Aug 9, 2021, 12:05 PM IST
ಬೆಂಗಳೂರು (ಆ. 09): ಸಿಎಂ ಬೊಮ್ಮಾಯಿ ಸಂಪುಟಕ್ಕೆ 29 ಮಂದಿ ಸಚಿವರು ಸೇರ್ಪಡೆಯಾಗಿದ್ದು, ಖಾತೆ ಹಂಚಿಕೆಯೂ ಆಗಿದೆ. ಖಾತೆ ಬಗ್ಗೆ ಕ್ಯಾತೆಯೂ ಶುರುವಾಗಿದೆ. ಇದರ ನಡುವೆ ನೂತನ ಸಚಿವರಿಗೆ ಸರ್ಕಾರಿ ನಿವಾಸದಲ್ಲಿ ವಾಸ್ತು ಭಯ ಶುರುವಾಗಿದೆ.
ಆನಂದ್ ಸಿಂಗ್ ಖಾತೆ ಕ್ಯಾತೆ: ಬದಲಾವಣೆಗೆ ಪಟ್ಟು, ಸಿಎಂಗೆ ಡೆಡ್ಲೈನ್ ಕೊಟ್ಟ ಸಚಿವರು..!
ಸಚಿವರಿಗೆ ನೀಡುವ ಸರ್ಕಾರಿ ನಿವಾಸದಲ್ಲಿ ವಾಸ್ತು ದೋಷ ಇದೆಯಂತೆ. ಅಧಿಕಾರ ಕಳೆದುಕೊಳ್ಳುವ ಭಯ, ವಿವಾದದ ಭಯದಿಂದ ಆ ನಿವಾಸಗಳಿಗೆ ಹೋಗಲು ಸಚಿವರು ಹಿಂದೇಟು ಹಾಕುತ್ತಿದ್ದಾರೆ. ಹೊಸ ಮನೆಯ ಹುಡುಕಾಟದಲ್ಲಿ ತೊಡಗಿದ್ದಾರೆ ಸಚಿವರ ಬೆಂಬಲಿಗರು. ಹಾಗಾದರೆ ನಿಜಕ್ಕೂ ವಾಸ್ತು ದೋಷವಿದೆಯಾ..? ಹಿಂದೆ ಇದ್ದ ಸಚಿವರಿಗೆ ಯಾವ ರೀತಿ ತೊಂದರೆಯಾಗಿತ್ತು..? ಇಲ್ಲಿದೆ ಇನ್ಸೈಡ್ ಪಾಲಿಟಿಕ್ಸ್...!