ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ. ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ  20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಚಿತ್ರದುರ್ಗ(ನ.13): ಶತಮಾನಗಳ ಇತಿಹಾಸವನ್ನು ತಿಳಿಯಲು ತಾಳೇಗರಿಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. 2 ಲಕ್ಷ ತಾಳೆಗರಿಗಳನ್ನು ಸಂರಕ್ಷಿಸುವ ಸಲುವಾಗಿ ಚಿತ್ರದುರ್ಗ ಮುರುಘಾ ಮಠದಲ್ಲಿ ಡಿಜಿಟಲೀಕರಣ ಕೆಲಸ ನಡೆಯುತ್ತಿದೆ.

Add Asianetnews Kannada as a Preferred SourcegooglePreferred

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ.

ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ 20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಒಟ್ಟಿನಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಕೆಲಸವನ್ನು ಮುರುಘಾ ಶರಣರು ಮಾಡ್ತಿದ್ದಾರೆ. ತಾಳೆಗರಿಗಳನ್ನು ಡಿಜಿಟಲೀಕರಣ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯ.