'ನಿಖಿಲ್‌ಗೆ‌ ಶಾಸಕ ಯೋಗ, ಗಂಡು ಮಗು ಭಾಗ್ಯ, ಜೆಡಿಎಸ್‌ಗೆ ಅಧಿಕಾರ ಪಕ್ಕಾ.'!

Jul 3, 2021, 2:25 PM IST

ಬೆಂಗಳೂರು (ಜು. 03): ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ವಿನಯ್ ಗುರೂಜಿಯವರನ್ನು ಭೇಟಿ ಮಾಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ವಿನಯ್ ಗುರೂಜಿ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಆಶೀರ್ವಚನ ನೀಡಿದ್ದಾರೆ. 

ಶರವಣ ಮನೆಯಲ್ಲಿ HDK ಮತ್ತು ವಿನಯ್ ಗುರೂಜಿ ಭೇಟಿ

ಶರವಣ ತಾಯಿ ನಿಧನ ಹೊಂದಿದ್ದರಿಂದ, ವಿನಯ್ ಗುರೂಜಿಯವರು ಶರವಣ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಎಚ್‌ಡಿಕೆ ಕೂಡಾ ಶರವಣ ಮನೆಗೆ ಭೇಟಿ ನೀಡಿ, ಕೆಲ ಕಾಲ ಚರ್ಚೆ ನಡೆಸಿದ್ದಾರೆ.