CBSE Board Exam 2026 Class 10 & 12 Final Date Sheet Released Exams Begin Feb 17 ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2026ರ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ ದಿನಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದೆ.
- Home
- News
- State
- Karnataka Latest News Live: 10, 12ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಸಿಬಿಎಸ್ಇ
Karnataka Latest News Live: 10, 12ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಸಿಬಿಎಸ್ಇ

ಬೆಂಗಳೂರು: ರಾಜ್ಯದ ಸಾರಥ್ಯ ಬ್ಲಾಕ್ ಹಾರ್ಸ್ ಕೈಗೆ ಸಿಗಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಆಗಲಿ, ಸತೀಶ ಜಾರಕಿಹೊಳಿಯಾಗಲಿ ಮುಖ್ಯಮಂತ್ರಿ ಆಗುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ ಹೆಸರು ಹೇಳಿ ಹೋಗಿದ್ದಾರೆ. ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಆಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
Karnataka Latest News Live 30 October 202510, 12ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕ ಪ್ರಕಟಿಸಿದ ಸಿಬಿಎಸ್ಇ
Karnataka Latest News Live 30 October 2025ಜೆಮಿಮಾ ಮಹಾನ್ ಸೆಂಚುರಿ, ಹಾಲಿ ಚಾಂಪಿಯನ್ ಆಸೀಸ್ ಮಣಿಸಿ ಫೈನಲ್ಗೇರಿದ ಭಾರತ!
Sensational Jemimah Century & Harmanpreet Fifty Power India to World Cup Final ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್ಗಳ ಬೃಹತ್ ಗುರಿಯನ್ನು ಭಾರತ ಯಶಸ್ವಿಯಾಗಿ ಬೆನ್ನಟ್ಟಿ ಫೈನಲ್ಗೇರಿದೆ.
Karnataka Latest News Live 30 October 2025ನಮ್ಮ ಮೆಟ್ರೋ ಮೂಲಕ ಮತ್ತೊಮ್ಮೆ ಶ್ವಾಸಕೋಶ, ಹೃದಯ ಸಾಗಾಣೆ!
Bengaluru Metro Facilitates 3rd Organ Transport Lungs and Heart Travel 33 Kms in 61 Minutes ಬೆಂಗಳೂರಿನ ನಮ್ಮ ಮೆಟ್ರೋ, ಯಶವಂತಪುರದ ಸ್ಪರ್ಶ ಆಸ್ಪತ್ರೆಯಿಂದ ನಾರಾಯಣ ಹೆಲ್ತ್ ಸಿಟಿ ಮತ್ತು ಆಸ್ಟರ್ ಆರ್ವಿ ಆಸ್ಪತ್ರೆಗೆ ಹೃದಯ ಮತ್ತು ಶ್ವಾಸಕೋಶವನ್ನು ಸಾಗಿಸಲು ನೆರವಾಯಿತು.
Karnataka Latest News Live 30 October 2025ಮಲೆ ಮಹದೇಶ್ವರ ವನ್ಯಧಾಮದಲ್ಲಿ 6 ಹುಲಿಗಳ ಹತ್ಯೆ, ಕಾಡಂಚಿನ ಜನರ ಹಸುಗಳಿಗೆ ಕಿವಿಯೋಲೆ ಹಾಕಲು ಮುಂದಾದ ಅರಣ್ಯ ಇಲಾಖೆ
ಚಾಮರಾಜನಗರದ ಅರಣ್ಯ ಪ್ರದೇಶಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದ್ದು, ಹುಲಿಗಳ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಇದಕ್ಕೆ ಪ್ರತೀಕಾರವಾಗಿ ಹುಲಿಗಳನ್ನು ಕೊಲ್ಲುವುದನ್ನು ತಡೆಯಲು, ಅರಣ್ಯ ಇಲಾಖೆಯು ಜಾನುವಾರುಗಳಿಗೆ ಕಿವಿಯೋಲೆ ಹಾಕಲು ಮುಂದಾಗಿದೆ.
Karnataka Latest News Live 30 October 2025ಬಡವರಿಗೆ ವರದಾನವಾದ ರಾಯಚೂರು ಹಾಸ್ಪಿಟಲ್, ತಿಂಗಳಲ್ಲಿ 200 ಹೆರಿಗೆ ಮಾಡಿದ ಸರ್ಕಾರಿ ಆಸ್ಪತ್ರೆ!
Karnataka Latest News Live 30 October 2025ಕಟ್ಟಡ ನವೀಕರಣದ ವೇಳೆ ಕುಸಿದ ಸೆಂಟ್ರಿಂಗ್, ಓರ್ವ ಕಾರ್ಮಿಕ ದಾರುಣ ಸಾವು!
Worker Dies in Mahadevapura as Building Renovation Centering Collapses ಬೆಂಗಳೂರಿನ ಮಹದೇವಪುರದಲ್ಲಿ ಕಟ್ಟಡ ನವೀಕರಣದ ವೇಳೆ ಸೆಂಟ್ರಿಂಗ್ ಕುಸಿದು ಯೂಸೂಫ್ ಶರೀಫ್ ಎಂಬ ಕಾರ್ಮಿಕ ಮೃತಪಟ್ಟಿದ್ದಾರೆ. ಈ ದುರಂತದಲ್ಲಿ, ಸಮೀಪದಲ್ಲಿ ಚಹಾ ಕುಡಿಯುತ್ತಿದ್ದ ದಂಪತಿ ತೀವ್ರವಾಗಿ ಗಾಯಗೊಂಡಿದ್ದಾರೆ.
Karnataka Latest News Live 30 October 2025ಚಿತ್ತಾಪುರ ಆರ್ಎಸ್ಎಸ್ ಪಥಸಂಚಲನ ಸಂಧಾನ ವಿಫಲ, ನ. 7 ಕ್ಕೆ ವಿಚಾರಣೆ ಮೂದೂಡಿದ ಕಲಬುರಗಿ ಹೈಕೋರ್ಟ್
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಅನುಮತಿ ಕೋರಿದ ಅರ್ಜಿ ವಿಚಾರಣೆ ಕಲಬುರಗಿ ಹೈಕೋರ್ಟ್ನಲ್ಲಿ ನಡೆದಿದೆ. ಶಾಂತಿ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.
Karnataka Latest News Live 30 October 2025ನ.12ರವರೆಗೂ ಧರ್ಮಸ್ಥಳ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ
High Court Stays Dharmasthala Burude Gang Case Probe Till Nov 12 ಧರ್ಮಸ್ಥಳ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ತಾವೇ ನೀಡಿದ ದೂರಿನ ತನಿಖೆ ರದ್ದು ಕೋರಿ 'ಬುರುಡೆ ಗ್ಯಾಂಗ್' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನ.12ರವರೆಗೆ ತನಿಖೆಗೆ ಮಧ್ಯಂತರ ತಡೆ ನೀಡಿದೆ.
Karnataka Latest News Live 30 October 2025ಸುಪ್ರೀಂ ಕೋರ್ಟ್ಗೆ ನೂತನ ಸಿಜೆಐ ನೇಮಕ, ಹಳ್ಳಿಯಿಂದ ದಿಲ್ಲಿಗೆ ಪಯಣಿಸಿದ ನ್ಯಾ ಸೂರ್ಯಕಾಂತ್ ಯಾರು?
ಸುಪ್ರೀಂ ಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ಸಿಜೆಐ ಭೂಷಣ್ ಆರ್. ಗವಾಯಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಈ ಆದೇಶ ಹೊರಡಿಸಿದ್ದು, ಅವರು ನವೆಂಬರ್ 24, 2025 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
Karnataka Latest News Live 30 October 2025ಹಿರಿಯ ನಟಿ ಉಮಾಶ್ರೀಗೆ ಡಾ.ರಾಜ್ಕುಮಾರ್ ಪ್ರಶಸ್ತಿ ಘೋಷಣೆ
Veteran Actress Umashree Conferred Dr. Rajkumar Award 2019ರ ಸಾಲಿನ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
Karnataka Latest News Live 30 October 2025ಕೌಶಲ್ಯ ತರಬೇತಿ ಕೇಂದ್ರ ಆರಂಭಿಸುವವರಿಗೆ ಸರ್ಕಾರದಿಂದ ಅಗತ್ಯ ಭೂ ಮಂಜೂರು, ಅತಿ ಶೀಘ್ರದಲ್ಲಿ ಡ್ಯುಯಲ್ ಅಪ್ರೆಂಟಿಶಿಪ್ ಯೋಜನೆ
ರಾಜ್ಯದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸಲು, ಕೌಶಲ್ಯ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಇಚ್ಛಿಸುವವರಿಗೆ ಅಗತ್ಯ ಭೂಮಿ ಮತ್ತು ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಘೋಷಿಸಿದ್ದಾರೆ.
Karnataka Latest News Live 30 October 2025ಟೋಲ್ ಕೇಳಿದ್ದಕ್ಕೆ ನನ್ನ ಅಪ್ಪ ಯಾರು ಗೊತ್ತಾ? ಎಂದು ಕೇಳಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ
Vijayapura toll gate assault: ವಿಜಯಪುರದ ಟೋಲ್ ಗೇಟ್ನಲ್ಲಿ, ಟೋಲ್ ಕೇಳಿದ ಸಿಬ್ಬಂದಿ ಮೇಲೆ ಬಿಜೆಪಿ ನಾಯಕ ವಿಜು ಗೌಡ ಪಾಟೀಲ್ ಅವರ ಪುತ್ರ ಸಮರ್ಥ್ಗೌಡ ಪಾಟೀಲ್ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Karnataka Latest News Live 30 October 2025Bigg Boss ಮನೆಯಲ್ಲಿ ಶಾಕಿಂಗ್ ಘಟನೆ - ನಡೆಯುತ್ತಲೇ ಕುಸಿದು ಬಿದ್ದ ಸ್ಪರ್ಧಿ- ಆತಂಕದ ವಾತಾವರಣ
Karnataka Latest News Live 30 October 2025ಸಂಪುಟ ಸಭೆಯಲ್ಲಿ ಕಿತ್ತಾಡಿಕೊಂಡ ಸಚಿವರಾದ ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ, ಸಿಎಂ ಮಧ್ಯಪ್ರವೇಶದಿಂದ ನಿಂತ ಜಗಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಕುರಿತು ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಎಚ್.ಸಿ. ಮಹದೇವಪ್ಪ ನಡುವೆ ತೀವ್ರ ವಾಗ್ವಾದ ನಡೆಯಿತು. ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆ ಮತ್ತು ಯೋಜನೆ ವಿಳಂಬದ ಬಗ್ಗೆ ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು
Karnataka Latest News Live 30 October 2025ನಟ ಪ್ರಕಾಶ್ ರಾಜ್ ಸೇರಿದಂತೆ 70 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಸರ್ಕಾರ
Karnataka Rajyotsava Awards 2025 Announced ಸಿದ್ದರಾಮಯ್ಯ ಸರ್ಕಾರವು 70 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ಈ ಬಾರಿ ಹಿರಿಯ ನಟ ಪ್ರಕಾಶ್ ರಾಜ್, ಕೋಣಂದೂರು ಲಿಂಗಪ್ಪ ಮತ್ತು ಪೌರ ಕಾರ್ಮಿಕರಾದ ಫಕೀರವ್ವ ಸೇರಿದಂತೆ ಹಲವು ಸಾಧಕರಿಗೆ ಈ ಗೌರವ ಸಂದಿದೆ.
Karnataka Latest News Live 30 October 2025Bigg Bossಗೆ ಭಾಗ್ಯಲಕ್ಷ್ಮಿ ಎಂಟ್ರಿ! ಕಾವ್ಯಾಳನ್ನು ಎತ್ತಿ 'ಪ್ರೀತಿಯ ಸುಖ' ಎನ್ನುತ್ತ ಸೂರಜ್ ರೊಮಾನ್ಸ್ - ರಾಶಿಕಾ ಹೊಟ್ಟೆಗೆ ಬೆಂಕಿ!
ಬಿಗ್ ಬಾಸ್ ಮನೆಗೆ 'ಭಾಗ್ಯಲಕ್ಷ್ಮಿ' ಸೀರಿಯಲ್ ಸುಷ್ಮಾ ಕೆ. ರಾವ್ ಮತ್ತು ಪ್ರಿಯಾ ಜೆ. ಆಚಾರ್ ಆಗಮಿಸಿದ್ದಾರೆ. ಈ ಫೆಸ್ಟಿವಲ್ ಸಂಚಿಕೆಯಲ್ಲಿ, ಸೂರಜ್ ಸಿಂಗ್ ಕಾವ್ಯಾಳನ್ನು ಎತ್ತಿಕೊಂಡು ನೃತ್ಯ ಮಾಡಿದ್ದು ರಾಶಿಕಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಗಿಲ್ಲಿ ನಟ ಅಶ್ವಿನಿಯನ್ನು ಎತ್ತಲು ಹೋಗಿ ಬೀಳಿಸಿದ್ದಾರೆ!
Karnataka Latest News Live 30 October 2025ಸಚಿವ ಸಂಪುಟ ಸಭೆ ಮುಕ್ತಾಯ, ಬೆಂಗಳೂರು ರಸ್ತೆ ಅಭಿವೃದ್ಧಿಗೆ 1241 ಕೋಟಿ ರೂ. ಸೇರಿ ಹಲವು ಯೋಜನೆಗಳಿಗೆ ಅನುಮೋದನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಹಾಗೂ ಅರಣ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
Karnataka Latest News Live 30 October 2025BBK 12 - ಗಿಲ್ಲಿ ನಟನ ಕಣ್ಣಿಗೆ ಬಿತ್ತು ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಕಣ್ಸನ್ನೆ ಕಳ್ಳಾಟ; ವಿಡಿಯೋ ವೈರಲ್
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ಬಿಗ್ ಬಾಸ್ ಕಾಲೇಜ್ ಎಂದು ಟಾಸ್ಕ್ ನಡೆಯುತ್ತಿದೆ. ಫಿಸಿಕಲ್ ಟಾಸ್ಕ್ನಲ್ಲಿ ರಾಶಿಕಾ ಚೆನ್ನಾಗಿ ಟಾಸ್ಕ್ ಆಡಿದ್ದರು. ಅಶ್ವಿನಿ ಗೌಡ ಇದ್ದ ಟೀಂನವರು ರಾಶಿಕಾಗೆ ಸ್ಟುಡೆಂಟ್ ಆಫ್ ದಿ ವೀಕ್ ಪಟ್ಟ ಕೊಡಬೇಕು ಎಂದುಕೊಂಡಿದ್ದರು. ಅದಕ್ಕೆ ಗಿಲ್ಲಿ ನಟ ಒಪ್ಪಲಿಲ್ಲ.
Karnataka Latest News Live 30 October 2025BBK 12 - ಅಶ್ವಿನಿ ಗೌಡ ಮಾತು ಕೇಳಕಾಗ್ತಿಲ್ಲ, ಸ್ವಯಂ ಎಲಿಮಿನೇಟ್ ಆಗ್ತೀನಿ ಎಂದ ಗಿಲ್ಲಿ ನಟ! ಇಂಥ ನಿರ್ಧಾರ ಯಾಕೆ?
BBK 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಕಾಲೇಜು ಟಾಸ್ಕ್ನಲ್ಲಿ ಅಶ್ವಿನಿ ಗೌಡ ಅವರು ಒಂದಿಷ್ಟು ಮಾತನಾಡಿದ್ದರು. ಈ ಮಾತು ಕೇಳಿ ಗಿಲ್ಲಿ ನಟ ಅವರು ಸೆಲ್ಫ್ ಎಲಿಮಿನೇಶನ್ ಮಾಡ್ಕೋತಿನಿ ಎಂದು ಹೇಳಿದ್ದಾರೆ. ಗಿಲ್ಲಿ ನಟನ ಮಾತುಗಳು ಎಲ್ಲರ ಮುಖದಲ್ಲೂ ನಗು ತಂದಿದೆ.
Karnataka Latest News Live 30 October 2025Karna Serial - ನಿತ್ಯಾ ಮೊಗದಲ್ಲಿ ಮಂದಹಾಸ, ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್
Karna Serial: ರಮೇಶ್ನ ಕುತಂತ್ರವನ್ನು ಆತನ ಹೆಂಡತಿ ಮಾಲತಿಯೇ ಕರ್ಣನ ಮುಂದೆ ಬಯಲು ಮಾಡುತ್ತಾಳೆ. ಕಾಣೆಯಾಗಿದ್ದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದು, ಕರ್ಣ ಮತ್ತು ನಿತ್ಯಾ ಆತನನ್ನು ಹುಡುಕಲು ಹನಿಮೂನ್ ನೆಪದಲ್ಲಿ ಹೊರಡುತ್ತಾರೆ.