ನಾಗೇಂದ್ರ ಆತ್ಮಹತ್ಯೆ: ಗಣಪತಿ ಪ್ರಕರಣದಂತೆ ದೊಡ್ಡ ಮಟ್ಟದ ಪ್ರತಿಭಟನೆಗೆ 'ಕೈ' ಪ್ಲಾನ್

Aug 23, 2020, 11:14 AM IST

ಮೈಸೂರು (ಆ. 23):  ವೈದ್ಯಾಧಿಕಾರಿ ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಲ್ ಟ್ವಿಸ್ಟ್‌ ಸಿಕ್ಕಿದೆ. ಡಿವೈಎಸ್‌ಪಿ ಗಣಪತಿ ಪ್ರಕರಣದಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಪ್ಲಾನ್ ಮಾಡಲಾಗಿದೆ. ವೈದ್ಯಾಧಿಕಾರಿಗಳ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಕಾಂಗ್ರೆಸ್ ಸಾಥ್ ನೀಡುವ ಸಾಧ್ಯತೆ ಇದೆ. 

ಪ್ರತಿಭಟನೆ ಬಗ್ಗೆ ಡಾ. ನಾಗೇಂದ್ರ ಕುಟುಂಬಸ್ಥರು ಪ್ರತಿಕ್ರಿಯಿಸುತ್ತಿಲ್ಲ. ಹಾಗಾಗಿ ಇದು ಕಾಂಗ್ರೆಸ್ ಪ್ರತಿಭಟನೆಯಾಗಿಯೇ ಉಳಿಯುವ ಸಾಧ್ಯತೆ ಇದೆ. ಮೈಸೂರಿನಲ್ಲಿ ಕೊರೊನಾ ಚಿಕಿತ್ಸೆ, ಟೆಸ್ಟ್‌ ಕಳೆದೆರಡು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವೈದ್ಯರ ಮುಷ್ಕರದಿಂದ ರೋಗಿಗಳು ಪರದಾಡುವಂತಾಗಿದೆ. 

ಡಾ. ನಾಗೇಂದ್ರ ಸಾವಿನ ಪ್ರಕರಣಕ್ಕೆ ಪೊಲಿಟಿಕಲ್ ಟ್ವಿಸ್ಟ್‌; ವೈದ್ಯರ ಹೋರಾಟಕ್ಕೆ 'ಕೈ' ಸಾಥ್?