ಆಷಾಢದ 2 ನೇ ಶುಕ್ರವಾರ, ನಾಡದೇವತೆ ಚಾಮುಂಡೇಶ್ವರಿಗೆ ಯದುವೀರ್‌ರಿಂದ ವಿಶೇಷ ಪೂಜೆ

Jul 8, 2022, 1:53 PM IST

ಆಷಾಢ ಮಾಸದ ಶುಕ್ರವಾರ ಅಮ್ಮನವರ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರೆ. ಎರಡನೇ ಆಷಾಢ ಶುಕ್ರವಾರ ಹಿನ್ನೆಲೆ ನಾಡ ದೇವತೆ ಚಾಮುಂಡೇಶ್ವರಿಗೆ ಯದುವೀರ್  ಕೃಷ್ಣದತ್ತ ಚಾಮರಾಜ ಒಡೆಯರ್ ವಿಶೇಷ ಪೂಜೆ ಸಲ್ಲಿಸಿದರು. 

BIG 3: ರಸ್ತೆಗಳಿಲ್ಲ, ಡೋಲಿಯೇ ಆಂಬುಲೆನ್ಸ್, ನೋ ನೆಟ್‌ವರ್ಕ್, ಚಾಮರಾಜನಗರದ ಹಳ್ಳಿಗಳ ವ್ಯಥೆ

ಇದೇ ಸಂದರ್ಭದಲ್ಲಿ, ಚಾಮುಂಡಿ ಬೆಟ್ಟದಲ್ಲಿ ರೋಪ್ ವೇ ಯೋಜನೆ ಜಿಲ್ಲಾಡಳಿತ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರದ ನಿರ್ಧಾರ ಸರಿ ಇದೆ. ಪರಿಸರ ಸಂರಕ್ಷಣೆಯ ಜೊತೆಗೆ ಚಾಮುಂಡಿ ಬೆಟ್ಟದ ಅಭಿವೃದ್ಧಿಯಾಗಬೇಕು. ಇದು ಪ್ರವಾಸಿ ತಾಣವಲ್ಲ, ಧಾರ್ಮಿಕ ಸ್ಥಳ. ಇದನ್ನ ಹಾಗೇಯೇ ಸರ್ಕಾರ ಕಾಪಾಡಿ ಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರದ ನಿರ್ಣಯಗಳು ಸರಿ ಇದೆ' ಎಂದರು.