Feb 6, 2022, 1:20 PM IST
ಬೆಂಗಳೂರು(ಫೆ.6): ಇಂದು ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಕನ್ನಡದ ಚಿತ್ರಸಾಹಿತಿ, ಕೆ. ಕಲ್ಯಾಣ್ (K Kalyan) ಅವರು ನಮನ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಲತಾ ಮಂಗೇಶ್ಕರ್ ಸಂಗೀತ ಕ್ಷೇತ್ರದ ಕಿರೀಟ, ಇವರು ಕೋಟ್ಯಾಂತರ ಜನರು ತಮ್ಮ ಹೃದಯದಲ್ಲಿ ಹೊತ್ತುಕೊಂಡಿರುವ ಕಿರೀಟ, ಹಾಗಾಗಿ ಇವರು ಅಜರಾಮರರು . ಅವರು ಹಾಡಿರುವ ಎಲ್ಲಾ ಹಾಡುಗಳು ಯಶಸ್ವಿಯಾಗಿವೆ.
ಲತಾ ಮಂಗೇಶ್ಕರ್ ಮದುವೆಯಾಗಲಿಲ್ಲ ಯಾಕೆ? ಅದೊಂದು ನವಿರಾದ ಪ್ರೇಮಕಥೆ
ಅವರ ಬಗ್ಗೆ ಮಾತನಾಡಲು ನಾವು ತುಂಬಾ ಚಿಕ್ಕವರು. ಅವರ ಒಂದೊಂದು ಹಾಡುಗಳು ಶಾಲೆ ಇದ್ದಂತೆ, ಅವರ ಒಂದು ಹಾಡನ್ನು ಇಟ್ಟುಕೊಂಡು ತನ್ಮಯತೆಯನ್ನು ಕಲಿಯಲು ನಮಗೆ 6 ತಿಂಗಳು ಬೇಕು. ಹಾಡುವುದಷ್ಟೇ ತನ್ನ ಕೆಲಸ ಅದರ ಖ್ಯಾತಿಯನ್ನು ತನ್ನ ತಲೆಗೆ ಏರಿಸಿಕೊಳ್ಳಬಾರದು ಅನ್ನೋದು ಅವರಲ್ಲಿತ್ತಲ್ಲ. ಹಾಗಾಗಿ ಅಷ್ಟನ್ನು ಹೊರೋ ಶಕ್ತಿ ಅವರಿಗೆ ಬಂತು ಎಂದಿದ್ದಾರೆ.