Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Published : Apr 26, 2024, 04:45 PM IST

ಮೋದಿ ಭದ್ರಾತಿಭದ್ರ ಕೋಟೆಯಲ್ಲೇ  ಒಡಹುಟ್ಟಿದವರ ಜೋಡಿಯುದ್ಧ?
ಸೇಡು ತೀರಿಸಿಕೊಳ್ಳಲು ಅಮೇಥಿ ಕಡೆ ಹೊರಟರಾ ರಾಹುಲ್ ಗಾಂಧಿ..?
ಅಜ್ಜಿ-ಅಮ್ಮನ ಕಟ್ಟಿದ ಕೋಟೆಯಲ್ಲೇ ಪ್ರಿಯಾಂಕಾ ಅದೃಷ್ಟ ಪರೀಕ್ಷೆ..?

ಇದು ರಾಷ್ಟ್ರ ರಾಜಕಾರಣದ ಫೇಮಸ್ ಅಣ್ಣ-ತಂಗಿಯರ ರಾಜಕೀಯ ಪಗಡೆಯಾಟ. ಗಾಂಧಿ ಕುಟುಂಬದ ಒಡ ಹುಟ್ಟಿದವರು ರಾಜಕೀಯದ ಚದುರಂಗದಲ್ಲಿ ಉರುಳಿಸ್ತಾ ಇರೋ ರೋಚಕ ದಾಳ. ಇಂದಿರಾ ಗಾಂಧಿಯವರ ಮೊಮ್ಮಕ್ಕಳು, ರಾಜೀವ್ ಗಾಂಧಿ-ಸೋನಿಯಾ ಗಾಂಧಿಯವರ ಮಕ್ಕಳು ಅವಳಿ ಅಖಾಡಗಳಿಂದ ಲೋಕಸಭಾ ಚುನಾವಣಾ(Lok Sabha elections 2024) ಅಖಾಡಕ್ಕೆ ಧುಮುಕಲು ತಾಲೀಮು ನಡೆಸ್ತಾ ಇದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್‌ನ ಶಕ್ತಿ. ಮೂವರು ಪ್ರಧಾನಿಗಳನ್ನು ದೇಶಕ್ಕೆ ನೀಡಿರೋ ಕುಟುಂಬ ಅದು. ಇದೇ ಗಾಂಧಿ ಕುಟುಂಬಕ್ಕೆ ಉತ್ತರ ಪ್ರದೇಶದಲ್ಲಿ ಎರಡು ರಾಜಕೀಯ ಕರ್ಮಭೂಮಿಗಳು. ಒಂದು ರಾಯ್ ಬರೇಲಿ, ಮತ್ತೊಂದು ಅಮೇಥಿ(Amethi). ಗಾಂಧಿ ಪರಿವಾರದವರಿಗೆ ದಶಕಗಳಿಂದಲೂ  ರಾಜಕೀಯ ಶಕ್ತಿ ತುಂಬುತ್ತಾ ಬಂದಿರೋದು ಇವೇ ಎರಡು ಕ್ಷೇತ್ರಗಳು. ಅವಳಿ ಅಖಾಡಗಳಿಂದ ಗಾಂಧಿ ಕುಟುಂಬದವರು ಒಟ್ಟೊಟ್ಟಿಗೇ ಚುನಾವಣೆಗೆ ಸ್ಪರ್ಧಿಸ್ತಾ ಬಂದಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಲು ಈ ಬಾರಿ ಟೊಂಕ ಕಟ್ಟಿ ನಿಂತಿದ್ದಾರೆ ಅಣ್ಣ-ತಂಗಿ. ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳು ದಶಕಗಳಿಂದಲೂ ಕಾಂಗ್ರೆಸ್(Congress) ಭದ್ರಕೋಟೆ. ಆದ್ರೆ ಈ ಬಾರಿ ಬಿದ್ದ ನೆಲದಿಂದಲೇ ಮತ್ತೆ ಮೇಲೆದ್ದು ನಿಲ್ಲಲು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ(Rahul ghandhi) ನಿರ್ಧಾರ ಮಾಡಿರೋ ಹಾಗಿದೆ. 

ಇದನ್ನೂ ವೀಕ್ಷಿಸಿ:  Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್