ಸಂಘಟನೆಗಳ ಆಕ್ರೋಶ, ಒತ್ತಡಕ್ಕೆ ಮಣಿದ ಬಿಬಿಎಂಪಿ, ಗಣೇಶೋತ್ಸವ ಗೈಡ್‌ಲೈನ್ಸ್ ಬದಲು.!

Sep 9, 2021, 5:32 PM IST

ಬೆಂಗಳೂರು (ಸೆ. 09): ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಬಿಬಿಎಂಪಿ ಗಣೇಶೋತ್ಸವ ಆಚರಣೆ ಬಗ್ಗೆ ಹೊಸ ಗೈಡ್‌ಲೈನ್ಸ್ ರೂಪಿಸಿದೆ. 

ಅನಧಿಕೃತ ದರ್ಗಾ ಮುಟ್ಟಲು ನಿಮ್ಮ ತೊಡೆ ನಡುಗುತ್ತಾ? ಕೆಡಿಪಿ ಸಭೆಯಲ್ಲಿ ಪ್ರತಾಪ್ ಸಿಂಹ ಗರಂ

'ಎಲ್ಲಾ ಸಮಿತಿಗಳಿಗೂ ಗಣೇಶನನ್ನು ಕೂರಿಸಲು ಅವಕಾಶ ನೀಡಲಾಗಿದೆ. ಗಣಪತಿ ಮೂರ್ತಿ ಎತ್ತರದ ನಿರ್ಬಂಧವನ್ನೂ ಕೈ ಬಿಟ್ಟಿದ್ದಾರೆ. ಸರ್ಕಾರ ಧಾರ್ಮಿಕ ವಿಚಾರದಲ್ಲಿ ತಲೆ ಹಾಕಬಾರದು. ಚೌತಿಯಿಮದ ಚತುರ್ದಶಿಯವರೆಗೂ ಆಚರಣೆಗೆ ಅನುಮತಿ ನೀಡಿದ್ದಾರೆ. ತೊಂದರೆ ಮಾಡಲ್ಲವೆಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಬೆಂಗಳೂರು ಧಾರ್ಮಿಕ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ರಾಜ್ ಹೇಳಿದ್ದಾರೆ.