ಮಂಗಳೂರು;  ಹಿಂದು ದೇವರು, ಓಂ ಸ್ಟಿಕ್ಕರ್ ತೆಗೆಯಲು ಹೇಳಿದ ಪೊಲೀಸ್ ವಿರುದ್ಧ ಆಕ್ರೋಶ

Aug 31, 2021, 9:03 PM IST

ಮಂಗಳೂರು(ಆ. 31)  ಪೊಲೀಸರ ನಡೆಗೆ ಹಿಂದು  ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕಾರಿನಲ್ಲಿದ್ದ ದೇವರ ಸ್ಟಿಕ್ಕರ್ ತೆಗೆಯಲು ಸೂಚಿಸಿದ ಟ್ರಾಫಿಕ್ ಪೊಲೀಸ್ ವಿರುದ್ಧ ಆಕ್ರೋಶ ಕೇಳಿಬಂದಿದೆ. 

ಅಶ್ಲೀಲ ಭಂಗಿಯಲ್ಲಿ ಹಿಂದು ದೇವತೆಗಳು..ಕಾಮಸೂತ್ರ ಸುಟ್ಟರು

ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈಓವರ್  ಬಳಿ ಘಟನೆ ನಡೆದಿದೆ. ಕಾರಿನ ಮೇಲೆ  ಓಂ ಸಾಯಿ ಮತ್ತು ಕೊರಗಜ್ಜ ದೈವದ ಸ್ಟಿಕ್ಕರ್ ಹಾಕಾಲಗಿತ್ತು. ಕಾರು ನಿಲ್ಲಿಸಿ ಸ್ಟಿಕ್ಕರ್ ತೆಗೆಯುವಂತೆ ದಕ್ಷಿಣ ಠಾಣೆ ಎಎಸ್ಸೈ ಅಲ್ಪರ್ಟ್ ಲಸ್ರಾದೋ ತಿಳಿಸಿದ್ದಾರೆ. ಇದನ್ನು  ಖಂಡಿಸಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿದ್ದಾರೆ  ಇದಾದ ಮೇಲೆ ಮಂಗಳೂರು ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗಿದ್ದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.