Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Published : Apr 26, 2024, 04:45 PM IST

ಮೋದಿ ಭದ್ರಾತಿಭದ್ರ ಕೋಟೆಯಲ್ಲೇ  ಒಡಹುಟ್ಟಿದವರ ಜೋಡಿಯುದ್ಧ?
ಸೇಡು ತೀರಿಸಿಕೊಳ್ಳಲು ಅಮೇಥಿ ಕಡೆ ಹೊರಟರಾ ರಾಹುಲ್ ಗಾಂಧಿ..?
ಅಜ್ಜಿ-ಅಮ್ಮನ ಕಟ್ಟಿದ ಕೋಟೆಯಲ್ಲೇ ಪ್ರಿಯಾಂಕಾ ಅದೃಷ್ಟ ಪರೀಕ್ಷೆ..?

ಇದು ರಾಷ್ಟ್ರ ರಾಜಕಾರಣದ ಫೇಮಸ್ ಅಣ್ಣ-ತಂಗಿಯರ ರಾಜಕೀಯ ಪಗಡೆಯಾಟ. ಗಾಂಧಿ ಕುಟುಂಬದ ಒಡ ಹುಟ್ಟಿದವರು ರಾಜಕೀಯದ ಚದುರಂಗದಲ್ಲಿ ಉರುಳಿಸ್ತಾ ಇರೋ ರೋಚಕ ದಾಳ. ಇಂದಿರಾ ಗಾಂಧಿಯವರ ಮೊಮ್ಮಕ್ಕಳು, ರಾಜೀವ್ ಗಾಂಧಿ-ಸೋನಿಯಾ ಗಾಂಧಿಯವರ ಮಕ್ಕಳು ಅವಳಿ ಅಖಾಡಗಳಿಂದ ಲೋಕಸಭಾ ಚುನಾವಣಾ(Lok Sabha elections 2024) ಅಖಾಡಕ್ಕೆ ಧುಮುಕಲು ತಾಲೀಮು ನಡೆಸ್ತಾ ಇದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್‌ನ ಶಕ್ತಿ. ಮೂವರು ಪ್ರಧಾನಿಗಳನ್ನು ದೇಶಕ್ಕೆ ನೀಡಿರೋ ಕುಟುಂಬ ಅದು. ಇದೇ ಗಾಂಧಿ ಕುಟುಂಬಕ್ಕೆ ಉತ್ತರ ಪ್ರದೇಶದಲ್ಲಿ ಎರಡು ರಾಜಕೀಯ ಕರ್ಮಭೂಮಿಗಳು. ಒಂದು ರಾಯ್ ಬರೇಲಿ, ಮತ್ತೊಂದು ಅಮೇಥಿ(Amethi). ಗಾಂಧಿ ಪರಿವಾರದವರಿಗೆ ದಶಕಗಳಿಂದಲೂ  ರಾಜಕೀಯ ಶಕ್ತಿ ತುಂಬುತ್ತಾ ಬಂದಿರೋದು ಇವೇ ಎರಡು ಕ್ಷೇತ್ರಗಳು. ಅವಳಿ ಅಖಾಡಗಳಿಂದ ಗಾಂಧಿ ಕುಟುಂಬದವರು ಒಟ್ಟೊಟ್ಟಿಗೇ ಚುನಾವಣೆಗೆ ಸ್ಪರ್ಧಿಸ್ತಾ ಬಂದಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಲು ಈ ಬಾರಿ ಟೊಂಕ ಕಟ್ಟಿ ನಿಂತಿದ್ದಾರೆ ಅಣ್ಣ-ತಂಗಿ. ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳು ದಶಕಗಳಿಂದಲೂ ಕಾಂಗ್ರೆಸ್(Congress) ಭದ್ರಕೋಟೆ. ಆದ್ರೆ ಈ ಬಾರಿ ಬಿದ್ದ ನೆಲದಿಂದಲೇ ಮತ್ತೆ ಮೇಲೆದ್ದು ನಿಲ್ಲಲು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ(Rahul ghandhi) ನಿರ್ಧಾರ ಮಾಡಿರೋ ಹಾಗಿದೆ. 

ಇದನ್ನೂ ವೀಕ್ಷಿಸಿ:  Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!

20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?