ರಾಜಹುಲಿಗೆ ಇಲಿಗಳ ಕಾಟ! ಸಿಎಂ ಸಭೆಯೇ ಶಿಫ್ಟ್

Oct 14, 2019, 10:00 PM IST

ಬೆಂಗಳೂರು (ಅ.14): ಅಯ್ಯೋ... ಇದೇನಿದು? ನಾಡಿನ ಸಿಎಂಗೆ ಇಲಿಗಳ ಕಾಟವೇ? ಹೌದು ಸರಿಯಾಗಿಯೇ ಓದಿದ್ದೀರಿ. ಇದೆಲ್ಲೋ ಸರ್ಕಾರಿ ಕಚೇರಿಯ ಕಥೆ ಅಲ್ಲ, ಶಕ್ತಿ ಕೇಂದ್ರ ವಿಧಾನಸೌಧದ ಕಥೆ!

ಸಿಎಂ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದರು. ಆದರೆ ಆ ಮೀಟಿಂಗ್ ರೂಂನಲ್ಲಿ ಇಲಿ ಸತ್ತ ದುರ್ವಾಸನೆ ಹರಡಿಕೊಂಡಿತ್ತು! ವಿಧಾನಸೌಧದ ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗ್ಬಿಟ್ರು!  

ಸಿಡಿಮಿಡಿಗೊಂಡ ಸಿಎಂ ಮೀಟಿಂಗ್ ಕೋಣೆ ಬಿಟ್ಟು ಹೊರಟೇ ಬಿಟ್ರು. ಕೊನೆಗೆ ತನ್ನ ಕೋಣೆಯಲ್ಲಿ ಮೀಟಿಂಗ್ ಮಾಡೋಣ ಎಂದು ಹೋಗಿಯೇ ಬಿಟ್ರು!