LIVE NOW
Published : Jun 06, 2026, 05:10 AM ISTUpdated : Jun 06, 2026, 10:32 PM IST

Karnataka News Live: ಬೆಳಗಾವಿಯಲ್ಲಿ ಘೋರ ದುರಂತ, ಕಣ್ಮುಂದೆ ಆಡಿ ಬೆಳೆದ ಮಗ ದಾರುಣ ಅಂತ್ಯ!

ಸಾರಾಂಶ

ಬೆಂಗಳೂರು: ಸಿಎಂ ಏನ್ ಹೇಳಿದ್ದಾರೋ ಅದನ್ನೇ ನಾನು ಹೇಳೋದು. ಎಲ್ಲಾ ನಿವಾರಣೆಯಾಗಿದೆ ಎಂದಷ್ಟೆ ಹೇಳಿದ ರಾಮಲಿಂಗಾರೆಡ್ಡಿ ಅವರು, ರಾಜೀನಾಮೆ ವಾಪಾಸ್ ಮತ್ತು ಜಲಸಂಪನ್ಮೂಲ ಖಾತೆಯಲ್ಲಿ ಮುಂದುವರೆಯುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಇತ್ತ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಪ್ರೆಸಿಡೆಂಟ್, ಅವರು ವರ್ಕಿಂಗ್ ಪ್ರೆಸಿಡೆಂಡ್. ನಾನು ಚೀಫ್ ಮಿನಿಸ್ಟರ್, ಅವರು ಮಿನಿಸ್ಟರ್, ನಾವು ಪಕ್ಷದಲ್ಲಿ ಬೆಳೆದವರು. ಪಕ್ಷ ಉಳಿಸ್ತಾ ಇರೋರು. ಬೆಂಗಳೂರಿಗೆ ಒಳ್ಳೆದು ಆಗ್ಬೇಕು ಅನ್ನೋವರು. ನಾವೆಲ್ಲ ಕೂತು ಮಾತನಾಡಿದ್ದೇವೆ. ಪರಿಹಾರ ಆಗಿದೆ ಎಂದು ಹೇಳಿದ್ದಾರೆ.

15 years old boy dies after drowning in Malaprabha river in Belgaum

10:32 PM (IST) Jun 06

ಬೆಳಗಾವಿಯಲ್ಲಿ ಘೋರ ದುರಂತ, ಕಣ್ಮುಂದೆ ಆಡಿ ಬೆಳೆದ ಮಗ ದಾರುಣ ಅಂತ್ಯ!

ಈಜು ಬಾರದಿದ್ದರೂ ಮಲಪ್ರಭಾ ನದಿಗೆ ಇಳಿದ ಬಾಲಕ ಆಳವಾದ ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಮಹೇಶ್ ಗಣಾಚಾರಿ ಎಂಬ ಬಾಲಕನ ಸಾವಿಗೆ ಊರಿಗೆ ಊರೇ ಮರುಗಿದೆ.

Read Full Story

09:59 PM (IST) Jun 06

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ; ಮನೆ, ರಸ್ತೆಗಳು ನೀರಿನಲ್ಲಿ ಜಲಾವೃತಗೊಂಡ ಹೆಚ್ಚಾದ ಆತಂಕ

ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಸುರಿದ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಅವಾಂತರಗಳು ಸೃಷ್ಟಿಯಾಗಿದೆ. ರಸ್ತೆಗಳು ಜಲಾವೃತಗೊಂಡಿದೆ. ರಾಜ್ಯದ ಮಳೆಯ ಅಪ್‌ಡೇಟ್ ಇಲ್ಲಿದೆ.

 

Read Full Story

09:47 PM (IST) Jun 06

Industrial Growth - ಬಂಗಾಳದ ಅಭಿವೃದ್ಧಿಗೆ ಸುವೇಂದು ಅಧಿಕಾರಿ ಫುಲ್ ಆ್ಯಕ್ಟೀವ್! L&T ಮುಖ್ಯಸ್ಥ, ರೈಲ್ವೆ ಸಚಿವರ ಜೊತೆ ಮಹತ್ವದ ಸಭೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ, L&T ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯಂ ಜೊತೆ ಕೈಗಾರಿಕಾ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ, ಅತ್ತ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನ ಭೇಟಿ ಮಾಡಿದ್ದಾರೆ.

Read Full Story

08:54 PM (IST) Jun 06

ಝೂನಲ್ಲಿ ಇಲ್ಲ, ಕಾಡಿನಲ್ಲೂ ಕಾಣಸಿಗಲ್ಲ, ಅಪರೂಪದ ವನ್ಯಜೀವಿಗಳು ಬೆಂಗಳೂರಿನ ಫ್ಲಾಟ್‌ನಲ್ಲಿ ಪತ್ತೆ

ಮೃಗಾಲಯದಲ್ಲೂ ಅಪರೂಪ, ಕಾಡಿನಲ್ಲೂ ಕಾಣಸಿಗುವುದು ವಿರಳ. ಇಂತಹ ಅತ್ಯಂತ ಅಪರೂಪದ ಹಲವು ವನ್ಯಜೀವಿಗಳು,ಸಸ್ತನಿಗಳು ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಅರಣ್ಯಾಧಿಕಾರಿಗಳ ದಾಳಿಯಲ್ಲಿ ಪತ್ತೆಯಾಗಿದೆ.

Read Full Story

07:34 PM (IST) Jun 06

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ - ಕಾರ್ಮಿಕನ ಜೀವ ಕಸಿದ ಕ್ರೇನ್‌, ಅಷ್ಟಕ್ಕೂ ಏನಾಯ್ತು?

ನಗರದ ಹೊಸಮನೆ ಬಡಾವಣೆಯಲ್ಲಿ ನಿರ್ಮಾಣ ಕಾಮಗಾರಿ ವೇಳೆ ನಡೆದ ಭೀಕರ ಅಪಘಾತದಲ್ಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ..

Read Full Story

07:19 PM (IST) Jun 06

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸರಣಿ ಅಪಘಾತದಲ್ಲಿ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಕಾರು ಜಖಂ

ಬೆಂಗಳೂರು ಮೈಸೂರು ಎಕ್ಸ್‌ಪ್ರೇಸ್‌ವೇನಲ್ಲಿ ಸರಣಿ ಅಪಘಾತ ಸಂಭವಿಸಿದೆ. 5ಕ್ಕೂ ಹೆಚ್ಚು ವಾಹನಗಳು ಅಪಘಾಕ್ಕೀಡಾಗಿದೆ. ಅಪಘಾತದಲ್ಲಿ ಮಾಜಿ ಶಾಸಕ ಸಂಚರಿಸುತ್ತಿದ್ದ ಕಾರು ಜಖಂ ಗೊಂಡಿದೆ.

 

Read Full Story

06:42 PM (IST) Jun 06

ಡಿಕೆ ಶಿವಕುಮಾರ್ ಫೋನ್ ಕಾಲ್ ಬೆನ್ನಲ್ಲೇ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, 3 ದಿನಗಳ ಗೊಂದಲಕ್ಕೆ ತೆರೆ

ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಈ ಮೂಲಕ ಕಳೆದೆರಡು ದಿನದಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಇದೇ ವೇಳೆ ಮತ್ತೊಂದು ಗೂಗ್ಲಿ ಹಾಕಿದ್ದಾರೆ.

Read Full Story

06:12 PM (IST) Jun 06

ವಕೀಲೆ ತಾಯಿ, ಬಿಲಿಯನೇರ್ ಪ್ರಿಯಕರನಿಂದಲೇ ಮಗುವಿನ ಹ*ತ್ಯೆ - ಇಂಗ್ಲೆಂಡ್ ವೈದ್ಯೆ ಕೊಟ್ಟ ಸುಳಿವೇ ಭೇದಿಸಿತು ಕಾಡುಗೋಡಿ ಕೊ*ಲೆ ರಹಸ್ಯ

ಬೆಂಗಳೂರಿನಲ್ಲಿ ಆರು ವರ್ಷದ ಮಗುವಿನ ಅನುಮಾನಾಸ್ಪದ ಸಾವು ಇದೀಗ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ. ಮಗುವಿನ ತಂದೆ ನೀಡಿದ ದೂರಿನ ಅನ್ವಯ, ವಕೀಲೆ ತಾಯಿ ಹಾಗೂ ಆಕೆಯ ರಿಯಲ್ ಎಸ್ಟೇಟ್ ಉದ್ಯಮಿ ಪ್ರಿಯಕರನ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

05:53 PM (IST) Jun 06

ರಾಮಲಿಂಗಾ ರೆಡ್ಡಿ, ಮುನಿಯಪ್ಪ ಅಸಮಾಧಾನ ಪಕ್ಷದಲ್ಲೇ.. - ಶಾಸಕಿ ರೂಪಕಲಾ ಹೇಳಿದ್ದೇನು?

ಸಚಿವ ಸಂಪುಟ ಪುನಾರಚನೆ, ಖಾತೆ ಹಂಚಿಕೆ ಹಾಗೂ ಸಚಿವ ಸ್ಥಾನಗಳ ಕುರಿತ ಚರ್ಚೆಗಳು ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಕೆಜಿಎಫ್ ಶಾಸಕಿಯಾಗಿರುವ ರೂಪಕಲಾ ಶಶಿಧರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

05:33 PM (IST) Jun 06

ಭಟ್ಕಳ - ಕಳಿನಡ ದುರಂತದಲ್ಲಿ ಸಾವು ಕಂಡ ಕುಟುಂಬದ ಸದಸ್ಯನಿಗೆ ಬ್ಯಾಂಕ್‌ನಲ್ಲಿ ಕೆಲಸ ಕೊಡಿಸಿದ ಶಾಸಕ ಮಂಕಾಳ ವೈದ್ಯ

ಭಟ್ಕಳದ ನದಿ ದುರಂತದಲ್ಲಿ 11 ಮಂದಿಯನ್ನು ಕಳೆದುಕೊಂಡ ಕುಟುಂಬಕ್ಕೆ ಶಾಸಕ ಮಂಕಾಳ ವೈದ್ಯ ಆಸರೆಯಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನದಂದು, ಆ ಕುಟುಂಬದ ಸದಸ್ಯರೊಬ್ಬರಿಗೆ ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದರ ಜೊತೆಗೆ, ಮೃತರ ನೆನಪಿಗಾಗಿ ಸಸಿಗಳನ್ನು ನೆಟ್ಟು ಮಾನವೀಯತೆ ಮೆರೆದಿದ್ದಾರೆ.

Read Full Story

05:18 PM (IST) Jun 06

ಗೃಹಪ್ರವೇಶಕ್ಕೆ ಮಲ್ಲಘಟ್ಟದ ನೀರು ತೆಗೆದುಕೊಂಡಿದ್ದ ಡಿಕೆಶಿ - ಕಾರಣ ಬಿಚ್ಚಿಟ್ಟ ಸಿಎಂ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಲ್ಲಘಟ್ಟದ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ..

Read Full Story

05:05 PM (IST) Jun 06

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ವಿಶೇಷ ವಿಶ್ - ಸ್ನೇಹದ ಬಗ್ಗೆ ಹರಿದಾಡಿದ್ದ ವದಂತಿಗಳಿಗೆ ತೆರೆ!

ಕನ್ನಡ ಚಿತ್ರರಂಗದಲ್ಲಿ ದಶಕಕ್ಕೂ ಹೆಚ್ಚು ಕಾಲದ ಸ್ನೇಹವನ್ನು ಹಂಚಿಕೊಂಡಿರುವ ರಕ್ಷಿತ್ ಮತ್ತು ರಿಷಬ್ ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಆದರೆ ರಕ್ಷಿತ್ ಹುಟ್ಟುಹಬ್ಬದಂದು..

Read Full Story

04:24 PM (IST) Jun 06

ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್, ಉಸ್ತುವಾರಿ ನಾಯಕ ಸುರ್ಜೆವಾಲ ಘೋಷಣೆಯಲ್ಲೇ ಗೊಂದಲ

ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಹೈಡ್ರಾಮ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದು, ಸಚಿವರಾಗಿ ಮುಂದುವರಿಯಲಿದ್ದಾರೆ ಎಂದು ಸುರ್ಜೆವಾಲ ಘೋಷಿಸಿದ್ದಾರೆ.

 

Read Full Story

04:20 PM (IST) Jun 06

ಅಂದು ಮಾಡಿದ್ದನ್ನು ಮರೆಯದ ಕನ್ನಡಿಗರು; ದಳಪತಿ ವಿಜಯ್‌ಗೆ ಬುದ್ಧಿ ಕಲಿಸಲು ರೆಡಿಯಾದ ಕರ್ನಾಟಕದ ಜನತೆ!

Actor thalapathy vijay Jana Nayagan Movie: ತಿಂಗಳುಗಳಿಂದ ನಿರೀಕ್ಷೆಯಲ್ಲಿರುವ 'ಜನ ನಾಯಗನ್' ಚಿತ್ರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. CM ವಿಜಯ್ ನಿಲುವನ್ನು ಕಾರಣವಾಗಿಟ್ಟುಕೊಂಡು ಕೆಲವು ಸಂಘಟನೆಗಳು ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

03:47 PM (IST) Jun 06

'ನನ್ನೊಂದಿಗೆ ನಟನೆ ಮುಕ್ತಾಯವಾಗಲಿ..' ತಂದೆ ವಜ್ರಮುನಿಗೆ ಕೊಟ್ಟ ಮಾತಿನಿಂದ ಸಿನಿಮಾದಿಂದ ದೂರ ಉಳಿದೆ ಎಂದ ಪುತ್ರ ವಿಶ್ವನಾಥ್‌

ಖಳನಟ ವಜ್ರಮುನಿ ಅವರ ಪುತ್ರ ವಿಶ್ವನಾಥ್‌ ವಜ್ರಮುನಿ ತಾವು ಯಾಕೆ ಸಿನಿಮಾ ರಂಗಕ್ಕೆ ಬರಲಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆಗೆ ಕೊಟ್ಟ ಮಾತಿನಂತೆ ನಟನೆಯನ್ನು ಬಿಟ್ಟು, ತಮಗೆ ಆಸಕ್ತಿಯಿದ್ದ ಕೃಷಿ ಹಾಗೂ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ವಜ್ರಗಿರಿ ನರ್ಸರಿ ನಡೆಸುತ್ತಿದ್ದಾರೆ.
Read Full Story

03:38 PM (IST) Jun 06

'ಮೊಗ್ಗಿನ ಮನಸ್ಸು' ನಟಿ ಬಾಳಲ್ಲಿ ಭಾರೀ ಬಿರುಗಾಳಿ.. ಕೋರ್ಟ್ ಮೆಟ್ಟಿಲೇರಿದ ಜೋಡಿ, ಮುರಿದುಬಿತ್ತಾ ಮದುವೆ?

ಸೋಶಿಯಲ್ ಮೀಡಿಯಾದಲ್ಲಿಯೂ ಪತಿಯೊಂದಿಗಿನ ಫೋಟೋಗಳನ್ನ ಶುಭಾ ಡಿಲೀಟ್ ಮಾಡಿದ್ದಾರೆ. ಪ್ರೀತಿಸಿ ಮದುವೆಯಾದ ಎಷ್ಟೋ ಜೋಡಿಗಳು ಹೀಗೆ ಅರ್ಧದಲ್ಲೇ ದೂರವಾಗ್ತಾ ಇರೋದು ನಿಜಕ್ಕೂ ವಿಪರ್ಯಾಸ. ಶುಭಾ ಪೂಂಜಾ ಡಿವೋರ್ಸ್ ಹಿಂದಿನ ನಿಖರವಾದ ಕಾರಣವೇನು? ಈ ಸ್ಟೋರಿ ನೋಡಿ…

Read Full Story

02:12 PM (IST) Jun 06

ನಯನತಾರಾ ಸಂಸಾರಕ್ಕೆ ಹಳೇ ನಟಿಯ ಎಂಟ್ರಿ; ವಿಘ್ನೇಶ್ ಶಿವನ್ ಬಗ್ಗೆ ಸೋನಾ ಹೇಡನ್ ಬಿಚ್ಚಿಟ್ಟ ಆ ರಹಸ್ಯಗಳೇನು?

"ನನ್ನ ಜೀವನದ ಕರಾಳ ದಿನಗಳಲ್ಲಿ ಅವರು ನನಗೆ ನೀಡಿದ ಬೆಂಬಲ ಮರೆಯಲು ಸಾಧ್ಯವಿಲ್ಲ. ಆದರೆ ಈಗ ಅವರಿಗೆ ನಾನು ನೆನಪಿದ್ದೇನೋ ಇಲ್ಲವೋ ಗೊತ್ತಿಲ್ಲ" ಎಂದು ಸೋನಾ ಕೊಂಚ ಭಾವುಕರಾಗಿಯೇ ನುಡಿದಿದ್ದಾರೆ. ವಿಘ್ನೇಶ್ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story

01:28 PM (IST) Jun 06

ಮತ್ತೆ ಶುರುವಾಯ್ತು ಕಾವೇರಿ ಕದನ.. ಕರ್ನಾಟಕಕ್ಕೆ ವಿಲನ್ ಆಗ್ತಾರಾ ತಮಿಳುನಾಡು ಸಿಎಂ ವಿಜಯ್?

ಸಿಎಂ ಪಟ್ಟವೇರಿರೋ ಡಿಕೆ, ದಳಪತಿ ಜೊತೆ ಫೈಟ್ ಮಾಡಬೇಕಾದ ಸನ್ನಿವೇಶ ನಿರ್ಮಾಣ ಆಗಿದೆ. ಈಗಷ್ಟೇ ಸಿಎಂ ಕುರ್ಚಿ ಏರಿರೋ ಇಬ್ಬರ ನಡುವೆ ಮೇಕೆದಾಟು ಮಹಾಸಮರ ನಡೆಯೋದು ಫಿಕ್ಸ್ ಅಗಿದೆ. ಒಟ್ನಲ್ಲಿ ಮೇಕೆದಾಟು ಯೋಜನೆ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಿಡಿ ಹಚ್ಚೋ ರೀತಿ ಕಾಣ್ತಾ ಇದೆ.

Read Full Story

12:53 PM (IST) Jun 06

ರಾಮಲಿಂಗಾ ರೆಡ್ಡಿ 4 ಸಾಲಿನ ರಾಜೀನಾಮೆ ಪತ್ರದಲ್ಲಿ ಇಷ್ಟೊಂದು ದೋಷ? ಜೈ ಕನ್ನಡಾಂಬೆ- ಜಾಲತಾಣದಲ್ಲಿ ಟ್ರೋಲ್​

ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡಿದ್ದರು. ಆದರೆ, ಅವರ ನಾಲ್ಕು ಸಾಲಿನ ರಾಜೀನಾಮೆ ಪತ್ರದಲ್ಲಿದ್ದ ಮೂರು ಕಾಗುಣಿತ ದೋಷಗಳನ್ನು ನೆಟ್ಟಿಗರು ಪತ್ತೆ ಹಚ್ಚಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Read Full Story

12:34 PM (IST) Jun 06

ಹೊಟ್ಟೆಪಾಡಿಗೆ ಕೆಲಸ ಮಾಡೋ ನನ್ನಂಥವ್ರು ಏನ್‌ ಮಾಡಬೇಕು? ಅಶೋಕ್‌ ಹೇಳಿಕೆಗೆ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ತಿರುಗೇಟು

ಕರ್ಣ ಧಾರಾವಾಹಿ ನಟ ಅಶೋಕ್‌ ಅವರು “ನನಗೆ ಸೀರಿಯಲ್‌ನಲ್ಲಿ ನಟಿಸಲು ಇಷ್ಟವಿಲ್ಲ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವರು ಹೇಳಿದಂತೆ ನಟಿಸಿ, ಡೈಲಾಗ್‌ ಹೇಳಬೇಕು, ಅದು ಗುಲಾಮಗಿರಿಯಂತೆ ಕಾಣುತ್ತದೆ ಎಂದಿದ್ದರು. ಇದನ್ನು ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುನಿತಾ ಶೆಟ್ಟಿ ಅವರು ವಿರೋಧ ಮಾಡಿದ್ದಾರೆ.

 

Read Full Story

12:21 PM (IST) Jun 06

ಕೆಟ್ಟ ಲಗ್ನದಲ್ಲಿ ಡಿಕೆಶಿ ಪ್ರಮಾಣವಚನ? ಕಾಂಗ್ರೆಸ್​ ಛಿದ್ರ ಛಿದ್ರ- ಅಧಿಕಾರಿಗಳ ಆತ್ಮಹತ್ಯೆ! ಭಯಾನಕ ಭವಿಷ್ಯವಾಣಿ

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತವು ಅತ್ಯಂತ ಕೆಟ್ಟದ್ದಾಗಿದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.  ಕೆಟ್ಟ ಲಗ್ನದಿಂದಾಗಿ ಕಾಂಗ್ರೆಸ್ ಪಕ್ಷವು 2-3 ಭಾಗಗಳಾಗಿ ಒಡೆಯಲಿದೆ ಎಂದು ಖ್ಯಾತ ಜ್ಯೋತಿಷಿ ಮೀಥಾ ಕ್ರಿಸ್ಟಲ್ ಎಚ್ಚರಿಸಿದ್ದಾರೆ.

Read Full Story

12:04 PM (IST) Jun 06

Kwatle Kitchen 2 ಶೋನಿಂದ ಏಕಾಏಕಿ ನಟಿ ಶ್ರುತಿ, ನಿರೂಪಕಿ ಅನುಪಮಾ ಗೌಡ ಹೊರಬಿದ್ದಿದ್ದೇಕೆ?

kwatle kitchen show: ‘ಕ್ವಾಟ್ಲೆ ಕಿಚನ್ 2’ ಗ್ಯ್ರಾಂಡ್ ಲಾಂಚ್ ಆಗಲಿದೆ. ಶನಿವಾರ, ಭಾನುವಾರ ರಾತ್ರಿ 9 ಗಂಟೆ ಪ್ರಸಾರ ಆಗಲಿದೆ. ‘ಕ್ವಾಟ್ಲೆ ಕಿಚನ್ 1’ ಶೋನಲ್ಲಿ ನಟಿ ಶ್ರುತಿ ಅವರು ಜಡ್ಜ್‌ ಆಗಿ, ಅನುಪಮಾ ಗೌಡ ಅವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಇವರಿಬ್ಬರೂ ಹೊರಗಡೆ ಬಂದಿದ್ದಾರೆ. ಯಾಕೆ?

 

Read Full Story

10:29 AM (IST) Jun 06

Bidadi Ai City - ಜೆಡಿಎಸ್‌ಗೆ ಸೇರಿದ್ಮೇಲೆ 9000 ಫಲವತ್ತಾದ ಎಕರೆ ಗುಳುಂ ವಿಷಯಕ್ಕೆ ಬಂದ ಬಿಗ್‌ ಬಾಸ್‌ ಜಾನ್ವಿ!

ಬಿಡದಿಯಲ್ಲಿ ಎಐ ಸಿಟಿ ಮಾಡಬೇಕು ಎಂದು ಸರ್ಕಾರ ಹೇಳಿದೆ. ಆದರೆ ಬಿಡದಿಯಲ್ಲಿರೋದು ಬರಡು ಭೂಮಿ ಅಲ್ಲ, ಫಲವತ್ತಾದ ಭೂಮಿ ಎಂದು ನಟಿ, ಬಿಗ್‌ ಬಾಸ್‌ ಸ್ಪರ್ಧಿ ಜಾನ್ವಿ ಅವರು ವಿಡಿಯೋ ಮಾಡಿ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

 

 

Read Full Story

10:16 AM (IST) Jun 06

FIFA World Cup 2026 - ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?

23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ 48 ತಂಡಗಳು 12 ಗುಂಪುಗಳಲ್ಲಿ ಸೆಣಸಾಡಲಿವೆ. ಈ ಲೇಖನವು ಮೊದಲ ನಾಲ್ಕು ಗುಂಪುಗಳಾದ 'ಎ', 'ಬಿ', 'ಸಿ' ಮತ್ತು 'ಡಿ' ಯಲ್ಲಿರುವ ತಂಡಗಳ ಸಂಕ್ಷಿಪ್ತ ಪರಿಚಯ, ಅವುಗಳ ಬಲಾಬಲ ಮತ್ತು ಪ್ರಮುಖ ಆಟಗಾರರ ಬಗ್ಗೆ ಮಾಹಿತಿ ನೀಡುತ್ತದೆ.
Read Full Story

09:07 AM (IST) Jun 06

Rain - ಮುಂಗಾರು ಎಫೆಕ್ಟ್; ರಾಜ್ಯದ ಕರಾವಳಿಯಲ್ಲಿ ಅಬ್ಬರದ ಮಳೆ; ಶಾಲಾ-ಕಾಲೇಜುಗಳಿಗೆ ರಜೆ

ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ, 'ಎಲ್‌ ನೀನೋ' ಪರಿಣಾಮದಿಂದಾಗಿ ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಇದು ಕೃಷಿ ಚಟುವಟಿಕೆಗಳ ಮೇಲೆ ಅಲ್ಪ ಪರಿಣಾಮ ಬೀರಬಹುದು.
Read Full Story

07:58 AM (IST) Jun 06

ಮಗಳ ಜನ್ಮದಿನಕ್ಕೆ ತನ್ನೂರಿನ ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ನೆರವು ನೀಡಿದ ಉದ್ಯಮಿ

ತುಳುನಾಡ ಸೇನಾ ಸ್ಥಾಪಕ, ಉದ್ಯಮಿ ಸುರೇಶ್ ಶೆಟ್ಟಿ ತಮ್ಮ ಮಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ತಮ್ಮ ಹುಟ್ಟೂರಾದ ಮಿಜಾರಿನ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಪುಸ್ತಕ, ಬ್ಯಾಗ್ ಹಾಗೂ ಪ್ರೋತ್ಸಾಹಧನ ನೀಡಿ ಸಾರ್ಥಕತೆ ಮೆರೆದಿದ್ದಾರೆ.
Read Full Story

07:44 AM (IST) Jun 06

KR Nagar - ಆಣೆ- ಪ್ರಮಾಣ, JDSನ ಎರಡು ಗುಂಪುಗಳ ನಡುವೆ ವಾಗ್ವಾದ; 10 ಲಕ್ಷದ ಬೆಟ್ಟಿಂಗ್

2019ರ ಲೋಕಸಭಾ ಚುನಾವಣೆಯ ಬೆಟ್ಟಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಜೆಡಿಎಸ್‌ನ ಎರಡು ಬಣಗಳು ಕಪ್ಪಡಿ ಕ್ಷೇತ್ರದಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗಿದ್ದವು. ಆದರೆ, ಈ ಸಭೆಯು ತಳ್ಳಾಟ-ನೂಕಾಟ ಮತ್ತು ಚಪ್ಪಲಿ ಎಸೆಯುವಿಕೆಯೊಂದಿಗೆ ಹೈಡ್ರಾಮಕ್ಕೆ ಸಾಕ್ಷಿಯಾಯಿತು. ಅಂತಿಮವಾಗಿ, ಸ್ಥಳೀಯರ ವಿರೋಧದಿಂದ ಆಣೆ ಪ್ರಮಾಣ ರದ್ದಾಗಿ, ಎರಡೂ ಬಣಗಳು ಕೇವಲ ಪೂಜೆ ಸಲ್ಲಿಸಿ ಹಿಂತಿರುಗಿದವು.
Read Full Story

07:34 AM (IST) Jun 06

ಭದ್ರಾಮೇಲ್ದಂಡೆ ಯೋಜನೆಯಿಂದ 37 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆ ಘೋಷಿಸಿದ ಶಾಸಕ

ಶಾಸಕ ಡಾ.ಎಂ.ಚಂದ್ರಪ್ಪ ಅವರು ಭದ್ರಾಮೇಲ್ದಂಡೆ ಯೋಜನೆಯಡಿ ಹೊಳಲ್ಕೆರೆ ತಾಲೂಕಿನ 37 ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ದೊಗ್ಗನಾಳ್ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದು, ತಾಲೂಕಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು.
Read Full Story

07:04 AM (IST) Jun 06

ಇಂದು ಮಧ್ಯಾಹ್ನ 12ಕ್ಕೆ ಸಿಇಟಿ ಫಲಿತಾಂಶ ಪ್ರಕಟ; ಮಧ್ಯಾಹ್ನ 2ರ ಬಳಿಕ ವೆಬ್‌ಸೈಟ್‌ನಲ್ಲಿ ಲಭ್ಯ

2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಯುಜಿ-ಸಿಇಟಿ) ಫಲಿತಾಂಶವನ್ನು ಶನಿವಾರ ಪ್ರಕಟಿಸಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರು ಮಧ್ಯಾಹ್ನ 12 ಗಂಟೆಗೆ ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದು, ಮಧ್ಯಾಹ್ನ 2 ಗಂಟೆಯ ನಂತರ ವಿದ್ಯಾರ್ಥಿಗಳು ಕೆಇಎ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
Read Full Story

06:50 AM (IST) Jun 06

ನಾಲ್ಕು ವಾರ ಮಂಗಳೂರು - ಮಂತ್ರಾಲಯ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ - ರಾಯರ ದರ್ಶನ ಸುಲಭ

ಜೂನ್ ತಿಂಗಳ ಪ್ರಯಾಣಿಕರ ದಟ್ಟಣೆ ನಿವಾರಿಸಲು ಭಾರತೀಯ ರೈಲ್ವೆ ಇಲಾಖೆಯು ಹೈದರಾಬಾದ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಸೇವೆಯನ್ನು ಘೋಷಿಸಿದೆ. ಯಲಹಂಕ, ಕೆಆರ್ ಪುರಂ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

Read Full Story

06:17 AM (IST) Jun 06

ತೆಲಂಗಾಣದಲ್ಲಿ KMF ನಂದಿನಿ ಉತ್ಪನ್ನಗಳ ಮಾರಾಟ ವಿವಾದ - ಹೈಕೋರ್ಟ್‌ನಿಂದ ಮಹತ್ವದ ಆದೇಶ

ತೆಲಂಗಾಣದಲ್ಲಿ 'ನಂದಿನಿ' ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕೆಎಂಎಫ್‌ಗೆ ಇದ್ದ ಕಾನೂನು ತೊಡಕನ್ನು ಹೈಕೋರ್ಟ್ ನಿವಾರಿಸಿದೆ. ಹೈದರಾಬಾದ್ ಮಾರುಕಟ್ಟೆ ಹಕ್ಕಿನ ಆಧಾರದ ಮೇಲೆ ಇಡೀ ರಾಜ್ಯದ ಏಕಸ್ವಾಮ್ಯವನ್ನು ಪ್ರತಿಪಾದಿಸಿದ್ದ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದ್ದು, ಕೆಎಂಎಫ್‌ಗೆ ಹೊಸ ಏಜೆನ್ಸಿಗಳನ್ನು ನೇಮಿಸುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ.
Read Full Story

05:58 AM (IST) Jun 06

ಮಳೆ-ಗಾಳಿಗೆ ಧರೆಗೆ ಉರುಳುವುದನ್ನುತಿಳಿಯಲು 1500 ಮರಗಳ ಅಧ್ಯಯನಕ್ಕೆ 4.45 ಕೋಟಿ ರು. ವೆಚ್ಚದ ಪ್ರಸ್ತಾವನೆ

ಬೆಂಗಳೂರಿನಲ್ಲಿ ಮರಗಳು ಉರುಳುವುದನ್ನು ತಡೆಯಲು, 1,500 ಮರಗಳ ಆರೋಗ್ಯವನ್ನು ಜರ್ಮನ್ ತಂತ್ರಜ್ಞಾನ ಬಳಸಿ ಪರೀಕ್ಷಿಸಲು ರಾಷ್ಟ್ರೀಯ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು 4.45 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ದುಬಾರಿ ತಂತ್ರಜ್ಞಾನವು ಮರಗಳ ಆಂತರಿಕ ಸ್ಥಿತಿಯನ್ನು ನಿಖರವಾಗಿ ಅರಿಯಲು ಸಹಾಯ ಮಾಡಲಿದ್ದು, ವೆಚ್ಚವನ್ನು ಕಡಿಮೆ ಮಾಡುವಂತೆ ಜಿಬಿಎ ಕೋರಿದೆ.
Read Full Story

05:53 AM (IST) Jun 06

ದೇಶದಲ್ಲಿ ತೈಲ, ಅನಿಲ ಬೆಲೆ ಏರಿಕೆಗೆ ಸರ್ಕಾರ ಕಾರಣವಲ್ಲ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇಶದಲ್ಲಿನ ಇಂಧನ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವಲ್ಲ, ಬದಲಾಗಿ ಮಧ್ಯಪ್ರಾಚ್ಯದಲ್ಲಿನ ಯುದ್ಧದಂತಹ ಅಂತಾರಾಷ್ಟ್ರೀಯ ವಿದ್ಯಮಾನಗಳೇ ಕಾರಣ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಯುದ್ಧದ ವಾತಾವರಣ ತಿಳಿಯಾದ ನಂತರ ಬೆಲೆಗಳು ಇಳಿಕೆಯಾಗಲಿವೆ ಎಂದು ಅವರು ಭರವಸೆ ನೀಡಿದರು.
Read Full Story

05:44 AM (IST) Jun 06

ದಿಲೀಪ್ ರಾಜ್‌ಗೆ ನುಡಿ ನಮನ; ಎಲ್ಲವನ್ನು ಕಲಿಸಿಕೊಟ್ಟು ಹೋಗಿಬಿಟ್ಟ; ಪತ್ನಿ ಕಣ್ಣೀರು

ಇತ್ತೀಚೆಗೆ ನಿಧನರಾದ ನಟ ದಿಲೀಪ್ ರಾಜ್ ಅವರಿಗೆ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ವತಿಯಿಂದ ನುಡಿ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿರಿಯ ನಟಿ ಉಮಾಶ್ರೀ ಕಿರುತೆರೆ ಕಲಾವಿದರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಿದರೆ, ದಿಲೀಪ್ ಪತ್ನಿ ವಿದ್ಯಾ ಹಾಗೂ ನಿರ್ದೇಶಕ ಬಿ. ಸುರೇಶ್ ಭಾವುಕರಾಗಿ ಮಾತನಾಡಿದರು.
Read Full Story

05:23 AM (IST) Jun 06

ವಿಧಾನ ಪರಿಷತ್ ಚುನಾವಣೆ - 5ನೇ ಸ್ಥಾನ ಗೆಲ್ಲಲು ಕಾಂಗ್ರೆಸ್‌ನಿಂದ ನಿಗೂಢ ದಾಳ, 2 ಮತಗಳ ಕೊರತೆ

ವಿಧಾನ ಪರಿಷತ್ ಚುನಾವಣೆಯಲ್ಲಿ ಐದನೇ ಸ್ಥಾನ ಗೆಲ್ಲಲು ಕಾಂಗ್ರೆಸ್ ಪಕ್ಷವು ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ. ಗೆಲುವಿಗೆ ಬೇಕಾದ 2 ಮತಗಳ ಕೊರತೆ ನೀಗಿಸಲು, ಬಿಜೆಪಿ ಬಂಡಾಯ ಶಾಸಕರನ್ನು ಸೆಳೆಯುವುದು ಅಥವಾ ಅವರು ಗೈರಾಗುವಂತೆ ನೋಡಿಕೊಳ್ಳುವ ತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.
Read Full Story

More Trending News