Aug 11, 2021, 3:58 PM IST
ಬೆಂಗಳೂರು (ಆ. 11): ರಾಜ್ಯ ರಾಜಕಾರಣದಲ್ಲಿ ಆನಂದ್ ಸಿಂಗ್ ರಾಜೀನಾಮೆ ಪ್ರಕರಣ ಸದ್ದು ಮಾಡುತ್ತಿದೆ. 'ಆನಂದ್ ಸಿಂಗ್ ಜೊತೆ ನಾನು, ಸಿಎಂ ಹಾಗೂ ರಾಜುಗೌಡ ಮಾತನಾಡಿದ್ದೇವೆ. ಅವರು ಸಮಾಧಾನವಾಗಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ. ಎಂದು ಆರ್. ಅಶೋಕ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನದಲ್ಲಿ ಆನಂದ್ ಸಿಂಗ್ ಪಾತ್ರ ದೊಡ್ಡದು: ರೇಣುಕಾಚಾರ್ಯ
'ಆನಂದ್ ಸಿಂಗ್ ಹಿರಿಯರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಇದೇ ಮೊದಲೇನಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಸಮುದಾಯ, ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಯಾಗಬೇಕು ಎಂದಿದ್ದಾರೆ. ಇದನ್ನು ನಾನು ಸಿಎಂ ಗಮನಕ್ಕೆ ತಂದಿದ್ದೇನೆ' ಎಂದು ಆರ್. ಅಶೋಕ್ ಹೇಳಿದ್ದಾರೆ.