Israels IAI poised to secure Rs 8,000 crore IAF mid-air refuellers deal ಭಾರತೀಯ ವಾಯುಪಡೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಇಸ್ರೇಲ್ನಿಂದ ಆರು ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನಗಳನ್ನು ಖರೀದಿಸುವ ಸಾಧ್ಯತೆಯಿದೆ. ಸುಮಾರು 8,000 ಕೋಟಿ ರೂಪಾಯಿಗಳ ಈ ಒಪ್ಪಂದ ಇದಾಗಿದೆ.
- Home
- News
- India News
- India Latest News Live: ಇಸ್ರೇಲ್ಗೆ 8 ಸಾವಿರ ಕೋಟಿ ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನ ಒಪ್ಪಂದ ನೀಡಲಿರುವ ಭಾರತೀಯ ವಾಯುಸೇನೆ!
India Latest News Live: ಇಸ್ರೇಲ್ಗೆ 8 ಸಾವಿರ ಕೋಟಿ ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನ ಒಪ್ಪಂದ ನೀಡಲಿರುವ ಭಾರತೀಯ ವಾಯುಸೇನೆ!

ನವದೆಹಲಿ : ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ದೇಶಗಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ನಟ ಸಲ್ಮಾನ್ ಖಾನ್ರನ್ನು ಪಾಕಿಸ್ತಾನ ಸರ್ಕಾರ, ಉಗ್ರರ ನಿಗಾ ಪಟ್ಟಿಗೆ ಸೇರಿಸಿದೆ ಎಂದು ವರದಿಗಳು ಹೇಳಿವೆ. ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್, ‘ಹಿಂದಿ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾ ಇಲ್ಲಿ ಸೂಪರ್ಹಿಟ್ ಆಗುತ್ತದೆ. ಕಾರಣ, ಇಲ್ಲಿ ಬಲೂಚಿಸ್ತಾನ, ಪಾಕಿಸ್ತಾನ ಮ್ತತು ಅಫ್ಘಾನಿಸ್ತಾನದ ಜನರಿದ್ದಾರೆ’ ಎಂದಿದ್ದರು. ಇದನ್ನು ಬಲೂಚ್ ಪ್ರತ್ಯೇಕತಾವಾದಿಗಳು ಸ್ವಾಗತಿಸಿ, ‘ಹಲವು ರಾಷ್ಟ್ರಗಳು ಮಾಡದ ಕೆಲಸವನ್ನು ಅವರ ಮಾಡಿದ್ದಾರೆ’ ಎಂದು ಶ್ಲಾಘಿಸಿತ್ತು. ಇದಕ್ಕೆ ಭಾರತೀಯರೂ ಬೆಂಬಲ ನೀಡಿದ್ದರು.
India Latest News Live 27 October 2025ಇಸ್ರೇಲ್ಗೆ 8 ಸಾವಿರ ಕೋಟಿ ಮಿಡ್-ಏರ್ ರಿಫ್ಯೂಯಲಿಂಗ್ ವಿಮಾನ ಒಪ್ಪಂದ ನೀಡಲಿರುವ ಭಾರತೀಯ ವಾಯುಸೇನೆ!
India Latest News Live 27 October 2025ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ
ಮಂಥಾ ಚಂಡಮಾರುತ, ಬೆಂಗಳೂರಿನಿಂದ ಹೊರಡಲಿರುವ ವಿವಿಧ ರೈಲು ವೇಳಾಪಟ್ಟಿ ಬದಲಾವಣೆ, ಪ್ರಯಾಣಿಕರ ಸುರಕ್ಷತೆ ಗಮನಿಸಿ ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಯಾವ್ಯಾವ ರೈಲು ಸೇವೆಯಲ್ಲಿ ವ್ಯತ್ಯಯ.
India Latest News Live 27 October 2025ಛಟ್ ಪೂಜೆಗೆ ಶುಭ ಕೋರಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಈ ರೀತಿ ಅವಮಾನ ಏಕೆ ಎಂದ ಬಿಜೆಪಿ?
ಛಟ್ ಪೂಜೆಗೆ ಶುಭ ಕೋರಿ ಪೇಚಿಗೆ ಸಿಲುಕಿದ ರಾಹುಲ್ ಗಾಂಧಿ, ಈ ರೀತಿ ಅವಮಾನ ಏಕೆ ಎಂದ ಬಿಜೆಪಿ? ರಾಹುಲ್ ಗಾಂಧಿ ಮಾಡಿದ ಶುಭಾಶಯ ಟ್ವೀಟ್ ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಶುಭಾಶಯ ಟ್ವೀಟ್ ವಿವಾದವಾಗಿದ್ದು ಹೇಗೆ?
India Latest News Live 27 October 2025ಚೀನಾದ ಸಹಾಯದೊಂದಿಗೆ ಸೈಲೆಂಟ್ ಆಗಿಯೇ ಅಮೆರಿಕಕ್ಕೆ ಬಹುದೊಡ್ಡ ಏಟು ನೀಡಿದ ಭಾರತ!
India Exports to China Surge by 22% in FY26 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ಸುಂಕ ವಿಧಿಸಿದ್ದಕ್ಕೆ ಪ್ರತಿಯಾಗಿ, ಭಾರತವು ತನ್ನ ರಫ್ತುಗಳನ್ನು ಚೀನಾದತ್ತ ತಿರುಗಿಸಿದೆ. ಇದರಿಂದಾಗಿ 2025-26ರ ಮೊದಲಾರ್ಧದಲ್ಲಿ ಚೀನಾಕ್ಕೆ ಭಾರತದ ರಫ್ತು ಶೇ. 22ರಷ್ಟು ಹೆಚ್ಚಾಗಿದೆ.
India Latest News Live 27 October 2025ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ
ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲೇ ವಿಮಾನ ತುರ್ತು ಲ್ಯಾಂಡ್, ಕಾರು ಜಸ್ಟ್ ಮಿಸ್ ದೃಶ್ಯ ಸೆರೆ, ಕೂದಲೆಳೆ ಅಂತರದಲ್ಲಿ ಕಾರು ಅಪಘಾತದಿಂದ ಪಾರಾಗಿದೆ. ಭಯಾನಕ ದೃಶ್ಯ ಕಾರಿನ ಡ್ಯಾಶ್ ಕ್ಯಾಮ್ನಲ್ಲಿ ಸೆರೆಯಾಗಿದೆ.
India Latest News Live 27 October 2025ಆಪಲ್, ಎನ್ವಿಡಿಯಾಗಿಂತ ನಿರೀಕ್ಷೆಗೂ ಮೀರಿ ಲಾಭ ಮಾಡಿದ ಓನ್ಲಿ ಫ್ಯಾನ್ಸ್!
OnlyFans Outperforms Apple & Nvidia ಓನ್ಲಿಫ್ಯಾನ್ಸ್, ಪ್ರತಿ ಉದ್ಯೋಗಿಗೆ 331 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದ ಅತ್ಯಂತ ಆದಾಯ-ಸಮರ್ಥ ಕಂಪನಿಯಾಗಿ ಹೊರಹೊಮ್ಮಿದೆ, ಇದು ಎನ್ವಿಡಿಯಾ ಮತ್ತು ಆಪಲ್ನಂತಹ ಟೆಕ್ ದೈತ್ಯರನ್ನು ಮೀರಿಸಿದೆ.
India Latest News Live 27 October 2025ಕೈ ಕಾಲುಗಳೇ ಇಲ್ಲದ ಈ ಬಾಲಕಿ ಪ್ಯಾರಾ ಒಲಿಂಪಿಕ್ನಲ್ಲಿ 2 ಚಿನ್ನದ ಪದಕ ವಿಜೇತೆ
ಅನೇಕರಿಗೆ ದೇಹದ ಎಲ್ಲಾ ಅಂಗಾಂಗಗಳು ಸರಿ ಇದ್ದರೂ ಅದಿಲ್ಲ ಇದಿಲ್ಲ ಎಂದು ಕೊರಗುತ್ತಾರೆ. ಆದರೆ ಈ ಮಗುವಿಗೆ ಎರಡು ಕೈಗಳು ಇಲ್ಲ ಕಾಲುಗಳು ಇಲ್ಲ. ಬಿಲ್ಲುಗಾರಿಕೆಗೆ ಎರಡು ಕೈಗಳು ಬಹಳ ಅಗತ್ಯ ಆದರೆ ಈಕೆ ಅವುಗಳಿಲ್ಲದೆಯೂ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕ ಗೆದ್ದ ಪ್ಯಾರಾ ಒಲಿಂಪಿಯನ್.
India Latest News Live 27 October 2025ಮನೆ, ಭದ್ರತಾ ಸಿಬ್ಬಂದಿಗಳಿಗೆ ಅಮಿತಾಭ್ ಬಚ್ಚನ್ 10,000 ರೂ ಗಿಫ್ಟ್, ಜುಜುಬಿ ಎಂದ ನೆಟಿಜೆನ್ಸ್
ಮನೆ, ಭದ್ರತಾ ಸಿಬ್ಬಂದಿಗಳಿಗೆ ಅಮಿತಾಬ್ ಬಚ್ಚನ್ 10,000 ರೂ ಗಿಫ್ಟ್, ಜುಜುಬಿ ಎಂದ ನೆಟಿಜೆನ್ಸ್, ದೀಪಾವಳಿ ಸಂಭ್ರಮದಲ್ಲಿ ಅಮಿತಾಬ್ ಬಚ್ಚನ್ ಈ ಉಡುಗೊರೆ ನೀಡಿದ್ದರೆ. ಆದರೆ ಇದೀಗ ಪರ ವಿರೋಧ ಕಮೆಂಟ್ಗೆ ಕಾರಣವಾಗಿದೆ.
India Latest News Live 27 October 2025ಪಿಎಂ ಕಿಸಾನ್ ಸಮ್ಮಾನ್ ನಿಧಿ 21ನೇ ಕಂತು ರಿಲೀಸ್ ಆಗೋ ದಿನಾಂಕ ಫಿಕ್ಸ್!
PM Kisan Samman Nidhi 21st Installment Date Fixed ಪಿಎಂ ಕಿಸಾನ್ ಯೋಜನೆಯ 21ನೇ ಕಂತು ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲವು ರಾಜ್ಯಗಳಿಗೆ ಈಗಾಗಲೇ ಹಣ ಬಿಡುಗಡೆಯಾಗಿದ್ದು, ಇ-ಕೆವೈಸಿ ಮತ್ತು ಆಧಾರ್ ಸೀಡಿಂಗ್ ಪೂರ್ಣಗೊಳಿಸದ ರೈತರಿಗೆ ಈ ಕಂತಿನ ಹಣ ಸಿಗುವುದಿಲ್ಲ.
India Latest News Live 27 October 2025ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ
ನ.23ಕ್ಕೆ ಚೀಫ್ ಜಸ್ಟಿಸ್ ಬಿಆರ್ ಗವಾಯಿ ನಿವೃತ್ತಿ, ಮುಂದಿನ ಸಿಜೆಐ ಹೆಸರು ಸೂಚಿಸಿದ ಮುಖ್ಯ ನ್ಯಾಯಮೂರ್ತಿ, ನವೆಂಬರ್ 24ರಂದು ಸುಪ್ರೀಂ ಕೋರ್ಟ್ ಸಿಜೆಐ ಆಗಿ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳಲಿರುವ ಜಸ್ಟಿಸ್ ಯಾರು?
India Latest News Live 27 October 2025ಶ್ರೇಯಸ್ ಅಯ್ಯರ್ ಗಾಯದ ಕುರಿತಂತೆ ಮಹತ್ವದ ಅಪ್ಡೇಟ್ ಕೊಟ್ಟ ಬಿಸಿಸಿಐ! ಐಸಿಯುನಿಂದ ಶಿಫ್ಟ್
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರ ಗುಲ್ಮದಲ್ಲಿ ಗಾಯವಾಗಿರುವುದು ಸ್ಕ್ಯಾನಿಂಗ್ನಲ್ಲಿ ಪತ್ತೆಯಾಗಿದೆ. ಸದ್ಯ ತೀವ್ರ ನಿಗಾ ಘಟಕದಿಂದ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
India Latest News Live 27 October 2025ಕೆಲಸ ಇಲ್ಲ, ಹಣವಿಲ್ಲ, ಯಾರಾದ್ರೂ ಸಹಾಯ ಮಾಡಿ; ಸೋಶಿಯಲ್ ಮೀಡಿಯಾದಲ್ಲಿ ಅಂಗಲಾಚಿದ ಸ್ಟಾರ್ ಹೀರೋಯಿನ್!
Actress Sandhya Mridul Appeals for Work 'ಪೇಜ್ 3' ಖ್ಯಾತಿಯ ಬಾಲಿವುಡ್ ನಟಿ ಸಂಧ್ಯಾ ಮೃದುಲ್ ತಮಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದಾಗಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಡಿಮೆ ಫಾಲೋವರ್ಸ್ ಇರುವುದೇ ತಮಗೆ ಅವಕಾಶಗಳು ತಪ್ಪಿಹೋಗಲು ಕಾರಣ ಎಂದಿದ್ದಾರೆ.
India Latest News Live 27 October 2025ಮಾನಸಿಕ ಅಸ್ವಸ್ಥ ಭಿಕ್ಷುಕಿ ಬಳಿ ಲಕ್ಷಕ್ಕೂ ಅಧಿಕ ಹಣ ಪತ್ತೆ
beggar savings: ದಶಕದಿಂದ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕ ಮಹಿಳೆಯ ಬಳಿ ಒಂದು ಲಕ್ಷಕ್ಕೂ ಹೆಚ್ಚು ರೂಪಾಯಿ ಪತ್ತೆಯಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಆಕೆಯನ್ನು ಸ್ಥಳಾಂತರಿಸಲು ಯತ್ನಿಸಿದಾಗ, ಆಕೆ ಬಳಿ ಇದ್ದ ಎರಡು ಚೀಲಗಳಲ್ಲಿ ಅಪಾರ ಪ್ರಮಾಣದ ಹಣ ಇರುವುದು ಬೆಳಕಿಗೆ ಬಂದಿದೆ.
India Latest News Live 27 October 2025ಭಾರತ ಎದುರಿನ ಟೆಸ್ಟ್ ಸರಣಿಗೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ! ಟೀಂ ಇಂಡಿಯಾ ಸೋಲಿಸಲು ಮಾಸ್ಟರ್ ಪ್ಲಾನ್
ಮುಂದಿನ ತಿಂಗಳು ಭಾರತ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. ಗಾಯದಿಂದ ಚೇತರಿಸಿಕೊಂಡಿರುವ ತೆಂಬಾ ಬವುಮಾ ನಾಯಕನಾಗಿ ತಂಡಕ್ಕೆ ಮರಳಿದ್ದು, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಸೆನುರಾನ್ ಮುತ್ತುಸ್ವಾಮಿ ಅವರನ್ನೊಳಗೊಂಡ ಸ್ಪಿನ್ ವಿಭಾಗ ತಂಡ ಹೊಂದಿದೆ.
India Latest News Live 27 October 2025ಬಂದೇ ಬಿಡ್ತು ಕೇಂದ್ರದ ಭಾರತ್ ಟ್ಯಾಕ್ಸಿ - ಕಮಿಷನ್ಗೆ ಕಡಿವಾಣ- ಪ್ರಯಾಣಿಕರು, ಚಾಲಕರು ಖುಷಿಯೋ ಖುಷಿ
ಖಾಸಗಿ ಕ್ಯಾಬ್ಗಳ ಕಮಿಷನ್ ಹಾವಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು 'ಭಾರತ್ ಟ್ಯಾಕ್ಸಿ' ಸೇವೆಯನ್ನು ಆರಂಭಿಸುತ್ತಿದೆ. ಈ ಯೋಜನೆಯು ಚಾಲಕರಿಗೆ ಶೂನ್ಯ ಕಮಿಷನ್ ಮತ್ತು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಲಭ್ಯವನ್ನು ಒದಗಿಸುವ ಗುರಿ ಹೊಂದಿದೆ. ನವೆಂಬರ್ನಿಂದ ಸೇವೆ ಪ್ರಾರಂಭವಾಗಲಿದೆ.
India Latest News Live 27 October 2025ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ
ಮುಂದಿನ ಸಿನಿಮಾ ಕುರಿತು ಪೋಸ್ಟ್ ಮಾಡಿ ದುರಂತ ಅಂತ್ಯಕಂಡ ಜಮ್ತಾರಾ ಸೀಸನ್ 2 ಖ್ಯಾತಿಯ ನಟ, ಕೇವಲ 25ರ ಹರೆಯದ ಯುವ ನಟ ಸಚಿನ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನೀಯರ್. ಕೆಲಸ, ಸಿನಿಮಾ ಎರಡಲ್ಲೂ ಸೈ ಎನಿಸಿಕೊಂಡಿದ್ದ ನಟ ಬದುಕು ಅಂತ್ಯಗೊಳಿಸಿದ್ದೇಕೆ?
India Latest News Live 27 October 2025ಆಸ್ಟ್ರೇಲಿಯಾ ಎದುರಿನ ಸೆಮೀಸ್ಗೂ ಮುನ್ನ ಭಾರತಕ್ಕೆ ಬಿಗ್ ಶಾಕ್! ಈ ಗೇಮ್ ಚೇಂಜರ್ ಆಡೋದೇ ಡೌಟ್
ಮಹಿಳಾ ಏಕದಿನ ವಿಶ್ವಕಪ್ ಸೆಮಿಫೈನಲ್ಗೂ ಮುನ್ನ ಭಾರತಕ್ಕೆ ಹಿನ್ನಡೆಯಾಗಿದ್ದು, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ್ತಿ ಪ್ರತಿಕಾ ರಾವಲ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ.
India Latest News Live 27 October 2025ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ
ಸಿಎಂ ಯೋಗಿ ಮಹತ್ವದ ನಿರ್ಧಾರ ಘೋಷಣೆ, ಮುಸ್ತಾಫಾಬಾದ್ ಗ್ರಾಮ ಇನ್ನು ಕಬೀರ್ ಧಾಮ ಎಂದು ಮರುನಾಮಕರಣ ಮಾಡಲಾಗಿದೆ. ಮುಸ್ಲಿಮರೇ ಇಲ್ಲದ ಗ್ರಾಮಕ್ಕೆ ಮುಸ್ಲಿಂ ಹೆಸರಿಗಿಂತ ಅಲ್ಲಿನ ಸಂಸ್ಕೃತಿ, ಐತಿಹಾಸಿಕ ಪರಂಪರೆಗೆ ಅನುಗುಣವಾಗಿರಬೇಕು ಎಂದಿದ್ದಾರೆ.