ಸಚಿವರಿಂದ ಹಿಟ್ & ರನ್! ಗಾಯಾಳು ನಿವೃತ್ತ ಯೋಧನಿಗೆ ಅಲ್ಲೇ ಬಿಟ್ಟು ಕಾಲ್ಕಿತ್ತ ಮಿನಿಸ್ಟ್ರು!

Oct 28, 2019, 12:25 PM IST

ಬೆಂಗಳೂರು (ಅ.28): ರಾಜ್ಯದ ಪ್ರಭಾವಿ ಸಚಿವರೊಬ್ಬರು ಹಿಟ್ & ರನ್ ವಿರುದ್ಧ ಆರೋಪ ಕೇಳಿಬಂದಿದೆ. ಅಪಘಾತದಲ್ಲಿ ಗಾಯಗೊಂಡ ನಿವೃತ್ತ ಯೋಧನನ್ನು ಅಲ್ಲೇ ಬಿಟ್ಟು ಅಲ್ಲಿಂದ ಸಚಿವರು ಕಾಲ್ಕಿತ್ತಿದ್ದಾರೆ. 

ಕಾರಿನ ಚಾಲಕ ಗಾಯಾಳುವನ್ನು ಅಸ್ಪತ್ರೆಗೆ ಸೇರಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಆಸ್ಪತ್ರೆ ವೆಚ್ಚ ಬಿಡಿ, ಕನಿಷ್ಠ ಸೌಜನ್ಯಕ್ಕಾದರೂ ನಿವೃತ್ತ ಯೋಧನ ಆರೋಗ್ಯದ ಬಗ್ಗೆ ಅವರು ವಿಚಾರಿಸಿಲ್ಲ. ಗಾಯಾಳು ಮನೆಯವರು ಚಾಲಕನಿಗೆ ಫೋನ್ ಮಾಡಿದಾಗ ಉಲ್ಟಾ ಅವರಿಗೇ ಧಮ್ಕಿ ಹಾಕಿದ್ದಾರೆ. ಯಾರಿವರು ಸಚಿವರು? ಅಪಘಾತ ಎಲ್ಲಿ, ಯಾವಾಗ ನಡೆಯಿತು? ಇಲ್ಲಿದೆ ವಿವರ...   

ಕಳೆದ ಫೆಬ್ರವರಿಯಲ್ಲಿ, ತುಮಕೂರು NH-75 ಪಕ್ಕ ನಿಂತಿದ್ದ ಇಬ್ಬರನ್ನು ಶಾಸಕ ಸಿ.ಟಿ. ರವಿ ಕಾರು ಬಲಿ ಪಡೆದಿತ್ತು. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದು, ಬಳಿಕ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು.