ಲಗ್ಗೇಜ್ ಸಿದ್ಧತೆ ಮಾಡಿಕೊಂಡ ಮೂವರು ಶಾಸಕರು : ಹೈ ಅಲರ್ಟ್ ಆದ ಸಿಎಂ
ಆಪರೇಷನ್ ಕಮಲಕ್ಕೆ ಅಲರ್ಟ್ ಆಗಿರುವ ಸಿಎಂ ಕುಮಾರಸ್ವಾಮಿ ಗುಪ್ತಚರ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರ ಚಲನವಲನಗಳ ಗಮನಿಸುತ್ತಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ಪಕ್ಷೇತರ ಶಾಸಕ ನಾಗೇಶ್ ಲಗ್ಗೇಜ್ ಪ್ಯಾಕ್ ಮಾಡಿಕೊಂಡಿದ್ದು ಎಲ್ಲಿ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಒಂದು ಕಡೆ ಹೈಕಮಾಂಡ್ ನಾಯಕರು ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದರೆ ಮತ್ತೊಂದೆಡೆ ಹಲವು ಜನಪ್ರತಿನಿಧಿಗಳು ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ.
- ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರ ಜತೆ ಪಕ್ಷೇತರ ಶಾಸಕ ನಾಗೇಶ್
- ಲಗ್ಗೇಜ್ ಪ್ಯಾಕ್ ಮಾಡಿಕೊಂಡು ರೆಡಿಯಾಗಿರುವ ಇಬ್ಬರು ಕಾಂಗ್ರೆಸ್ ಶಾಸಕರು
- ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್
- ಎಲ್ಲಿಗೆ ಹೋಗ್ತಾರೆಂದು ಯಾವುದೇ ರೀತಿಯ ಮಾಹಿತಿಯೇ ಸಿಗುತ್ತಿಲ್ಲ