MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಿತ್ಯಾ ಮೊಗದಲ್ಲಿ ಮಂದಹಾಸ, ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್

Karna Serial: ನಿತ್ಯಾ ಮೊಗದಲ್ಲಿ ಮಂದಹಾಸ, ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್

Karna Serial: ರಮೇಶ್‌ನ ಕುತಂತ್ರವನ್ನು ಆತನ ಹೆಂಡತಿ ಮಾಲತಿಯೇ ಕರ್ಣನ ಮುಂದೆ ಬಯಲು ಮಾಡುತ್ತಾಳೆ. ಕಾಣೆಯಾಗಿದ್ದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿದು, ಕರ್ಣ ಮತ್ತು ನಿತ್ಯಾ ಆತನನ್ನು ಹುಡುಕಲು ಹನಿಮೂನ್ ನೆಪದಲ್ಲಿ ಹೊರಡುತ್ತಾರೆ.

1 Min read
Mahmad Rafik
Published : Oct 30 2025, 03:28 PM IST
Share this Photo Gallery
  • FB
  • TW
  • Linkdin
  • Whatsapp
15
ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್
Image Credit : Zee Kannada

ಇಂಗು ತಿಂದು ಮಂಗನಂತೆ ಮುಖ ಮಾಡಿದ ರಮೇಶ್

ಇಂದು ಕರ್ಣ ಸೀರಿಯಲ್ ಒಂದು ಗಂಟೆಯ ಮಹಾಸಂಚಿಕೆ ಪ್ರಸಾರವಾಗಲಿದೆ. ಮದುವೆಯಾದ ಗಳಿಗೆಯಿಂದ ನಿತ್ಯಾ ಕಣ್ಣೀರಿನಲ್ಲಿಯೇ ಕೈ ತೊಳೆಯುತ್ತಿದ್ದಾಳೆ. ತೇಜಸ್ ಎಲ್ಲಿ ಹೋದ? ತನ್ನ ಭವಿಷ್ಯ ಏನು ಎಂದು ನಿತ್ಯಾ ಚಿಂತೆಯಲ್ಲಿದ್ದಾಳೆ. ಇದೀಗ ಕರ್ಣ ಹೇಳಿದ ವಿಷಯ ಕೇಳಿ ನಿತ್ಯಾ ಖುಷಿಯಾಗಿದ್ದಾಳೆ. ನಿತ್ಯಾ ಮತ್ತು ಕರ್ಣನ ಮುಖದಲ್ಲಿನ ಸಂತೋಷ ಕಂಡು ರಮೇಶ್ ಮಾತ್ರ ಇಂಗು ತಿಂದು ಮಂಗನಂತೆ ಮುಖ ಮಾಡಿದ್ದಾನೆ.

25
ಚಿಕ್ಕಮಗಳೂರಿನಲ್ಲಿ ತೇಜಸ್
Image Credit : Zee Kannada News

ಚಿಕ್ಕಮಗಳೂರಿನಲ್ಲಿ ತೇಜಸ್

ಕರ್ಣನ ನಗು ಕಿತ್ತುಕೊಳ್ಳಲು ರಮೇಶ್ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದು, ನಿಧಿ ಮತ್ತು ನಿತ್ಯಾ ಜೀವನದಲ್ಲಿಯೂ ಆಟವಾಡುತ್ತಿದ್ದಾನೆ. ನಿಧಿ ಪ್ರೀತಿಯನ್ನು ಕಿತ್ತುಕೊಂಡು ನಿತ್ಯಾಳಿಗೆ ಬಲವಂತವಾಗಿ ನೀಡಿದ್ದಾನೆ. ಇತ್ತ ನಿತ್ಯಾ ಮದುವೆಯಾಗಬೇಕಿದ್ದ ತೇಜಸ್‌ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿಟ್ಟಿದ್ದಾನೆ. ರಮೇಶ್‌ನ ಈ ಕುತಂತ್ರಕ್ಕೆ ತೇಜಸ್ ಪೋಷಕರು ಸಾಥ್ ನೀಡಿದ್ದಾರೆ.

Related Articles

Related image1
Karna Serial: ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ
Related image2
Karna Serial: ನಿತ್ಯಾ- ಕರ್ಣ ಜೋಡಿನ ಮೆಚ್ಚಿಕೊಂಡ ಜನ… ಮಿಲನ ಚಿತ್ರದ ಅಂಜಲಿ-ಆಕಾಶ್ ನೆನಪಾಗ್ತಾರಂತೆ!
35
ಮಾಲತಿಗೆ ಗೊತ್ತಾಯ್ತು ವಿಷಯ
Image Credit : Zee Kannada News

ಮಾಲತಿಗೆ ಗೊತ್ತಾಯ್ತು ವಿಷಯ

ರಮೇಶ್ ಫೋನ್‌ನಲ್ಲಿ ತೇಜಸ್ ಪೋಷಕರ ಜೊತೆ ಮಾತನಾಡಿ, ಇನ್ನಷ್ಟು ದಿನ ಈ ನಾಟಕ ಮುಂದುವರಿಬೇಕು ಎಂದು ಹೇಳುತ್ತಾನೆ. ಈ ಎಲ್ಲಾ ಮಾತುಗಳನ್ನು ರಮೇಶ್‌ನ ಹೆಂಡತಿ ಮಾಲತಿ ಕೇಳಿಸಿಕೊಂಡಿದ್ದಾಳೆ. ಈ ವಿಷಯವನ್ನು ಮಾಲತಿ ನೇರವಾಗಿ ಕರ್ಣನಿಗೆ ತಿಳಿಸಿದ್ದಾಳೆ. ಕರ್ಣ ತಡಮಾಡದೇ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯವನ್ನು ನಿತ್ಯಾಗೆ ಹೇಳಿದ್ದಾನೆ.

45
ಚಿಕ್ಕಮಗಳೂರಿ ಹೋಗ್ತಾರಾ?
Image Credit : Zee Kannada News

ಚಿಕ್ಕಮಗಳೂರಿ ಹೋಗ್ತಾರಾ?

ತೇಜಸ್‌ನನ್ನು ಹುಡುಕಿಕೊಂಡು ನಿತ್ಯಾ ಮತ್ತು ಕರ್ಣ ಚಿಕ್ಕಮಗಳೂರಿಗೆ ಹೋಗಲು ರೆಡಿಯಾಗಿದ್ದಾರೆ. ಇವರಿಬ್ಬರ ತಯಾರಿ ನೋಡಿದ ರಮೇಶ್, ಹನಿಮೂನ್‌ಗೆ ಹೊರಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ತಂದೆ ರಮೇಶ್‌ಗೆ ಯಾವುದೇ ಕಾರಣಕ್ಕೂ ವಿಷಯ ಹೇಳಬೇಡ ಅಂತ ಮಾಲತಿ ಮಾತು ತೆಗೆದುಕೊಂಡಿದ್ದಾಳೆ. ಹಾಗಾಗಿ ಹನಿಮೂನ್ ನೆಪದಲ್ಲಿ ತೇಜಸ್‌ನನ್ನು ಹುಡುಕಲು ನಿತ್ಯಾ-ಕರ್ಣ ಹೋಗಲಿದ್ದಾರೆ.

ಇದನ್ನೂ ಓದಿ: Karna Serial: ರಮೇಶ್‌ನಿಗೆ ಮತ್ತೊಂದು ಶಾಕ್; ಗಾಯಗೊಂಡ ಹಾವಿನಂತಾದ ಕರ್ಣನ ನೀಚ ತಂದೆ

55
ನಿಧಿ ಪ್ರೀತಿ
Image Credit : Zee Kannada News

ನಿಧಿ ಪ್ರೀತಿ

ತೇಜಸ್ ಸಿಕ್ಕರೆ ನಿಧಿ ಪ್ರೀತಿಯನ್ನು ಉಳಿಸಿಕೊಳ್ಳಬಹುದು ಎಂಬ ಖುಷಿಯಲ್ಲಿ ಕರ್ಣನಿದ್ದಾನೆ. ಪ್ರೀತಿಯನ್ನು ಕಳೆದುಕೊಂಡೆ ಎಂಬ ದುಃಖದಲ್ಲಿರುವ ನಿಧಿ ಮುಂದೇನು ಮಾಡಬೇಕೆಂದು ತಿಳಿಯದೇ ಚಿಂತೆಯಲ್ಲಿದ್ದಾಳೆ. ಆದಷ್ಟು ಬೇಗ ಕರ್ಣನ ಮನೆಯಿಂದ ದೂರವಾಗುವ ಕುರಿತು ಯೋಚಿಸುತ್ತಿದ್ದಾಳೆ.

ಇದನ್ನೂ ಓದಿ:  Karna Serial: ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved