Jan 16, 2020, 4:31 PM IST
ಬೆಂಗಳೂರು (ಜ.16): ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಕಾರ್ಯಾಚಣೆ ಮುಂದುವರಿದಿದೆ.
ಇನ್ನೊಂದು ಕಡೆ ರಾಜ್ಯದ ಪ್ರಭಾವಿ ರಾಜಕಾರಣಿ, ಮಾಜಿ ಗೃಹ ಮಂತ್ರಿ ಕೆ.ಜೆ. ಜಾರ್ಜ್ ಜಾರಿ ನಿರ್ದೇಶನಾಲಯ (ED)ದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ನೀಡಿರುವ ದೂರನ್ನು ಆಧರಿಸಿ, ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಜಾರ್ಜ್ಗೆ ಸಮನ್ಸ್ ನೀಡಿದ್ದರು.