ಒಂದು ಗಂಟೆ ಓದಿ, ಗಿಫ್ಟ್ ಪಡೆಯಿರಿ!

ಒಂದು ಗಂಟೆ ಓದಿ, ಗಿಫ್ಟ್ ಪಡೆಯಿರಿ!

Published : May 26, 2022, 02:26 PM IST

ಶಾಲಾ ಮಕ್ಕಳಿಗೆ ಬೇಸಿಗೆ ಹಿನ್ನೆಲೆ ಈಗ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ. ಬೇಸಿಗೆ ರಜೆಯಲ್ಲಿರುವ ಮಕ್ಕಳನ್ನೂ ಓದಿನೆಡೆಗೆ ಕರೆದೊಯ್ಯಲು ರಾಯಚೂರಿನ ಇಂಜಿನಿಯರ್ ಒಬ್ರು ಮಕ್ಕಳಿಗೆ ಭರ್ಜರಿ ಆಫರ್ ನೀಡಿದ್ದಾರೆ. ತಾವೇ ಒಂದು ಗ್ರಂಥಾಲಯ ಓಪನ್ ಮಾಡಿ, ದೇಶ ಕಂಡ ಮಹಾನ್ ನಾಯಕರು, ಸಾಧಕರ ಪುಸ್ತಕಗಳನ್ನ ದಿನವೂ ಒಂದು ಗಂಟೆ ಓದುವ ಮಕ್ಕಳಿಗೆ ಕೊಡುಗೆ ನೀಡುವ ಮೂಲಕ ಸಾಧಕರನ್ನ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಬಿಸಿಲುನಾಡು ರಾಯಚೂರು(Rayachuru) ಜಿಲ್ಲೆಯಲ್ಲಿ ಈಗ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಮಕ್ಕಳು ಬಿರುಬಿಸಿಲಿನಲ್ಲಿ ತಿರುಗಾಟ ನಡೆಸಿ ಆರೋಗ್ಯ(health) ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಗಮನಿಸಿದ ರಾಯಚೂರಿನ ಯುವಕರೊಬ್ಬರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 

ಸಣ್ಣ ಕೋಣೆಯೊಂದರಲ್ಲಿ ನಿರ್ಮಾಣವಾಗಿರುವ ಪುಸ್ತಕಾಲಯ(Library)ದಲ್ಲಿ ನೂರಾರು ಮಹಾನ್ ಸಾಧಕರ ಸಾಧನೆ ಹಾದಿಯ ಪುಸ್ತಕಗಳು(books). ಏಕಾಗ್ರತೆಯಿಂದ ತಮಗಿಷ್ಟ ಬಂದ ಪುಸ್ತಕಗಳನ್ನ ಆಯ್ಕೆ ಮಾಡಿಕೊಂಡು ಓದುತ್ತಿರೋ ಪುಟಾಣಿ ಮಕ್ಳು. ಈ ದೃಶ್ಯಗಳು ಕಂಡುಬಂದಿದ್ದು ರಾಯಚೂರು ನಗರದ ಗಾಜಗಾರಪೇಟೆಯಲ್ಲಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕಾಡ್ಲೂರು ರಂಗರಾವ್ ದೇಸಾಯಿವರ ವಿನೂತನ ಆಲೋಚನೆಯಿಂದಲೇ ಈ ಕಾರ್ಯ ಆಗಿರೋದು. 

ಅಂದ ಹಾಗೇ ಬೇಸಿಗೆ ರಜೆಯಲ್ಲಿರುವ ಬಡ, ಕೂಲಿ, ಕಾರ್ಮಿಕರ ಮಕ್ಕಳನ್ನ ಗಮನದಲ್ಲಿಟ್ಕೊಂಡು, ಕನಿಷ್ಠ ಒಂದು ಗಂಟೆಗೆ ಒಂದು ಪುಸ್ತಕ ಓದಿ, ಗಿಫ್ಟ್‌ ಪಡೆಯಿರಿ ಅನ್ನೋ ನಿಟ್ಟಿನಲ್ಲಿ ಬೇಸಿಗೆ ರಜೆ ಕಳೆಯುವ ಮಕ್ಕಳಿಗೊಂದು ಭರ್ಜರಿ ಆಫರ್ ನೀಡಿದ್ದಾರೆ. 800 ಕ್ಕೂ ಹೆಚ್ಚು ಸಾಧಕರ ಕಿರು ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ಓದುವ ಅಭ್ಯಾಸ ಮಾಡಿಸ್ತಿದ್ದಾರೆ. ಒಂದು ಗಂಟೆ ಸತತವಾಗಿ ಕುಳಿತು ಪುಸ್ತಕ ಓದಿದವ್ರಿಗೆ, ವಾಟರ್ ಬಾಟಲ್ , ಆಟಿಕೆ ಸಾಮಗ್ರಿ , ಗಾಳಿಪಟ ಕೊಡುಗೆ ನೀಡಿ ಮಕ್ಕಳ ಓದಿಗೆ ಉತ್ತೇಜನ ನೀಡ್ತಿದ್ದಾರೆ.

ಮಕ್ಕಳ ಜೊತೆ ಈ ರೀತಿ ನಡೆದುಕೊಂಡ್ರೆ ಮಾನಸಿಕವಾಗಿ ಕುಗ್ಗಿ ಹೋಗ್ತಾರೆ !

ಈ ಹಿಂದೆಯೂ ರಂಗರಾವ್ ದೇಸಾಯಿವರು ಶ್ರೀರಾಘವೇಂದ್ರ ಅಕ್ಷರ ಯಜ್ಞ ಎಂಬ ಕಾರ್ಯಕ್ರಮದಡಿ ಕೊರೋನಾ ಸಮಯದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಕಲಿಕಾ ಸಾಮಗ್ರಿ(learning materials) ಉಚಿತವಾಗಿ ನೀಡಿದ್ರು. ಹಾಗೇ ಹೋಳಿ ಹಬ್ಬಕ್ಕೆ ಸರಕಾರಿ ಶಾಲೆ(government schools)ಗಳಿಗೆ ಬಣ್ಣ ಬಳಿಸುವ ಕಾರ್ಯವನ್ನೂ ಸ್ವಂತ ಹಣದಿಂದಲೇ ಮಾಡಿದ್ದರು. ಮತ್ತದೇ ರೀತಿಯ ಮಹಾನ್ ಕಾರ್ಯಕ್ಕೆ ಮುಂದಾಗಿರುವ ರಂಗರಾವ್ ದೇಸಾಯಿವರು ದೇಶ ಕಂಡ ಮಹಾನ್ ನಾಯಕರು, ಸಾಧಕರ ಪುಸ್ತಕಗಳನ್ನ ದಿನವೂ ಒಂದು ಗಂಟೆ ಓದುವ ಮಕ್ಕಳಿಗೆ ಕೊಡುಗೆ ನೀಡುವ ಮೂಲಕ ಸಾಧಕರನ್ನ ಮಕ್ಕಳಿಗೆ ಪರಿಚಯಿಸ್ತಿದ್ದಾರೆ. ಅಲ್ಲದೇ ಸಾಧಕರ ಜೀವನ ಚರಿತ್ರೆ ಮಕ್ಕಳ ಬಾಳಿಗೆ ಪ್ರೇರಣಾದಾಯಕವಾಗಬೇಕೆಂಬ ಉದ್ದೇಶದಿಂದ ಇದೀಗ ಮನೆಯಲ್ಲಿಯೇ, ದೇಶಕಂಡ ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನಾಯಕರು, ದಾರ್ಶನಿಕರ ಜೀವನ ಚರಿತ್ರೆ ಮತ್ತು ಸಾಧನೆಯ ಮಾಹಿತಿ ಒದಗಿಸುವ ಕಿರು ಪುಸ್ತಕಗಳ ಭಂಡಾರವನ್ನು ಇರಿಸಿ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ನಿರಂತರವಾಗಿ ಟಿವಿ ನೋಡಿದರೆ ಇಂಥಾ ಆರೋಗ್ಯ ಸಮಸ್ಯೆ ಕಾಡುತ್ತಂತೆ, ಹುಷಾರ್ !

ಒಟ್ಟಿನಲ್ಲಿ ಬೇಸಿಗೆ ರಜೆ(Summer holidays)ಯಲ್ಲಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದ್ರೆ ಬಡಪಾಲಕರ ಮಕ್ಕಳು ಕಲಿಕೆಯಿಂದ ಬೇಸಿಗೆಯಲ್ಲಿ ವಂಚಿತರಾಗ್ತಾರೆ. ಇಂಥ ಮಕ್ಕಳನ್ನು ಗಮನದಲ್ಲಿಟ್ಕೊಂಡೇ ರಂಗರಾವ್ ದೇಸಾಯಿ ಅವರು ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎನ್ನುವ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ. ಮಕ್ಕಳು ಆಸಕ್ತಿಯಿಂದ ಬೆಳಗ್ಗೆ ಮತ್ತು ಸಂಜೆಯ ವೇಳೆ ಆಗಮಿಸಿ ಪುಸ್ತಕಗಳನ್ನು ಆಸಕ್ತಿಯಿಂದ ಓದಿ, ಗಿಫ್ಟ್ ಪಡೆಯುತ್ತಿದ್ದಾರೆ.

ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ಕ್ಯಾಮೆರಾಮನ್ ಶ್ರೀನಿವಾಸ್, ರಾಯಚೂರು

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
Read more