ವಿಂಧ್ಯಗಿರಿಯ ಅಹಂಕಾರ ಇಳಿಸಿದ ಅಗಸ್ತ್ಯರು, ವಿಂಧ್ಯವಾಸಿನಿಯಾಗಿ ನೆಲೆಸಿದ ಶ್ರೀ ಮಾತೆ

Jun 20, 2021, 5:57 PM IST

ಒಮ್ಮೆ ವಿಂಧ್ಯಗಿರಿಗೆ ಮೇರು ಪರ್ವತದ ಮೇಲೆ ಅಸೂಯೆ ಉಂಟಾಗುತ್ತಂತೆ. ನಾನು ಯಾವುದರಲ್ಲಿ ಕಡಿಮೆಯಾಗಿದ್ದೇನೆ ಎಂದು ಆಕಾಶದೆತ್ತರಕ್ಕೆ ಬೆಳೆದು ನಿಲ್ಲುತ್ತದೆ. ಸೂರ್ಯನ ಬೆಳಕು ದಕ್ಷಿಣ ಭಾಗಕ್ಕೆ ಬೀಳುವುದು ನಿಲ್ಲುತ್ತದೆ. ದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ.

ಕೃಷ್ಣನ ಮೆಚ್ಚಿನ ಸಖಿ ರಾಧಾದೇವಿಯನ್ನು ಪೂಜಿಸುವ ವಿಧಾನವಿದು

ಆಗ ವಿಷ್ಣು ಹೇಳುತ್ತಾನೆ, ದೇವಿ ಭಕ್ತನಾದ ಅಗಸ್ತ್ಯ ಮುನಿ ಉತ್ತರದಲ್ಲಿ ನೆಲೆಸಿದ್ಧಾರೆ. ಅವರಿಂದ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ ಎನ್ನುತ್ತಾರೆ. ದೇವತೆಗಳು ಅಗಸ್ತ್ಯರಲ್ಲಿ ಪ್ರಾರ್ಥಿಸುತ್ತಾರೆ. ಅಗಸ್ತ್ಯ ಮುನಿ ವಿಂಧ್ಯಗಿರಿಗೆ ಬಂದು ಅಹಂಕಾರ ಅಡಗಿಸುತ್ತಾರೆ. ವಿಂಧ್ಯಗಿರಿ ಭೂಲೋಕಕ್ಕೆ ಇಳಿಯುತ್ತದೆ. ಮುಂದೆ ಜಗನ್ಮಾತೆ ಇಲ್ಲಿ ವಿಂಧ್ಯಗಿರಿ ವಾಸಿನಿಯಾಗಿ ನೆಲೆಸುತ್ತಾಳೆ.