ಬೈಕ್ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು, ರಿಂಗ್ ರಸ್ತೆಯಲ್ಲಿ ಆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
- Home
- News
- State
- Karnataka News Live: ಬೈಕ್ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು
Karnataka News Live: ಬೈಕ್ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು

ಬೆಂಗಳೂರು: ‘ಆಲ್ ಐಸ್ ಆನ್ ಚಿತ್ತಾಪುರ್ (ಎಲ್ಲರ ಕಣ್ಣು ಚಿತ್ತಾಪುರದತ್ತ)’ಎಂಬ ಹ್ಯಾಷ್ಟ್ಯಾಗ್ ಮಾಡಿ, ಆರ್ಎಸ್ಎಸ್ ಮತ್ತು ಬಿಜೆಪಿಯ ಕಾರ್ಯಕರ್ತರು ಇದನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಇದುವರೆಗೆ ವಿದೇಶಗಳಲ್ಲಿ ನಡೆಯುತ್ತಿದ್ದ ಆಲ್ ಐಸ್ ಆನ್ ಅಭಿಯಾನ ಕರ್ನಾಟಕಕ್ಕೂ ಕಾಲಿಟ್ಟಂತಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ, ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ ನಡೆಸಲು ಈಗಾಗಲೇ ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ಆರ್ಎಸ್ಎಸ್ ವತಿಯಿಂದ ಮನವಿ ಸಲ್ಲಿಸಲಾಗಿದೆ. ಸುಮಾರು 25 ಸಾವಿರ ಸ್ವಯಂ ಸೇವಕರನ್ನು ಸೇರಿಸಿ, ಶಕ್ತಿ ಪ್ರದರ್ಶಿಸಲು ಸಂಘ ಪರಿವಾರದ ನಾಯಕರು ತೀರ್ಮಾನಿಸಿದ್ದಾರೆ.
Karnataka News Live 21 October 2025ಬೈಕ್ಗೆ ಸಿಮೆಂಟ್ ಟ್ಯಾಂಕರ್ ಡಿಕ್ಕಿ, ಕಲಬುರಗಿ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಸಾವು
Karnataka News Live 21 October 2025Photos - ದೀಪಾವಳಿಗೆ ಫಸ್ಟ್ ಟೈಮ್ ಮಗಳು ದುವಾ ಮುಖ ತೋರಿಸಿದ Deepika Padukone, Ranveer Singh ದಂಪತಿ!
Deepika Padukone Daughter Photos: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಪಾಲಕರಾಗಿ ಬಡ್ತಿ ಪಡೆದು ಒಂದು ವರ್ಷವಾಗಿದೆ. ಕಳೆದ ಒಂದು ವರ್ಷದಿಂದ ಇವರಿಬ್ಬರು ಮಗಳ ಮುಖವನ್ನು ಪಬ್ಲಿಕ್ಗೆ ತೋರಿಸಿರಲಿಲ್ಲ. ಈಗ ಫೋಟೋ ಹಂಚಿಕೊಂಡಿದ್ದಾರೆ.
Karnataka News Live 21 October 2025ಬೆಂಗಳೂರು ಸ್ವಿಗ್ಗಿ, ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ಸ್ಗಳ ರಾಬರಿ ಮಾಡ್ತಿದ್ದ ನೇಪಾಳಿ ಗ್ಯಾಂಗ್ ಅರೆಸ್ಟ್!
ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿದ್ದ ನೇಪಾಳಿ ಮೂಲದ ನಾಲ್ವರ ಗ್ಯಾಂಗ್ ಅನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಮೊಬೈಲ್ ಫೋನ್ಗಳು ಮತ್ತು ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳಲಾದೆ.
Karnataka News Live 21 October 2025ಯುಎಸ್ ಎಚ್-1ಬಿ ವೀಸಾ ಶುಲ್ಕ ಹೆಚ್ಚಳ ರದ್ದುಗೊಳಿಸಿದ ಟ್ರಂಪ್, ಜೊತೆಗೆ ಭರ್ಜರಿ ವಿನಾಯಿತಿ ಘೋಷಣೆ
ಎಚ್-1ಬಿ ವೀಸಾಗೆ ಟ್ರಂಪ್ ಆಡಳಿತ ವಿಧಿಸಿದ್ದ ಭಾರಿ ಶುಲ್ಕ ಹೆಚ್ಚಳದಲ್ಲಿ ದೊಡ್ಡ ವಿನಾಯಿತಿಗಳನ್ನು ಘೋಷಿಸಲಾಗಿದೆ. ಈ ಹೊಸ ಪ್ರಕಟಣೆಯ ಪ್ರಕಾರ, ಈಗಾಗಲೇ ಎಚ್-1ಬಿ ವೀಸಾ ಹೊಂದಿರುವವರು ಮತ್ತು ನಿರ್ದಿಷ್ಟ ದಿನಾಂಕದ ಮೊದಲು ಅರ್ಜಿ ಸಲ್ಲಿಸುವವರಿಗೆ ಈ ಶುಲ್ಕ ಹೆಚ್ಚಳ ಅನ್ವಯಿಸುವುದಿಲ್ಲ.
Karnataka News Live 21 October 2025Lakshmi Nivasa ಜಯಂತ್ಗೆ ಪ್ರಶಸ್ತಿಯಲ್ಲಿ ಅನ್ಯಾಯ? ನಟ ದೀಪಕ್ ಅಭಿಮಾನಿಗಳು ಸಿಕ್ಕಾಪಟ್ಟೆ ಗರಂ
Karnataka News Live 21 October 2025ಪ್ರದೀಪ್ ಈಶ್ವರ್ ಜ್ಞಾನವಿಲ್ಲದ ಮಾತಿನಿಂದ ದೇಶದ ಜನ ನಮ್ಮ ಕ್ಷೇತ್ರ ನೋಡಿ ನಗ್ತಿದ್ದಾರೆ; ಸಂಸದ ಡಿ. ಸುಧಾಕರ್
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಜ್ಞಾನವಿಲ್ಲದ ಮಾತುಗಳಿಂದ ಕ್ಷೇತ್ರವು ನಗೆಪಾಟಲಿಗೀಡಾಗುತ್ತಿದೆ ಎಂದು ಸಂಸದ ಡಾ.ಕೆ. ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ಕೆರಳಿಸುತ್ತಾ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
Karnataka News Live 21 October 2025RSS ಪಥಸಂಚಲನದ ವಿಡಿಯೋ ಜೊತೆ, ಬಾಲ್ಯದ ಕಹಿ ಸತ್ಯವನ್ನೂ ಅನಾವರಣಗೊಳಿಸಿದ ನಟ ಜಗ್ಗೇಶ್
ನಟ ಜಗ್ಗೇಶ್ ಅವರು ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾದ ವಿಡಿಯೋ ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ತಾವು ಹುಟ್ಟಿಬೆಳೆದ ಗುಡಿಸಲಿನ ಫೋಟೋ ಶೇರ್ ಮಾಡಿ, ಬಡತನದಿಂದ ನವರಸನಾಯಕನಾಗಿ ಬೆಳೆದ ತಮ್ಮ ಗೆಲುವಿನ ಕಥೆಯನ್ನು ವಿವರಿಸಿ, ಕೊರಗುವವರಿಗೆ ಸ್ಫೂರ್ತಿದಾಯಕ ಪಾಠ ಹೇಳಿದ್ದಾರೆ.
Karnataka News Live 21 October 2025ನಮ್ಮ ಸಾವ್ಕಾರನ ಬೆನ್ನಿಗೆ ಚಾಕು ಹಾಕಿದಿರಿ, ಶಾಸಕ ರಾಜು ಕಾಗೆ-ಸವದಿ ಜೋಡೆತ್ತುಗಳ ನಡುವೆ ಆಡಿಯೋ ಬಿರುಗಾಳಿ!
ಚಿಕ್ಕೋಡಿ ಡಿಸಿಸಿ ಬ್ಯಾಂಕ್ ಚುನಾವಣೆ ಬಳಿಕ, ಶಾಸಕ ರಾಜು ಕಾಗೆ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡಿದೆ. ಸವದಿ ಬೆಂಬಲಿಗರು ಕಾಗೆ ವಿರುದ್ಧ "ಬೆನ್ನಿಗೆ ಚೂರಿ ಹಾಕಿದ್ದೀರಿ" ಎಂದು ಆರೋಪಿಸಿರುವ ಆಡಿಯೋ ವೈರಲ್ ಆಗಿದೆ.
Karnataka News Live 21 October 2025Bigg Boss, ಅವಳು ಸಂಸ್ಕಾರಿಯಲ್ಲ, Adut Toys ಮಾರಾಟ ಮಾಡಿದ್ಳು - ವೈಲ್ಡ್ಕಾರ್ಡ್ಎಂಟ್ರಿಯಿಂದ ಸತ್ಯ ಬಯಲು!
Bigg Boss 19 Show: ಬಿಗ್ ಬಾಸ್ 19 ಶೋನಲ್ಲಿ ತಾನ್ಯಾ ಮಿತ್ತಲ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ. ತಾನು ಆಗರ್ಭ ಶ್ರೀಮಂತೆ, ನಮ್ಮದು ತುಂಬ ಬ್ಯುಸಿನೆಸ್ ಇದೆ ಎಂದು ಹೇಳಿಕೊಳ್ಳುವ ಅವರು ದೊಡ್ಮನೆಯಲ್ಲಿ ನಿತ್ಯವೂ ಸೀರೆ ಧರಿಸುತ್ತಾರೆ.
Karnataka News Live 21 October 2025Naa Ninna Bidalaare - ಸಂಜೀವಿನಿ ಸಿಗದೇ ದುರ್ಗಾ ಪರದಾಟ! ಹಿತಾ ಬ*ಲಿಗೆ ವೇದಿಕೆ ಸಿದ್ಧ- ಮುಂದೇನು?
ದುಷ್ಟ ಶಕ್ತಿ ಪಡೆಯಲು ಮಾಳವಿಕಾ, ಹಿತಾಳನ್ನು ಬ*ಲಿ ಕೊಡಲು ಸಿದ್ಧತೆ ನಡೆಸಿದ್ದಾಳೆ. ಇನ್ನೊಂದೆಡೆ, ಹಿತಾಳನ್ನು ಉಳಿಸಲು ದುರ್ಗಾ, ದೇವಿಯ ಕಳೆದುಹೋದ ಗೆಜ್ಜೆ, ಬಳೆಗಳನ್ನು ಹುಡುಕಿ ಇದೀಗ ಸಂಜೀವಿನಿ ಮೂಲಿಕೆಗಾಗಿ ಪರದಾಡುತ್ತಿದ್ದಾಳೆ. ಬ*ಲಿಗೂ, ಸಂಜೀವಿನಿ ಹುಡುಕಾಟಕ್ಕೂ ಕ್ಷಣಗಣನೆ ಆರಂಭವಾಗಿದೆ.
Karnataka News Live 21 October 2025ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ - ಇದು ಮೈಸೂರು ಮಹಿಳೆಯ ₹4 ಲಕ್ಷದ ಮಾಂಗಲ್ಯ ಸರದ ಕಥೆ!
ಹಾಸನಾಂಬೆ ದೇವಿಯ ದರ್ಶನೋತ್ಸವದಲ್ಲಿ, ಮೈಸೂರಿನ ಮಹಿಳೆಯೊಬ್ಬರು ಕಳೆದುಕೊಂಡಿದ್ದ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ. ಈ ಘಟನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Karnataka News Live 21 October 2025Brahmagantu- ಎಲ್ಲೆಲ್ಲೂ ಉರಿ ಉರಿ - ಸೌಂದರ್ಯಳ ನೋಡಿ ಅಯ್ಯೋ ಪಾಪ ಅಂತಿರೋ ಫ್ಯಾನ್ಸ್ - ಆಗಿದ್ದೇನು?
ಬ್ರಹ್ಮಗಂಟು ಸೀರಿಯಲ್ನಲ್ಲಿ, ದೀಪಾಳ ಮೇಲೆ ಸೇಡು ತೀರಿಸಿಕೊಳ್ಳಲು ಚಿರು ಮತ್ತು ದಿಶಾಳನ್ನು ಒಂದು ಮಾಡಲು ಸೌಂದರ್ಯ ಪ್ರಯತ್ನಿಸುತ್ತಿದ್ದಾಳೆ. ಆದರೆ, ದಿಶಾ ರೂಪದಲ್ಲಿರುವ ದೀಪಾ, 'ವಸ್ತ್ರದೀಪ' ಡಿಸೈನ್ ಮೂಲಕ ಮತ್ತು ತನ್ನ ವರ್ತನೆಯಿಂದ ಸೌಂದರ್ಯಳಿಗೆ ತಿರುಗೇಟು ನೀಡುತ್ತಿದ್ದಾಳೆ.
Karnataka News Live 21 October 2025ಮದುವೆಯಾಗಿ 5 ತಿಂಗಳಲ್ಲೇ ಹೆಂಡ್ತಿ ಕಿರುಕುಳ ತಾಳಲಾಗದೇ ರೈಲಿಗೆ ತಲೆಕೊಟ್ಟ ನವವಿವಾಹಿತ!
ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕನೊಬ್ಬ, ಪತ್ನಿಯಿಂದ ತೀವ್ರ ಕಿರುಕುಳ ತಾಳಲಾರದೆ ಬಿಡದಿ ಬಳಿ ರೈಲಿಗೆ ತಲೆಕೊಟ್ಟಿದ್ದಾನೆ. ಸಾವಿಗೂ ಮುನ್ನ ಆತ ಚಿತ್ರೀಕರಿಸಿದ ವಿಡಿಯೋದಲ್ಲಿ ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಆರೋಪಿಸಿದ್ದು, ಈ ವಿಡಿಯೋ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.
Karnataka News Live 21 October 2025ಭಾಷಣದ ವೇಳೆ ಡೀಸೆಲ್ ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕೆಂದು ಕೂಗಾಡಿದ ಸಬಿಕ, ಮೋದಿಗೆ ವೋಟ್ ಒತ್ತಿದ್ಯಲ್ಲ ಆಗ ನೆನಪಾಗಿಲ್ವಾ ಎಂದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಶ್ಲಾಘಿಸಿ, ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಡಿಸಿಎಂ ಜೊತೆಯಲ್ಲಿದ್ದರು.
Karnataka News Live 21 October 2025ವಿಜಯ್ ಮಲ್ಯ ಶಬರಿಮಲೆ ದೇಗುಲಕ್ಕೆ ಕೊಟ್ಟಿದ್ದ ಚಿನ್ನದ ಹೊದಿಕೆ ಕದ್ದು ಬೆಂಗಳೂರಿಗೆ ತಂದಿದ್ದ ಕಳ್ಳರು!
ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದ ಹಿಂದಿನ ಸಂಚು ಬಯಲಾಗಬೇಕೆಂದು ಹೈಕೋರ್ಟ್ ಹೇಳಿದೆ. ತನಿಖಾ ಮಾಹಿತಿ ಸೋರಿಕೆಯಾಗದಂತೆ ತಡೆಯಲು ಮುಚ್ಚಿದ ಕೋಣೆಯಲ್ಲಿ ವಿಚಾರಣೆ ನಡೆಸಿ, ಸ್ವಯಂಪ್ರೇರಿತವಾಗಿ ಹೊಸ ಪ್ರಕರಣ ದಾಖಲಿಸಿಕೊಂಡಿದೆ. ಇದು ಯೋಜಿತ ಕಳ್ಳತನ ಎಂದು ವಿಶೇಷ ತನಿಖಾ ತಂಡ ಖಚಿತಪಡಿಸಿದೆ.
Karnataka News Live 21 October 2025ಆ ಮಾತು ಹೇಳಿದ್ದಕ್ಕೆ Bigg Boss ಮನೆಯಲ್ಲೇ ಮಹಿಳೆಯಿಂದ ಚಪ್ಪಲಿ ಏಟು ತಿಂದ ಸ್ಪರ್ಧಿ! ಯಾರದು?
Bigg Boss Show: ಬಿಗ್ ಬಾಸ್ ಕನ್ನಡ ಸೀಸನ್ 19ರಲ್ಲಿ ಭಾಗವಹಿಸಿರುವ ಶೆಹಬಾಜ್ ಅವರು, ತಮ್ಮ ಕಾಮಿಡಿಯಿಂದಲೇ ದೊಡ್ಮನೆಯಲ್ಲಿ ನಿತ್ಯವೂ ನಗು ತರಿಸುತ್ತಿದ್ದಾರೆ. ಇವರಿಂದಲೇ ಉಳಿದವರು ಕೂಡ ಸ್ವಲ್ಪ ಜಗಳ ಬಿಟ್ಟು, ನಗೋಕೆ ಆರಂಭಿಸಿದ್ದಾರೆ. ಕಾಮಿಡಿ ಮಾಡುತ್ತಿದ್ದ ಶೆಹಬಾಜ್ಗೆ ಈಗ ಚಪ್ಪಲಿ ಏಟು ಸಿಕ್ಕಿದೆ.
Karnataka News Live 21 October 2025ವಿಧಾನಸೌಧದ ಬಾಗಿಲು ಮುಚ್ಚಿಸಲು ಹೋಗಿದ್ಯಾಕೆ ನಟ ಉಪೇಂದ್ರ? ಶಿವಣ್ಣನ ಎದುರು ರಿವೀಲ್- ನಟನ ಬಾಯಲ್ಲೇ ಕೇಳಿ
ರಿಯಲ್ ಸ್ಟಾರ್ ಉಪೇಂದ್ರ ವಿಧಾನಸೌಧದ ಬಾಗಿಲು ಹಾಕಿಸುವುದಾಗಿ ಶಿವರಾಜ್ ಕುಮಾರ್ ಜೊತೆಗಿನ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅವರು ಹೀಗೆ ಹೇಳಿದ್ಯಾಕೆ? ಅದಕ್ಕೆ ಕಾರಣವೇನು?
Karnataka News Live 21 October 2025ಚಿತ್ತಾಪುರದಲ್ಲಿ ನ.2ರ RSS ಪಥಸಂಚಲನ - ಕೋರ್ಟ್ ನಿರ್ದೇಶದ ಬಳಿಕ ಜಿಲ್ಲಾಧಿಕಾರಿಗೆ ಹೊಸ ಅರ್ಜಿ ಸಲ್ಲಿಕೆ
Karnataka News Live 21 October 2025ಚಿತ್ತಾಪುರದಲ್ಲಿ RSS ಪಥಸಂಚಲನ - ಪ್ರಿಯಾಂಕ್ ಖರ್ಗೆ ಬಳಿಕ ಸೆಡ್ಡು ಹೊಡೆದ ಭೀಮ್ ಆರ್ಮಿ!
ಚಿತ್ತಾಪುರದಲ್ಲಿ ನವೆಂಬರ್ 2 ರಂದು ಆರ್ಎಸ್ಎಸ್ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಭೀಮ್ ಆರ್ಮಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆರ್ಎಸ್ಎಸ್ನ ನೋಂದಣಿ ಪ್ರಶ್ನಿಸಿರುವ ಭೀಮ್ ಆರ್ಮಿ, ಅದೇ ದಿನ ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದು, ಇದು ಸ್ಥಳೀಯವಾಗಿ ಸಂಘರ್ಷಕ್ಕೆ ಕಾರಣವಾಗಬಹುದು.
Karnataka News Live 21 October 2025ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್
ತಬ್ಬಿಕೊಂಡು ಮುತ್ತಿಕ್ಕಿದ, ಮತ್ತೆ ಏನೇನೋ..,ಪರೀಕ್ಷೆ ನೆಪದಲ್ಲಿ ಕಿರುಕುಳ ನೀಡಿದ ಬೆಂಗಳೂರು ವೈದ್ಯ ಅರೆಸ್ಟ್ ಮಾಡಲಾಗಿದೆ. ವೈದ್ಯ ವಿರುದ್ದ ಕುಟುಂಬಸ್ಥರು ಭಾರಿ ಪ್ರತಿಭಟನೆ ನಡೆಸಿದ್ದರೆ, ಇತ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.