Panchamasali: 3 ನೇ ಪೀಠಕ್ಕೆ ಚಾಲನೆ, ಡಾ. ಮಹಾದೇವ ಶಿವಾಚಾರ್ಯ ಪೀಠಾರೋಹಣ

Feb 13, 2022, 3:38 PM IST

ಬೆಂಗಳೂರು (ಫೆ. 13): ಭಾರೀ ಕುತೂಹಲ ಮೂಡಿಸಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ಮೂರನೇ ಪೀಠದ ಮೊದಲ ಜಗದ್ಗುರುಗಳ ಪೀಠಾರೋಹಣ ಸಮಾರಂಭ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ನಡೆಯಿತು. ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು ನೂತನ ಜಗದ್ಗುರುಗಳಾಗಿ ಅಧಿಕೃತವಾಗಿ ಪೀಠಾರೋಹಣ ಮಾಡಿದರು. 

ಪಂಚಮಸಾಲಿ ಹರಿಹರ ಪೀಠದ ವಚನಾನಂದ ಶ್ರೀಗಳ ಮುಂದಾಳತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಮಂತ್ರಾಲಯ ಶ್ರೀಗಳು ಸೇರಿ ನಾಡಿನ 300ಕ್ಕೂ ಹಿರಿಯ, ಕಿರಿಯ ಶ್ರೀಗಳು ಆಗಮಿಸಿದರು. ಒಂದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. 

ಪೀಠಾರೋಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಾ.ಮಹಾದೇವ ಶಿವಾಚಾರ್ಯರು ಕುಂಭ ಮೆರವಣಿಗೆ, ವಾದ್ಯ, ಮೇಳದೊಂದಿಗೆ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 4.48ಕ್ಕೆ ನೂತನ ಜಗದ್ಗುರುಗಳಿಗೆ ಅಭಿಷೇಕ, ನಂತರ 6.15ಕ್ಕೆ ರುದ್ರಾಭಿಷೇಕ, ಕಿರೀಟಧಾರಣೆ ನಡೆಯಲಿದೆ. ಆ ಬಳಿಕ 8 ಗಂಟೆಗೆ ಕೃಷ್ಣಾ ನದಿಗೆ ಪೂಜೆ ನೆರವೇರಲಿದ್ದು, 10.30ಕ್ಕೆ ಪೀಠಾರೋಹಣದ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ.