ಶ್ರೀರಾಮುಲು ಧರಿಸಿದ್ದ ಉಂಗುರದ ಬಗ್ಗೆ ಡಿಸಿಎಂ ಚರ್ಚೆ: ಜೊತೆಗೊಂದು ಕಿವಿಮಾತು..!

Jan 4, 2021, 3:59 PM IST

ಬೆಂಗಳೂರು, (ಜ.04): ಮುಖ್ಯಮಂತ್ರಿಯೊಂದಿಗೆ ನಡೆಯಬೇಕಿದ್ದ ಸಭೆಗೆ ಆಗಮಿಸಿದ್ದ ಸಚಿವ ಶ್ರೀರಾಮುಲು, ಕೈ ನೋಡಿದ ಲಕ್ಷಣಸವದಿ ಅವರ ಉಂಗುರದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸದಾನಂದಗೌಡ ದಾಖಲಾಗಿರೋ ಆಸ್ಪತ್ರೆಗೆ ಸಿಎಂ ದೌಡು

ಸುಮಾರು ನಾಲ್ಕೈದು ನಿಮಿಷ ಉಂಗುರವನ್ನೇ ನೋಡಿದ ಸವದಿ ಯಾವ ಹರುಳಿನ ಉಂಗುರವಿದು?, ಯಾವ ಬೆರಳಿಗೆ ಹಾಕ ಬೇಕು?, ಯಾರ ಬಳಿ ಮಾತುಕತೆ ನಡೆಸಿ ಇದನ್ನು ಧರಿಸಿದ್ದೀರ? ಎಂದು ಪ್ರಶ್ನಿಸಿದ್ದಾರೆ. ರಾಶಿ, ನಕ್ಷತ್ರದ ಆಧಾರದ ಮೇಲೆ ಹರಳನ್ನು ಧರಿಸಬೇಕು, ಸುಖಾ ಸುಮ್ಮನೆ ಹರಳ ಹಾಕಿಕೊಳ್ಳಬೇಡಿ ಎಂದು ಸಲಹೆಯನ್ನೂ ಸಹ ನೀಡಿದ್ದಾರೆ.