ಸಿಡಿದೆದ್ದ ಸಾರಿಗೆ ನೌಕರರು : ಬೇರೆ ದಾರಿ ಹಿಡಿದ ಪ್ರಯಾಣಿಕರು

Apr 7, 2021, 1:12 PM IST

ಬೆಂಗಳೂರು (ಏ.07): ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತ್ತೆ  ಕೆಎಸ್‌ಆರ್‌ಟಿಸಿ ಬಸ್ ಮುಷ್ಕರ ನಡೆಯುತ್ತಿದೆ.  ಪ್ರಯಾಣಿಕರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಸ್ವಾರ್ಥಕ್ಕಾಗಿ ಸಾರಿಗೆ ನೌಕರರ ಮುಷ್ಕರ, ಎಸ್ಮಾ ಜಾರಿ ಮಾಡುವ ಕುರಿತು ಚರ್ಚೆ: ಸಿಎಂ ಬಿಎಸ್‌ವೈ

 ಕೆಲವಷ್ಟು ಪ್ರಯಾಣಿಕರು ಖಾಸಗಿ ಬಸ್‌ಗಳತ್ತ ಮುಖ ಮಾಡಿದ್ದರೆ, ಇನ್ನೊಂದಷ್ಟು ಮಂದಿ ಮೆಟ್ರೊಗಳತ್ತ ಮುಖ ಮಾಡುತ್ತಿದ್ದಾರೆ.  ಜನರು ಸಾರಿಗೆ ಬಸ್‌ಗಳಿಲ್ಲದೇ ತಮ್ಮ ಸ್ಥಳ ತಲುಪಲು ಹರಸಾಹಸಪಡುತ್ತಿದ್ದಾರೆ.. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಕಾದು ಕುಳಿತಿದ್ದಾರೆ.