ಬೆಳಗಾವಿ: ಜಿಲ್ಲೆಯ ವಿವಿಧೆಡೆ ಹಾಗೂ ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಬೆಳಗಾವಿ ಜಿಲ್ಲೆಯ ಕೆಲವೆಡೆ ನೆರೆ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ಸುಮಾರು 80 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೆಳಹಂತದ ಐದು ಸೇತುವೆಗಳು ಜಲಾವೃತವಾಗಿವೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ನಿಪ್ಪಾಣಿ ನಗರ ವ್ಯಾಪ್ತಿಯಲ್ಲಿ ಹಾದು ಹೋಗುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕುಸಿದಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಕೇಂದ್ರ ಸರ್ಕಾರ ಇದನ್ನು 6 ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದ್ದು, ಕಳೆದೆರಡು ವರ್ಷಗಳಿಂದ ಕಾಮಗಾರಿ ಭರದಿಂದ ಸಾಗಿದೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಳ್ಳುವ ಮುನ್ನವೇ ಹೆದ್ದಾರಿ ಕುಸಿದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
11:41 PM (IST) Jul 30
Save Sandalwood: ಕತೆ ಅಥವಾ ಸ್ಕ್ರಿಫ್ಟ್ಗಿಂತ ಹೀರೋ ದೊಡ್ಡವರಲ್ಲ. ಒಬ್ಬ ಕಲಾವಿದ ಅಥವಾ ಕಲಾವಿದೆಗೆ ಬೇರೆ ಬೇರೆ ರೀತಿಯ ಪಾತ್ರಗಳು, ಸನ್ನಿವೇಶಗಳನ್ನು ಬರೆಯುವ ರೈಟರ್ಗಳು ಬರಬೇಕು ಎಂದರು ಪ್ರಜ್ವಲ್ ದೇವರಾಜ್.
11:00 PM (IST) Jul 30
ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ, ವಿರಾಟ್ ಕೊಹ್ಲಿ, ರಹಾನೆ ಅವರ ವೃತ್ತಿಜೀವನವನ್ನು ಶ್ಲಾಘಿಸಿ, ಆ ದಿನಗಳನ್ನು ಮೆಲುಕು ಹಾಕಿ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.
10:49 PM (IST) Jul 30
Rishab Shetty: 'ರಾಮಾಯಣ' ಸಿನಿಮಾದ ಟ್ರೇಲರ್ ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ.
10:39 PM (IST) Jul 30
ಧನ್ವೀರ್ ಹಾಗು ವಿಜಯಲಕ್ಷ್ಮೀ ಇಬ್ಬರೂ ದರ್ಶನ್ಅವರನ್ನ ನೋಡೋಕೆ ಪರಪ್ಪನ ಅಗ್ರಹಾರ ಜೈಲಿಗೆ ಒಟ್ಟಿಗೆ ಹೋಗುತ್ತಿದ್ರು. ದೇವಸ್ಥಾನಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ರು. ಆದ್ರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ವಿಜಯಲಕ್ಷ್ಮೀ ಒಂಬೊಂಟಿಯಾಗಿ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಈಗ ಈ ಮುನಿಸಿಗೆ ಕಾರಣ ಬಹಿರಂಗವಾಗಿದೆ..!
09:35 PM (IST) Jul 30
Yash First Gift: ಮೊದಲು ಸ್ನೇಹ, ನಂತರ ಪ್ರೀತಿ, ಆ ಬಳಿಕ ದಾಂಪತ್ಯ... ಕನ್ನಡ ಚಿತ್ರರಂಗದ ಆದರ್ಶ ಜೋಡಿಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೆಸರು ಸದಾ ಮುಂಚೂಣಿಯಲ್ಲಿರುತ್ತದೆ.
08:51 PM (IST) Jul 30
ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ..
08:45 PM (IST) Jul 30
ರಾಕಿಂಗ್ ಸ್ಟಾರ್ ಯಶ್ ಹಾಗೂ ಖ್ಯಾತ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿಗಳಲ್ಲಿ ಒಂದು. ಈ ಜೋಡಿಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ.
08:22 PM (IST) Jul 30
ಬೆಂಗಳೂರಿನಲ್ಲಿ, ಪ್ರೊಫೆಸರ್ ಆಗಿರುವ ಮಗಳ ಮದುವೆಗೆ 40 ಲಕ್ಷ ಹಾಗೂ ತಿಂಗಳ ಸಂಬಳ ಕೇಳಿದ ತಂದೆ, ಮಗಳು ಒಪ್ಪದಿದ್ದಕ್ಕೆ ಕಾಲೇಜಿನಲ್ಲಿಯೇ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
08:13 PM (IST) Jul 30
Pranaya Raja Srinath: 1968ರ ಕಾಲಘಟ್ಟದ ಈ ಅಪರೂಪದ ಚಿತ್ರದಲ್ಲಿ ಶ್ರೀನಾಥ್ ಅವರೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಪಂಡರಿಬಾಯಿ ಹಾಗೂ ನಿರ್ದೇಶಕ ಎಸ್.ಕೆ.ಎ. ಚಾರಿ ಕಾಣಿಸಿಕೊಂಡಿದ್ದಾರೆ.
06:31 PM (IST) Jul 30
ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆಯ ಸಂಭಾವ್ಯ ಪಟ್ಟಿಯೊಂದು ಲಭ್ಯವಾಗಿದ್ದು, ಇದರಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವಿಸ್ತರಣೆಯಲ್ಲಿ ದಕ್ಷಿಣದ ಬೆಂಗಳೂರು ಹಾಗೂ ಉತ್ತರದ ಬೆಳಗಾವಿ ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಗಳಿವೆ.
06:06 PM (IST) Jul 30
ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಲುಕ್ಗಳು ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.
05:39 PM (IST) Jul 30
Jaggesh AI Photo: 'ನವರಸ ನಾಯಕ' ಜಗ್ಗೇಶ್ ಅವರಿಗೆ ಅಮ್ಮ ಎಂದರೆ ಅಪಾರ ಪ್ರೀತಿ. ತಮ್ಮ ಜೀವನದ ಪ್ರತಿಯೊಂದು ಮಹತ್ವದ ಘಟ್ಟದಲ್ಲೂ ತಾಯಿಯನ್ನು ನೆನಪಿಸಿಕೊಳ್ಳುವ ಅವರು, ಈ ಬಾರಿ ಹಂಚಿಕೊಂಡಿದ್ದಾರೆ.
05:29 PM (IST) Jul 30
'ತಮಿಳುನಾಡು ಸಿಎಂ ವಿಜಯ್ ಅವರಿಗೆ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಸಿಎಂ ವಿಜಯ್ ಸಿನಿಮಾರಂಗದವರು. ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ನಾವು ಹೋಗಿ ಭೇಟಿ ಮಾಡೋ ಪ್ರಯತ್ನ ಮಾಡುತ್ತೇವೆ' ಎಂದಿದ್ದಾರೆ
05:26 PM (IST) Jul 30
ಕ್ರಿಕೆಟ್ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ ಅವರ ಈ ನಿರ್ಧಾರದ ಹಿಂದೆ ಬಿಸಿಸಿಐ ಅಥವಾ ವಯಸ್ಸಿನ ಕಾರಣಕ್ಕಿಂತ, ಕೆಕೆಆರ್ ಫ್ರಾಂಚೈಸಿಯ ನಿರ್ಧಾರ ಪ್ರಮುಖ ಪಾತ್ರ ವಹಿಸಿದೆ. ಮುಂಬರುವ ಐಪಿಎಲ್ನಲ್ಲಿ ಕಡೆಗಣನೆಗೆ ಒಳಗಾಗುವ ಬದಲು, ಗೌರವಯುತವಾಗಿ ನಿವೃತ್ತಿ ಹೊಂದುವ ಹಾದಿಯನ್ನು ಅವರು ಆಯ್ದುಕೊಂಡಿದ್ದಾರೆ.
05:14 PM (IST) Jul 30
ಬೆಂಗಳೂರು-ಮೈಸೂರು ನೈಸ್ ಯೋಜನೆಯು ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿದ್ದು, ಇದರಲ್ಲಿ ಸರ್ಕಾರವೇ ಶಾಮೀಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
05:09 PM (IST) Jul 30
ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.
04:55 PM (IST) Jul 30
04:34 PM (IST) Jul 30
‘ಅಣ್ಣ ಫ್ರಂ ಮೆಕ್ಸಿಕೋ ಭಾವನೆಗಳನ್ನು ಸಂಭ್ರಮಿಸುವ, ಸ್ನೇಹವನ್ನು ಸಂಭ್ರಮಿಸುವ ಸಿನಿಮಾ. ಕೌಟುಂಬಿಕ ಪ್ರೇಕ್ಷಕರನ್ನು ಸಿಂಗಲ್ ಸ್ಕ್ರೀನ್ಗೆ ಕರೆತರಬಲ್ಲ ಶಕ್ತಿ ಇರುವ ಸಿನಿಮಾ’ ಹೀಗೆ ಹೇಳಿದ್ದು ಡಾಲಿ ಧನಂಜಯ.
04:18 PM (IST) Jul 30
ಈಗ ಕನ್ನಡದಲ್ಲಿ ದೊಡ್ಡ ತಾರೆಗಳು ಎನಿಸಿಕೊಂಡವರು ಎಷ್ಟು ಮಂದಿ ಇದ್ದಾರೆ, ಅವರ ಪೈಕಿ ಎಷ್ಟು ಮಂದಿ ಕನ್ನಡ ಚಿತ್ರಗಳ ನಿರ್ಮಾಪಕರ ಕೈಗೆಟುಕುತ್ತಾರೆ ಎಂಬುದನ್ನೂ ಕೂಡ ನೋಡಬೇಕಿದೆ ಎಂದರು ನಿರ್ದೇಶಕ ಎಂ.ಡಿ.ಶ್ರೀಧರ್.
04:12 PM (IST) Jul 30
ಭಾರತೀಯ ಕ್ರಿಕೆಟಿಗ ಅಜಿಂಕ್ಯ ರೆಹಾನೆ ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಅವರಿಗೆ ನೀಡಿದ್ದಾರೆ. ಕ್ರಿಕೆಟ್ ತರಬೇತಿಗಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿದಿನ ಎಂಟು ಕಿಲೋಮೀಟರ್ ನಡೆದು ಕರೆದೊಯ್ಯುತ್ತಿದ್ದ ತ್ಯಾಗ ಮತ್ತು ಆ ಬೆಂಬಲವನ್ನು ಅವರು ಭಾವನಾತ್ಮಕವಾಗಿ ನೆನೆಪಿಸಿಕೊಂಡಿದ್ದಾರೆ.
04:11 PM (IST) Jul 30
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 'ಅಂಬಾರಿ' ಡಬಲ್ ಡೆಕ್ಕರ್ ಬಸ್ ಅನ್ನು ಈಗ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭಗಳು, ಕಾರ್ಪೊರೇಟ್ ಈವೆಂಟ್ಗಳು ಮತ್ತು ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಳಿಗಾಗಿ ಬುಕ್ ಮಾಡಬಹುದು.
01:14 PM (IST) Jul 30
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 'ಸಿಂಚನಾ' ಎಂಬ ಹುಲಿಯ ಹಾನಿಗೊಳಗಾದ ಕೋರೆ ಹಲ್ಲಿಗೆ ಯಶಸ್ವಿ ರೂಟ್ ಕೆನಾಲ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸೋಂಕಿನಿಂದ ಬಳಲುತ್ತಿದ್ದ ಹುಲಿಯು ಇದೀಗ ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
12:57 PM (IST) Jul 30
12:34 PM (IST) Jul 30
ಬೋರ್ವೆಲ್ ಪಂಪ್ಸೆಟ್ ಆನ್ ಮಾಡಲು ಜಮೀನಿಗೆ ಹೋಗಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
11:48 AM (IST) Jul 30
ಬೆಂಗಳೂರಿನ ಗೊರಗುಂಟೆಪಾಳ್ಯ ಜಂಕ್ಷನ್ನಲ್ಲಿನ ಟ್ರಾಫಿಕ್ ದಟ್ಟಣೆ ನಿವಾರಿಸಲು, ರಸ್ತೆ ವಿಸ್ತರಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಮೂರು ಸ್ಥಳಾಂತರಗಳ ಸಾಧ್ಯತೆಗಳಿದ್ದು, ಗೋದ್ರೇಜ್ ಪ್ರಾಪರ್ಟೀಸ್ ಮತ್ತು ತಾಜ್ ಹೋಟೆಲ್ ನೀಡಿದ ಭೂಮಿಯನ್ನು ಬಳಸಿ ಹೆಚ್ಚುವರಿ ಲೇನ್ಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ.
10:25 AM (IST) Jul 30
10:16 AM (IST) Jul 30
ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ಪ್ರಶ್ನೆ ಎತ್ತಿದ್ದರು.
08:57 AM (IST) Jul 30
ಬೃಹತ್ ಪ್ರಮಾಣದಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಹಿನ್ನೆಲೆಯಲ್ಲಿ ಪಶು ವೈದ್ಯಾಧಿಕಾರಿ (ಗ್ರೂಪ್-ಬಿ) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿದ ಮರುದಿನವೇ, ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ತನಿಖೆಗೆ ವಹಿಸಲು ಹೈಕೋರ್ಟ್ ಇಂಗಿತ ವ್ಯಕ್ತಪಡಿಸಿದೆ.
08:37 AM (IST) Jul 30
08:05 AM (IST) Jul 30
07:26 AM (IST) Jul 30
07:26 AM (IST) Jul 30