ಖಾಸಗಿ ಆಸ್ಪತ್ರೆಯ ವಿರುದ್ಧ ಗುಡಗಿದ ಸಚಿವ ಡಾ. ಕೆ ಸುಧಾಕರ್

Jul 28, 2020, 2:44 PM IST

ಬೆಂಗಳೂರು(ಜು.28): ಕನ್ನಡದ ಖ್ಯಾತ ನಟಿ ಸುಧಾರಾಣಿ ಅಣ್ಣನ ಮಗಳ ಚಿಕಿತ್ಸೆಗೆ ವಿಳಂಬ ಮಾಡಿದ ಖಾಸಗಿ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಸಿದ್ದಾರೆ.

ಚಿಕಿತ್ಸೆ ವಿಳಂಬದ ಕುರಿತಂತೆ ಸುವರ್ಣ ನ್ಯೂಸ್ ವರದಿಯನ್ನು ಪ್ರಸಾರ ಮಾಡಿತ್ತು. ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತ ಸರ್ಕಾರ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಕೊರೋನಾ ಟೆಸ್ಟ್: ಗುರಿ ಮುಟ್ಟಲು BBMP ಫೇಲ್..!

ಸುಧಾರಾಣಿ ಅಣ್ಣನ ಮಗಳು ಚಿಕಿತ್ಸೆಗೆ ಪರದಾಡಿದ ವಿಚಾರ ಮಾಧ್ಯಮಗಳ ಮೂಲಕ ತಿಳಿದುಬಂತು. ಅವರು ಮಾತ್ರವಲ್ಲ, ರಾಜ್ಯದ ಯಾರೇ ಆದರೂ ಚಿಕಿತ್ಸೆಗೆ ಪರದಾಡಬಾರದು. ಚಿಕಿತ್ಸೆಗೆ ವಿಳಂಬ ಮಾಡಿದ ಅಪೋಲೋ ಆಸ್ಪತ್ರೆ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ. ಟ್ವೀಟ್ ಮೂಲಕ ಸುಧಾಕರ್ ಈ ಎಚ್ಚರಿಕೆ ನೀಡಿದ್ದಾರೆ.