ಲಾಕ್‌ಡೌನ್ ಮುಗಿಯುವ ಮುನ್ನವೇ ಬೆಂಗ್ಳೂರಿಗರಿಗೆ 'ಹೊಟ್ಟೆ ತುಂಬುವ' ಸುದ್ದಿ..!

Apr 30, 2020, 6:43 PM IST

ಬೆಂಗಳೂರು(ಏ.30): ದೇಶಕ್ಕೆ ಕೊರೊನಾ ಚಿಂತೆಯಾದರೆ ಬಿಬಿಎಂಪಿ ನೌಕರರ ಸಂಘಕ್ಕೆ ಜಿಮ್ ಚಿಂತೆ ಶುರುವಾಗಿದೆ. ಬಿಬಿಎಂಪಿ ಆವರಣದಲ್ಲಿ ರೆಸ್ಟೋರೆಂಟ್ ಬೇಕು. ಅದಕ್ಕೆ 2 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿ ಎಂದು ಸಂಘದ ಪದಾದಿಕಾರಿಗಳು ಮೇಯರ್‌ಗೆ ಬೇಡಿಕೆ ಸಲ್ಲಿಸಿದ್ದಾರೆ.

ಕೊರೋನಾ ವೈರಸ್‌ನಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಶಕ್ತಿ ಮೀರಿ ಹೋರಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲೂ ಬಿಬಿಎಂಪಿ ನೌಕರರ ಸಂಘಕ್ಕೆ ಜಿಮ್ ಅನಿವಾರ್ಯತೆ ಎದುರಾಗಿರುವುದು ಅಚ್ಚರಿಗೆ ಕಾರಣವಾಗಿದೆ.  

ಸೋಂಕಿತ ಸಂಪರ್ಕದಲ್ಲಿ 188 ವೃದ್ಧರು; ಆತಂಕದಲ್ಲಿ ಗದಗ ಮಂದಿ!

ನೌಕರರ ಭವನದ 3 ನೇ ಮಹಡಿಯಲ್ಲಿ ಹೈಟೆಕ್ ಜಿಮ್ ಬೇಕು ಎಂದು ನೌಕರರ ಸಂಘ ಬೇಡಿಕೆ ಇಟ್ಟಿದೆ. ಇದಕ್ಕೆ ಮೇಯರ್ ಅಸ್ತು ಎಂದಿದ್ದಾರೆ. ಇಡೀ ದೇಶ ಕೊರೋನಾ ಚಿಂತೆಯಲ್ಲಿ ಇದ್ದರೆ ಇವರಿಗೆ ಮಾತ್ರ ಬೇರೆಯದ್ದೇ ಚಿಂತೆಯಾಗಿದೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!