ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

ವೆಟ್ಟೈಯಾನ್ ರಣಬೇಟೆಗೆ ಕೌಂಟ್​​ಡೌನ್ ಸ್ಟಾರ್ಟ್: ರಜನಿ ಎನ್​ಕೌಂಟರ್​ಗೆ ಬಿಗ್ ಬಿ ಕೌಂಟರ್..!

Published : Oct 07, 2024, 11:58 AM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ವೆಟ್ಟೈಯಾನ್ ರಿಲೀಸ್​ಗೆ ಕೌಂಟ್​ಡೌಟ್​​ ಸ್ಟಾರ್ಟ್ ಆಗಿದೆ. ರಜನಿಕಾಂತ್-ಅಮಿತಾಭ್ ಅನ್ನೋ ಇಬ್ಬರು ಇಂಡಿಯನ್ ಸಿನಿ ಇಂಡಸ್ಟ್ರಿಯ ದಿಗ್ಗಜರ ಕಾಂಬೋ ಇರುವ ಈ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ರಜನಿ ಇಲ್ಲಿ ಎನ್​ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಆಗಿ ಮುಂಚಿದ್ದಾರೆ. ಈ ಹಂಟರ್​ನ ಎನ್​ಕೌಂಟರ್ ವರ್ಣಿಸೋ ಸಾಂಗ್ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡ್ತಾ ಇದೆ. ಈ ಬಾರಿಯ ದಸರಾದ ರಂಗು ಹೆಚ್ಚಿಸೋಕೆ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಅವತಾರದಲ್ಲಿ ಬರ್ತಾ ಇದೆ.  ವೆಟ್ಟೈಯಾನ್ ಅಂದ್ರೆ ಬೇಟೆಗಾರ ಅಂತ ಅರ್ಥ.

ರಜನಿ ಇಲ್ಲಿ ಅಕ್ಷರಶಃ ದುಷ್ಟರನ್ನ ಎನ್ ಕೌಂಟರ್ ಹೆಸರಲ್ಲಿ ಭೇಟೆ ಆಡೋ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಆದ್ರೆ ಎನ್ ಕೌಂಟರ್ ತಪ್ಪು ಅಂತ ಕೌಂಟರ್ ಕೊಡೋ ಅವರ ಸೀನಿಯರ್ ರೋಲ್ ನಲ್ಲಿ ಬಿಗ್ ಬಿ ಅಮಿತಾಭ್ ಇದ್ದಾರೆ. ಭಾರತೀಯ ಸಿನಿರಂಗದ ಇಬ್ಬರು ಲೆಜೆಂಡ್  ಗಳನ್ನ ಒಟ್ಟಿಗೆ ನೋಡೋದೇ ಒಂದು ರೀತಿ ಸ್ಪೆಷಲ್ ಟ್ರೀಟ್ ಅನ್ನಬಹುದು. ದಶಕಗಳ ಬಳಿಕ ಬರ್ತಿರೋ ಬಿಗ್ ಬಿ ಮತ್ತು ರಜನಿ ಜುಗಲ್ ಬಂದಿ ಈ ಸಿನಿಮಾದ ಬಿಗ್ ಹೈಲೈಟ್ ಅಂದ್ರೆ ತಪ್ಪಾಗಲ್ಲ. ಇನ್ನೂ ರಜನಿ , ಅಮಿತಾಭ್ ಅಷ್ಟೇ ಅಲ್ಲ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್,  ಸೇರಿದಂತೆ ಹಲವು ಘಟಾನುಘಟಿ ಕಲಾವಿದರ ಬಳಗ ವೆಟ್ಟೈಯಾನ್ ನಲ್ಲಿದೆ. 

ಸೂರ್ಯ ನಟನೆಯ 'ಜೈ ಭೀಮ್' ಸಿನಿಮಾ ನಿರ್ದೇಶಿಸಿದ್ದ ಟಿ.ಜೆ. ಜ್ಞಾನವೇಲ್ 'ವೆಟ್ಟೈಯಾನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಿದ್ದು, ಅದ್ದೂರಿಯಾಗಿ ಸಿನಿಮಾವನ್ನ ತೆರೆಗೆ ತಂದಿದೆ. ಸದ್ಯ ರಿಲೀಸ್ ಹೊಸ್ತಿಲಲ್ಲಿ ವೆಟ್ಟೈಯಾನ್ ಸಿನಿಮಾದ ಹಂಟರ್ ವಂಟರ್ ಅನ್ನೋ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ಅನಿರುಧ್ ರವಿಚಂದರ್ ಈ ಮಾಸ್ ಸಾಂಗ್​ಗೆ ಮ್ಯೂಸಿಕ್ ಹಾಕಿದ್ದು, ವೆಟ್ಟೈಯಾನ್ ರಣಬೇಟೆಯನ್ನ ವರ್ಣಿಸುವಂತೆ ಮೂಡಿಬಂದಿದೆ. ಸಿದ್ದಾರ್ಥ್ ಬಸ್ರೂರು ವಾಯ್ಸ್​ನಲ್ಲಿರೋ ಈ ಹಾಡು ತಲೈವಾ ಫ್ಯಾನ್ಸ್​ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ವೆಟ್ಟೈಯಾನ್ ಭೇಟೆ ಸಖತ್ ರೋಚಕವಾಗಿರುತ್ತೆ ಅನ್ನೋ ಸೂಚನೆ ನೀಡಿದೆ. ಇದೇ ಅಕ್ಟೋಬರ್ 10ಕ್ಕೆ ವೆಟ್ಟೈಯಾನ್ ತೆರೆಗೆ ಬರಲಿದ್ದು ಬಾಕ್ಸ್​ಆಫೀಸ್​​ನಲ್ಲಿ ತಲೈವಾ ಬೇಟೆ ಶುರುವಾಗಲಿದೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more