Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Published : Apr 26, 2024, 04:45 PM IST

ಮೋದಿ ಭದ್ರಾತಿಭದ್ರ ಕೋಟೆಯಲ್ಲೇ  ಒಡಹುಟ್ಟಿದವರ ಜೋಡಿಯುದ್ಧ?
ಸೇಡು ತೀರಿಸಿಕೊಳ್ಳಲು ಅಮೇಥಿ ಕಡೆ ಹೊರಟರಾ ರಾಹುಲ್ ಗಾಂಧಿ..?
ಅಜ್ಜಿ-ಅಮ್ಮನ ಕಟ್ಟಿದ ಕೋಟೆಯಲ್ಲೇ ಪ್ರಿಯಾಂಕಾ ಅದೃಷ್ಟ ಪರೀಕ್ಷೆ..?

ಇದು ರಾಷ್ಟ್ರ ರಾಜಕಾರಣದ ಫೇಮಸ್ ಅಣ್ಣ-ತಂಗಿಯರ ರಾಜಕೀಯ ಪಗಡೆಯಾಟ. ಗಾಂಧಿ ಕುಟುಂಬದ ಒಡ ಹುಟ್ಟಿದವರು ರಾಜಕೀಯದ ಚದುರಂಗದಲ್ಲಿ ಉರುಳಿಸ್ತಾ ಇರೋ ರೋಚಕ ದಾಳ. ಇಂದಿರಾ ಗಾಂಧಿಯವರ ಮೊಮ್ಮಕ್ಕಳು, ರಾಜೀವ್ ಗಾಂಧಿ-ಸೋನಿಯಾ ಗಾಂಧಿಯವರ ಮಕ್ಕಳು ಅವಳಿ ಅಖಾಡಗಳಿಂದ ಲೋಕಸಭಾ ಚುನಾವಣಾ(Lok Sabha elections 2024) ಅಖಾಡಕ್ಕೆ ಧುಮುಕಲು ತಾಲೀಮು ನಡೆಸ್ತಾ ಇದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್‌ನ ಶಕ್ತಿ. ಮೂವರು ಪ್ರಧಾನಿಗಳನ್ನು ದೇಶಕ್ಕೆ ನೀಡಿರೋ ಕುಟುಂಬ ಅದು. ಇದೇ ಗಾಂಧಿ ಕುಟುಂಬಕ್ಕೆ ಉತ್ತರ ಪ್ರದೇಶದಲ್ಲಿ ಎರಡು ರಾಜಕೀಯ ಕರ್ಮಭೂಮಿಗಳು. ಒಂದು ರಾಯ್ ಬರೇಲಿ, ಮತ್ತೊಂದು ಅಮೇಥಿ(Amethi). ಗಾಂಧಿ ಪರಿವಾರದವರಿಗೆ ದಶಕಗಳಿಂದಲೂ  ರಾಜಕೀಯ ಶಕ್ತಿ ತುಂಬುತ್ತಾ ಬಂದಿರೋದು ಇವೇ ಎರಡು ಕ್ಷೇತ್ರಗಳು. ಅವಳಿ ಅಖಾಡಗಳಿಂದ ಗಾಂಧಿ ಕುಟುಂಬದವರು ಒಟ್ಟೊಟ್ಟಿಗೇ ಚುನಾವಣೆಗೆ ಸ್ಪರ್ಧಿಸ್ತಾ ಬಂದಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಲು ಈ ಬಾರಿ ಟೊಂಕ ಕಟ್ಟಿ ನಿಂತಿದ್ದಾರೆ ಅಣ್ಣ-ತಂಗಿ. ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳು ದಶಕಗಳಿಂದಲೂ ಕಾಂಗ್ರೆಸ್(Congress) ಭದ್ರಕೋಟೆ. ಆದ್ರೆ ಈ ಬಾರಿ ಬಿದ್ದ ನೆಲದಿಂದಲೇ ಮತ್ತೆ ಮೇಲೆದ್ದು ನಿಲ್ಲಲು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ(Rahul ghandhi) ನಿರ್ಧಾರ ಮಾಡಿರೋ ಹಾಗಿದೆ. 

ಇದನ್ನೂ ವೀಕ್ಷಿಸಿ:  Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
22:55Karnataka Politics: ಉಭಯ ಸಂಕಟದಲ್ಲಿ ಸಿಲುಕಿದ ಕಾಂಗ್ರೆಸ್ ಹೈಕಮಾಂಡ್! ಹೇಗಿವೆ ಸಿದ್ದು-ಡಿಕೆ ಪಟ್ಟುಗಳು?