ಕವರ್ ಸ್ಟೋರಿ ಖೆಡ್ಡಾಗೆ ಬಿತ್ತು ವಿಜಯನಗರ ಸಾಮ್ರಾಜ್ಯದ ಮುತ್ತು ರತ್ನಗಳನ್ನು ಮಾರುತ್ತಿದ್ದ ಗ್ಯಾಂಗ್..!

Oct 24, 2020, 1:53 PM IST

ಬೆಂಗಳೂರು (ಅ. 24): ನೆರೆಯ ಆಂಧ್ರದ ತಂಡವೊಂದು ವಿಜಯನಗರ ಸಾಮ್ರಾಜ್ಯದ ವಜ್ರ ವೈಢೂರ್ಯಗಳನ್ನು ಮಾರಾಟ ಮಾಡಲು ಸಂಚು ರೂಪಿಸುತ್ತಿದೆ ಎಂದು ತಿಳಿದ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಅದರ ಬಗ್ಗೆ ಕಾರ್ಯಾಚರಣೆಗಿಳಿಯಿತು. ಗ್ರಾಹಕರ ಸೋಗಿನಲ್ಲಿ ಅವರನ್ನು ಸಂಪರ್ಕಿಸಲಾಯಿತು. ಆಗ 3 ಸಾವಿರ ಕೆಜಿಯ ಬೆಳ್ಳಿ ವಿಗ್ರಹ, ನೂರಾರು ಕೋಟಿ ಬೆಲೆ ಬಾಳುವ ಮುತ್ತು ರತ್ನಗಳು, ಮಹಾರಾಣಿಯರ ಜರಿ ಸೀರೆಗಳು ಅವರ ಬಳಿಯಿವೆ ಎನ್ನುವ ಮಾಹಿತಿ ಸಿಕ್ಕಿತು. 

ಬಹುತೇಕ ರೈತರನ್ನು ತಲುಪದ ಸಾಲಮನ್ನಾ ಹಣ; ಅಧಿಕಾರಿಗಳ ಜೇಬು ಸೇರಿತು ಕಾಂಚಾಣ

ಒಂದೆರಡು ಸಲ ಮಾತುಕತೆ ನಂತರ ಈ ಗ್ಯಾಂಗ್ ಚಾಮರಾಜಪೇಟೆಯಲ್ಲಿರುವ ಮಹಿಳೆಯೊಬ್ಬರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಆ ಮಹಿಳೆ ಮಾತನಾಡುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಬಹಳ ಖತರ್ನಾಕ್ ಮಹಿಳೆ ಎಂಬುದು ಮಾತಿನಲ್ಲಿ ಗೊತ್ತಾಗುತ್ತದೆ. ನಂತರ ಗ್ಯಾಂಗ್ ಸಿಕ್ಕಿ ಬಿದ್ದಿದ್ಹೇಗೆ? ಇಂಟರೆಸ್ಟಿಂಗ್ ಕಾರ್ಯಾಚರಣೆ ಹೇಗಿತ್ತು ನೋಡೋಣ ಬನ್ನಿ...!