Published : May 06, 2026, 04:47 AM ISTUpdated : May 06, 2026, 08:57 PM IST

Karnataka News Live: ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್

ಸಾರಾಂಶ

ಬೆಂಗಳೂರು: ಕಳೆದ ತಿಂಗಳು ಸಾರ್ವಜನಿಕರು ಕಳೆದುಕೊಂಡಿದ್ದ 1.75 ಕೋಟಿ ರು. ಮೌಲ್ಯದ 692 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಈಶಾನ್ಯ ವಿಭಾಗದ ಪೊಲೀಸರು ಮರಳಿಸಿದ್ದಾರೆ.

ಯಲಹಂಕ-83, ಯಲಂಹಕ ನ್ಯೂ ಟೌನ್‌-76, ಕೊಡಿಗೇಹಳ್ಳಿ-66, ವಿದ್ಯಾರಣ್ಯಪುರ-86, ಸಂಪಿಗೆಹಳ್ಳಿ -107, ಕೊತ್ತನೂರು-70, ಬಾಗಲೂರು-85, ಅಮೃತಹಳ್ಳಿ-66, ಚಿಕ್ಕಜಾಲ-34, ದೇವನಹಳ್ಳಿ-12 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ-07 ಸೇರಿದಂತೆ ಒಟ್ಟು ಈಶಾನ್ಯ ವಿಭಾಗದ 11 ಠಾಣೆಗಳ ಪೊಲೀಸರು ಒಟ್ಟು 692 ಮೊಬೈಲ್ ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೊಬೈಲ್ ಪತ್ತೆ ತಂಡ ರಚನೆ

ಮೊಬೈಲ್‌ಗಳ ಕಳ್ಳತನ ಪತ್ತೆಗೆ ಪ್ರತಿ ವಿಭಾಗದಲ್ಲಿ ತಂಡ ರಚಿಸಲಾಗಿದೆ. ಮೊಬೈಲ್ ಕಣ್ಮರೆ ಬಗ್ಗೆ ಸಿಇಐರ್ ಪೋರ್ಟಲ್‌ನಲ್ಲಿ ದೂರು ದಾಖಲಾದ ಕೂಡಲೇ ಪೊಲೀಸರು ಕಾರ್ಯಾಚರಣೆಗಿಳಿಯುತ್ತಾರೆ. ಅಂತೆಯೇ ಏಪ್ರಿಲ್ ತಿಂಗಳಲ್ಲಿ ಈಶಾನ್ಯ ವಿಭಾಗದ ಪೊಲೀಸರು ಉತ್ತಮ ಕಾರ್ಯನಿರ್ವಹಣೆ ತೊರಿದ್ದಾರೆ ಎಂದು ಆಯುಕ್ತರು ಶ್ಲಾಘಿಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಹ ಕಳವು ಮೊಬೈಲ್‌ಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಕಳ್ಳತನ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮೊಬೈಲ್ ಕಳ್ಳತನವಾದ ಕೂಡಲೇ ಸಿಇಐಆರ್ ಪೋರ್ಟಲ್‌ನಲ್ಲಿ ಸಾರ್ವಜನಿಕರು ದೂರು ದಾಖಲಿಸಿದರೆ ತನಿಖೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

08:57 PM (IST) May 06

ದುರಾದೃಷ್ಟ ಒದ್ಕೊಂಡು ಬರುತ್ತೆ ಅಂದ್ರೆ ಇದೇ ನೋಡಿ; ಜೈಲು ಸೇರಿ ಚಡ್ಡಿ ಮೇಲೆ ಮಲಗಿದ ಜೈದೇವ್

ಅಮೃತಧಾರೆ ಧಾರಾವಾಹಿಯಲ್ಲಿ, ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಜೈದೇವ್, ದಿಯಾಳ ದೂರಿನಿಂದ ಜೈಲು ಸೇರಿದ್ದಾನೆ. ಮತ್ತೊಂದೆಡೆ, ಗೌತಮ್ ತನ್ನ ಕುಟುಂಬವನ್ನು ಒಂದುಗೂಡಿಸಿದ್ದು, ಭೂಮಿಕಾ ದಿವಾನ್ ಮನೆಗೆ ಸೊಸೆಯಾಗಿ ಗೃಹಪ್ರವೇಶ ಮಾಡಿದ್ದಾಳೆ.
Read Full Story

07:46 PM (IST) May 06

ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ - ಸಚಿವ ಈಶ್ವರ್ ಖಂಡ್ರೆ ಆಕ್ರೋಶ

ಚುನಾವಣಾ ಆಯೋಗ ಯಾರ ನಿರ್ದೇಶನದಂತೆ ಕೆಲಸ ಮಾಡುತ್ತಿದೆ. ಅದು ಮಾಧ್ಯಮಗಳಿಗೂ ಗೊತ್ತಿದೆ. ವಿಶ್ವದಲ್ಲಿ ಬಿಜೆಪಿಯಷ್ಟು ಮೋಸಗಾರರು ಯಾರಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

07:07 PM (IST) May 06

ಪಾರ್ಲಿಮೆಂಟ್​ಗೆ ಹೇಳಿದ್ದಲ್ಲಿ ಸೀಟು ಕೊಡ್ತೀನಿ - ಶಿವಣ್ಣಗೆ ಡಿಕೆಶಿ ಭರ್ಜರಿ ಆಫರ್​- ನಟ ಹೇಳಿದ್ದೇನು?

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಟ ಶಿವರಾಜ್‌ಕುಮಾರ್‌ಗೆ ರಾಜಕೀಯಕ್ಕೆ ಬರುವಂತೆ ಆಫರ್ ನೀಡಿದ್ದರು. ಆದರೆ, ತಮ್ಮ ತಂದೆಯ ಬಳುವಳಿಯಾದ ನಟನೆಯಲ್ಲೇ ಮುಂದುವರೆಯುವುದಾಗಿ ಹೇಳಿ ಶಿವಣ್ಣ ಈ ಆಹ್ವಾನಕ್ಕೆ ನಟ ಏನಂದ್ರು? ತಮಿಳುನಾಡಿನಂತೆ ಕರ್ನಾಟಕದಲ್ಲಿ ನಟರು ರಾಜಕೀಯದಲ್ಲಿ ಯಶಸ್ವಿಯಾಗುವುದು ಕಷ್ಟ ಎಂಬ ವಿಶ್ಲೇಷಣೆಯನ್ನೂ ಈ ಲೇಖನ ಒಳಗೊಂಡಿದೆ.

Read Full Story

07:05 PM (IST) May 06

ತಾಯಿ ಕಣ್ಮರೆ - ಬಂಡೀಪುರದಲ್ಲಿ ಅನಾಥ ಹುಲಿ ಮರಿಗಳ ಅದ್ಭುತ ಬದುಕಿನ ರೋಚಕ ಕಥೆ ಇಲ್ಲಿದೆ!

ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ.. 

Read Full Story

06:26 PM (IST) May 06

ಕನಕಗಿರಿ ಉತ್ಸವಕ್ಕೆ ಸಿದ್ಧತೆ ಕೈಗೊಳ್ಳಿ - ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಟ್ನಾಳ ಹೇಳಿದ್ದೇನು?

ಸಮೀಪದ ಐತಿಹಾಸಿಕ ಕನಕಗಿರಿಯಲ್ಲಿ ಮೇ.16 ಮತ್ತು 17 ರಂದು ನಡೆಯುವ ಕನಕಗಿರಿ ಉತ್ಸವದ ಸಿದ್ದತೆಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಿರಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಹೇಳಿದರು.

Read Full Story

04:39 PM (IST) May 06

ಈ ಗೆಲುವಿಗೆ ನೀವು ಅರ್ಹರು - ಟಿವಿಕೆ ಗೆಲುವಿನ ಬಳಿಕ ವಿಜಯ್​ಗೆ ಸೆಲೆಬ್ರಿಟಿಗಳ ಅಭಿನಂದನೆ

‘ವಿಜಯ್‌ ಅವರೇ ಈ ಗೆಲುವಿಗೆ ನೀವು ಅರ್ಹರು’ ಎಂದಿರುವ ಶಿವಣ್ಣ, ‘ಹಿಂದೊಮ್ಮೆ ನಾನು ಟಿವಿಕೆ ಅಂದರೆ ಟ್ರೈ ವಿಜಯ್‌ ಆ್ಯಸ್‌ ಕಿಂಗ್‌ ಎಂದು ತಮಾಷೆಯಾಗಿ ಹೇಳಿದ್ದೆ ಎಂದರು ಶಿವರಾಜ್‌ ಕುಮಾರ್‌.

Read Full Story

04:19 PM (IST) May 06

ʻಕಾಮಿಡಿ ಟೈಮ್ʼ ಕಾರ್ಯಕ್ರಮವೇ ನನ್ನನ್ನ ಚಿತ್ರರಂಗಕ್ಕೆ ಕರೆತಂದಿದ್ದು - ಗೋಲ್ಡನ್ ಸ್ಟಾರ್ ಗಣೇಶ್

ʻಕಾಮಿಡಿ ಟೈಮ್ʼ ಕಾರ್ಯಕ್ರಮವೇ ನನ್ನನ್ನ ಚಿತ್ರರಂಗಕ್ಕೆ ಕರೆತಂದಿದ್ದು. ಬೃಂದಾವಿಹಾರಿ ಚಿತ್ರದ ಮೊದಲ ಹಾಡು ರಾಮ ರಾಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

Read Full Story

01:49 PM (IST) May 06

ಜಲಪಾತದಲ್ಲಿ ಮಿಂದೆದ್ದ ರಾಧಿಕಾ ಪಂಡಿತ್; ಮಕ್ಕಳೊಂದಿಗೆ 'ಕಾಡಿನ ರಾಣಿ'ಯಾದ ನಟಿ ಪೋಸ್ಟ್‌ಗೆ ಫ್ಯಾನ್ಸ್ ಫಿದಾ!

ಕೇವಲ ಪ್ರಕೃತಿ ಸೌಂದರ್ಯ ಸವಿಯುವುದು ಮಾತ್ರವಲ್ಲದೆ, ರಾಧಿಕಾ ಇಲ್ಲಿ ಸಾಹಸವನ್ನೂ ಮಾಡಿದ್ದಾರೆ. ಸುಡು ಬೇಸಿಗೆಯ ನಡುವೆಯೂ ಯಾರಿಗೂ ತಿಳಿಯದ, ಅಸ್ಪೃಶ್ಯವಾಗಿರುವ ಕಾಡಿನ ಹಾದಿಯಲ್ಲಿ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಮರಗಳನ್ನು ಹತ್ತಿ, ತೊರೆಯ ಪಕ್ಕದ ಜಾರುಬಂಡೆ ಹತ್ತಿದ್ದಾರೆ.

Read Full Story

01:41 PM (IST) May 06

ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​ - ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ

ತುಮಕೂರಿನಲ್ಲಿ ಏಳು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾದ ಯುವತಿಯೊಬ್ಬರು ಗರ್ಭಿಣಿಯಾದಾಗ, ಆಕೆಯ ಪತಿ ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಆ ಯುವತಿ, ನ್ಯಾಯಕ್ಕಾಗಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story

01:05 PM (IST) May 06

ಅಕ್ಕನಿಗಿಂತ್ಲೂ ಒಂದ್ ಹೆಜ್ಜೆ ಮುಂದೆ..? ಒಂದೇ ಒಂದು ಹಾಡಿಗೆ ಪ್ಯಾನ್ ಇಂಡಿಯಾ ಸಿಂಗರ್ ಆದ ಮಂಗ್ಲಿ ತಂಗಿ!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬಸಿನೆಪಲ್ಲೆ ತಾಂಡಾದಲ್ಲಿ ಜನಿಸಿದ ಈ ಬಂಜಾರ (ಲಂಬಾಣಿ) ಕುವರಿ, ಬಾಲ್ಯದಿಂದಲೇ ಕಲೆಯ ಮಡಿಲಲ್ಲಿ ಬೆಳೆದವರು. ಮೊದಲು 'ಬೋಲ್ ಬೇಬಿ ಬೋಲ್' ಎಂಬ ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಇಂದ್ರವತಿ, ನಂತರ 'ಜಾಜಿಮೊಗುಲಾಲಿ' ಹಾಡಿನ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು.

Read Full Story

12:29 PM (IST) May 06

ಡ್ರೈ ಕ್ಲೀನಿಂಗ್‌ಗೆ ಕೊಡದೇ ಮನೆಯಲ್ಲಿಯೇ ದುಬಾರಿ ರೇಷ್ಮೆ ಸೀರೆಗಳನ್ನು ತೊಳೆಯೋದು ಹೇಗೆ?

ದುಬಾರಿ ರೇಷ್ಮೆ ಸೀರೆಗಳನ್ನು ಸಾಮಾನ್ಯವಾಗಿ ಡ್ರೈ ಕ್ಲೀನಿಂಗ್‌ಗೆ ನೀಡಲಾಗುತ್ತದೆ, ಆದರೆ ಮನೆಯಲ್ಲಿಯೇ ಇವುಗಳನ್ನು ಕಾಳಜಿಯಿಂದ ತೊಳೆಯಬಹುದು.  ಹೆಚ್ಚು ಉಜ್ಜದೆ ಸೀರೆಯ ಮೃದುತ್ವವನ್ನು ಕಾಪಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

12:18 PM (IST) May 06

ಅರಮನೆಯಲ್ಲಿ ರಾಜನಂತೆ ಇರಬೇಕಿದ್ದ ದರ್ಶನ್ ಸೆರೆಮನೆಯಲ್ಲಿ; ಪತ್ನಿ ವಿಜಯಲಕ್ಷ್ಮೀ ಪೋಸ್ಟ್‌ಗೆ ಅಪರೂಪದ ಕಾಮೆಂಟ್!

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿ ಕಾಲ ಕಳೆಯುತ್ತಿದ್ದಾರೆ. ಇತ್ತ ಅರಮನೆಯಂತಹ ಮನೆಯಲ್ಲಿ ರಾಜನಂತೆ ಇರಬೇಕಾಗಿದ್ದ ಪತಿ ಜೈಲು ಪಾಲಾಗಿದ್ದರೆ, ಅತ್ತ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ವೈರಲ್ ಆಗ್ತಿದೆ..

Read Full Story

12:17 PM (IST) May 06

Met Gala 2026 - ಪಬ್ಲಿಕ್‌ನಲ್ಲಿ ತನ್ನ ವರ್ತನೆಯಿಂದಲೇ ವಿವಾದ ಎಬ್ಬಿಸಿದ ರೇಚಲ್ ಜೆಗ್ಲರ್!

Met Gala 2026: ಮೆಟ್ ಗಾಲಾ 2026ರಲ್ಲಿ ನಟಿ ರೇಚಲ್ ಜೆಗ್ಲರ್ ಅವರ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಇದರಲ್ಲಿ ಅವರ ಮುಖದ ಹಾವಭಾವ ನೋಡಿ, ನೆಟ್ಟಿಗರು ನಾನಾ ರೀತಿ ಚರ್ಚೆ ಶುರು ಮಾಡಿದ್ದಾರೆ. ಕೆಲವರಂತೂ ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ವಿವಾದ? ಇಲ್ಲಿದೆ ಪೂರ್ತಿ ಮಾಹಿತಿ.

Read Full Story

10:47 AM (IST) May 06

Mandya - ಒಂದು ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್; ಆಘಾತಕಾರಿ ಸತ್ಯ!

ಮಂಡ್ಯದ ಡಯಾಗ್ನೋಸ್ಟಿಕ್ ಸೆಂಟರ್ ಮೇಲೆ ಜಾಗೃತ ದಳದ ಅಧಿಕಾರಿಗಳು ದಾಳಿ ನಡೆಸಿದ್ದು, ಕಳೆದ ಒಂದು ವರ್ಷದಲ್ಲಿ 55 ಅಪ್ರಾಪ್ತ ಬಾಲಕಿಯರಿಗೆ ಗರ್ಭಿಣಿ ಸ್ಕ್ಯಾನಿಂಗ್ ಮಾಡಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಪ್ರಕರಣಗಳನ್ನು ಫೋಕ್ಸೋ ಕಾಯ್ದೆಯಡಿ ವರದಿ ಮಾಡಲಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Read Full Story

10:34 AM (IST) May 06

ಮನೆ ಗೋಡೆಯಲ್ಲಿ ಸಿಕ್ಕಿದ್ದ ನಾಗರ ಹಾವಿನ 16 ಮೊಟ್ಟೆಗಳಿಗೆ ಕೃತಕ ಕಾವು - ಮರಿಗಳ ರಕ್ಷಣೆ

ಬೆಳ್ತಂಗಡಿಯ ಮನೆಯೊಂದರ ಗೋಡೆಯಲ್ಲಿ ಸಿಕ್ಕ 16 ನಾಗರ ಹಾವಿನ ಮೊಟ್ಟೆಗಳನ್ನು ಉರಗ ಮಿತ್ರ ಸ್ನೇಕ್ ಅನಿಲ್ ರಕ್ಷಿಸಿದ್ದಾರೆ. ಇರುವೆಗಳಿಂದ ಅಪಾಯದಲ್ಲಿದ್ದ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಯಶಸ್ವಿಯಾಗಿ 16 ಮರಿಗಳನ್ನು ಹೊರತಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.

Read Full Story

10:23 AM (IST) May 06

ಬಿಸಿಲಿನಿಂದ ರಕ್ಷಣೆಗಾಗಿ ಸವಾರರಿಗೆ ಬಂತು ಟ್ರಾಫಿಕ್‌ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌

ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ವಾಹನ ಸವಾರರನ್ನು ರಕ್ಷಿಸಲು, ರಾಣಿ ಚನ್ನಮ್ಮ ವೃತ್ತದ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ಜಂಟಿ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಇತರ ಭಾಗಗಳಿಗೂ ವಿಸ್ತರಿಸಲು ಬೇಡಿಕೆ ಹೆಚ್ಚಿದೆ.
Read Full Story

10:00 AM (IST) May 06

ಹಳೆ ಬಾಟಲಿ, ಹಳೆ ಜೀನ್ಸ್; ಮನೆಯಲ್ಲಿರೋ ಈ 6 ವಸ್ತುಗಳಿಂದ ಮಾಡಿ ಸೂಪರ್ ಪ್ಲಾಂಟರ್ಸ್

ಮನೆಗೆ ಸಣ್ಣ, ಮುದ್ದಾದ ಗಿಡದ ಕುಂಡಗಳನ್ನು ತರಲು ನಾವು ನೂರಾರು ರೂಪಾಯಿ ಖರ್ಚು ಮಾಡುತ್ತೇವೆ. ಆದರೆ ನಿಮ್ಮ ಅಡುಗೆಮನೆ ಅಥವಾ ಕೋಣೆಯಲ್ಲೇ ಒಮ್ಮೆ ಕಣ್ಣಾಡಿಸಿದರೆ, ಹಣ ಖರ್ಚು ಮಾಡದೆ ಸುಂದರವಾದ ಪ್ಲಾಂಟರ್‌ಗಳನ್ನು ಮಾಡಲು ಬೇಕಾದ ಅನೇಕ ವಸ್ತುಗಳು ಸಿಗುತ್ತವೆ.
Read Full Story

09:46 AM (IST) May 06

ಜನಪರ ಯೋಜನೆಗಳ ಹರಿಕಾರ ಯಡಿಯೂರಪ್ಪ

ಬಡ ರೈತ ಕುಟುಂಬದಲ್ಲಿ ಜನಿಸಿದ ಬಿ.ಎಸ್. ಯಡಿಯೂರಪ್ಪನವರು, ತಮ್ಮ ಛಲ ಮತ್ತು ಜನಪರ ಕಾಳಜಿಯಿಂದ ಶಿಕಾರಿಪುರದಿಂದ ಕರ್ನಾಟಕದ ಮುಖ್ಯಮಂತ್ರಿ ಪದವಿಯವರೆಗೆ ಬೆಳೆದ ಸಾಹಸಮಯ ಪಯಣವನ್ನು ಈ ಲೇಖನ ವಿವರಿಸುತ್ತದೆ. ಅವರ ಹೋರಾಟ, ಭಾಗ್ಯಲಕ್ಷ್ಮಿ ಮತ್ತು ರೈತ ಬಂಧುಗಳಂತಹ ಜನಪರ ಯೋಜನೆಗಳು ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರ ಪಾತ್ರವನ್ನು ಇದು ಪರಿಚಯಿಸುತ್ತದೆ.
Read Full Story

09:05 AM (IST) May 06

8 ವರ್ಷ ಪ್ರೀತಿ, 3 ಗರ್ಭಪಾತ, 35 ಲಕ್ಷ; ಮಹಿಳಾ ಪೇದೆಯಿಂದ ಯಾದಗಿರಿ PSIಗೆ ಲವ್ ದೋಖಾ ಆರೋಪ?

ಇಂಟಲಿಜೆನ್ಸ್PSI ವಿರೇಶ್ ಆಲೂರು, 8 ವರ್ಷಗಳಿಂದ ಪ್ರೀತಿಸುತ್ತಿದ್ದ ಮಹಿಳಾ ಪೇದೆ ಜಾತಿ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಕುಟುಂಬಕ್ಕೆ 35 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದು, ಇದೀಗ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Read Full Story

06:30 AM (IST) May 06

ತಮಿಳುನಾಡಿನ ಚುನಾವಣೆಯಲ್ಲಿ ತುರುವೇಕೆರೆ ವ್ಯಕ್ತಿಗೆ ಗೆಲುವು; ಮೆಟ್ಟುಪಾಳ್ಯಂನಿಂದ ವಿಧಾನಸಭೆಗೆ ಪ್ರವೇಶ

ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಎನ್‌. ಸುನೀಲ್‌ ಆನಂದ್‌ ಗೆಲುವು ಸಾಧಿಸಿದ್ದಾರೆ. ಮೆಟ್ಟುಪಾಳ್ಯಂ ಕ್ಷೇತ್ರದಿಂದ ಡಿಎಂಕೆ ಹಾಗೂ ಎಐಎಡಿಎಂಕೆ ಅಭ್ಯರ್ಥಿಗಳನ್ನು ಮಣಿಸಿ, ಶಾಸಕರಾಗಿ ಆಯ್ಕೆಯಾಗಿದ್ದಾರೆ.
Read Full Story

06:17 AM (IST) May 06

ಉಪಚುನಾವಣೆ ಸೋಲಿನ ಕಾರಣ ಬಿಚ್ಚಿಟ್ಟು, ತಪ್ಪು ಸರಿಪಡಿಸಿಕೊಳ್ತೇವೆ ಎಂದ ಸಚಿವ ಸೋಮಣ್ಣ

ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲಿಗೆ ತಂಡವಾಗಿ ಸರಿಯಾಗಿ ಕೆಲಸ ಮಾಡದಿರುವುದೇ ಕಾರಣ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ನಮ್ಮ ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಕಾರಣವಾಯಿತು ಎಂದ ಅವರು, ಎಲ್ಲರೂ ಜವಾಬ್ದಾರಿ ಹೊತ್ತು ಮುಂದೆ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
Read Full Story

06:11 AM (IST) May 06

ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ ಮೇಲೆ ಮತ್ತೆ ಚರ್ಚೆ ಅಪ್ರಸ್ತುತ - ಸಚಿವ ಪ್ರಿಯಾಂಕ್

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ ಎಂದು ಎಐಸಿಸಿ ಅಧ್ಯಕ್ಷರೇ ಹೇಳಿರುವುದರಿಂದ ಆ ಚರ್ಚೆ ಅಪ್ರಸ್ತುತ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಉಪಚುನಾವಣೆ ಫಲಿತಾಂಶಕ್ಕೂ ಸಚಿವ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ, ಅದು ಒಂದು ಸಹಜ ಪ್ರಕ್ರಿಯೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

06:02 AM (IST) May 06

ಮುಂದಿನ ವಾರ ಸಿದ್ದು, ಡಿಕೆಗೆ ದಿಲ್ಲಿಗೆ ಬುಲಾವ್‌? ನಾಯಕತ್ವ, ಸಂಪುಟ ಪುನಾರಚನೆ ಚರ್ಚೆ ಸಂಭವ

ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಮತ್ತು ಸಂಪುಟ ಪುನಾರಚನೆ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ. ಕೇರಳದ ಸರ್ಕಾರ ರಚನೆ ಬಳಿಕ, ಸಿಎಂ ಮತ್ತು ಡಿಸಿಎಂ ಅವರನ್ನು ದೆಹಲಿಗೆ ಕರೆಸಿ ಚರ್ಚಿಸುವ ಸಾಧ್ಯತೆಯಿದೆ. ಸರ್ಕಾರಕ್ಕೆ 3 ವರ್ಷ ತುಂಬುವ ಮೊದಲು ಅಥವಾ ನಂತರ ಈ ಗೊಂದಲಕ್ಕೆ ತೆರೆ ಬೀಳಲಿದೆಯೇ ಎಂಬ ಕುತೂಹಲ ಹೆಚ್ಚಾಗಿದೆ.
Read Full Story

05:55 AM (IST) May 06

2ನೇ ಸಂಸಾರ ಪೋಷಿಸುವ ವ್ಯಕ್ತಿ ತನ್ನತಾಯಿ ಪೋಷಣೆ ನಿರಾಕರಿಸುವಂತಿಲ್ಲ - ಹೈಕೋರ್ಟ್ ಆದೇಶ

ಎರಡನೇ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ವ್ಯಕ್ತಿ, ತನ್ನ ಮೊದಲ ಪತ್ನಿ ಮತ್ತು ವೃದ್ಧ ತಾಯಿಗೆ ಜೀವನಾಂಶ ನೀಡಲು ಹಣವಿಲ್ಲ ಎಂದು ಹೇಳಲಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಭಾಗಶಃ ಮಾರ್ಪಡಿಸಿದ ಹೈಕೋರ್ಟ್, ಮೊದಲ ಕುಟುಂಬ ಮತ್ತು ತಾಯಿಯ ಪೋಷಣೆಗೆ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ಪತಿಗೆ ಆದೇಶಿಸಿದೆ.
Read Full Story

05:45 AM (IST) May 06

ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ; ಪರ್ಯಾಯ ಮಾರ್ಗ ಸೂಚನೆ

ಸಾರ್ವಜನಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಶಿರಸಿ-ಬಿಸಿಲಕೊಪ್ಪ ಮಾರ್ಗದಲ್ಲಿ ಮೇ 7ರ ವರೆಗೆ ಲಾರಿ, ಬಸ್, ಟೆಂಪೋ ಟ್ರಾವೆಲ್ಲರ್‌ಗಳಂತಹ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದು, ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ.
Read Full Story

05:39 AM (IST) May 06

Mysuru - ರಸ್ತೆಬದಿಯಲ್ಲಿ ಮೂತ್ರವಿಸರ್ಜನೆ ತಡೆಗೆ ಕಾಂಪೌಂಡ್‌ಗೆ ಕನ್ನಡಿಗಳ ಅಳವಡಿಕೆ

ಸ್ವಚ್ಛ ಸರ್ವೇಕ್ಷಣೆಯಲ್ಲಿ ನಂ.1 ಸ್ಥಾನದ ಗುರಿಯೊಂದಿಗೆ, ಮೈಸೂರು ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ತಡೆಯಲು ವಿಶಿಷ್ಟ ಯೋಜನೆ ಕೈಗೊಂಡಿದೆ. ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರಾಯೋಗಿಕವಾಗಿ ಕನ್ನಡಿಗಳನ್ನು ಅಳವಡಿಸಿದೆ.

Read Full Story

05:28 AM (IST) May 06

ಬೆಳಗಾವಿಯ ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌ - ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್

ಅಥಣಿ ಪಟ್ಟಣದಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಮತ್ತು ನಿರಂತರ ವಿದ್ಯುತ್ ಪೂರೈಸಲು ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ, ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು, ಸುರಕ್ಷಿತವಾದ ಕವರ್ಡ್ ಕಂಡಕ್ಟರ್ ಕೇಬಲ್‌ಗಳನ್ನು ಅಳವಡಿಸುವ ಮಹತ್ವದ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.
Read Full Story

05:10 AM (IST) May 06

ಮಳೆ ನಿಂತರೂ ನಿಲ್ಲದ ಬೆಂಗಳೂರಿನ ಸಂಕಷ್ಟದ ಕಥೆ; ವಾರ ಕಳೆದರೂ ಬಿದ್ದ ಮರಗಳ ತೆರವು ಇಲ್ಲ

ಏಪ್ರಿಲ್ 29ರ ಭೀಕರ ಮಳೆಗೆ ಬೆಂಗಳೂರಿನಲ್ಲಿ ಬಿದ್ದ ನೂರಾರು ಮರಗಳು ಮತ್ತು ಕಟ್ಟಿಕೊಂಡ ಚರಂಡಿಗಳ ತೆರವು ಕಾರ್ಯ ಒಂದು ವಾರವಾದರೂ ಪೂರ್ಣಗೊಂಡಿಲ್ಲ. ಓಕಳಿಪುರದಂತಹ ಪ್ರದೇಶಗಳಲ್ಲಿ ಇನ್ನೂ ನೀರು ನಿಂತಿದ್ದು, ಮತ್ತೊಂದು ಮಳೆಯ ಭೀತಿ ನಗರದ ಜನರನ್ನು ಕಾಡುತ್ತಿದೆ.
Read Full Story

More Trending News