ಆಟೋ, ಟ್ಯಾಕ್ಸಿ ಸಿಗಲ್ಲ, ಓಲಾ, ಊಬರ್ ಓಡಾಡಲ್ಲ, ರಸ್ತೆಗಳೆಲ್ಲಾ ಬಂದ್; ಸಾರ್ವಜನಿಕರೇ ಎಚ್ಚರ

Sep 28, 2020, 9:29 AM IST

ಬೆಂಗಳೂರು (ಸೆ. 28): ರೈತರ ಹೋರಾಟ ಲೆಕ್ಕಿಸದೇ ಕರಷಿ ಮಸೂದೆ, ಭು ಸುಧಾರಣೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆಗಳ ಜಾರಿಗೆ ಹೊರಟಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ರೈತರು, ಕಾರ್ಮಿಕರು, ದಲಿತ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. 

ವಾಹನ ಸವಾರರೇ ಗಮನಿಸಿ; ಬೆಂಗಳೂರು ಸಂಪರ್ಕಿಸುವ ಈ ರಸ್ತೆಗಳೆಲ್ಲಾ ಬಂದ್

ಇಂದು ಹೊರ ಹೋಗುವಾಗ ಸಾರ್ವಜನಿಕರೇ ಎಚ್ಚರ ವಹಿಸಿ. ಮೆಜೆಸ್ಟಿಕ್ ಗೆ ಕರವೇ ಮುತ್ತಿಗೆ ಹಾಕಿದೆ. ಬಸ್‌ ಸಂಚಾರ ಆರಂಭಿಸದಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಪ್ರತಿಭಟನಾ ನಿರತ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದಿದ್ಧಾರೆ. ಉಳಿದಂತೆ ಯಾವೆಲ್ಲಾ ಸೇವೆಗಳು ಲಭ್ಯವಿರುತ್ತದೆ? ಯಾವೆಲ್ಲಾ ಇರುವುದಿಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!