Asianet Suvarna News Asianet Suvarna News

ಕೊಲ್ಲೂರಿನಲ್ಲಿ 79ನೇ ಜನ್ಮದಿನ ಆಚರಿಸಿಕೊಂಡ ಗಾಯಕ ಏಸುದಾಸ್

ದೇಶ ಕಂಡ ಅಪ್ರತಿಮ ಗಾಯಕ ಕೆ.ಜೆ.ಏಸುದಾಸ್ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ತನ್ನ 79 ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮುಕಾಂಬಿಕೆಯ ಸನ್ನಿಧಿಯಲ್ಲೇ ಹುಟ್ಟಿದ ದಿನ ಆಚರಿಸುವುದು ಈ ಹಿರಿಯ ಗಾಯಕ ಪಾಲಿಸಿಕೊಂಡು ಬಂದ ಸಂಪ್ರದಾಯ. 
 

ದೇಶ ಕಂಡ ಅಪ್ರತಿಮ ಗಾಯಕ ಕೆ.ಜೆ.ಏಸುದಾಸ್ ಕೊಲ್ಲೂರು ಮುಕಾಂಬಿಕಾ ದೇವಸ್ಥಾನದಲ್ಲಿ ತನ್ನ 79 ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಕಳೆದ ಹಲವು ದಶಕಗಳಿಂದ ಮುಕಾಂಬಿಕೆಯ ಸನ್ನಿಧಿಯಲ್ಲೇ ಹುಟ್ಟಿದ ದಿನ ಆಚರಿಸುವುದು ಈ ಹಿರಿಯ ಗಾಯಕ ಪಾಲಿಸಿಕೊಂಡು ಬಂದ ಸಂಪ್ರದಾಯ. 

ಈ ಬಾರಿಯೂ ಸನ್ನಿಧಾನದಲ್ಲಿ ವಿಶೇಷ ಪೂಜೆ‌, ಚಂಡಿಕಾ ಹೋಮ ನಡೆಸಿದರು. ಕುಟುಂಬ ಸಹಿತರಾಗಿ ಬಂದಿದ್ದ ಏಸುದಾಸ್ ತಾಯಿಯ ಸನ್ನಿಧಿಯಲ್ಲಿ ಗಾಯನಸೇವೆ ನಡೆಸಿಕೊಟ್ಟರು. ಏಸುದಾಸ್ ಮುಕಾಂಬಿಕೆಯ ಸನ್ನಿಧಿಯಲ್ಲೇ ಸ್ವರ ಸಿದ್ದಿ ಪಡೆದೆ ಎಂಬ ಭಾವನೆ ಹೊಂದಿದ್ದಾರೆ. ಹಾಗಾಗಿ ತನ್ನ ಪ್ರತಿಯೊಂದು ಸುಖದುಖಗಳನ್ನು ಇಲ್ಲೇ ಕಳೆದಿದ್ದಾರೆ. 

ಈ ವೇಳೆ ಏಸುದಾಸ್ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಕೇರಳದಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಏಸುದಾಸ್ ಅವರ ಜನಪ್ರಿಯ ಭಕ್ತಿಗೀತೆಗಳನ್ನು ಹಾಡಿದರು. ಸರಸ್ವತಿ ಮಂಟಪದ ಆವರಣದಲ್ಲಿ ನಡೆದ ಏಸುದಾಸ್ ಅವರ ಗಾಯನ ಸೇವೆ ಭಕ್ತಸಂದೋಹವನ್ನು ಖುಷಿಪಡಿಸಿತು. ಧರ್ಮ ಬೇಧವಿಲ್ಲದೆ ನಡೆಯುವ ಈ ಹುಟ್ಟುಹಬ್ಬ ಆಚರಣೆ ಸೌಹಾರ್ಧ ಸಂಸ್ಕೃತಿಯ ಸಂಕೇತವೂ ಆಗಿದೆ.

Video Top Stories