ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ನಿರ್ಧಾರವು ಮಹತ್ವದ್ದೇ ಸರಿ. ಈ ನಿಟ್ಟಿನಲ್ಲಿ ಎಲ್ಲಾ ಹೊಸ ಮಾದರಿಯ ವಾಹನಗಳಲ್ಲಿ AdBlue SCR ವ್ಯವಸ್ಥೆ ಅಳವಡಿಕೆಯನ್ನು ತಯಾರಕರಿಗೆ ಕಡ್ಡಾಯಗೊಳಿಸಲಾಯಿತು.
ಹೈಬ್ರಿಡ್ ಹಾಗೂ ಯೂರೋ–VI ವಾಹನಗಳಿಗೂ PUC ಕಡ್ಡಾಯವೇ? ಸರ್ಕಾರದ ನಿರ್ಧಾರ ಪ್ರಶ್ನಾರ್ಥಕ

ಮೈಸೂರು ದಸರಾ ಉದ್ಘಾಟನೆ, ಚಾಮುಂಡೇಶ್ವರಿ ದೇಗುಲ ಸುತ್ತ ನಡೆಯುತ್ತಿರುವ ರಾಜಕೀಯಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಹಿರಂಗ ಪತ್ರ ಬರೆದಿರುವ ಪ್ರಮೋದಾ ದೇವಿ ಒಡೆಯರ್, ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಾಲಯದ ಸುತ್ತ ರಾಜಕೀಯವು ನಡೆಯುತ್ತಿರುವುದು ತೀವ್ರ ಬೇಸರ ತರಿಸಿದೆ ಎಂದಿದ್ದಾರೆ. ಚಾಮುಂಡೇಶ್ವರಿ ದೇವಾಲಯ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಅಸಂವೇದನಾಶೀಲ ಹೇಳಿಕೆಗಳು ಅನಗತ್ಯ ಎಂದಿದ್ದಾರೆ. ಇತ್ತ ರಾಜ್ಯದಲ್ಲಿ ಭಾರಿ ಮಳೆಯಿಂದ ಕೆಲ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿದೆ.
Karnataka Latest News Liveಹೈಬ್ರಿಡ್ ಹಾಗೂ ಯೂರೋ–VI ವಾಹನಗಳಿಗೂ PUC ಕಡ್ಡಾಯವೇ? ಸರ್ಕಾರದ ನಿರ್ಧಾರ ಪ್ರಶ್ನಾರ್ಥಕ
Karnataka Latest News Liveಮಂಗಳೂರಿನ ಕೆಎಸ್ಆರ್ಟಿಸಿ ಬಸ್ ದುರಂತ; ಮೊನ್ನೆ ಎಫ್ಸಿ ರಿನೀವಲ್, ನಿನ್ನೆ ಸಂಚಾರ, ಇಂದು 6 ಜನರ ಆಹುತಿ!
ಮಂಗಳೂರಿನ ತಲಪಾಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಫಿಟ್ನೆಸ್ ಸರ್ಟಿಫಿಕೇಟ್ ಪಡೆದ ಬಸ್ಸಿನ ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ರಿಪೇರಿ ಮಾಡಿ ಎಫ್ಸಿ ಪಡೆದುಕೊಂಡು ಬಂದಾಕ್ಷಣ ನಿಗಮದ ತಪ್ಪಿಲ್ಲ ಎಂದು ಹೇಳುತ್ತಿದೆ.
Karnataka Latest News Liveರಾಜ್ಯದಲ್ಲಿ ಹಂದಿ ಜ್ವರ ಪತ್ತೆ; ಫಾರ್ಮ್ನಲ್ಲಿ ಬೆಳೆಸಿದ 57 ಹಂದಿಗಳನ್ನು ಕೊಲ್ಲಲು ಆದೇಶ!
ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಫಾರ್ಮ್ನಲ್ಲಿ ಬೆಳೆಸುತ್ತಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, 50 ಹಂದಿಗಳು ಸಾವನ್ನಪ್ಪಿವೆ. ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Karnataka Latest News Liveಬಾರ್ಗೆ ಹೋಗಿ ಮದ್ಯ ಖರೀದಿಸದೇ, ಮೂತ್ರ ಮಾಡಿಬಂದ ಗ್ರಾಹಕನಿಗೆ ₹1000 ದಂಡ ಹಾಕಿದ ಮ್ಯಾನೇಜರ್!
ಸಾಮಾನ್ಯ ವ್ಯಕ್ತಿಯೊಬ್ಬ ಬಾರ್ನಲ್ಲಿ ಮದ್ಯ ಖರೀದಿ ಮಾಡದೇ, ನೇರವಾಗಿ ಟಾಯ್ಲೆಟ್ ಬಳಸಿದ್ದಕ್ಕೆ ₹1000 ಬಿಲ್ ಪಾವತಿಸಬೇಕಾಯಿತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಾರ್ನ ಕ್ರಮ ಸರಿಯೇ ತಪ್ಪೇ ಎಂಬ ಬಗ್ಗೆ ನೆಟ್ಟಿಗರು ಭಾರೀ ಚರ್ಚೆ ನಡೆಸುತ್ತಿದ್ದಾರೆ.
Karnataka Latest News LiveMirai Movie - ತೇಜ್ ಸಜ್ಜಾ ನಟನೆಯ 'ಮಿರಾಯ್' ಸಿನಿಮಾ ಟ್ರೇಲರ್ ರಿಲೀಸ್; ಫ್ಯಾನ್ಸ್ಗೆ ವಿಶ್ಯುವಲ್ ಟ್ರೀಟ್
ಹನುಮಾನ್ ಸಿನಿಮಾದ ಮೂಲಕ ಬಾಕ್ಸ್ ಆಫೀಸ್ ಶೇಕ್ ಮಾಡಿದ್ದ ತೇಜ ಸಜ್ಜಾ ಈಗ ಸೂಪರ್ ಯೋಧನಾಗಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಮಿರಾಯ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ನಿರ್ದೇಶಕ ಕಾರ್ತಿಕ್ ಘಟ್ಟಮನೇನಿ ಪ್ರೇಕ್ಷಕರಿಗೆ ಭರ್ಜರಿ ವಿಷ್ಯುವಲ್ ಟ್ರೀಟ್ ನೀಡಿದ್ದಾರೆ.
Karnataka Latest News Liveಭಾರೀ ಮಳೆ ಮುನ್ಸೂಚನೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ!
Karnataka Latest News Liveನಾನೇನು ಕೋಟ್ಯಧಿಪತಿಯಲ್ಲ, ಚೆನ್ನಾಗಿ ಅಡುಗೆ ಮಾಡುವ ಸಿಂಪಲ್ ಹುಡುಗ ಎಂದ ಅನುಶ್ರಿ ಪತಿ ರೋಷನ್!
ಕನ್ನಡದ ಜನಪ್ರಿಯ ನಿರೂಪಕಿ ಆ್ಯಂಕರ್ ಅನುಶ್ರೀ, ಐಟಿ ಉದ್ಯೋಗಿ ರೋಷನ್ ರಾಮಮೂರ್ತಿ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ನೆನಪು ಮಾಡಿಕೊಂಡು ಕೆಲವು ಪ್ರಮುಖ ವ್ಯಕ್ತಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
Karnataka Latest News Liveಒಲಿಂಪಿಕ್ಸ್ ಪದಕ ಗೆದ್ದರೆ ₹5 ಕೋಟಿ, ರಾಷ್ಟ್ರೀಯ ಪದಕ ಗೆದ್ದರೆ ₹7 ಲಕ್ಷ ಬಹುಮಾನ; ಸಿಎಂ ಘೋಷಣೆ!
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹೆಚ್ಚಳ. ಬಂಗಾರ ₹7 ಲಕ್ಷ, ಬೆಳ್ಳಿಗೆ ₹5 ಲಕ್ಷ, ಕಂಚು ₹2 ಲಕ್ಷ ಘೋಷಣೆ. ಇನ್ನು ಒಲಿಂಪಿಕ್ಸ್ ಬಂಗಾರ ವಿಜೇತರಿಗೆ ₹5 ಕೋಟಿ ಕೊಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು. ರಾಜ್ಯದ ಕ್ರೀಡಾಪಟುಗಳ ಸಾಧನೆಗೆ ಮೆಚ್ಚುಗೆ.
Karnataka Latest News Liveಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ - ಐವರ ವಿರುದ್ಧ ಪೋಕ್ಸೋ ಕೇಸ್ ದಾಖಲು, ನಾಲ್ವರು ಸಸ್ಪೆಂಡ್!
9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾದ ಘಟನೆ ಎಲ್ಲವನ್ನು ತಲೆ ಕೆಳಗೆ ಮಾಡಿಸಿದೆ. ವಿದ್ಯಾರ್ಥಿನಿ ತಮ್ಮ ಶಾಲೆ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
Karnataka Latest News Liveಧರ್ಮಸ್ಥಳದ ವಿರುದ್ಧ ಮಾಡಿದ ಯೂಟೂಬ್, ಎಐ ನಿರ್ಮಿತ ವಿಡಿಯೋ ಡಿಲೀಟ್ ಮಾಡಿ; ಕೇಂದ್ರ ಸಚಿವರಿಗೆ ನಿಖಿಲ್ ಪತ್ರ!
ಧರ್ಮಸ್ಥಳ ದೇಗುಲ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಹರಡಿರುವ ಸುಳ್ಳು ವರದಿಗಳನ್ನು ತೆಗೆದುಹಾಕಲು ನಿಖಿಲ್ ಕುಮಾರಸ್ವಾಮಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಸಾಮೂಹಿಕ ಹತ್ಯೆ, ಅನನ್ಯಾ ಭಟ್ ಪ್ರಕರಣದಂತಹ ಸುಳ್ಳು ಸುದ್ದಿಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ.
Karnataka Latest News Liveರಾಜ್ಯದ ಪ್ರತಿ ಮನೆಗೂ ಫ್ಯಾಮಿಲಿ ಕಾರ್ಡ್ ನೀಡುವ ನಿರ್ಧಾರ ಮಾಡಿದ ಆಂಧ್ರ ಪ್ರದೇಶ ಸರ್ಕಾರ!
ಇಂದು ರಾಜ್ಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಕ್ಯಾಬಿನೆಟ್ ಈ ನಿರ್ಧಾರ ತೆಗೆದುಕೊಂಡಿದೆ.
Karnataka Latest News Liveಧರ್ಮಸ್ಥಳ ರಕ್ಷಣೆಗೆ ಯಾರು ಹಿಂದೇಟು ಹಾಕುವ ಪ್ರಶ್ನೆಯಿಲ್ಲ - ಸಚಿವ ದಿನೇಶ್ ಗುಂಡೂರಾವ್
ಧರ್ಮಸ್ಥಳ ರಕ್ಚಣೆ ವಿಚಾರದಲ್ಲಿ ನಾವು ಸದಾ ಬೆಂಬಲವಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Karnataka Latest News Liveರೋಷನ್ ಗೆ ಅನುಶ್ರೀನ ಪರಿಚಯಿಸಿದ್ದೇ ಶ್ರೀದೇವಿ ಭೈರಪ್ಪ, ವಿದೇಶದಿಂದ ಬಂದು ಹಾರೈಸಿದ್ರು!
Karnataka Latest News Liveಕರ್ನಾಟಕಕ್ಕೆ ಸೈಕ್ಲೋನ್ ಕಂಟಕ, ಬೆಂಗಳೂರು ಸೇರಿ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
Karnataka Latest News Liveಮಂಗಳೂರು ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಮೇಜರ್ ಟ್ವಿಸ್ಟ್; ಈ ಬಸ್ಸಲ್ಲಿ ಡ್ರೈವರ್ರೇ ಇರಲಿಲ್ಲ!
ಮಂಗಳೂರಿನಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದು 6 ಜನರು ಸಾವನ್ನಪ್ಪಿದ್ದಾರೆ. ಬಸ್ ಹಿಂದಕ್ಕೆ ಚಲಿಸುವಾಗ ಡ್ರೈವರ್ ಇರಲಿಲ್ಲ ಎಂಬುದು ತಿಳಿದುಬಂದಿದೆ. ಚಾಲಕನ ಅತಿಯಾದ ವೇಗ ಮತ್ತು ಇಳಿಜಾರಿನಲ್ಲಿ ಬಸ್ ನಿಲ್ಲಿಸಿ ಕೆಳಗೆ ಇಳಿದು ಹೋಗಿದ್ದೇ ಅಪಘಾತಕ್ಕೆ ಕಾರಣವಾಗಿದೆ.
Karnataka Latest News Liveಸಾಮಾನ್ಯ ರೈತನ ಮಗಳ ಅಸಾಮಾನ್ಯ ಸಾಧನೆ, ರಾಜ್ಯಕ್ಕೆ ಟಾಪರ್ ಆಗಿ ಕಲೆಕ್ಟರ್ ಆದ ಹೆಣ್ಣಮಗಳ ಕಥೆ!
Karnataka Latest News Liveಬೂಕರ್ ಬಂದಾಗ ಯತ್ನಾಳ್, ಪ್ರತಾಪ್ ಸಿಂಹ ಅಭಿನಂದಿಸಿಲ್ಲ ಎಂದ ಭಾನು ಮುಸ್ತಾಕ್, ದಾಖಲೆ ಸಹಿತ ತಿರುಗೇಟು ನೀಡಿದ ಮಾಜಿ ಸಂಸದ!
Karnataka Latest News Liveಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ - ಬಿಜೆಪಿಗೆ ತಿರುಗೇಟು ಕೊಟ್ಟ ಸಚಿವ ಚಲುವರಾಯಸ್ವಾಮಿ
ಸಾಹಿತಿಗಳು ಸೇರಿ ಅನೇಕರು ದಸರಾ ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಸಾಧನೆಗೆ ದೊಡ್ಡ ಗೌರವ ಇದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
Karnataka Latest News Liveಮತ್ತೆ 6 ದಿನ ಪಪ್ಪಿ ಇಡಿ ವಶಕ್ಕೆ, ಜಡ್ಜ್ ಮುಂದೆ ಜಾರಿ ನಿರ್ದೇಶನಾಲಯದ ಮೇಲೆ ಆರೋಪಗಳ ಸುರಿಮಳೆಗೈದ ಶಾಸಕ!
Karnataka Latest News Liveಧರ್ಮಸ್ಥಳದಲ್ಲಿ ಮುಸ್ಲಿಂ ಹುಡುಗಿ ಸಂದರ್ಶನ - ವಿಡಿಯೋ ಡಿಲೀಟ್ಗೆ ಒತ್ತಡ- ಶಾಕಿಂಗ್ ವಿಷ್ಯ ಹೇಳಿದ ಯುಟ್ಯೂಬರ್!
ಧರ್ಮಸ್ಥಳದ ಮುಸ್ಲಿಂ ಹುಡುಗಿಯರನ್ನು ಸಂದರ್ಶನ ಮಾಡಿದಾಗ ಅದರ ವಿಡಿಯೋ ವೈರಲ್ ಆದಾಗ, ನಡೆದ ಶಾಕಿಂಗ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ಯುಟ್ಯೂಬರ್. ಅದೇನು ನೋಡಿ...