Published : May 31, 2025, 07:26 AM ISTUpdated : Jun 01, 2025, 12:06 AM IST

Karnataka News Live: ಕ್ಯಾನ್ಸರ್ ವಿರುದ್ಧ ಹೋರಾಡಿ ಈಗ ವಿಶ್ವ ಸುಂದರಿ ಕಿರೀಟ ಗೆದ್ದ ಸುಚಾತಾ, ಸ್ಫೂರ್ತಿಯ ಪಯಣ

ಸಾರಾಂಶ

ಬೆಂಗಳೂರು (ಮೇ.31): ಇಡೀ ಕನ್ನಡ ನಾಡು ಹಾಗೂ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತರುವಂತ ಹೇಳಿಕೆ ನೀಡಿದ್ದರೂ ತನ್ನ ಹೇಳಿಕೆಯ ಬಗ್ಗೆ ಕ್ಷಮೆ ಕೇಳೋದೇ ಇಲ್ಲ ಎಂದು ಕಮಲ್‌ ಹಾಸನ್‌ ಧಿಮಾಕು ತೋರಿಸಿದ್ದಾರೆ. ಕನ್ನಡ ಚಿತ್ರರಂಗದ ಗಡುವಿಗೂ ಡೋಂಟ್‌ಕೇರ್‌ ಎಂದಿದ್ದಾರೆ. ನಿಷೇಧದಂಥ ಬೆದರಿಕೆ ಹಿಂದೆಯೂ ಎದುರಿಸಿದ್ದೇನೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ರಾಜ್ಯಾದ್ಯಂತ ಹಿರಿಯ ಕವಿ ಎಚ್‌ಎಸ್‌ ವೆಂಕಟೇಶ್‌ ಮೂರ್ತಿ ಅಗಲಿಕೆಗೆ ಅಕ್ಷರ ಶ್ರದ್ಧಾಂಜಲಿ ವ್ಯಕ್ತವಾಗಿದ್ದು, ಹಿರಿಯ ಕವಿಗಳು, ಪತ್ರಕರ್ತರು, ವಿಮರ್ಶಕರು ಸಂತಾಪ ವ್ಯಕ್ತಪಡಿಸಿದ್ದಾರೆ.

12:06 AM (IST) Jun 01

ಕ್ಯಾನ್ಸರ್ ವಿರುದ್ಧ ಹೋರಾಡಿ ಈಗ ವಿಶ್ವ ಸುಂದರಿ ಕಿರೀಟ ಗೆದ್ದ ಸುಚಾತಾ, ಸ್ಫೂರ್ತಿಯ ಪಯಣ

ವಿಶ್ವ ಸುಂದರಿ ಕಿರೀಟ ಗೆದ್ದ ಒಪಾಲ್ ಸುಚಾತಾ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. 16ನೇ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾದ ಈ ಸುಂದರಿ ಚಿಕ್ಕ ವಯಸ್ಸಿನಿಂದಲೇ ಹೋರಾಟ ಆರಂಭಿಸಿದ್ದಾಳೆ.  ಈ ಹೋರಾಟ ಇದೀಗ ವಿಶ್ವ ಸುಂದರಿ ಪಟ್ಟ ಗಿಟ್ಟಿಸಿಕೊಳ್ಳುವಲ್ಲಿ ವರೆಗೆ ಬಂದಿದೆ. 

Read Full Story

11:39 PM (IST) May 31

ಬಿಜೆಪಿ ನಾಯಕಿ ಪುತ್ರನ 130 ಅಶ್ಲೀಲ ವಿಡಿಯೋ ವೈರಲ್, ರಾಜಕೀಯ ಕೋಲಾಹಲ

ಬಿಜೆಪಿ ನಾಯಕಿ ಪುತ್ರನ ಕಾಮಕಾಂಡ ಬಯಲಾಗಿದೆ. ಬರೋಬ್ಬರಿ 130 ಅಶ್ಲೀಲ ವಿಡಿಯೋಗಳು ಇದೀಗ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಗಿದೆ.

Read Full Story

11:15 PM (IST) May 31

ಭದ್ರಾ ಜಲಾವೃತ ಭೀತಿ - ಆತಂಕದಲ್ಲಿ ಮಲೆನಾಡಿನ ಬಡಕುಟುಂಬಗಳು!

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಜಾಂಬಳೆಯಲ್ಲಿ ಭದ್ರಾ ನದಿ ಪಾತ್ರದಲ್ಲಿರುವ ಎರಡು ಕುಟುಂಬಗಳು ಮಳೆಗಾಲದಲ್ಲಿ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಕುಟುಂಬಗಳು ಅಳಲು ತೋಡಿಕೊಂಡಿವೆ.
Read Full Story

10:52 PM (IST) May 31

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ ನಿರಾಸೆ, ನಂದಿನಿ ಗುಪ್ತಾ ಹಿಂದಿಕ್ಕಿದ ಥಾಯ್ಲೆಂಡ್ ಸುಂದರಿ ಯಾರು?

ಹೈದರಾಬಾದ್‌ನಲ್ಲಿ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತದ ನಂದಿನಿ ಗುಪ್ತಾಗೆ ನಿರಾಸೆಯಾಗಿದೆ. ನಂದಿನಿ ಗುಪ್ತಾ ಹಿಂದಿಕ್ಕಿ ಥೈಲ್ಯಾಂಡ್ ಸುಂದರಿ ಇದೀಗ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ.

Read Full Story

10:25 PM (IST) May 31

ಜನಸಂಖ್ಯೆಯಲ್ಲಿ ಚೀನಾ ಹಿಂದಿಕ್ಕಿದ ಭಾರತ, ಯಾವ ಮೆಟ್ರೋ ಸಿಟಿಯಲ್ಲಿ ಜನನ ಪ್ರಮಾಣ ಹೆಚ್ಚು?

ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ಭಾರತದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಮೆಟ್ರೋ ಸಿಟಿ ಯಾವುದು? ಅತೀ ಕಡಿಮೆ ಜನನ ಪ್ರಮಾಣದ ನಗರ ಯಾವುದು?

Read Full Story

10:11 PM (IST) May 31

ಜೂ.1ರಿಂದ 2 ತಿಂಗಳು ಮೀನುಗಾರಿಕೆಗೆ ನಿಷೇಧ; ಮೀನುಗಾರರಿಗೆ ಸರಕಾರ ಆರ್ಥಿಕ ಸಹಾಯ ನೀಡಲು ಆಗ್ರಹ

ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಮೀನುಗಾರರು ತಮ್ಮ ಬೋಟ್‌ಗಳಿಗೆ ಲಂಗರು ಹಾಕಿದ್ದಾರೆ. ಮೀನು ಮೊಟ್ಟೆ ಇಡುವ ಸಮಯವಾಗಿರುವುದರಿಂದ ಈ ನಿಷೇಧ ಹೇರಲಾಗಿದ್ದು, ಸಾಂಪ್ರದಾಯಿಕ ಬೋಟ್‌ಗಳನ್ನು ಹೊರತುಪಡಿಸಿ ಟ್ರಾಲ್ ಮತ್ತು ಪರ್ಸೀನ್ ಬೋಟ್‌ಗಳಿಗೆ ನಿಷೇಧ ಅನ್ವಯಿಸುತ್ತದೆ.
Read Full Story

09:41 PM (IST) May 31

ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು, ತಜ್ಞರು ಹೇಳ್ತಾರೆ ಲೋ ಬಜೆಟ್ ಪ್ಲಾನ್

ಚಿನ್ನ ದುಬಾರಿ ಎಂದು ಕಷ್ಟಪಟ್ಟು ಚಿನ್ನದ ಮೇಲೆ ಹೂಡಿಕೆ ಪ್ಲಾನ್ ಮಾಡುತ್ತಿದ್ದೀರಾ? ಚಿನ್ನಕ್ಕಿಂತ ಬೆಳ್ಳಿ ಮೇಲಿನ ಹೂಡಿಕೆಯಲ್ಲಿ ಲಾಭ ಹೆಚ್ಚು ಅಂತಾರೆ ತಜ್ಞರು. ಕಡಿಮೆ ಮೊತ್ತ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸಲು ಬೆಳ್ಳಿ ಉತ್ತಮವೇ?  

Read Full Story

09:04 PM (IST) May 31

ಕರ್ನಾಟಕದಲ್ಲಿ 1.2 ಲಕ್ಷ ಗ್ರಾಹಕರು ಜಿಯೋಗೆ ಸೇರ್ಪಡೆ, ಒಟ್ಟು ಬಳಕೆದಾರರ ಸಂಖ್ಯೆ ಎಷ್ಟು?

ರಿಲಯನ್ಸ್ ಜಿಯೋ ನೀಡುತ್ತಿರುವ ಭರ್ಜರಿ ಆಫರ್ ಬೆನ್ನಲ್ಲೇ ಇದೀಗ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ತಿಂಗಳು 1.2 ಲಕ್ಷ ಗ್ರಾಹಕರು ಕರ್ನಾಟಕದಲ್ಲಿ ಜಿಯೋಗೆ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಜಿಯೋ ಗ್ರಾಹಕರ ಸಂಖ್ಯೆ ಎಷ್ಟಾಗಿದೆ ಗೊತ್ತಾ?

Read Full Story

08:19 PM (IST) May 31

ಬಾಲಯ್ಯಗೆ ಕಾಲು ತಾಗಿದ್ದಕ್ಕೆ ಸೆಟ್‌ನಲ್ಲೇ ಗೋಳೋ ಎಂದು ಅತ್ತ ಸ್ಟಾರ್ ನಟಿ!

ನಂದಮೂರಿ ಬಾಲಕೃಷ್ಣ ಮಾಡಿದ್ದೊಂದು ಕೆಲಸಕ್ಕೆ ಸೆಟ್‌ನಲ್ಲೇ ಒಬ್ಬ ನಟಿ ಬಿಕ್ಕಿ ಬಿಕ್ಕಿ ಅತ್ತರಂತೆ. ಆ ನಟಿಗೆ ಬಾಲಯ್ಯ ಏನಂದ್ರು? ಅತ್ತ ಆ ಸ್ಟಾರ್ ನಟಿ ಯಾರು? ಆಮೇಲೆ ಬಾಲಕೃಷ್ಣ ಏನ್ ಮಾಡಿದ್ರು ಗೊತ್ತಾ?

Read Full Story

08:09 PM (IST) May 31

ಚಪ್ಪಾಳೆ ತಟ್ಟಿದ್ದು ನಿಜ, ಆದ್ರೆ ಕಮಲ್ ಹಾಸನ್ ಹೇಳಿಕೆ ಸಮರ್ಥಿಸಲ್ಲ; ವಿದಾದ ಬೆನ್ನಲ್ಲೇ ಶಿವಣ್ಣ ಸ್ಪಷ್ಟನೆ!

'ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ' ಎಂದು ಕೊನೆಗೂ ಕನ್ನಡ ಅವಮಾನದ ಬಗ್ಹೆ ಮೌನ ಮುರಿದಿದ್ದಾರೆ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವಣ್ಣ. 'ಕಮಲಹಾಸನ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಳ್ಳಲ್ಲ' ಎಂದು ಇದೀಗ ನಟ ಶಿವರಾಜ್‌ಕುಮಾರ್ ಅವರು ಹೇಳಿದ್ದಾರೆ..

Read Full Story

07:56 PM (IST) May 31

ಆರ್‌ಸಿಬಿ ರೂಪಂ, ಶಿವಂ ಶಿವಂ, ಫೈನಲ್ ಪಂದ್ಯಕ್ಕೂ ಅಭಿಮಾನಿ ರಚಿಸಿದ ಹಾಡು ವೈರಲ್

ಆರ್‌ಸಿಬಿ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿಗೆ ಶುಭ ಹಾರೈಕೆಯ ಸಂದೇಶಗಳು ಹರಿದಾಡಿತ್ತು. ಇದೀಗ ಆರ್‌ಸಿಬಿ ಅಭಿಮಾನಿ ರಚಿಸಿದ ಆರ್‌ಸಿಬಿ ರೂಪಂ, ಶಿವಂ, ಶಿವಂ ಹಾಡು ಭಾರಿ ವೈರಲ್ ಆಗಿದೆ.

Read Full Story

07:51 PM (IST) May 31

ಮುಕ್ತಿ ವಿವಿ ಕಾರ್ಯಕ್ರಮ ವೇಳೆ ಯಡವಟ್ಟು; ಕೈಕೊಟ್ಟ ಲಿಫ್ಟ್, ರಾಜ್ಯಪಾಲರು ಪರದಾಟ!

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಪಾಲರು ಲಿಫ್ಟ್‌ನಲ್ಲಿ ಸಿಲುಕಿಕೊಂಡರು. ಓವರ್‌ಲೋಡ್ ಆದ ಲಿಫ್ಟ್‌ನಿಂದಾಗಿ ಈ ಘಟನೆ ಸಂಭವಿಸಿದ್ದು, ಭದ್ರತಾ ಲೋಪದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

07:30 PM (IST) May 31

ಐಪಿಎಲ್ 2025 - ಅತಿಹೆಚ್ಚು ಬೌಂಡರಿ ಬಾರಿಸಿದ ಟಾಪ್ 5 ಬ್ಯಾಟರ್‌ಗಳಿವರು!

ಐಪಿಎಲ್ 2025ರಲ್ಲಿ ಯಾರು ಜಾಸ್ತಿ ಫೋರ್‌ಗಳು ಹೊಡೆದಿದ್ದಾರೆ? ಟಾಪ್  5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಇಲ್ಲಿದೆ. ಸಾಯಿ ಸುದರ್ಶನ್‌ನಿಂದ ಯಶಸ್ವಿ ಜೈಸ್ವಾಲ್‌ವರೆಗೆ, ಯಾರು ಮೇಲುಗೈ ಸಾಧಿಸಿದ್ದಾರೆಂದು ತಿಳಿಯಿರಿ.

Read Full Story

06:47 PM (IST) May 31

ತಮಿಳಿನಿಂದ ಕನ್ನಡ ಹುಟ್ಟಿದ್ರೆ ಸರಿ, ಅವಮಾನ ಹೇಗಾಗುತ್ತೆ? ಕಮಲ್ ಹಾಸನ್ ಬೆಂಬಲಕ್ಕೆ ನಿಂತ ನಟ ಕಿಶೋರ್!

ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಹುಟ್ಟಿನ ಕುರಿತ ಹೇಳಿಕೆಯನ್ನು ನಟ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ. ಭಾಷೆಯನ್ನು ಭಾವುಕವಾಗಿ ನೋಡಬಾರದು ಮತ್ತು ಭಾಷೆಗಳ ಮೇಲು-ಕೀಳು ಎಂಬುದಿಲ್ಲ ಎಂದು ಅವರು ಹೇಳಿದ್ದಾರೆ. 

Read Full Story

06:47 PM (IST) May 31

ಭಾರೀ ಸೆಟ್‌ ಹಾಕಿ ಪೃಥ್ವಿರಾಜ್ ಚೌಹಾಣ್ ಅವರ ಸಿರೀಸ್ ಶೂಟಿಂಗ್; ಸ್ವರ್ಗವೇ ಧರೆಗಿಳಿದು ಬಂದಂತೆ!

ಸೋನಿ ಟಿವಿಯಲ್ಲಿ ಬಿಡುಗಡೆಯಾಗಲಿರುವ ಐತಿಹಾಸಿಕ ಧಾರಾವಾಹಿ 'ಚಕ್ರವರ್ತಿ ಸಮ್ರಾಟ್ ಪೃಥ್ವಿರಾಜ್ ಚೌಹಾಣ್' ತನ್ನ ಅದ್ದೂರಿ ಮತ್ತು ನೈಜ ಸೆಟ್‌ಗಾಗಿ ಸುದ್ದಿಯಲ್ಲಿದೆ. ಈ ಸರಣಿಗಾಗಿ 10 ಎಕರೆ ವಿಸ್ತಾರದಲ್ಲಿ ವಿನ್ಯಾಸಗೊಳಿಸಲಾದ ಸೆಟ್ ಅನ್ನು ನಿರ್ಮಿಸಲಾಗಿದೆ.
Read Full Story

06:41 PM (IST) May 31

ಕರ್ನಾಟಕದಲ್ಲಿ ತಂಬಾಕು ರೂಲ್ಸ್ ಕಠಿಣ, ಕಾನೂನುಬದ್ಧ ವಯಸ್ಸು ಈಗ 18 ಅಲ್ಲ, ದಂಡ ಏರಿಕೆ

ಕರ್ನಾಟಕದಲ್ಲಿ ತಂಬಾಕು ನಿಯಮ ಮತ್ತಷ್ಟು ಕಠಿಣಗೊಂಡಿದೆ. ಇದೀಗ ತಂಬಾಕು ಖರೀದಿ ಅಥವಾ ಬಳಸಲು ಕಾನೂನುಬದ್ಧ ವಯಸ್ಸು 18 ಅಲ್ಲ. ಜೊತೆಗೆ ಸಾರ್ವಜನಿಕವಾಗಿ ಧೂಮಪಾನ ಮಾಡಿದರೆ ದಂಡ ದುಪ್ಪಟ್ಟಾಗಿದೆ. ಇಷ್ಟೇ ಅಲ್ಲ ಹುಕ್ಕಾ ಬಾರ್‌ಗೂ ಶಾಕ್ ನೀಡಲಾಗಿದೆ.

Read Full Story

06:16 PM (IST) May 31

ಆಟೊ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಅನ್ಯರಾಜ್ಯದ ಯುವತಿ, ಆಗಿದ್ದೇನು?

ಬೆಂಗಳೂರಿನಲ್ಲಿ ಸ್ಕೂಟರ್‌ಗೆ ಆಟೋ ಟಚ್ ಆಯ್ತು ಎಂಬ ಕಾರಣಕ್ಕೆ ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. 

Read Full Story

06:09 PM (IST) May 31

ಮುಂಬೈ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಗುಜರಾತ್ ನಾಯಕ ಶುಭ್‌ಮನ್ ಗಿಲ್!

ಐಪಿಎಲ್ ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಸೋತ ಗುಜರಾತ್ ನಾಯಕ ಶುಭಮನ್ ಗಿಲ್ ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 3 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಸೋಲಿಗೆ ಕಾರಣ ಎಂದಿದ್ದಾರೆ. ರೋಹಿತ್ ಶರ್ಮಾ ಅವರ ಎರಡು ಕ್ಯಾಚ್‌ಗಳನ್ನು ಬಿಟ್ಟಿದ್ದು ಪಂದ್ಯದ ಗತಿಯನ್ನೇ ಬದಲಿಸಿತು.

Read Full Story

05:45 PM (IST) May 31

ಪಿಎಲ್‌ನಲ್ಲಿ ಮಿಂಚಿನ ಫಿಫ್ಟಿ ಬಾರಿಸಿದ ಟಾಪ್ 5 ಬ್ಯಾಟರ್ಸ್‌! RCB ಆಟಗಾರನಿಗೂ ಸ್ಥಾನ

ಐಪಿಎಲ್ 2025 ಈಗ ಫೈನಲ್‌ಗೆ ಹತ್ತಿರವಾಗಿದೆ. ಈ ಸೀಸನ್‌ನಲ್ಲಿ ಬೌಲರ್‌ಗಳ ಬೆವರಿಳಿಸಿದ ಬ್ಯಾಟ್ಸ್‌ಮನ್‌ಗಳು ಅನೇಕರಿದ್ದಾರೆ. ಅತಿ ವೇಗದ ಫಿಫ್ಟಿ ಹೊಡೆದ 5 ಬ್ಯಾಟ್ಸ್‌ಮನ್‌ಗಳ ಬಗ್ಗೆ ತಿಳಿದುಕೊಳ್ಳೋಣ.
Read Full Story

05:37 PM (IST) May 31

ಸಂಗೀತಾ ಮೊಬೈಲ್ಸ್‌ಗೆ 51 ವರ್ಷ,ಅತಿದೊಡ್ಡ ವಾರ್ಷಿಕೋತ್ಸವದ ಸಂಭ್ರಮ ಅನಾವರಣ ಮಾಡಿದ ಮೊಬೈಲ್ ರಿಟೇಲರ್

ವಾರ್ಷಿಕೋತ್ಸವ ಆಚರಣೆಯು ಮೇ 31 ರಂದು ಪ್ರಾರಂಭವಾಗಿ ಜುಲೈ 6 ರವರೆಗೆ ನಡೆಯುತ್ತದೆ, ಮೊಬೈಲ್ ರಿಟೇಲ್‌ ವ್ಯಾಪಾರದಲ್ಲಿ ಅತಿ ದೊಡ್ಡ ಆಚರಣೆಯ ಸದುಪಯೋಗವನ್ನು ಪಡೆಯಲು ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಗ್ರಾಹಕರಿಗೆ ಸಿಗಲಿದ್ದು, ಇದನ್ನು ತಪ್ಪಿಸಿಕೊಳ್ಳಬೇಡಿ!

Read Full Story

05:32 PM (IST) May 31

ಚಾಂಪಿಯನ್ಸ್ ಲೀಗ್ ಫೈನಲ್‌ಗೆ ಪಿಎಸ್‌ಜಿ ಕಮ್‌ಬ್ಯಾಕ್ ಮಾಡಿದ್ದು ಹೇಗೆ?

ಮಧ್ಯಕ್ಷೇತ್ರದ ಪ್ರಾಬಲ್ಯ ಮತ್ತು ಪ್ರಮುಖ ಆಟಗಾರರ ಪ್ರದರ್ಶನದಿಂದ ಪ್ಯಾರಿಸ್ ಸೇಂಟ್-ಜರ್ಮೈನ್‌ನ ಚಾಂಪಿಯನ್ಸ್ ಲೀಗ್ ಅಭಿಯಾನವು ಗಮನಾರ್ಹ ತಿರುವು ಪಡೆದುಕೊಂಡಿದೆ.

Read Full Story

05:25 PM (IST) May 31

D Roopa IPS - ವಿವಾದದ ನಡುವೆಯೂ ಐಜಿಪಿಯಿಂದ ADGP ಆಗಿ ಡಿ.ರೂಪಗೆ ಮುಂಬಡ್ತಿ!

ವಿವಾದಗಳ ನಡುವೆ ಡಿ. ರೂಪ ಐಪಿಎಸ್ ಅವರಿಗೆ ADGP ಆಗಿ ಬಡ್ತಿ ನೀಡಲಾಗಿದೆ. ರೋಹಿಣಿ ಸಿಂಧೂರಿ ಫೋಟೋ ಪ್ರಕರಣ ಸೇರಿದಂತೆ ಹಲವು ವಿವಾದಗಳ ನಂತರ ಬಡ್ತಿ ದೊರಕಿದೆ.
Read Full Story

05:21 PM (IST) May 31

ಇಂಗ್ಲೆಂಡ್‌ನಲ್ಲಿ ಡಬಲ್ ಸೆಂಚುರಿ ಬಾರಿಸಿದ ಕರುಣ್ ನಾಯರ್! ಜುರೆಲ್ ಶತಕ ಜಸ್ಟ್ ಮಿಸ್

ಇಂಗ್ಲೆಂಡ್ ಲಯನ್ಸ್ ವಿರುದ್ಧದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ 204 ರನ್ ಗಳಿಸಿ ಡಬಲ್ ಸೆಂಚುರಿ ಬಾರಿಸಿದ್ದಾರೆ. 7 ವಿಕೆಟ್‌ಗಳ ನಷ್ಟಕ್ಕೆ 494 ರನ್ ಗಳಿಸಿರುವ ಭಾರತ ತಂಡಕ್ಕೆ ನಾಯರ್ ಮತ್ತು ಜುರೆಲ್ (94) ಮಹತ್ವದ ಕೊಡುಗೆ ನೀಡಿದರು.
Read Full Story

04:40 PM (IST) May 31

ಗುಜರಾತ್ ಸೋಲುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ನೆಹ್ರಾ ಪುತ್ರ! ಆದ್ರೆ ಗಿಲ್ ಮುಖದಲ್ಲಿ ಏಕೆ ಮಂದಹಾಸ?

2025ರ IPL ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಅಭಿಯಾನವು ಎಲಿಮಿನೇಟರ್ ಹಂತದಲ್ಲಿ ಮುಕ್ತಾಯಗೊಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಸೋಲಿನ ಬಳಿಕ ಆಶಿಶ್ ನೆಹ್ರಾ ಪುತ್ರ ಬಿಕ್ಕಿಬಿಕ್ಕಿ ಅತ್ತರೆ, ಶುಭ್‌ಮನ್ ಗಿಲ್ ನಗುತ್ತಿದ್ದ ವಿಡಿಯೋ ವೈರಲ್ ಆಗಿದೆ.
Read Full Story

03:45 PM (IST) May 31

ಜೂನ್ 1ರಿಂದ ಈ ಫೋನ್‌ಗಳಲ್ಲಿ ವ್ಯಾಟ್ಸಾಪ್ ವರ್ಕ್ ಆಗಲ್ಲ, ನಿಮ್ಮ ಸ್ಮಾರ್ಟ್‌ಫೋನ್ ಇದೆಯಾ?

ಜೂನ್ 1ರಿಂದ ಕೆಲ ಅಪ್‌ಡೇಟ್ ನಿಮಗೆ ಸಮಸ್ಯೆ ತಂದಿಡಬಹುದು. ಈ ಪೈಕಿ ವ್ಯಾಟ್ಸಾಪ್ ಅಪ್‌ಡೇಟ್ ಕೂಡ ಒಂದು. ಜೂನ್ 1 ರಿಂದ ಕೆಲ ಆ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಯಾವೆಲ್ಲಾ ಫೋನ್‌ಗಳಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. 

Read Full Story

03:18 PM (IST) May 31

ಮಲಯಾಳಂನ ಈ ಸ್ಟಾರ್ ನಟನ ಕಾರ್ ನಂ 1122 ಹಿಂದೆ ಇದೆ ಇಂಟ್ರೆಸ್ಟಿಂಗ್ ಸ್ಟೋರಿ

ನಟ ಜಯಸೂರ್ಯ ಪ್ರಸ್ತುತ ಬಳಸುತ್ತಿರುವ ಮರ್ಸಿಡಿಸ್-ಬೆನ್ಜ್ ಬಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಎಫ್ ಕಾರುಗಳ ನೋಂದಣಿ ಸಂಖ್ಯೆ 1122. ಈ ನಂಬರ್ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ.

Read Full Story

02:52 PM (IST) May 31

ಇದೇ ತಂಡ ಈ ಸಲ ಐಪಿಎಲ್ ಕಪ್ ಗೆಲ್ಲುತ್ತೆ - ಭವಿಷ್ಯ ನುಡಿದ ಸುನಿಲ್ ಗವಾಸ್ಕರ್!

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇನ್ನು ಕೇವಲ ಎರಡು ಪಂದ್ಯಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತದ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಏನದು ನೀವೇ ನೋಡಿ.

Read Full Story

02:28 PM (IST) May 31

ಹೇಮಾವತಿ ಲಿಂಕ್‌ ಕೆನಾಲ್‌ ವಿರೋಧಿಸಿ ತುಮಕೂರಲ್ಲಿ ಭಾರೀ ಪ್ರತಿಭಟನೆ, ಹಲವರು ವಶಕ್ಕೆ

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ತುಮಕೂರಿನಲ್ಲಿ ರೈತರು ಮತ್ತು ಜನಪ್ರತಿನಿಧಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಸುಂಕಾಪುರ ನಾಲೆಯ ಸುತ್ತಮುತ್ತ ಸೆಕ್ಷನ್ 144 ಜಾರಿಯಿದ್ದರೂ ಪ್ರತಿಭಟನೆ ಮುಂದುವರೆದಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

01:09 PM (IST) May 31

ಗ್ಯಾರಂಟಿ ಫಲಾನುಭವಿಗಳಿಗೆ ಇಲ್ಲ ಹಣ, ಕೈ ಕಾರ್ಯಕರ್ತರಿಗೆ ಅಡ್ವಾನ್ಸ್‌ ಆಗಿ ಸರ್ಕಾರದ ಖಜಾನೆ ತೆರೆದ ಸರ್ಕಾರ!

ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಪೂರೈಸದೆ, ಫಲಾನುಭವಿಗಳಿಗೆ ಹಣ ತಲುಪದೆ ಇದ್ದರೂ, ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾರ್ಯಕರ್ತರಿಗೆ 7.65 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣವನ್ನು ಸಭಾ ಭತ್ಯೆ, ಗೌರವಧನ ಮುಂತಾದವುಗಳಿಗೆ ಬಳಸಲಾಗುವುದು ಎಂದು ಹೇಳಲಾಗಿದೆ.
Read Full Story

12:44 PM (IST) May 31

ಆಪರೇಷನ್‌ ಸಿಂದೂರ್‌ ವೇಳೆ ಪಾಕಿಸ್ತಾನಿ 3 ಪೋಸ್ಟ್‌ ಧ್ವಂಸ ಮಾಡಿದ ಬಿಎಸ್‌ಎಫ್‌ನ ನೇಹಾ ಭಂಡಾರಿಗೆ ಸೇನೆಯ ಗೌರವ!

ಆಪರೇಷನ್ ಸಿಂಧೂರ್ ಸಮಯದಲ್ಲಿ, ಬಿಎಸ್‌ಎಫ್‌ ಸಹಾಯಕ ಕಮಾಂಡೆಂಟ್ ನೇಹಾ ಭಂಡಾರಿ ತಮ್ಮ ಪಡೆಗಳನ್ನು ಮುನ್ನಡೆಸಿ ಶೂನ್ಯ ರೇಖೆಯಾದ್ಯಂತ ಮೂರು ಫಾರ್ವರ್ಡ್‌ ಶತ್ರು ಪೋಸ್ಟ್‌ಗಳನ್ನು ಧ್ವಂಸ ಮಾಡಿದ್ದರು.

Read Full Story

12:17 PM (IST) May 31

ವಿರಾಟ್ ಕೊಹ್ಲಿ 14 ವರ್ಷದ ಹಿಂದೆ ಶಪಥ ಮಾಡಿದ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ವೈರಲ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023ರ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ 14 ವರ್ಷಗಳ ಹಿಂದೆ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಕೊಹ್ಲಿ ಮಂಗಳವಾರದಂದು ನಡೆಯಲಿರುವ ಪಂದ್ಯವನ್ನು 'ಬಿಗ್ ಗೇಮ್' ಎಂದು ಬಣ್ಣಿಸಿದ್ದರು.
Read Full Story

12:14 PM (IST) May 31

ಎಸಿ, ಡಿಸಿ ಕೋರ್ಟ್‌ಗಳಲ್ಲಿ 5 ವರ್ಷಕ್ಕಿಂತ ಹಳೆಯ ಕೇಸ್ ಇರುವುದು ಅಕ್ಷಮ್ಯ - ಸಿಎಂ ಸಿದ್ದರಾಮಯ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ 2-3 ಜಿಲ್ಲೆಗಳಲ್ಲಿನ ಎಸಿ, ಡಿಸಿ ಹಾಗೂ ತಹಸೀಲ್ದಾರ್‌ ನ್ಯಾಯಾಲಯಗಳಲ್ಲಿ 5 ವರ್ಷಕ್ಕಿಂತ ಹಳೆಯ ಪ್ರಕರಣ ಬಾಕಿ ಇರುವುದು ಅಕ್ಷಮ್ಯ.

Read Full Story

11:49 AM (IST) May 31

ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಮೇಲೆ ಹತ್ತಿ ಕುಳಿತು, ಬಾಯಿಗೆ ಬೀಡಿ ಇಟ್ಟು ಕಿಡಿಗೇಡಿಯ ಅವಮಾನ!

ಮೈಸೂರಿನ ಕೆಆರ್‌ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ಕಿಡಿಗೇಡಿಯೊಬ್ಬ ಏರಿ ಕುಳಿತು ಅವಮಾನ ಮಾಡಿರುವ ಘಟನೆ ನಡೆದಿದೆ. ಪ್ರತಿಮೆಗೆ ಹಾನಿಯಾಗುವುದನ್ನು ಲೆಕ್ಕಿಸದೆ ಪುಂಡಾಟಿಕೆ ಮೆರೆದಿರುವ ವಿಡಿಯೋ ವೈರಲ್ ಆಗಿದೆ. 

Read Full Story

11:35 AM (IST) May 31

ಬೆಂಗಳೂರು ಅಭಿವೃದ್ಧಿಗೆ ₹1 ಲಕ್ಷ ಕೋಟಿ - ಡಿ.ಕೆ.ಶಿವಕುಮಾರ್‌

ಬೆಂಗಳೂರು ಯೋಜಿತ ನಗರವಲ್ಲ. ಆದರೂ ನಾವು ಇದನ್ನು ಪ್ರಗತಿಯತ್ತ ಮುನ್ನಡೆಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

Read Full Story

11:07 AM (IST) May 31

ಚೀನಾದ ಫೈಟರ್‌ ಜೆಟ್‌ಗಳಿಗೆ ಶುರು ಚಳಿ, ಹೈ ಟೆಕ್‌ ರಾಡಾರ್‌ ಸಿಸ್ಟಮ್‌ ಅಭಿವೃದ್ಧಿ ಮಾಡಿದ ಬೆಂಗಳೂರು ಕಂಪನಿ!

ಭಾರತ ದೇಶೀಯವಾಗಿ ಸೂರ್ಯ ವೆರಿ ಹೈ ಫ್ರೀಕ್ವೆನ್ಸಿ (VHF) ರಾಡಾರ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ರಾಡಾರ್‌ನಿಂದ ಚೀನಾದ ಪ್ರಬಲ ಯುದ್ಧ ವಿಮಾನಗಳೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

Read Full Story

11:04 AM (IST) May 31

ಪ್ರೊ ಕಬಡ್ಡಿ ಹರಾಜು - ₹30 ಲಕ್ಷ ಮೂಲಬೆಲೆ ನಿಗದಿ; ಯಾರಿಗೆ ಜಾಕ್‌ಪಾಟ್?

ಮುಂಬೈನಲ್ಲಿ ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. 500 ಕ್ಕೂ ಹೆಚ್ಚು ಆಟಗಾರರು ಭಾಗವಹಿಸಲಿದ್ದು, 'ಎ' ವಿಭಾಗದ ಆಟಗಾರರಿಗೆ ₹30 ಲಕ್ಷ ಮೂಲಬೆಲೆ ನಿಗದಿಪಡಿಸಲಾಗಿದೆ.
Read Full Story

11:03 AM (IST) May 31

ಎಚ್‌ಎಂಟಿ ಅರಣ್ಯ ಡಿನೋಟಿಫಿಕೇಷನ್‌ಗೆ ಮುಂದಾಗಿದ್ದವರ ಮೇಲೆ ಕ್ರಮಕ್ಕೆ ಶಿಫಾರಸು - ಸಚಿವ ಈಶ್ವರ್‌ ಖಂಡ್ರೆ

ಅಧಿಕಾರಿಗಳಿಗೆ ಈಗಾಗಲೇ ನೋಟಿಸ್‌ ಜಾರಿ ಮಾಡಲಾಗಿದ್ದು, ಇದೀಗ ಅವರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

Read Full Story

10:19 AM (IST) May 31

ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವಂತೆ ಸಚಿವ ದಿನೇಶ್‌ಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಗೋಡೆ ಕುಸಿತ ಉಂಟಾಗಿ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ ಹಾಗೂ ಜಿಲ್ಲಾಧಿಕಾರಿ ಅವರಿಗೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

Read Full Story

10:08 AM (IST) May 31

ಸ್ಪೆಲ್ಲಿಂಗ್ ಬಿ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಫೈಜಾನ್ ಝಾಕಿಗೆ ಜಯ, ಎಕ್ಲೇರ್ಸಿಸ್ಮಾಂಟ್‌ ಸ್ಪೆಲ್ಲಿಂಗ್‌ ನಿಮಗೆ ಗೊತ್ತಾ?

100ನೇ ಸ್ಕಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಫೈಜಾನ್ ಝಾಕಿ 'eclaircissement' ಪದದ ಸರಿಯಾದ ಸ್ಪೆಲ್ಲಿಂಗ್ ಹೇಳಿ ವಿಜೇತರಾಗಿದ್ದಾರೆ. 42 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಹಲವು ಬಹುಮಾನಗಳನ್ನು ಪಡೆದಿದ್ದಾರೆ.

Read Full Story

09:52 AM (IST) May 31

ಎಂಎಸ್‌ಎಂಇಗೆ ಪ್ರತ್ಯೇಕ ಸಚಿವಾಲಯ, ಅಭಿವೃದ್ಧಿಗೂ ರಾಜ್ಯ ಸರ್ಕಾರ ಬದ್ಧ - ಡಿಕೆಶಿ

ಎಂಎಸ್‌ಎಂಇ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ನೀಡುವುದಾಗಿ ಮುಖ್ಯಮಂತ್ರಿಗಳು ಈಗಾಗಲೇ ಭರವಸೆಯನ್ನೂ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

Read Full Story

More Trending News