ಪರಿಹಾರ ಕೊಟ್ಟಿದ್ರಿಂದ ಯಾರಿಗೆ ಲಾಭ..? ಹೇಗೆ ಲಾಭ..? ಮುಗಿಯದ ಕತೆಯಾಗಿದೆಯೇಕೆ ಪರಿಹಾರ ಪಾಲಿಟಿಕ್ಸ್!?

ಪರಿಹಾರ ಕೊಟ್ಟಿದ್ರಿಂದ ಯಾರಿಗೆ ಲಾಭ..? ಹೇಗೆ ಲಾಭ..? ಮುಗಿಯದ ಕತೆಯಾಗಿದೆಯೇಕೆ ಪರಿಹಾರ ಪಾಲಿಟಿಕ್ಸ್!?

Published : Apr 28, 2024, 05:58 PM ISTUpdated : Apr 28, 2024, 05:59 PM IST

ಚುನಾವಣಾ ಸಂಗ್ರಾಮದಲ್ಲಿ ಪರಿಹಾರದ ಪ್ರಭಾವ ಏನು..?
ಸುಪ್ರೀಮ್ ಕೋರ್ಟ್ ಕದ ತಟ್ಟಿ ನ್ಯಾಯ ಕೇಳಿತ್ತು ಸರ್ಕಾರ!
ಪರಿಹಾರಕ್ಕೆ ಧನ್ಯವಾದ ಹೇಳಿದರೇಕೆ ಬಿಜೆಪಿ ನಾಯಕರು..?

ರಾಜ್ಯಕ್ಕೆ ಬರ ಪರಿಹಾರ ಬಂದಿದೆ. ಆದ್ರೆ ಅದರ ಜೊತೆಗೆ ಹೊಸ ಲೆಕ್ಕಾಚಾರವೂ ಶುರುವಾಗಿದೆ. ಅಂದ್ ಹಾಗೆ ರಾಜ್ಯ ಸರ್ಕಾರ ಕೇಳಿದ್ದು 18,172 ಕೋಟಿ. ಆದ್ರೆ ಕೇಂದ್ರ ಸರ್ಕಾರ(Central government ) ಬಿಡುಗಡೆ ಮಾಡಿರೋದು,3454 ಕೋಟಿ. ಹಾಗಾಗಿನೇ ಪರಿಹಾರ ಪಾಲಿಟಿಕ್ಸ್ ಮುಗಿಯದ ಕತೆಯಾಗಿ ಉಳಿದಿರೋದು. ಅಸಲಿಗೆ ಬರ ಪರಿಹಾರ(Drought Relief)  ಕೊಟ್ಟಿದ್ದು ನಾವು ಅಂತಿದೆ ಕೇಂದ್ರ  ಸರ್ಕಾರ. ತರಿಸಿಕೊಂಡಿದ್ದು ನಾವು ಅಂತಿದೆ ರಾಜ್ಯ ಸರ್ಕಾರ.. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ನೋಡ್ತಾ ಇದೆ. ಕರ್ನಾಟಕದ(Karnataka) ಬರ ಅದೆಷ್ಟು ಭೀಕರವಾಗಿದೆ ಅಂದ್ರೆ, ಕಳೆದ ನೂರು ವರ್ಷಗಳಲ್ಲೇ ಇಂಥಾ ಪರಿಸ್ಥಿತಿ ಯಾವತ್ತೂ ಬಂದಿಲ್ಲ. ಅದೇ ಕಾರಣಕ್ಕಾಗಿಯೇ ರಾಜ್ಯದ ರೈತ ಕಂಗಾಲಾಗಿರೋದು. ಆದ್ರೆ, ಬರ ಪರಿಹಾರದ ವಿಚಾರದಲ್ಲೂ ರಾಜ್ಯ ಮತ್ತು ಕೇಂದ್ರದ ನಡುವೆ ದಂಗಲ್ ಶುರುವಾಗೋಯ್ತು. ರಾಜ್ಯದಲ್ಲಿರೋ 236 ತಾಲೂಕುಗಳ ಪೈಕಿ, 223 ತಾಲ್ಲೂಕುಗಳು ಬರಪೀಡಿತವಾಗಿವೆ. ಅದರಲ್ಲಿ 196 ತಾಲ್ಲೂಕುಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಒಟ್ಟು 48.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ, ತೋಟಗಾರಿಕಾ ಬೆಳೆ ನಷ್ಟವಾಗಿದೆ. ಬರದಿಂದ ರಾಜ್ಯದಲ್ಲಿ ಒಟ್ಟಾರೆ 35,162 ಕೋಟಿ ನಷ್ಟವಾಗಿದೆ. 18,171 ಕೋಟಿ ರೂ. ಬರ ಪರಿಹಾರ ಬಿಡುಗಡೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ರಾಜ್ಯದ ಮನವಿ ಆಲಿಸಿದ ಕೇಂದ್ರ ಸರ್ಕಾರ, ಆ ಬಗ್ಗೆ ಪ್ರತಿಕ್ರಿಯೆ ಕೂಡ ಕೊಟ್ಟಿತ್ತು. ರಾಜ್ಯದಲ್ಲಿ ಪರಿಸ್ಥಿತಿ ಏನಾಗಿದೆ, ಹೇಗಿದೆ ಅನ್ನೋದರ ಬಗ್ಗೆ, ಕೇಂದ್ರದ ಬರ ಅಧ್ಯಯನ ತಂಡ ಕೂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ನೀಡಿತ್ತು. ಅಷ್ಟೆಲ್ಲಾ ಆದ ಮೇಲೂ, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡ್ತಿಲ್ಲ. ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡ್ತಾ ಇದೆ, ಅನ್ನೋ ಆರೋಪನಾ ರಾಜ್ಯ ಸರ್ಕಾರ ಮಾಡ್ತಲೇ ಬಂದಿತ್ತು. ಇದೇ ವಿಚಾರವನ್ನ ಕೋರ್ಟ್ ತನಕ ತಗೊಂಡ್ ಹೋಯ್ತು.

ಇದನ್ನೂ ವೀಕ್ಷಿಸಿ:  Murder News: ಬೆಂಗಳೂರಿನಲ್ಲಿ ಕರಗ ಮೆರವಣಿಗೆ ವೇಳೆ ಕಿರಿಕ್: ಕಾಲು ತುಳಿದಿದ್ದಕ್ಕೆ ಕೊಂದುಬಿಟ್ಟರಾ ಹಂತಕರು..?

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more