ಊರಿನ ಬಹಿಷ್ಕಾರದಿಂದ ಸಂಕಷ್ಟದಲ್ಲಿದ್ದ ಸೋಂಕಿತ ಕುಟುಂಬಕ್ಕೆ ಸುವರ್ಣ ನ್ಯೂಸ್ ನೆರವು..!

Aug 1, 2020, 5:43 PM IST

ಬೆಂಗಳೂರು (ಆ. 01): ಕೊರೊನಾ ಸೋಂಕಿತರು ಅಂತ ಗೊತ್ತಾದ ಕೂಡಲೇ ಅಕ್ಕದ ಪಕ್ಕದ ಜನ ಅವರನ್ನು ಬಹಿಷ್ಕೃತರಂತೆ ನೋಡುವುದು ಅಲ್ಲಲ್ಲಿ ವರದಿಯಾಗುತ್ತದೆ. ಅದೇ ರೀತಿ ವಿಜಯಪುರದಲ್ಲಿ ಒಂದು ಕುಟುಂಬವನ್ನು ಅಕ್ಕಪಕ್ಕದವರು ಬಹಿಷ್ಕೃತರಂತೆ ನೋಡಿದ್ದಾರೆ. ಕುಟುಂಬದ ಸದಸ್ಯನೊಬ್ಬನಿಗೆ ಇನ್ನೂ ಕೊರೊನಾ ರಿಪೋರ್ಟ್ ಬಂದಿಲ್ಲ, ಲಕ್ಷಣವಷ್ಟೇ ಕಂಡು ಬಂದಿದೆ. ಆಗಲೇ ಬಹಿಷ್ಕೃತರಂತೆ ನೋಡಿದ್ದಾರೆ. ಕೊನೆಗೆ ಸುವರ್ಣ ನ್ಯೂಸ್ ಆ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ. ಆ ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದೆ. 

ಕೊರೊನಾ ಪಾಸಿಟೀವ್: ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು