾಖಲೆ ಬರೆದಿದೆ. ಈ ವಿಭಾಗದಲ್ಲಿ ಇದು ಎರಡನೇ ಅತ್ಯುತ್ತಮ ಬುಕಿಂಗ್. ಟಾಟಾ ಹ್ಯಾರಿಯರ್ ಈ ಮಟ್ಟಿಗೆ ಬುಕಿಂಗ್ ಪಡೆದುಕೊಳ್ಳಲು ಇದರ ಬೆಲೆ, ಮೈಲೇಜ್ ಹಾಗೂ ಮತ್ತೊಂದು ಕಾರಣವಿದೆ.
Karnataka News Live 7th July:ಜಪಾನ್ಗಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಭಾರತದ ಏಕೈಕ ಜಿಲ್ಲೆ!
Karnataka News Live 7th July:ಕೇವಲ 7,200 ರೂ ತಿಂಗಳ ಇಂಎಐ ಸಾಕು, ಮನೆಗೆ ತನ್ನಿ ಹೊಸ ಟಾಟಾ ಪಂಚ್ ಕಾರು
ಭಾರತದ ಅತಿ ಸುರಕ್ಷಿತ ಮತ್ತು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಟಾಟಾ ಪಂಚ್ 2025 ಕಾರು ಕೇವಲ ಮಾಸಿಕ ಕಂತು 7200 ರೂಪಾಯಿಗೆ ಲಭ್ಯವಿದೆ. ಕಾರಿನ ಇಎಂಐ ಆಯ್ಕೆ, ಡೌನ್ಪೇಮೆಂಟ್ ಕುರಿತ ಡಿಟೇಲ್ಸ್ ಇಲ್ಲಿದೆ.
Karnataka News Live 7th July:ಗಂಡನಿಂದಲೇ ಮಹಿಳಾ ಕಾರ್ಪೋರೇಟರ್ ಬರ್ಬರ ಹತ್ಯೆ
Karnataka News Live 7th July:Sugar Level Control - ಶುಗರ್ ನಿಯಂತ್ರಣಕ್ಕೆ ಊಟದ ಬಳಿಕ ಎರಡೇ ನಿಮಿಷ ಹೀಗೆ ಮಾಡಿ, ಮ್ಯಾಜಿಕ್ ನೋಡಿ...
ಮಧುಮೇಹ ಎನ್ನುವುದು ಮಾಮೂಲಾಗಿರುವ ಈ ಕಾಲಘಟ್ಟದಲ್ಲಿ ಊಟದ ಬಳಿಕ ಎರಡೇ ಎರಡು ನಿಮಿಷ ಸಮಯ ಮೀಸಲಿಟ್ಟು ಹೀಗೆ ಮಾಡಿದರೆ, ಶುಗರ್ ಲೆವೆಲ್ ಕಂಟ್ರೋಲ್ಗೆ ತರಬಹುದು ಎಂದಿದೆ ಅಧ್ಯಯನ, ಏನಿದು?
Karnataka News Live 7th July:ನಶೆಯಲ್ಲಿ ಮಹಿಳೆ ಕಾರಿಗೆ ಡಿಕ್ಕಿ ಬಳಿಕ ಬೆದರಿಕೆ, ಎಂಎನ್ಎಸ್ ನಾಯಕನ ಪುತ್ರನ ಪುಂಡಾಟಿಕೆ ವಿಡಿಯೋ ಸೆರೆ
ಕುಡಿದ ನಶೆಯಲ್ಲಿ ಎಂಎನ್ಎಸ್ ನಾಯಕನ ಪುತ್ರ ಪುಂಡಾಟಿಕೆ ನಡೆಸಿದ್ದಾನೆ. ಮಹಿಳೆ ಕಾರಿಗೆ ಡಿಕ್ಕಿಯಾಗಿ ಬಳಿಕ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈತನ ವಿಡಿಯೋವನ್ನು ಮಹಿಳೆ ಸೆರೆ ಹಿಡಿದಿದ್ದು. ಇದೀಗ ಪ್ರಕರಣ ದಾಖಲಾಗಿದೆ.
Karnataka News Live 7th July:ಇಡೀ ಕುಟುಂಬನ್ನೇ ಆಹುತಿ ಪಡೆದ ಹಿಮಾಚಲ ಪ್ರವಾಹ - ತಬ್ಬಲಿಯಾದ 11 ತಿಂಗಳ ಕಂದನ ವೀಡಿಯೋ ವೈರಲ್
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಉಂಟಾದ ದುರಂತದಲ್ಲಿ 11 ತಿಂಗಳ ಮಗು ಪವಾಡಸದೃಶವಾಗಿ ಬದುಕುಳಿದಿದೆ. ಮಗುವಿನ ಕುಟುಂಬದವರೆಲ್ಲರೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
Karnataka News Live 7th July:ಕಾಂಗ್ರೆಸ್ ಹೇಳಿದಂತೆ ನನ್ನ ಶಾಸ್ತ್ರನೇ ನಿಜವಾಗಿ ಹೋಯ್ತಲ್ಲ - ವ್ಯಂಗ್ಯವಾಡಿದ ಆರ್ ಅಶೋಕ್!
Karnataka News Live 7th July:ದೇಶದ ಅತೀ ಸುಂದರ ಈ ಗ್ರಾಮಕ್ಕೆ ಭೇಟಿ ನೀಡಲು ಆನಂದ್ ಮಹೀಂದ್ರ ಪ್ಲಾನ್, ಇದು ಭೂಲೋಕದ ಸ್ವರ್ಗ
ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋ, ಫೋಟೋ, ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಾರಿ ಆನಂದ್ ಮಹೀಂದ್ರ ಒಂದು ಗ್ರಾಮದ ವಿಡಿಯೋ ಹಂಚಿಕೊಂಡು, ಇಲ್ಲಿಗೆ ಭೇಟಿ ನೀಡಬೇಕು ಎಂದಿದ್ದಾರೆ. ಆನಂದ್ ಮಹೀಂದ್ರ ಹೇಳಿದ ಈ ಗ್ರಾಮ ನಿಜಕ್ಕೂ ಭೂಲೋಕದ ಸ್ವರ್ಗ.