Published : Sep 30, 2025, 06:42 AM ISTUpdated : Sep 30, 2025, 11:45 PM IST

Karnataka News Live: BBK 12 - ಕಷ್ಟವೋ-ಸುಖವೋ ಗಂಡನ ಜೊತೆ ಬಾಳು ಎಂದ ಮಲ್ಲಮ್ಮ; ಡಿವೋರ್ಸ್‌ಗೆ ಅಸಲಿ ಕಾರಣ ಬಿಚ್ಚಿಟ್ಟ ಜಾಹ್ನವಿ

ಸಾರಾಂಶ

ಬೆಂಗಳೂರು: ನೀವು ಯಾವ ರೀತಿ ಆಟ ಆಡುತ್ತಿದ್ದೀರಾ ಅಂತ ಗೊತ್ತಿದೆ. ಎಲ್ಲದಕ್ಕೂ ದೇವರು ತಕ್ಕ ಉತ್ತರ ಕೊಟ್ಟೆ ಕೊಡುತ್ತಾನೆ. ನೀವು ಮುಂದೆ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಬಿಲ್ಲುಕೆಂಪನಹಳ್ಳಿಯಲ್ಲಿ ಒಬ್ಬ ವ್ಯಕ್ತಿಯ ಭೂಮಿ ಲಪಟಾಯಿಸಿ ಬಿಲ್ಡಿಂಗ್ ಕಟ್ಟಿಕೊಂಡರು. ನಿವೃತ್ತ ಯೋಧನ ಜಮೀನು ಕಬಳಿಸಿದರು. ಅವರಿಗೆ ದೇವೇಗೌಡರು ಹಾಗೂ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು. ನಾನು ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಮಾಡಿರಲಿಲ್ಲ. ಆಗ ರೈತರು ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಯಾವ ರೈತರಿಗೂ ಅನ್ಯಾಯ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

anchor jhanvi bigg boss

11:45 PM (IST) Sep 30

BBK 12 - ಕಷ್ಟವೋ-ಸುಖವೋ ಗಂಡನ ಜೊತೆ ಬಾಳು ಎಂದ ಮಲ್ಲಮ್ಮ; ಡಿವೋರ್ಸ್‌ಗೆ ಅಸಲಿ ಕಾರಣ ಬಿಚ್ಚಿಟ್ಟ ಜಾಹ್ನವಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಿರೂಪಕಿ, ನಟಿ ಜಾಹ್ನವಿ ಅವರು 12 ವರ್ಷ ಸಂಸಾರ ಮಾಡಿ ಯಾಕೆ ಡಿವೋರ್ಸ್‌ ಕೊಟ್ಟರು ಎಂದು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ, ಹಾಗಾದರೆ ಅಸಲಿ ಕಾರಣ ಏನು? 

Read Full Story

11:23 PM (IST) Sep 30

Amruthadhaare Serial - ಮತ್ತೆ ಮನೆ ಖಾಲಿ ಮಾಡಿದ ಭೂಮಿಕಾ; ಗೌತಮ್‌ಗೆ ಹುಡುಕೋಕೆ ಇನ್ನೂ 5 ವರ್ಷ ಬೇಕಾ?

ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ಕಾಲ ಹುಡುಕಾಟದಿಂದ ಕೊನೆಗೂ ಗೌತಮ್‌ಗೆ ಭೂಮಿ ಕಾಣಿಸಿದ್ದಳು. ಈಗ ಮತ್ತೆ ಭೂಮಿ, ಗೌತಮ್‌ನಿಂದ ದೂರ ಆಗಿದ್ದಾಳೆ. ಹೀಗಾದರೆ ಭೂಮಿ-ಗೌತಮ್‌ ಒಂದಾಗೋದು ಕನಸಾಗಿ ಉಳಿಯತ್ತಾ?

 

Read Full Story

11:01 PM (IST) Sep 30

ಬಿಗ್ ಬಾಸ್ ನೋಡೋದ್ರಿಂದ ನಮ್ಗೇನು ಸಿಗ್ತದೆ ದೋಸ್ತಾ ಎಂದ ಧನರಾಜ್‌ಗೆ, ಮುಟ್ಟಿ ನೋಡ್ಕೋಳಂಗೆ ಉತ್ತರ ಕೊಟ್ಟ ಹನುಮಂತ!

ಬಿಗ್ ಬಾಸ್ ಸೀಸನ್ 12 ಆರಂಭವಾಗುತ್ತಿದ್ದಂತೆ, ಮಾಜಿ ಸ್ಪರ್ಧಿಗಳಾದ ಧನರಾಜ್ ಆಚಾರ್ ಮತ್ತು ಹನುಮಂತ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ ಶೋ ನೋಡುವುದರಿಂದ ಏನು ಸಿಗುತ್ತದೆ ಎಂದು ಧನರಾಜ್ ಉಡಾಫೆಯಿಂದ ಕೇಳಿದ್ದಾನೆ. ಇದಕ್ಕೆ  ದೋಸ್ತ ಹನುಮಂತ ಸರಿಯಾಗಿ ತಿರುಗೇಟು ಕೊಟ್ಟಿದ್ದಾನೆ.

Read Full Story

10:36 PM (IST) Sep 30

BBK 12 - ಐದು ಸಾವಿರ ಸೀರೆ, ವಾಚ್‌, ದುಬಾರಿ ಕಾರ್‌ ಕಲೆಕ್ಷನ್‌; ಅಶ್ವಿನಿ ಗೌಡ ಹಿನ್ನಲೆ ಗೊತ್ತಾ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರು ಭಾಗಿಯಾಗಿದ್ದಾರೆ. 25 ಧಾರಾವಾಹಿ, 100 ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ, ಕನ್ನಡಪರ ಹೋರಾಟಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಇವರ ಮನೆ, ಸೀರೆ ಕಲೆಕ್ಷನ್‌, ವಾಚ್‌ ಕಲೆಕ್ಷನ್‌ ಮುಂತಾದ ವಿಷಯಗಳ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ.

 

Read Full Story

10:32 PM (IST) Sep 30

ಗಂಡನ ಜೊತೆ ಕರಾವಳಿಯ ದೇವಸ್ಥಾನಗಳಿಗೆ ವೈಷ್ಣವಿ ಗೌಡ ಭೇಟಿ, ವಿಶೇಷ ಏನಾದ್ರೂ ಉಂಟಾ?

Actress Vaishnavi Gowda Watches Huli Dance in Mangaluru ನಟಿ ವೈಷ್ಣವಿ ಗೌಡ ತಮ್ಮ ಪತಿ ಅನುಕೂಲ್‌ ಮಿಶ್ರಾ ಅವರೊಂದಿಗೆ ಮಂಗಳೂರಿಗೆ ಭೇಟಿ ನೀಡಿ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Read Full Story

10:25 PM (IST) Sep 30

ವೇದಿಕೆಗಳ ಮೇಲೆ ಹುಡುಗಿಯರ ಗಾಳ ಹಾಕೋ ಗಿಲ್ಲಿ ನಟಂಗೆ ಮದ್ವೆ ಯಾವಾಗ? ಕೊನೆಗೂ ಬಾಯ್ಬಿಟ್ಟ ನಟ

ಕಾಮಿಡಿ ಗಿಲ್ಲಿಗಿಲ್ಲಿ ಖ್ಯಾತಿಯ ನಟರಾಜ್ ಅಲಿಯಾಸ್ ಗಿಲ್ಲಿ ನಟ, ತಮ್ಮ ಮದುವೆಯ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಸದ್ಯಕ್ಕೆ ಮದುವೆ ಯೋಚನೆ ಇಲ್ಲವೆಂದಿರುವ ಅವರು, ಸಾಕಷ್ಟು ಸಂಪಾದನೆ ಮಾಡಿದ ನಂತರವೇ ಸಂಸಾರದ ಬಗ್ಗೆ ಯೋಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
Read Full Story

09:57 PM (IST) Sep 30

ಸುದೀಪ್​ ಸರ್​ನ ನೋಡಿ ತುಂಬಾ ಬೇಜಾರ್​ ಆಯ್ತು - ಸಿಕ್ಕಾಪಟ್ಟೆ ಫೀಲ್​ ಮಾಡಿಕೊಂಡಿದ್ಯಾಕೆ ಈ ಯುವತಿಯರು ಕೇಳಿ!

ಬಿಗ್​ಬಾಸ್​ 12ರಲ್ಲಿ ಕಿಚ್ಚ ಸುದೀಪ್​ ಅವರ ಹೊಸ ಕರ್ಲಿ ಹೇರ್​ಸ್ಟೈಲ್​ ಚರ್ಚೆಯಲ್ಲಿದೆ. ಇದು ಅವರ ಮುಂಬರುವ ಸಿನಿಮಾದ ಗೆಟಪ್ ಆಗಿದ್ದು, ಈ ಹೊಸ ಶೈಲಿಯು ಕೆಲವು ಯುವತಿಯರಿಗೆ ನಿರಾಸೆ ಮೂಡಿಸಿದೆ ಮತ್ತು ಅವರು ತಮ್ಮ ಹಿಂದಿನ ಕೇಶವಿನ್ಯಾಸವನ್ನೇ ಇಷ್ಟಪಟ್ಟಿದ್ದಾಗಿ ಹೇಳಿದ್ದಾರೆ.
Read Full Story

09:26 PM (IST) Sep 30

ಬೆಂಗಳೂರು ನಿರ್ಮಾಣ ಹಂತದ ಕಟ್ಟಡದ ಬುನಾದಿ ಕುಸಿತ; ಮಣ್ಣಿನಡಿ ಸಿಲುಕಿದ ಕಾರ್ಮಿಕರು ಜೀವಂತ ಸಮಾಧಿ!

ಬೆಂಗಳೂರು ಮಡಿವಾಳದಲ್ಲಿ ಕಟ್ಟಡ ನಿರ್ಮಾಣದ ವೇಳೆ ಅಡಿಪಾಯಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಮಣ್ಣು ಕುಸಿದು ಭಾರಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಜಾರ್ಖಂಡ್ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read Full Story

09:09 PM (IST) Sep 30

ಹುಬ್ಬಳ್ಳಿ ಯುವತಿಯರ ಒಳ ಉಡುಪು ಕದಿಯುತ್ತಿದ್ದ ಕಾರ್ತಿಕ್ ಬೇಜವಾಡಿ ಬಂಧನ; ಸೈಕೋ ಕಳ್ಳನ ವರ್ತನೆ ಇನ್ನೂ ವಿಚಿತ್ರ!

ಹುಬ್ಬಳ್ಳಿಯಲ್ಲಿ ಮಹಿಳೆಯರು ಮತ್ತು ಯುವತಿಯರ ಒಳ ಉಡುಪುಗಳನ್ನು ಕದ್ದು ಆತಂಕ ಸೃಷ್ಟಿಸಿದ್ದ ಕಾರ್ತಿಕ್ ಬೇಜವಾಡ ಎಂಬ ಸೈಕೋ ಕಳ್ಳನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ. ಈತನ ವಿಲಕ್ಷಣ ವರ್ತನೆಯ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Read Full Story

09:05 PM (IST) Sep 30

ಜಗತ್ತಿನ 8ನೇ ಅದ್ಭುತ ದಾಖಲೆ ಬರೆದ Brahmagantu Serial! ಮಹಿಳೆಯರಿಂದ ಭಾರಿ ಡಿಮಾಂಡ್‌

ಬ್ರಹ್ಮಗಂಟು ಸೀರಿಯಲ್‌ನಲ್ಲಿ ದೀಪಾ ಈಗ ದಿಶಾ ಆಗಿ ಸಂಪೂರ್ಣ ಬದಲಾಗಿದ್ದು, ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಆದರೆ, ಒಂದೇ ವಾರದಲ್ಲಿ ಇಂಗ್ಲಿಷ್ ಕಲಿತಿದ್ದು ಮತ್ತು ಗಂಡನಿಗೇ ಗುರುತು ಸಿಗದಿರುವುದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿ, ಇದೊಂದು ಜಗತ್ತಿನ 8ನೇ ಅದ್ಭುತ ಎಂದು ಟ್ರೋಲ್ ಮಾಡುತ್ತಿದ್ದಾರೆ.

Read Full Story

08:53 PM (IST) Sep 30

ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ ಅಮೆರಿಕದ ಚಿನ್ನ, ಭಾರತದಲ್ಲಿನ್ನು ಚಿನ್ನ ಖರೀದಿ ಕನಸಷ್ಟೇ!

ಅಮೆರಿಕದ ಚಿನ್ನದ ಮೀಸಲು ನಿಧಿಯ ಮೌಲ್ಯವು ಇತಿಹಾಸದಲ್ಲೇ ಮೊದಲ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ್ದು, ಜಾಗತಿಕ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬೆಳವಣಿಗೆಯು ಚಿನ್ನದ ಪ್ರಮುಖ ಆಮದುದಾರ ದೇಶವಾದ ಭಾರತದ ಮೇಲೆ ನೇರ ಪರಿಣಾಮ ಬೀರಲಿದೆ.

Read Full Story

08:30 PM (IST) Sep 30

ಬೆಂಗಳೂರು ಮದರಸಾಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ; ಅ.4ರೊಳಗೆ ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ನಿರ್ದೇಶನಾಲಯವು 2025-26ನೇ ಶೈಕ್ಷಣಿಕ ಸಾಲಿಗೆ ಬೆಂಗಳೂರು ನಗರ ಜಿಲ್ಲೆಯ ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ಬೋಧಿಸಲು ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅ.04, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Read Full Story

07:54 PM (IST) Sep 30

ಕೋಮು ಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ರಾಜ್ಯ ಸರ್ಕಾರದಿಂದ ಸಿಗಲಿದೆ 5 ಲಕ್ಷ ಪರಿಹಾರ

KMDC Santhwana Scheme  ಈ ಯೋಜನೆಯಡಿ, ಕಾನೂನುಬಾಹಿರ ಘಟನೆಗಳು ಅಥವಾ ನೈಸರ್ಗಿಕ ವಿಕೋಪಗಳಿಂದ ಆಸ್ತಿಪಾಸ್ತಿ ಕಳೆದುಕೊಂಡ ಅಲ್ಪಸಂಖ್ಯಾತ ಸಮುದಾಯದವರಿಗೆ ಮನೆ ಅಥವಾ ಅಂಗಡಿ ಪುನರ್ನಿರ್ಮಾಣಕ್ಕಾಗಿ ₹5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. 

Read Full Story

07:42 PM (IST) Sep 30

ಋತುಮತಿಯೊಂದಿಗೆ ಫಸ್ಟ್ ಟೈಂ ಸೆಕ್ಸ್‌ಗೆ ₹20 ಲಕ್ಷ ಡಿಮ್ಯಾಂಡ್ ಕೇಸ್; ಪೋಷಕರ ಹುಡುಕಾಟದ್ದೇ ದೊಡ್ಡ ಸವಾಲು!

ಬೆಂಗಳೂರಿನಲ್ಲಿ 6ನೇ ತರಗತಿ ವಿದ್ಯಾರ್ಥಿನಿಯನ್ನು ವಾಟ್ಸಾಪ್ ಗ್ರೂಪ್ ಮೂಲಕ ಮಾರಾಟಕ್ಕಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಮೂಢನಂಬಿಕೆಯ ಹೆಸರಿನಲ್ಲಿ 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಈ ಜಾಲದ ಹಿಂದಿನ ದೊಡ್ಡ ಮಾಫಿಯಾದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Read Full Story

07:33 PM (IST) Sep 30

ರೇಪಿಸ್ಟ್‌ ಉಮೇಶ್‌ ರೆಡ್ಡಿಗೆ ಜೈಲಲ್ಲಿ ಏನೆಲ್ಲಾ ಸೌಲಭ್ಯ ನೀಡ್ತಿದ್ದೀರಿ ಅಂತಾ ಗೊತ್ತಿದೆ - ಕೋರ್ಟ್‌ನಲ್ಲಿ ಹೇಳಿದ ದರ್ಶನ್‌ ಪರ ವಕೀಲ

Darshan Lawyer Cites Rapist Umesh Reddy Privileges ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ಅವರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

Read Full Story

05:43 PM (IST) Sep 30

ಬಿಗ್ ಬಾಸ್ ಜಂಟಿಗಳು ಮಾಡಿದ ತಪ್ಪಿಗೆ ಒಬ್ಬಂಟಿಗಳಿಗೆ ಶಿಕ್ಷೆ; ಕಾವ್ಯಾ ಮಾತು ಕೇಳದೇ ಕುಣಿದಾಡಿದ ಗಿಲ್ಲಿನಟ!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ, ಜಂಟಿಗಳು ನಿಯಮ ಮುರಿದಿದ್ದಕ್ಕೆ ಮೇಲ್ವಿಚಾರಕರಾದ ಒಂಟಿಗಳಿಗೆ ಶಿಕ್ಷೆ ನೀಡಲಾಗಿದೆ. ಒಂಟಿಗಳು ಗೆದ್ದಿದ್ದ ದಿನಸಿ ಸಾಮಾಗ್ರಿ ವಾಪಸ್ ಪಡೆದಿದ್ದು, ಇದು ಅವರನ್ನು ಉಪವಾಸಕ್ಕೆ ತಳ್ಳಿದೆ. ಈ ಶಿಕ್ಷೆಗೆ ಜಂಟಿ ಸದಸ್ಯ ಗಿಲ್ಲಿನಟ ಸಂಭ್ರಮಿಸಿದ್ದು ಚರ್ಚೆಗೆ ಕಾರಣವಾಗಿದೆ.

Read Full Story

05:35 PM (IST) Sep 30

ಜೈಲಿನಲ್ಲಿ ದರ್ಶನ್‌ ಪಲ್ಲಂಗ ಕೇಳಿದ್ರೆ ಅದನ್ನ ಕೊಡೋಕಾಗಲ್ಲ - ಕೋರ್ಟ್‌ನಲ್ಲಿ ಎಸ್‌ಎಸ್‌ಪಿ ಭರ್ಜರಿ ವಾದ

Darshan Thoogudeepa jail facilities ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌, ತಮಗೆ ಸೂಕ್ತ ಸೌಲಭ್ಯ ನೀಡುತ್ತಿಲ್ಲವೆಂದು ಆರೋಪಿಸಿದ್ದಾರೆ. ಈ ಸಂಬಂಧ ನಡೆದ ಕೋರ್ಟ್ ವಿಚಾರಣೆಯಲ್ಲಿ, ಜೈಲು ಅಧಿಕಾರಿಗಳು ನಿಯಮ ಪಾಲಿಸುತ್ತಿರುವುದಾಗಿ ಹೇಳಿದ್ದಾರೆ.

Read Full Story

05:06 PM (IST) Sep 30

ಕರ್ನಾಟಕ ಹವಾಮಾನ ವರದಿ - ದಸರಾ ಹಬ್ಬದಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ ಎಚ್ಚರಿಕೆ ಕೊಟ್ಟ ಇಲಾಖೆ!

ನೈಋತ್ಯ ಮಾನ್ಸೂನ್ ವಾಪಸ್ಸಾಗುತ್ತಿದ್ದರೂ, ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತದ ಸಾಧ್ಯತೆಯಿದ್ದು, ಅಕ್ಟೋಬರ್ 2ರಂದು ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದೆ.

Read Full Story

04:45 PM (IST) Sep 30

ತೇಜಸ್ವಿ ಸೂರ್ಯ ಹೇಳಿಕೆ ಸಂಪೂರ್ಣವಾಗಿ ವೈಯಕ್ತಿಕ, ಪಕ್ಷದ ಪಾತ್ರವಿಲ್ಲ - ಸುನೀಲ್ ಕುಮಾರ್

ಬಿಜೆಪಿ ನಾಯಕ ಸುನೀಲ್ ಕುಮಾರ್, ರಾಜ್ಯ ಸರ್ಕಾರದ ಜಾತಿ ಸಮೀಕ್ಷೆಯ ಪೂರ್ವ ಸಿದ್ಧತೆ ಇಲ್ಲದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯು ಸಿದ್ದರಾಮಯ್ಯನವರ ರಾಜಕೀಯ ಲಾಭಕ್ಕಾಗಿ ಆಗಿದ್ದು, ಸಮಾಜವನ್ನು ವಿಭಜಿಸುವ ಹುನ್ನಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.  

Read Full Story

03:55 PM (IST) Sep 30

ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆಗೆ ಎರಡು ಪ್ರಶ್ನೆ ಕೇಳಿ ಚಾಟಿ ಬೀಸಿದ ಆರ್ ಅಶೋಕ

ಮಾಜಿ ಡಿಸಿಎಂ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ಪ್ರವಾಹ ನಿರ್ವಹಣಾ ವೈಫಲ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ವೈಮಾನಿಕ ಸಮೀಕ್ಷೆಯನ್ನು ವ್ಯಂಗ್ಯವಾಡಿದ ಅವರು, ಅಕ್ಟೋಬರ್‌ನಲ್ಲೇ ಸರ್ಕಾರದಲ್ಲಿ ಕ್ರಾಂತಿಯಾಗುವ ಮುನ್ಸೂಚನೆ ನೀಡಿದ್ದಾರೆ. 

Read Full Story

03:44 PM (IST) Sep 30

ಬಿಗ್ ಬಾಸ್ ಮನೆಯಲ್ಲಿ 'ಹೋಗೆ ಬಾರೆ' ಎಂದ ಗಿಲ್ಲಿ ನಟನಿಗೆ ಮರ್ಯಾದೆ ಪಾಠ ಮಾಡಿದ ನಟಿ ಅಶ್ವಿನಿ ಗೌಡ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ದಿನವೇ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವೆ ಜಗಳ ಶುರುವಾಗಿದೆ. ತಮಾಷೆ ಮಾತಿನಿಂದ ಆರಂಭವಾದ ವಿವಾದ, ಗಿಲ್ಲಿ ನಟ 'ಹೋಗೆ ಬಾರೆ' ಎಂದು ಏಕವಚನದಲ್ಲಿ ಮಾತನಾಡಿದ್ದರಿಂದ ತಾರಕಕ್ಕೇರಿದೆ. ಅಶ್ವಿನಿ, ಗಿಲ್ಲಿಗೆ ಮರ್ಯಾದೆ ಪಾಠ ಮಾಡಿದ್ದಾರೆ.

Read Full Story

03:43 PM (IST) Sep 30

ಏಷ್ಯಾಕಪ್ ಗೆದ್ರೂ ಟೀಂ ಇಂಡಿಯಾಗೆ ತಪ್ಪಲಿಲ್ಲ ತಲೆನೋವು! ಸೂರ್ಯನಿಗೆ ಫೈನಲ್ ಗ್ರಹಣ

ಏಷ್ಯಾಕಪ್ ಗೆದ್ದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ಚಿಂತೆಯಾಗಿದೆ. ಏಷ್ಯಾಕಪ್ ಫೈನಲ್ ಸೇರಿದಂತೆ ಪ್ರಮುಖ ಫೈನಲ್‌ಗಳಲ್ಲಿ ಸತತವಾಗಿ ವಿಫಲರಾಗುತ್ತಿರುವ ಸೂರ್ಯ, ಈ ಟೂರ್ನಿಯಲ್ಲಿ ಕೇವಲ 72 ರನ್ ಗಳಿಸಿದ್ದಾರೆ.

Read Full Story

03:08 PM (IST) Sep 30

ಋತುಮತಿಯಾದ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕದಿಂದ ಮಾನಸಿಕ ರೋಗ ವಾಸಿ; 12ರ ಬಾಲಕಿ ₹20 ಲಕ್ಷಕ್ಕೆ ಮಾರಾಟ

ಬೆಂಗಳೂರಿನ ವಿಜಯನಗರದಲ್ಲಿ, 12 ವರ್ಷದ ಬಾಲಕಿಯನ್ನು ವಾಟ್ಸಾಪ್ ಗ್ರೂಪ್ ಮೂಲಕ ಮಾರಾಟಕ್ಕಿಟ್ಟಿದ್ದ ಸೆಕ್ಸ್ ಮಾಫಿಯಾ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಮೂಢನಂಬಿಕೆಯನ್ನು ಬಳಸಿ 20 ಲಕ್ಷಕ್ಕೆ ಬಾಲಕಿಯನ್ನು ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಎನ್‌ಜಿಒ ಸಹಾಯದಿಂದ ಮೈಸೂರಿನಲ್ಲಿ ಬಂಧಿಸಲಾಗಿದೆ.

Read Full Story

02:04 PM (IST) Sep 30

ಮೈಸೂರು ಸ್ನೋ ಪಾರ್ಕ್‌ ಅಂಬಾರಿಯ ಆನೆಗೆ 'ಐರಾವತ' ಎಂದು ಹೆಸರಿಟ್ಟ ಕನ್ನಡತಿ ನಟಿ ರಂಜನಿ ರಾಘವನ್

ನಗರದ ಜಿಆರ್.ಎಸ್. ಸ್ನೋ ಪಾರ್ಕ್‌ನಲ್ಲಿರುವ ಸ್ನೋ ಅಂಬಾರಿಯ ಆನೆಗೆ ಐರಾವತ ಎಂದು ನಟಿ ರಂಜನಿ ರಾಘವನ್ ಹೆಸರಿಟ್ಟರು. ಮಾವುತರ ಕುಟುಂಬಗಳಿಂದ ಕಳೆದ ವಾರ ಭವ್ಯವಾಗಿ ಅನಾವರಣಗೊಂಡ ಜನತ್ತಿನ ಮೊದಲ ಸ್ನೋ ಅಂಬಾರಿ ವೀಕ್ಷಿಸಲು ಆಗಮಿಸಿದ್ದರು.

Read Full Story

01:44 PM (IST) Sep 30

ಶೇ.99 ಜಾತಿಗಣತಿ ವರದಿ ಬಿಡುಗಡೆಯಾಗಲ್ಲ - ಕೆ.ಎಸ್.ಈಶ್ವರಪ್ಪ ಭವಿಷ್ಯ

ಜಾತಿ ಗಣತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರ ಮಾಡಲು ಸಿದ್ದರಾಮಯ್ಯ ಸರ್ಕಾರ ಹೊರಟಿದೆ. ಶೇ.99 ರಷ್ಟು ಈ ವರದಿ ಬಿಡುಗಡೆಯಾಗಲ್ಲ. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸಿದ್ದರಾಮಯ್ಯ ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಶ್ಚಿತ ಎಂದು ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

Read Full Story

01:21 PM (IST) Sep 30

ರಾಜ್ಯ ಸರ್ಕಾರದ ಶೇ.80ರಷ್ಟು ಕಮಿಷನ್‌ ಸಾಬೀತು - ಆರ್‌.ಅಶೋಕ್‌ ಆರೋಪ

ರಾಜ್ಯ ಸರ್ಕಾರ ಶೇ.80ರಷ್ಟು ಕಮಿಷನ್‌ ಪಡೆಯುತ್ತಿರುವುದು ಸಾಬೀತಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

Read Full Story

12:49 PM (IST) Sep 30

ರಾಜ್ಯದ 8.60 ಲಕ್ಷ ಹೆಕ್ಟೇರ್‌ ಬೆಳೆ ಅತಿವೃಷ್ಟಿಗೆ ಹಾನಿ - ಸಚಿವ ಕೃಷ್ಣ ಬೈರೇಗೌಡ

ಈವರೆಗೆ 8.60 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯ ಅಂದಾಜು ಮಾಡಲಾಗಿದೆ, ಇನ್ನೂ ಮಳೆ ಮುಂದುವರೆದಿರುವುದರಿಂದ ಭೂಮಿ ಒಣಗಿದ ಬಳಿಕ ಜಿಲ್ಲಾಧಿಕಾರಿಗಳು ಜಂಟಿ ಸಮೀಕ್ಷೆ ಮುಂದುವರೆಸಲಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Read Full Story

12:41 PM (IST) Sep 30

ಕರ್ನಾಟದಲ್ಲಿ ಪ್ರವಾಹ ಹೊಡೆತ - ಸರ್ಕಾರದ ವಿರುದ್ಧ ದೆಹಲಿಯಲ್ಲಿ ಸಿಡಿದೆದ್ದ ಕೇಂದ್ರ ಸಚಿವ ಕುಮಾರಸ್ವಾಮಿ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೀವ್ರವಾಗಿ ಟೀಕಿಸಿದ್ದಾರೆ. ಬೆಳೆ ಹಾನಿ, ಜನರ ಸಂಕಷ್ಟದ ಬಗ್ಗೆ ಗಮನಹರಿಸದೆ, ಜಾತಿ ಗಣತಿಯಂತಹ ವಿಷಯಗಳಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

Read Full Story

12:16 PM (IST) Sep 30

ಕಾಂತಾರ-1 ಚೆನ್ನೈ ಪ್ರೀ ರಿಲೀಸ್‌ ಕಾರ್‍ಯಕ್ರಮ ರದ್ದು - ಹೊಂಬಾಳೆ ಫಿಲಂಸ್‌ ಕೊಟ್ಟ ಕಾರಣವೇನು?

ತಮಿಳುನಾಡಿನ ಕರೂರಿನಲ್ಲಿ ವಿಜಯ್‌ ರಾಜಕೀಯ ರ್‍ಯಾಲಿ ವೇಳೆ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ನಡೆಯಬೇಕಿದ್ದ ‘ಕಾಂತಾರ ಚಾಪ್ಟರ್‌ 1’ ಪ್ರೀ ರಿಲೀಸ್ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

Read Full Story

11:58 AM (IST) Sep 30

ಸಂಪುಟ ಪುನಾರಚನೆ ಸಿಎಂ ವಿವೇಚನೆಗೆ ಬಿಟ್ಟ ವಿಷಯ - ಗೃಹ ಸಚಿವ ಪರಮೇಶ್ವರ್

ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಇದೆಲ್ಲ ನಮ್ಮ ವ್ಯಾಪ್ತಿಗೆ ಬರೋದಿಲ್ಲ, ನಮಗೆ ಗೊತ್ತೇ ಆಗೋದಿಲ್ಲ ಎಂದು ಜಮೀರ್ ಅಹಮದ್ ಹೇಳಿಕೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

Read Full Story

11:19 AM (IST) Sep 30

ನನ್ನ ಅಮ್ಮನ ಕನಸು ನನಸು ಮಾಡಿದ ಸಹೋದರ ರಿಷಬ್ ಶೆಟ್ಟಿ - ಜೂ.ಎನ್‌ಟಿಆರ್‌ ಹೇಳಿದ್ದಿಷ್ಟು...

ರಿಷಬ್‌ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್‌ಮೆಂಟ್‌ಗಳೂ ಅ‍ವರಿಗೆ ಗೊತ್ತು ಎಂದು ಜೂ.ಎನ್‌ಟಿಆರ್‌ ಹೇಳಿದ್ದಾರೆ.

Read Full Story

10:24 AM (IST) Sep 30

ಪ್ರಲ್ಹಾದ್ ಜೋಶಿಗೆ ಬಡವರ ಮಾಹಿತಿ ಬೇಕಾಗಿಲ್ಲ - ಸಚಿವ ಶಿವರಾಜ ತಂಗಡಗಿ ಕಿಡಿ

ಬಡವರು, ಹಿಂದುಳಿದವರ ಸಮೀಕ್ಷೆ ಪ್ರಲ್ಹಾದ್ ಜೋಶಿ ಅವರಿಗೆ ಬೇಕಾಗಿಲ್ಲ. ಈ ಕಾರಣಕ್ಕಾಗಿಯೇ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ.

Read Full Story

08:44 AM (IST) Sep 30

ಬಿಗ್‌ಬಾಸ್ ಮಾತು ಕೇಳಿ ಗಢಗಢ ನಡುಗಿದ ಸ್ಪರ್ಧಿಗಳು - 2ನೇ ದಿನವೇ ಹಿಂಗಾದ್ರೆ ಹೆಂಗೆ?

Bigg Boss Kannada two finales twist: ಈ ಅನಿರೀಕ್ಷಿತ ಟ್ವಿಸ್ಟ್‌ನಿಂದ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದು, ಯಾವಾಗ ಯಾರು ಎಲಿಮಿನೇಟ್ ಆಗುತ್ತಾರೆಂಬ ಭಯದಲ್ಲಿದ್ದಾರೆ. ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಸೀಕ್ರೆಟ್ ರೂಮ್‌ನಲ್ಲಿರುವ ಸಾಧ್ಯತೆಯೂ ಇದೆ.

Read Full Story

08:15 AM (IST) Sep 30

ನೀರಾವರಿ ಯೋಜನೆಗಳಿಂದ ರೈತರ ಬದುಕು ಹಸನು - ಸಚಿವ ಶಿವರಾಜ ತಂಗಡಗಿ

ಏತ ನೀರಾವರಿ ಯೋಜನೆಗಳಿಂದ ಕೊನೆ ಮತ್ತು ಕೆಳ ಭಾಗದ ರೈತರ ಬದುಕು ಹಸನಾಗುತ್ತದೆ ಎಂದು ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Read Full Story

07:56 AM (IST) Sep 30

BBK12 - ಮಲ್ಲಮ್ಮಗೆ ಮಕ್ಕರ್ ಮಾಡೋಕೆ ಹೋಗಿ ಬಕ್ರಾ ಆದ ಗಿಲ್ಲಿ ನಟ

Bigg Boss Kannada: ಕನ್ನಡ ಬಿಗ್‌ಬಾಸ್ 'ಒಂಟಿ ವರ್ಸಸ್ ಜಂಟಿ' ಥೀಮ್‌ನೊಂದಿಗೆ ಆರಂಭವಾಗಿದ್ದು, ಒಂಟಿ ಸ್ಪರ್ಧಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಮೊದಲ ದಿನವೇ, ಬಿಗ್‌ಬಾಸ್ ನಿಯಮ ಮುರಿಯಲು ಯತ್ನಿಸಿದ ಗಿಲ್ಲಿ ನಟ, ಮಲ್ಲಮ್ಮನವರ ಜಾಣತನದಿಂದ ಬಕ್ರಾ ಆದರು. 

Read Full Story

07:31 AM (IST) Sep 30

Today Top News - ಕಾಂತಾರಕ್ಕೆ ಕಂಟಕ, ರಾಹುಲ್‌ಗೆ ಬೆದರಿಕೆ - ಇಂದಿನ ಪ್ರಮುಖ 5 ಟಾಪ್ ನ್ಯೂಸ್

Today’s top 5 news in kannada: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರೆ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದು, ನವೆಂಬರ್ ನಂತರ ಸಂಪುಟ ವಿಸ್ತರಣೆಯಾಗುವ ಸುಳಿವನ್ನು ಸಚಿವ ಜಮೀರ್ ಅಹ್ಮದ್ ನೀಡಿದ್ದಾರೆ. 

Read Full Story

07:24 AM (IST) Sep 30

ಬ್ಯಾಕ್ಟೀರಿಯಾ ಕೊಲ್ಲುವ ವಿಶ್ವದ ಮೊದಲ ಎಐ ವೈರಸ್‌ ಸೃಷ್ಟಿ

ಬ್ಯಾಕ್ಟೀರಿಯಾದಿಂದಾಗಿ ವಿಶ್ವಾದ್ಯಂತ ಹಲವು ಹೊಸಹೊಸ ರೋಗಗಳು ಉದ್ಭವಿಸುತ್ತಿರುವ ಹೊತ್ತಿನಲ್ಲಿ, ಸ್ಟಾನ್‌ಫರ್ಡ್‌ ವಿವಿಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವೈರಸ್‌ಗಳನ್ನು ಸೃಷ್ಟಿಸಿದ್ದಾರೆ.

Read Full Story

06:55 AM (IST) Sep 30

26/11 ಬಳಿಕ ನಾನು ಪ್ರತೀಕಾರ ಬಯಸಿದ್ದೆ, ಮನಮೋಹನ್‌ ಸಿಂಗ್‌ ಒಪ್ಲಿಲ್ಲ - ಚಿದು

2008ರ ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂದು ನನಗೆ ಬಲವಾಗಿ ಅನ್ನಿಸಿತ್ತು. ಈ ಬಗ್ಗೆ ಪ್ರಧಾನಿ ಹಾಗೂ ಸಂಬಂಧಿಸಿದವರ ಬಳಿ ಚರ್ಚಿಸಿದ್ದೆ. ಆದರೆ ಸರ್ಕಾರದ ಹಿರಿಯರು ಒಪ್ಪಿರಲಿಲ್ಲ’ ಎಂದು ಪಿ.ಚಿದಂಬರಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Read Full Story

More Trending News