ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ. ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ  20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಚಿತ್ರದುರ್ಗ(ನ.13): ಶತಮಾನಗಳ ಇತಿಹಾಸವನ್ನು ತಿಳಿಯಲು ತಾಳೇಗರಿಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಹೊಂದಿವೆ. 2 ಲಕ್ಷ ತಾಳೆಗರಿಗಳನ್ನು ಸಂರಕ್ಷಿಸುವ ಸಲುವಾಗಿ ಚಿತ್ರದುರ್ಗ ಮುರುಘಾ ಮಠದಲ್ಲಿ ಡಿಜಿಟಲೀಕರಣ ಕೆಲಸ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರುಗಳಾದ, ಶಾಂತವೀರ ಮುರುಘಾ ಸ್ವಾಮೀಜಿಯಿಂದ ಹಿಡಿದು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರ ಕಾಲದವರೆಗೂ ತಾಳೆಗರಿಗಳನ್ನು ಸಂಗ್ರಹಿಸಡಲಾಗಿದೆ. 12ನೇ ಶತಮಾನದಿಂದ 17ನೇ ಶತಮಾನದವರೆಗೂ ಸುಮಾರು 2 ಲಕ್ಷ ತಾಳೆಗರಿಗಳು ಇಲ್ಲಿವೆ.

ಕೇರಳದಿಂದ ತರಿಸಿರುವ ಲೆಮೆನ್ ರೇಸ್ ದ್ರವ್ಯದಿಂದ ತಾಳೆ ಗರಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ನಂತರ ಅವುಗಳನ್ನು ಶುದ್ಧ ಬಟ್ಟೆಯಲ್ಲಿ ಕಟ್ಟಿಡಲಾಗುತ್ತೆ. ಬಳಿಕ ಅವುಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಈಗಾಗಲೇ ದಿನವೊಂದಕ್ಕೆ 20ರಿಂದ 30 ಜನ್ರು ಕೆಲಸ ಮಾಡುತ್ತಿದ್ದು 1 ಲಕ್ಷ ತಾಳೆಗರಿಗಳನ್ನು ಡಿಜಟಲೀಕರಣ ಮಾಡಿದ್ದಾರೆ. ಇನ್ನುಳಿದ ತಾಳೆಗರಿಗಳನ್ನು ಒಂದು ತಿಂಗಳೊಳಗೆ ಪೂರ್ತಿಗೊಳಿಸಲಿದ್ದಾರೆ.

ಒಟ್ಟಿನಲ್ಲಿ ತಾಳೆಗರಿಗಳನ್ನು ಸಂರಕ್ಷಿಸುವ ಕೆಲಸವನ್ನು ಮುರುಘಾ ಶರಣರು ಮಾಡ್ತಿದ್ದಾರೆ. ತಾಳೆಗರಿಗಳನ್ನು ಡಿಜಿಟಲೀಕರಣ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯ.