Published : Nov 04, 2025, 06:55 AM ISTUpdated : Nov 04, 2025, 11:25 PM IST

Karnataka News Live: ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ

ಸಾರಾಂಶ

ಬೆಳಗಾವಿ: 2028ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸೋಲಿಸಿಯೇ ತೀರುತ್ತೇನೆ ಎಂದು ರಮೇಶ ಜಾರಕಿಹೊಳಿ ಶಪಥ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿ ಸಹಕಾರ ಕ್ಷೇತ್ರದಲ್ಲಿ ಸೋಲಾಗುತ್ತದೆ ಎಂದು ಮೊದಲೇ ಗೊತ್ತಿತ್ತು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಯಲ್ಲಿ 18 ಸಾವಿರ ಮತಗಳಿದ್ದವು. ಅದನ್ನು ಈಗ ಸವದಿ ಐದೂವರೆ ಸಾವಿರಕ್ಕೆ ತಂದಿಟ್ಟಿದ್ದಾರೆ. ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಮಾಜಿ ಸಂಸದ ರಮೇಶ ಕತ್ತಿ ಇಂದಿಗೂ ನನ್ನ ಆತ್ಮೀಯ. ಯಾವುದೇ ವೈಷಮ್ಯ ಇಲ್ಲ. ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ಬೇಜಾರಾಗಿದೆ. ಮನಸ್ಸಿಗೆ ಬಂದಂತೆ ಮಾತನಾಡಬಾರದಿತ್ತು.ಹುಕ್ಕೇರಿ ವಿದ್ಯುತ್ ಸಹಕಾರಿ ಕ್ಷೇತ್ರದ ಚುನಾವಣೆ ಮಾಡಬೇಡಿ ಎಂದಿದ್ದೆ. ಆದರೆ ನಡೆಯಿತು ಎಂದರು.

Women in Sports

11:24 PM (IST) Nov 04

ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ

ಪ್ಯಾರಾ ಒಲಿಂಪಿಕ್ಸ್ ಗೋಲ್ಡ್‌ನಿಂದ ಮಹಿಳಾ ವಿಶ್ವಕಪ್ ಟ್ರೋಫಿ, ಭಾರತದ ದಿಕ್ಕು ಬದಲಿಸಿದ ಮಹಿಳಾ ಕ್ರೀಡೆ, ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಮಹಿಳಾ ಕ್ರೀಡಾಪಟುಗಳ ಸಾಧನೆ ಎಲ್ಲರನ್ನು ಹೆಮ್ಮೆ ಪಡುವಂತೆ ಮಾಡಿದೆ. ಭಾರತದಲ್ಲಿ ಮಹಿಳಾ ಕ್ರೀಡೆ ದಿಕ್ಕು ಬದಲಿಸಿದ್ದು ಹೇಗೆ

Read Full Story

11:04 PM (IST) Nov 04

ಕಿರುತೆರೆಯಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೀತಿದ್ದಾರಾ Karna ನಟ ಕಿರಣ್​ ರಾಜ್?​ ಪಡೆಯುವ ಹಣ ಎಷ್ಟು?

‘ಕರ್ಣ’ ಸೀರಿಯಲ್ ಮೂಲಕ ಜನಪ್ರಿಯರಾಗಿರುವ ನಟ ಕಿರಣ್ ರಾಜ್, ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಚರ್ಚೆಯಲ್ಲಿದ್ದಾರೆ. ನಟನೆಯ ಜೊತೆಗೆ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿರುವ ಇವರ ಬದುಕಿನ ಹಲವು ಅಪರೂಪದ ಸಂಗತಿಗಳನ್ನು ಈ ಲೇಖನ ಅನಾವರಣಗೊಳಿಸುತ್ತದೆ.
Read Full Story

10:44 PM (IST) Nov 04

ರೈತರ ಪ್ರತಿಭಟನೆ ಸ್ಥಳದಲ್ಲಿ ಮಲಗುತ್ತೇನೆ, ಗುರ್ಲಾಪೂರ ಹೋರಾಟಕ್ಕೆ ವಿಜಯೇಂದ್ರ ಬಲ

ರೈತರ ಪ್ರತಿಭಟನೆ ಸ್ಥಳದಲ್ಲಿ ಮಲಗುತ್ತೇನೆ, ಗುರ್ಲಾಪೂರ ಹೋರಾಟಕ್ಕೆ ವಿಜಯೇಂದ್ರ ಬಲ ನೀಡಿದ್ದಾರೆ. ನಾಳೆ ಹುಟ್ಟು ಹಬ್ಬದ ದಿನ ರೈತರ ಜೊತೆ ಇರಲು ನಿರ್ಧರಿಸಿದ್ದಾರೆ. ಇದರೊಂದಿಗೆ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.

Read Full Story

10:32 PM (IST) Nov 04

Bigg Bossನಲ್ಲಿ ಈಗ ಸೂಟ್​ಕೇಸ್​ ಸದ್ದು! ಏನಿದು ಟ್ವಿಸ್ಟ್​? ಇಷ್ಟು ಬೇಗ ರಿಪೀಟ್​ ಆಗ್ತಿದ್ಯಾ ಕಳೆದ ಸೀಸನ್​?

ಬಿಗ್​ಬಾಸ್​ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಸೂಟ್​ಕೇಸ್​ ನೀಡಿ ಹೊಸ ಟ್ವಿಸ್ಟ್ ನೀಡಲಾಗಿದೆ, ಇದು ಅಚ್ಚರಿಯ ಎಲಿಮಿನೇಷನ್​ನ ಮುನ್ಸೂಚನೆ ನೀಡಿದೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ರಿಷಾ ಗೌಡ ಹೊರಹೋಗಲಿದ್ದಾರೆ ಎಂಬ ಚರ್ಚೆಯ ನಡುವೆಯೇ, ಕಳೆದ ಸೀಸನ್​ ಪುನರಾವರ್ತನೆಯಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

Read Full Story

10:09 PM (IST) Nov 04

Karna - ಮಧ್ಯರಾತ್ರಿ ಹೆದರಿದ ನಿತ್ಯಾಳ ಸಮಾಧಾನಕ್ಕೆ ಕೋಣೆಗೆ ಕರ್ಣ ಬಂದಾಗ ನಡೆದದ್ದೇ ಬೇರೆ! ಅಲ್ಲಿ ಆಗಿದ್ದೇನು?

ತೇಜಸ್‌ನನ್ನು ಹುಡುಕಲು ಕರ್ಣ ಮತ್ತು ನಿತ್ಯಾ ಚಿಕ್ಕಮಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೊಂದೆಡೆ, ಕರ್ಣನ ತಂದೆ ರಮೇಶ್ ಅವನ ವಿರುದ್ಧ ಸಂಚು ರೂಪಿಸಿದ್ದು, ಹೋಟೆಲ್‌ನಲ್ಲಿ ನಡೆದ ಘಟನೆಯಿಂದ ಕರ್ಣನಿಗೆ ನಿಧಿಯ ನೆನಪಾಗುತ್ತದೆ. ತೇಜಸ್‌ನ ಹುಡುಕಾಟವು ಕುತೂಹಲ ಮೂಡಿಸಿದೆ.
Read Full Story

09:44 PM (IST) Nov 04

ಸಿಂಪಲ್ ಸುನಿ ಅವರ ಯೋಚನೆ ಚಿಕ್ಕದಾಗಿ ಕಂಡರೂ.. - ಗತವೈಭವದ ಬಗ್ಗೆ ಶಿವಣ್ಣ ಹೇಳಿದ್ದೇನು?

ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಚಿತ್ರಕ್ಕಾಗಿ ವಿಶೇಷವಾಗಿ ರೂಪಿಸಿರುವ ಶಿಪ್‌ ಸಾಂಗ್‌ ಅನ್ನು ಶಿವರಾಜ್‌ಕುಮಾರ್‌ ಅವರು ಬಿಡುಗಡೆ ಮಾಡಿದರು. ಹಾಡಿನ ಬಿಡುಗಡೆ ಜೊತೆಗೆ ಹಾಡಿಗೆ ವೇದಿಕೆ ಮೇಲೆಯೇ ಡ್ಯಾನ್ಸ್‌ ಮಾಡಿ ರಂಜಿಸಿದರು.

Read Full Story

09:32 PM (IST) Nov 04

'ದರ್ಶನ್‌ ಜೊತೆ ಅಂದು ನಡೆದಿತ್ತು ವಿಚಿತ್ರ ಘಟನೆ' ಎನ್ನುತ್ತಲೇ Bigg Boss ಡಾಗ್‌ ಸತೀಶ್‌ ಅಚ್ಚರಿಯ ವಿಷ್ಯ ರಿವೀಲ್‌

ಬಿಗ್‌ಬಾಸ್‌ ಖ್ಯಾತಿಯ ಡಾಗ್‌ ಸತೀಶ್, ಸಂದರ್ಶನವೊಂದರಲ್ಲಿ ನಟ ದರ್ಶನ್‌ ಕುರಿತು ಅಚ್ಚರಿಯ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಹಲವು ಬಾರಿ ಭೇಟಿಯಾದರೂ, ನಟ ದರ್ಶನ್‌ ಅವರು ತಮ್ಮೊಂದಿಗೆ ಮಾತ್ರ ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ್ದರು ಎಂದು ಸತೀಶ್ ಹೇಳಿದ್ದು, ಆ ಘಟನೆ ನಿಗೂಢ ಎಂದಿದ್ದಾರೆ.

Read Full Story

09:21 PM (IST) Nov 04

Brahmagantu ಬಿಟ್ಟು 'ನಾ ನಿನ್ನ ಬಿಡಲಾರೆ'ಗೆ ಎಂಟ್ರಿ ಕೊಟ್ಟ ದೀಪಾ-ಚಿರು - ಊಹಿಸಲಾಗದ ಪವಾಡ ನಡೆದೇ ಹೋಯ್ತು!

'ಬ್ರಹ್ಮಗಂಟು' ಮತ್ತು 'ನಾ ನಿನ್ನ ಬಿಡಲಾರೆ' ಧಾರಾವಾಹಿಗಳ ಮಹಾಸಂಗಮದಲ್ಲಿ, ದೀಪಾ ಮತ್ತು ಚಿರು ಅವರ ಪ್ರವೇಶದಿಂದ ದುರ್ಗಾ ಮತ್ತು ಶರತ್ ಮದುವೆಗೆ ಇದ್ದ ಅಡ್ಡಿ ನಿವಾರಣೆಯಾಗುತ್ತದೆ. ದುರ್ಗಾಳ ಮಹತ್ವವನ್ನು ಮಗಳು ಹಿತಾಗೆ ಮನವರಿಕೆ ಮಾಡಲು ದೀಪಾ ಮಾಡಿದ ಯೋಜನೆ ಎನಾಗತ್ತೆ? ಕುತೂಹಲದ ತಿರುವು…

Read Full Story

09:13 PM (IST) Nov 04

ಪ್ರಭಾಸ್ ಮೇಲೆ ಕಣ್ಣಿಟ್ಟು, ಮನಸ್ಸಿನ ಆಸೆ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ.. ನ್ಯಾಷನಲ್ ಕ್ರಶ್ ದೊಡ್ಡ ಪ್ಲಾನ್ ಏನು?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿಯಲ್ಲಿ ದೊಡ್ಡ ಸ್ಟಾರ್‌ಗಳ ಜೊತೆ, ಸೂಪರ್‌ಸ್ಟಾರ್‌ಗಳ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಈಗ ಭಾರತದ ಅತಿದೊಡ್ಡ ಸ್ಟಾರ್ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಮನಸ್ಸಿನ ಆಸೆಯನ್ನು ಹೊರಹಾಕಿದ್ದಾರೆ.

Read Full Story

08:28 PM (IST) Nov 04

ಚಾರ್ಮಿ ಕೌರ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ ಬಗ್ಗೆ ಬಾಯ್ಬಿಟ್ಟ ಪೂರಿ ಜಗನ್ನಾಥ್ - ಇಲ್ಲಿದೆ ಅಸಲಿ ಸತ್ಯ?

ನಿರ್ದೇಶಕ ಪೂರಿ ಜಗನ್ನಾಥ್ ಚಾರ್ಮಿ ಕೌರ್ ಜೊತೆ ವಾಸಿಸುತ್ತಿದ್ದಾರೆ, ಇಬ್ಬರೂ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಮಾತುಗಳು ಪ್ರತಿ ಬಾರಿಯೂ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸುದ್ದಿಗಳ ಹಿಂದಿನ ಅಸಲಿ ಕಾರಣವನ್ನು ಪೂರಿ ತಿಳಿಸಿದ್ದಾರೆ.

Read Full Story

08:16 PM (IST) Nov 04

ಕನ್ನಡ ಸೀರಿಯಲ್ ನಟಿಗೆ ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋ ಕಳುಹಿಸದಾತ ಅರೆಸ್ಟ್

ಕನ್ನಡ ಸೀರಿಯಲ್ ನಟಿಗೆ ಅಶ್ಲೀಲ ಮೆಸೇಜ್, ಖಾಸಗಿ ಅಂಗದ ಫೋಟೋ ಕಳುಹಿಸದಾತ ಅರೆಸ್ಟ್ , ಕಳೆದ ಮೂರು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದವನ ವಿರುದ್ದ ಕಿರುತೆರೆ ನಟಿ ದೂರು ನೀಡಿದ್ದರು. ಇದೀಗ ಆರೋಪಿ ಪತ್ತೆ ಹಚ್ಚಿದ ಅಣ್ಣಪೂರ್ಣೇಶ್ವರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read Full Story

08:03 PM (IST) Nov 04

ಅರೆರೆ.. ಬಿಗ್ ಬಾಸ್ ಫೇಮ್ ದೀಪಿಕಾ ದಾಸ್‌ಗೆ ಇದೇನಾಯ್ತು? ಭಯಾನಕ ಕೋರೆ ಹಲ್ಲು ನೋಡಿ ಆತಂಕಗೊಂಡ ಫ್ಯಾನ್ಸ್!

ಹ್ಯಾಲೋವಿನ್‌ ಒಂದು ಪಾಶ್ಚಾತ್ಯ ಸಂಪ್ರದಾಯದ ಹಬ್ಬವಾಗಿದ್ದು, ಇತ್ತೀಚೆಗೆ ಭಾರತಕ್ಕೂ ಕಾಲಿಟ್ಟಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಕೂಡಾ ಹ್ಯಾಲೋವಿನ್‌ ಲುಕ್‌ನಲ್ಲಿ ಮಿಂಚಿದ್ದಾರೆ.

Read Full Story

07:22 PM (IST) Nov 04

ವಿಶ್ವ ಪ್ರಸಿದ್ಧರ ಲಿಸ್ಟ್‌ನಲ್ಲಿ ಪ್ರಲ್ಹಾದ್ ಜೋಶಿ ಹೆಸರು - TIME 100 ಹವಾಮಾನ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ!

ಆರ್ಥಿಕತೆ-ಅಭಿವೃದ್ಧಿ, ಪರಂಪರೆ ಮತ್ತು ದೂರದೃಷ್ಟಿ ನಾಯಕತ್ವದಲ್ಲಿ ಭಾರತ ವಿಶ್ವಪ್ರಸಿದ್ಧಿ ಪಡೆದಿದೆ. ಅದರಂತೆ ಇದೀಗ ಈ ಪ್ರಗತಿಶೀಲ ರಾಷ್ಟ್ರದ ಸಚಿವರೂ ಪ್ರಭಾವಿ ನಾಯಕರಾಗಿ ಜಗತ್ಪ್ರಸಿದ್ಧರಾಗುತ್ತಿದ್ದಾರೆ.

Read Full Story

07:11 PM (IST) Nov 04

ರಜನಿಕಾಂತ್ ಜೊತೆ ನಟಿಸಲು ನಾಲ್ಕು ಬಾರಿ 'ನೋ' ಎಂದ್ರು ಮಾಜಿ ವಿಶ್ವ ಸುಂದರಿ - ಅಷ್ಟಕ್ಕೂ ರಿಜೆಕ್ಟ್ ಮಾಡಿದ್ಯಾಕೆ?

ರಜನಿಕಾಂತ್ ಜೊತೆ ಒಂದೇ ಒಂದು ಸಿನಿಮಾದಲ್ಲಾದ್ರೂ ನಟಿಸೋ ಚಾನ್ಸ್ ಸಿಗಲ್ವಾ ಅಂತಾ ಹಲವು ನಟಿಯರು ಕಾಯ್ತಿರ್ತಾರೆ. ಹೀಗಿರುವಾಗ, ಸೂಪರ್‌ಸ್ಟಾರ್‌ಗೆ ಜೋಡಿಯಾಗೋ ಅವಕಾಶ ಬಂದಾಗ, ಬರೋಬ್ಬರಿ ನಾಲ್ಕು ಸಿನಿಮಾ ಆಫರ್‌ಗಳನ್ನು ತಿರಸ್ಕರಿಸಿದ ನಟಿ ಯಾರು ಗೊತ್ತಾ?

Read Full Story

06:51 PM (IST) Nov 04

ಸಂಪುಟದಲ್ಲಿ ನನಗೂ ಅವಕಾಶ ಮಾಡಿಕೊಡಿ - ಹೈಕಮಾಂಡ್‌ಗೆ ಮನವಿ ಮಾಡಿದ ಶಾಸಕ ಯಶವಂತರಾಯಗೌಡ ಪಾಟೀಲ

ಸಂಪುಟದಲ್ಲಿ ಎಂ.ಬಿ.ಪಾಟೀಲ ಮೂರು ಬಾರಿ, ಶಿವಾನಂದ ಪಾಟೀಲ ಎರಡುಬಾರಿ ಹಾಗೂ ನಾಡಗೌಡ ಅವರಿಗೂ ಅವಕಾಶ ಸಿಕ್ಕಿದೆ. ನನಗೂ ಅವಕಾಶ ಮಾಡಿಕೊಡಿ ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

Read Full Story

06:43 PM (IST) Nov 04

ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳ ಸಾವು - ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.

Read Full Story

06:03 PM (IST) Nov 04

ಸಂಪುಟ ವಿಸ್ತರಣೆ ಕುರಿತು ಯಾವುದೇ ನಿರ್ಧಾರ ಆಗಿಲ್ಲ - ಸಚಿವ ಕೆ.ಜೆ. ಜಾರ್ಜ್

ಪಂಚ ಗ್ಯಾರಂಟಿ ಯೋಜನೆ ರಾಜ್ಯದ ಪ್ರತಿಯೊಬ್ಬರಿಗೂ ಅನುಕೂಲವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಪ್ರತಿ ಮನೆತನಕ್ಕೂ ಸಹಾಯ ಹಸ್ತ ನೀಡುತ್ತಿದೆ, ಎಂದು ಚಿಕ್ಕಮಗಳೂರು ಉಸ್ತುವಾರಿ ಸಚಿವ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

Read Full Story

06:00 PM (IST) Nov 04

ಉತ್ತರದಲ್ಲಿ ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ; ಸಿಎಂ ಸರ್‌ ರೈತರು ಕೋಟಿ ಕೇಳ್ತಿಲ್ಲ.. ಒಂದು ಟನ್‌ಗೆ 3500 ರೂಪಾಯಿ ಕೇಳ್ತಿದ್ದಾರೆ!

Sugar Cane Farmers Protest Intensifies in North Karnataka ಉತ್ತರ ಕರ್ನಾಟಕದಲ್ಲಿ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಗೆ ಆಗ್ರಹಿಸಿ ರೈತರ ಹೋರಾಟ ತೀವ್ರಗೊಂಡಿದೆ. ವಿಜಯಪುರ, ಬೆಳಗಾವಿ, ಚಿಕ್ಕೋಡಿ ಭಾಗಗಳಲ್ಲಿ ಬಂದ್, ಪ್ರತಿಭಟನೆಗಳು ನಡೆದಿದೆ.

Read Full Story

05:56 PM (IST) Nov 04

ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಲಿ - ಮಾಜಿ ಸಚಿವ ಬಿ.ಸಿ. ಪಾಟೀಲ್

ಬಿಜೆಪಿ ಬೇರು ಮಟ್ಟದಿಂದ ಗಟ್ಟಿಯಾಗಲು ಸ್ಥಳೀಯ ಬೂತ್ ಮಟ್ಟದ ಅಧ್ಯಕ್ಷರು, ಬಿಎಲ್‌ಎಗಳು, ಶಕ್ತಿ ಕೇಂದ್ರ, ಹಾಗೂ ಮಹಾ ಶಕ್ತಿ ಕೇಂದ್ರಗಳೇ ಪ್ರಮುಖ ಕಾರಣಾಗುತ್ತಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

Read Full Story

05:49 PM (IST) Nov 04

ಸೆ*ಕ್ಸಿ ಅಂದ್ರೆ ಏನು? ಉಯ್ಯಾಲೆಯಲ್ಲಿ ಕೂತು ಓಪನ್ ಆಗಿ ಸೋನು ಗೌಡ ಹೀಗಾ ಹೇಳೋದು?

ಮೊನ್ನೆಯಷ್ಟೇ ಗೋವಾ ಬೀಚ್‌ನ ಫೋಟೋಗಳನ್ನ ಶೇರ್ ಮಾಡಿದ್ದ ಸೋನು ಗೌಡ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಟ್‌ ಲುಕ್‌ನಲ್ಲಿ ನೋಡಿದ ನೆಟ್ಟಿಗರಿಗೆ ಕಣ್ಣು ಕುಕ್ಕುವಂತೆ ಮಾಡಿದ್ದಾರೆ.

Read Full Story

05:20 PM (IST) Nov 04

Best movies - ಬಿಗ್ ಬಜೆಟೂ ಇಲ್ಲ, Plot Twist ಇಲ್ಲ… ಆದ್ರೂ ನಿಮ್ಮ ಹೃದಯ ಗೆದ್ದೆ ಗೆಲ್ಲುತ್ತೆ ಈ ಸಿನಿಮಾಗಳು

Best movies: ಬಿಗ್ ಬಜೆಟ್ ಇಲ್ಲ, Plot Twist ಇಲ್ಲ. ಆದ್ರೂ ಕೆಲವು ಸಿನಿಮಾಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತೆ. ಸಿನಿಮಾಗಳು ಗೆಲ್ಲೋದಕ್ಕೆ ಬಿಗ್ ಬಜೆಟ್ ಬೇಕು, ಪ್ಲಾಟ್ ಟ್ವಿಸ್ಟ್ ಇರಲೇಬೇಕು ಅಂತೇನಿಲ್ಲ. ಕೆಲವು ಸಿನಿಮಾಗಳ ಸಿಂಪಲ್ ಕಥೆ ಸಿನಿ ರಸಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತೆ.

 

Read Full Story

05:04 PM (IST) Nov 04

ನಿನಗಾಗಿ ಹೆಂಡ್ತಿ ಕೊಂದೇ - ಒಂದೇ ಮೆಸೇಜ್‌ 4-5 ಹೆಂಗಸರಿಗೆ ಕಳುಹಿಸಿದ್ದ ಸ್ತ್ರೀಲೋಲ ಡಾ. ಮಹೇಂದ್ರ

dermatologist murder case: ಬೆಂಗಳೂರಿನಲ್ಲಿ ಚರ್ಮರೋಗ ತಜ್ಞೆ ಕೃತಿಕಾಳನ್ನು ಆಕೆಯ ಪತಿ ಮಹೇಂದ್ರನೇ ಅನಸ್ಥೇಶಿಯಾ ನೀಡಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆತನ ಹಲವು ನವರಂಗಿ ಆಟಗಳು ಬೆಳಕಿಗೆ ಬಂದಿವೆ.

Read Full Story

04:59 PM (IST) Nov 04

ಗಂಡಸರಿಗೂ ಪೀರಿಯಡ್ಸ್ ಆಗ್ಬೇಕು, ಆಗಲೇ ಅರ್ಥ ಆಗೋದು.. ರಶ್ಮಿಕಾ ಮಂದಣ್ಣ ಕ್ರೇಜಿ ಕಾಮೆಂಟ್ಸ್ ವೈರಲ್!

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಒಂದು ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ಗಂಡಸರಿಗೂ ಪೀರಿಯಡ್ಸ್ ಆಗ್ಬೇಕು ಅಂತಾ ಒಂದು ಕ್ರೇಜಿ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಜಗಪತಿ ಬಾಬು ಶೋನಲ್ಲಿ ಅವರು ಮಾಡಿದ ಕಾಮೆಂಟ್ಸ್ ವೈರಲ್ ಆಗಿದೆ.

Read Full Story

04:38 PM (IST) Nov 04

ಚುನಾವಣೆಯಲ್ಲಿ ಭಾಗವಹಿಸಲು ಬಿಹಾರಿಗಳಿಗೆ 3 ದಿನ ವೇತನ ಸಹಿತ ರಜೆ ನೀಡಿ, ಡಿಕೆ ಶಿವಕುಮಾರ್‌ ಮನವಿ!

DK Shivakumar Urges Karnataka Employers to Grant 3 Days Paid Leave to Bihari Voters ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿರುವ ಬಿಹಾರಿ ಕಾರ್ಮಿಕರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಮೂರು ದಿನಗಳ ವೇತನ ಸಹಿತ ರಜೆ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. 

Read Full Story

04:37 PM (IST) Nov 04

ರಣಜಿ ಟ್ರೋಫಿ - ಕೇರಳವನ್ನು ಸೋಲಿಸಿ ಗೆಲುವಿನ ಖಾತೆ ತೆರೆದ ಕರ್ನಾಟಕ!

2025-26ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತನ್ನ ಮೊದಲ ಗೆಲುವು ದಾಖಲಿಸಿದ್ದು, ಕೇರಳ ವಿರುದ್ಧ ಇನ್ನಿಂಗ್ಸ್ ಮತ್ತು 164 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಕರುಣ್ ನಾಯರ್ ಅವರ ದ್ವಿಶತಕ ಮತ್ತು ಮೊಹ್ಸಿನ್ ಖಾನ್ ಅವರ 6 ವಿಕೆಟ್‌ಗಳ ಪ್ರದರ್ಶನದಿಂದಾಗಿ, ಕರ್ನಾಟಕಕ್ಕೆ ಸುಲಭ ಗೆಲುವು ಸಿಕ್ಕಿದೆ.

Read Full Story

03:41 PM (IST) Nov 04

ಕೊಲೆಯಾದವನ ಬರ್ತಡೇ ದಿನವೇ ಕೊಲೆಗಾರರಿಗೆ ಜೀವಾವಧಿ, ಪೊಲೀಸರಿಗೆ ಸಿಹಿ ಹಂಚಿ ಸಂಭ್ರಮಿಸಿದ ತಂದೆ!

Life Imprisonment on Victim Birthday Father Celebrates Justice for Slain Son Siddharth with Police 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಸಿದ್ಧಾರ್ಥ್ ಕೊಲೆ ಪ್ರಕರಣದಲ್ಲಿ, ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

Read Full Story

03:17 PM (IST) Nov 04

Amruthadhaare Serial - ಗೌತಮ್‌, ಭೂಮಿಕಾ ಬದುಕಿನಲ್ಲಿ ಮತ್ತೊಂದು ಊಹಿಸದ ತಿರುವು! ವೀಕ್ಷಕರನ್ನು ಕಾಪಾಡಪ್ಪಾ..!

Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾ ವಿವಾಹ ವಾರ್ಷಿಕೋತ್ಸವ ಬಂದಿದೆ. ಇವರಿಬ್ಬರೂ ದೂರ ಇದ್ದರೂ ಕೂಡ ಪ್ರೀತಿ ಮಾಡುತ್ತಿದ್ದಾರೆ. ಈಗ ಇದನ್ನೆಲ್ಲ ನೋಡಿದರೆ ಈ ಜೋಡಿ ಒಂದಾಗುವ ಲಕ್ಷಣ ಕಾಣುತ್ತಿದೆ. ಹೊಸ ಪ್ರೋಮೋ ರಿಲೀಸ್‌ ಆಗಿದೆ.

Read Full Story

03:13 PM (IST) Nov 04

Amruthadhaare Serial - ಶಕುನಿ‌ ಮಾವ ನಿಜಕ್ಕೂ ಬದಲಾದ್ರ... ವೀಕ್ಷಕರಿಗೆ ಸಣ್ಣದೊಂದು ಡೌಟು

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಮಾವ ಲಕ್ಷ್ಮೀಕಾಂತ ಸಂಪೂರ್ಣವಾಗಿ ಬದಲಾಗಿದ್ದಾರೆ. ತನ್ನನ್ನು ಕಡೆಗಣಿಸಿದ ತಂಗಿ ಶಕುಂತಲಾ ಮತ್ತು ಜೈದೇವ್ ಪ್ಲ್ಯಾನ್ ಗಳನ್ನು ಆನಂದ್ ಗೆ ತಿಳಿಸುತ್ತಿದ್ದಾರೆ. ಆದರೆ ವೀಕ್ಷಕರಿಗೆ ಇನ್ನೂ ಕೂಡ ಶಕುನಿ ಮಾವನ ಮೇಲೆ ಡೌಟ್.

Read Full Story

02:44 PM (IST) Nov 04

BBK 12 - ಗಳಗಳನೆ ಅತ್ತ ಸೂರಜ್‌ ಸಿಂಗ್; ವೀಕ್‌ನೆಸ್‌ ಕಂಡುಹಿಡಿದ್ರು, ದ್ವೇಷ ತೀರಿಸಿಕೊಂಡ್ರು! ನಟಿಯ ರಿವೆಂಜ್‌!

Bigg Boss Kannada Season 12: ಸೂರಜ್‌ ಸಿಂಗ್‌ ಅವರು ನಿರ್ಧಾರಗಳನ್ನು ತಗೊಳ್ಳುವಾಗ, ತುಂಬ ಯೋಚನೆ ಮಾಡಿ ತಗೊಳ್ತಾರೆ. ಹಾಗೆಯೇ ರಿಷಾ ಗೌಡ ಮುಂದೆ ಮಾತಾಡಿ, ನನಗೂ ಕೂಡ ಮಾತನಾಡೋಕೆ ಬರತ್ತೆ ಎಂದು ತೋರಿಸಿಕೊಟ್ಟಿದ್ದರು. ಈಗ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ನಿಜಕ್ಕೂ ಏನಾಯ್ತು? 

Read Full Story

02:34 PM (IST) Nov 04

ಕ್ಲೀನ್‌ ಚಿಟ್‌ ಸಿಕ್ಕಿದ್ರೂ ಅದೊಂದು ಕೇಸ್‌ನಿಂದ ಎಚ್‌ವೈ ಮೇಟಿಗೆ ಬಿದ್ದಿತ್ತು ಕಪ್ಪುಚುಕ್ಕೆ, 'ಈ ವಯಸ್ಸಿಗೆ ಇದೆಲ್ಲಾ ಬೇಕಿತ್ತಾ' ಅಂದಿದ್ರು ಸಿದ್ದು!

HY Meti Passes Away Clean Chit But CD Scandal Remained a Black Mark ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (79) ಉಸಿರಾಟದ ಸಮಸ್ಯೆಯಿಂದ ನಿಧನರಾದರು. ಐದು ಬಾರಿ ಶಾಸಕರಾಗಿದ್ದ ಅವರು, 2016ರಲ್ಲಿ ಅಶ್ಲೀಲ ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Read Full Story

02:27 PM (IST) Nov 04

ಬಿಗ್‌ ಟ್ವಿಸ್ಟ್ ನಡುವೆ ಮತ ಯಾಚನೆ; ಗುರಿ ಸೇರೋಕೆ ನಿಮ್ಮ ವೋಟ್ ಬೇಕೆಂದ ಅಶ್ವಿನಿ ಗೌಡ

ಈ ವಾರ ನಾಮಿನೇಟ್ ಆಗಿರುವ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ಮತಯಾಚನೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮನೆಯಿಂದ ಹೊರಬಂದಂತೆ ತೋರಿಸಿದ ಅವರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ.
Read Full Story

02:20 PM (IST) Nov 04

ಬೀದರ್ ನಲ್ಲಿ ತಪ್ಪಿದ ಭಾರಿ ರೈಲು ದುರಂತ; ರೈಲು ಹಳಿಯ ಮೇಲೆ ಬೈಕ್ ಬಿಟ್ಟು ವ್ಯಕ್ತಿ ಪರಾರಿ

ಬೀದರ್‌ನ ನೌಬಾದ್ ಬಳಿ ರೈಲ್ವೆ ಹಳಿಯ ಮೇಲೆ ಬೈಕ್ ಸವಾರನೊಬ್ಬ ತನ್ನ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ಗಮನಿಸಿದ ರೈಲು ಚಾಲಕನ ಸಮಯಪ್ರಜ್ಞೆಯಿಂದ, ಪ್ರಯಾಣಿಕರಿಗೆ ಯಾವುದೇ ಅಪಾಯವಾಗದೆ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದೆ.
Read Full Story

01:48 PM (IST) Nov 04

ತಿಂಗಳಿಗೆ ₹10,000 ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ! ಹಣ ಉಳಿಕೆ ಶ್ರೇಷ್ಠವೋ, ಹೂಡಿಕೆ ಒಳ್ಳೆಯದೋ?

ಕೇವಲ ಹಣ ಉಳಿತಾಯ ಮಾಡುವುದರಿಂದ ಹಣದುಬ್ಬರದ ಕಾರಣ ನಿಮ್ಮ ಹಣದ ಮೌಲ್ಯ ಕುಸಿಯುತ್ತದೆ. ಆದರೆ, ಸಿಪ್ (SIP) ನಂತಹ ಹೂಡಿಕೆಗಳು ಚಕ್ರಬಡ್ಡಿಯ ಲಾಭ ನೀಡಿ, ಕಡಿಮೆ ಸಮಯದಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಲ್ಲವು. ಬೇಗ ಹೂಡಿಕೆ ಆರಂಭಿಸುವುದರಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯ.
Read Full Story

01:33 PM (IST) Nov 04

ಅದೊಂದು ಕಾಮೆಂಟ್‌ನಿಂದ ಬೇಸತ್ತು ತೂಕ ಇಳಿಸಿಕೊಂಡ ಮಂಗಳೂರು 'ಹುಡುಗಿ ಹುಬ್ಬಳಿ ಹುಡುಗ' ಸೀರಿಯಲ್ ನಟಿ Radhika Rao

ರಾಧಾ ಕಲ್ಯಾಣ, ಮಂಗಳೂರು ಹುಡುಗಿ ಹುಬ್ಬಳಿ ಹುಡುಗ ಧಾರಾವಾಹಿ ನಟಿ ರಾಧಿಕಾ ರಾವ್‌ ಅವರು ಮಗನಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡಿದ್ದು, ವಿಶೇಷವಾಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಎಷಿಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ್ದಾರೆ.

 

Read Full Story

01:30 PM (IST) Nov 04

ಯಾವ ಪಕ್ಷದಿಂದಲಾದ್ರೂ ಸರಿ ರಾಜ್ಯಕ್ಕೆ ದಲಿತ ಸಿಎಂ ಬೇಕು - ರಮೇಶ್ ಜಿಗಜಿಣಗಿ

ವಿಜಯಪುರದಲ್ಲಿ ನಡೆದ ಸಭೆಯಲ್ಲಿ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದ್ದಾರೆ. ದಲಿತರು ಕೇವಲ ಕಸ ಗುಡಿಸಲು ಸೀಮಿತವೇ ಎಂದು ಪ್ರಶ್ನಿಸಿರುವ ಅವರು, ಪಕ್ಷಾತೀತವಾಗಿ ದಲಿತರೊಬ್ಬರು ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
Read Full Story

12:51 PM (IST) Nov 04

ರಾಯಚೂರು - ಶಾಲೆಗೆ ಶಿಕ್ಷಕರು ಗೈರು, ಪ್ರಾರ್ಥನೆ ವೇಳೆ ಮಕ್ಕಳ ತಳ್ಳಾಟ, ಬಾಲಕಿಯ ಕಾಲು ಮುರಿತ!

ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಶಾಲೆಯಲ್ಲಿ ಶಿಕ್ಷಕರ ಗೈರುಹಾಜರಿ ವೇಳೆ, ಪ್ರಾರ್ಥನಾ ಸಮಯದಲ್ಲಿ ನಡೆದ ತಳ್ಳಾಟದಲ್ಲಿ 4ನೇ ತರಗತಿ ವಿದ್ಯಾರ್ಥಿನಿಯ ಕಾಲು ಮುರಿದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Full Story

12:50 PM (IST) Nov 04

ಬಾಗಲಕೋಟೆಯ ಕಾಂಗ್ರೆಸ್ ಶಾಸಕ ಹುಲ್ಲಪ್ಪ ಮೇಟಿ ನಿಧನ

ಬಾಗಲಕೋಟೆಯ ಕಾಂಗ್ರೆಸ್ ಶಾಸಕ ಹುಲ್ಲಪ್ಪ ಮೇಟಿ ನಿಧನವಾಗಿದ್ದಾರೆ. ಹೆಚ್‌ವೈ ಮೇಟಿ ಅವರು ಐದು ಬಾರಿ ಶಾಸಕರಾಗಿದ್ದರು. ಮೇಟಿ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ.

Read Full Story

12:21 PM (IST) Nov 04

ಅದೊಂದು ಇನ್‌ಸ್ಟಾಗ್ರಾಮ್‌ ಕಾಮೆಂಟ್‌ ಎಫೆಕ್ಟ್;‌ ಬಳುಕುವ ಬಳ್ಳಿಯಂತಾದ Radha Kalyana Serial ನಟಿ ರಾಧಿಕಾ ರಾವ್

Actress Radhika Rao Weight Loss: ರಾಧಾ ಕಲ್ಯಾಣ, ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ ಧಾರಾವಾಹಿ ಸೇರಿದಂತೆ ಕೆಲ ಕನ್ನಡ, ತುಳು ಸಿನಿಮಾದಲ್ಲಿ ನಟಿಸಿದ್ದ ರಾಧಿಕಾ ರಾವ್‌ ಮದುವೆಯಾಗಿ, ಮಗ ಹುಟ್ಟಿದ ಬಳಿಕ ತೆರೆಯಿಂದ ದೂರ ಇದ್ದರು. ಈಗ ಇವರ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಎಲ್ಲರ ನಿದ್ದೆಗೆಡಿಸಿದೆ.

 

Read Full Story

12:17 PM (IST) Nov 04

ಬಿವೈ ವಿಜಯೇಂದ್ರನಿಂದ ಬಿಜೆಪಿ ಹಾಳು; ಯತ್ನಾಳ್ ಪರ ರಮೇಶ್ ಜಾರಕಿಹೊಳಿ ಬ್ಯಾಟಿಂಗ್

ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಬಿ.ವೈ.ವಿಜಯೇಂದ್ರರಿಂದಲೇ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮುಂಬರುವ 2028ರ ಚುನಾವಣೆಯಲ್ಲಿ ಲಕ್ಷ್ಮಣ ಸವದಿಯನ್ನು ಸೋಲಿಸುವುದಾಗಿ ಶಪಥ ಮಾಡಿದ್ದು, ಯತ್ನಾಳರನ್ನು ಪಕ್ಷಕ್ಕೆ ಮರಳಿ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ.
Read Full Story

12:03 PM (IST) Nov 04

ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ; ಬಿಗ್‌ಬಾಸ್‌ನಿಂದ ಬಂತು ಅಧಿಕೃತ ಸಂದೇಶ, ಕಾದಿದ್ಯಾ ಬಿಗ್‌ ಶಾಕ್?

Gill Nata Vs Risha Gowda: ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ತಮಾಷೆ ಜಗಳ ವಿಕೋಪಕ್ಕೆ ತಿರುಗಿದ್ದು, ರಿಷಾ ಹಲ್ಲೆ ನಡೆಸಿದ್ದಾರೆ. ಈ ನಿಯಮ ಉಲ್ಲಂಘನೆಯ ಬಗ್ಗೆ ಬಿಗ್‌ಬಾಸ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 

Read Full Story

More Trending News