ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ನಡೆದ ಕೆಂಪೇಗೌಡ ಜಯಂತಿ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ, ಮತ್ತು ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರು ಘಟನೆ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. 150 ಮಂದಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ಠಾಣೆ ಪಿಎಸ್ಐ ಅಮರ್ ಅವರು ಶಾಸಕರ ಮೇಲೆ ಚಪ್ಪಲಿ ಎಸೆದು, ಅವಾಚ್ಯ ಪದಗಳಿಂದ ನಿಂದಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 150 ಜನರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಮತ್ತು ಮಹೇಂದ್ರ ಎಂಬುವರನ್ನು ಬಂಧಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಜಿ.ಪ್ರಭು, ಕೆಂಪೇಗೌಡ ಜಯಂತಿ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ಆದರೆ ಈ ಘಟನೆ ತೀವ್ರ ಬೇಸರ ಮತ್ತು ನೋವು ತರಿಸಿದೆ. ಈಗಾಗಲೇ ನಾಲ್ವರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದರು. ಎಎಸ್ಪಿ ಜಗನ್ನಾಥ ರೈ ಮಾತನಾಡಿ, ಗಲಾಟೆಯಲ್ಲಿ 100-150ಕ್ಕೂ ಹೆಚ್ಚು ಮಂದಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸಾಕ್ಷ್ಯಗಳ ಆಧಾರದ ಮೇಲೆ ಎಲ್ಲ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದರು.
10:40 PM (IST) Jun 29
Instagram Reels Vs Posts: ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮತ್ತು ಪೋಸ್ಟ್ಗಳ ಪೈಕಿ ಯಾವುದಕ್ಕೆ ಹೆಚ್ಚು ರೀಚ್ ಸಿಗುತ್ತೆ ಗೊತ್ತಾ? 2026ರ ಇನ್ಸ್ಟಾಗ್ರಾಂ ಲೇಟೆಸ್ಟ್ ಡೇಟಾ ಪ್ರಕಾರ ಯಾವುದು ಬೆಸ್ಟ್ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
09:41 PM (IST) Jun 29
09:35 PM (IST) Jun 29
Snake Around Plants: ಮಳೆಗಾಲದಲ್ಲಿ ಮನೆ, ಬಾಲ್ಕನಿ ಅಥವಾ ಗಾರ್ಡನ್ನಲ್ಲಿ ಹಾವುಗಳು ಕಾಣಿಸುತ್ತಿವೆಯೇ? ಯಾವ ಗಿಡಗಳು ಮತ್ತು ಪರಿಸ್ಥಿತಿಗಳಿಂದ ಹಾವುಗಳು ಬರುತ್ತವೆ, ಹಾವುಗಳನ್ನು ದೂರವಿಡಲು ಏನು ಮಾಡಬೇಕು.
08:42 PM (IST) Jun 29
ಒಂದು ಸಂಗತಿಯನ್ನು ತ್ರಿಷಾ ಮುಚ್ಚುಮರೆ ಇಲ್ಲದೇ ಹೇಳಿಕೊಂಡಿದ್ದಾರೆ. ಅದೇನು ಗೊತ್ತಾ? ಆ ಒಬ್ಬ ವ್ಯಕ್ತಿ, ತ್ರಿಷಾ ಜೀವನದ ಮಹಾನ್ ವ್ಯಕ್ತಿ ಮಾತ್ರ ಅವರನ್ನು 'ಹನಿ' ಎಂದು ಕರೆಯುತ್ತಾರೆ. ಆದರೆ ಈಗ ಬಹಳಷ್ಟು ಜನ, ಅಂದರೆ ತ್ರಿಷಾ ಸ್ನೇಹಿತರ ಬಳಗ ಅವರನ್ನು ಮತ್ತೊಂದು ಹೆಸರಿನಿಂದ ಕರೆಯುತ್ತಾರೆ.
07:11 PM (IST) Jun 29
06:45 PM (IST) Jun 29
Darshan ಪತ್ನಿ ವಿಜಯಲಕ್ಷ್ಮಿ, ಪತಿಯೊಂದಿಗೆ ಇರುವ ಹಳೆಯ ಫೋಟೋವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 'ತಾರಕ್' ಚಿತ್ರದ 'ಹೇಗಾದರೂ ಮಾತಾಡು ನೀ' ಹಾಡಿನೊಂದಿಗೆ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
06:03 PM (IST) Jun 29
05:38 PM (IST) Jun 29
Sharmiela Mandre ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆಪ್ತರ ಸಮ್ಮುಖದಲ್ಲಿ ನಡೆದ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
05:03 PM (IST) Jun 29
NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್.ಎಸ್. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.
04:50 PM (IST) Jun 29
ಗಾಂಧಿನಗರದ ಗಲ್ಲಿಗಳಲ್ಲಿ ಅಲೆಯುವ ಬದಲು, ನಿಮ್ಮ ಪ್ರತಿಭೆಯನ್ನು ನೇರವಾಗಿ ಸಾಬೀತುಪಡಿಸಲು ಇದೊಂದು ಸುವರ್ಣಾವಕಾಶ. ನಿಮ್ಮ ಲೇಖನಿ ಬೆಳ್ಳಿತೆರೆಯ ಮೇಲೆ ಮಿನುಗುವ ಕಾಲ ಹತ್ತಿರ ಬಂದಿದೆ. ನಿಮ್ಮಲ್ಲಿ ಗಟ್ಟಿಯಾದ ಕಥೆ ಇದ್ದರೆ ತಡಮಾಡಬೇಡಿ, ಕೂಡಲೇ ಈ ನಂಬರ್ಗೆ ಕರೆ ಮಾಡಿ, ಚಾನ್ಸ್ ನಿಮ್ಮದಾಗಿಸಿಕೊಳ್ಳಿ!
04:46 PM (IST) Jun 29
Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.
04:42 PM (IST) Jun 29
04:21 PM (IST) Jun 29
Shivanna: 'ನಮ್ಮೂರ ಮಂದಾರ ಹೂವೆ' ಶೂಟಿಂಗ್ ವೇಳೆ ಸಾತೊಡ್ಡಿ ಜಲಪಾತದಲ್ಲಿ ನಡೆದ ಜೇನು ದಾಳಿಯ ವೇಳೆ ಶಿವರಾಜ್ಕುಮಾರ್ ಮಕ್ಕಳನ್ನು ರಕ್ಷಿಸಿದ ಘಟನೆಯನ್ನು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹಂಚಿಕೊಂಡಿದ್ದಾರೆ.
04:08 PM (IST) Jun 29
Divya Suresh: ಬೆಂಗಳೂರಿನಲ್ಲಿ ರಾತ್ರಿ ನಟಿ ಹಾಗೂ ಬಿಗ್ಬಾಸ್ ಕನ್ನಡ ಖ್ಯಾತಿಯ ದಿವ್ಯಾ ಸುರೇಶ್ಗೆ ಯುವಕನಿಂದ ಕಿರುಕುಳ ಆರೋಪ. ಘಟನೆದ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.
03:49 PM (IST) Jun 29
02:30 PM (IST) Jun 29
Graamaayana Movie: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ, ವಿನಯ್ ರಾಜಕುಮಾರ್, ಮೇಘಾ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ ‘ಗ್ರಾಮಾಯಣ’ ಸಿನಿಮಾದ ಟ್ರೇಲರ್ ಬಿಡುಗಡೆ ಹಾಗೂ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.
02:26 PM (IST) Jun 29
ಸರ್ಕಾರಿ ಶಾಲೆಗಳಲ್ಲಿ ಹಾಳಾಗಿದ್ದ ಕಪ್ಪು ಬೋರ್ಡ್ಗಳಿಗೆ ಶಿಕ್ಷಣ ಇಲಾಖೆಯು 'ನಾವು ಬಣ್ಣ ಬಳಿಯುವ ಅಭಿಯಾನ'ದ ಮೂಲಕ ಹೊಸ ಜೀವ ನೀಡುತ್ತಿದೆ. ಶಾಲಾ ಅನುದಾನ ಬಳಸಿ ಶಿಕ್ಷಕರು ಈ ನವೀಕರಣ ಕಾರ್ಯ ಕೈಗೊಂಡಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಕಾಯಕಲ್ಪ ನೀಡಲಾಗುತ್ತಿದೆ.
02:20 PM (IST) Jun 29
01:37 PM (IST) Jun 29
12:45 PM (IST) Jun 29
12:10 PM (IST) Jun 29
ಹೆಬ್ಬಾಳ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ವಾಕಿಂಗ್ ಮಾಡುವ ಸಾರ್ವಜನಿಕರಿಗೆ ವಾರ್ಷಿಕ ₹100 ಶುಲ್ಕದ 'ಪೇಯ್ಡ್ ಪಾಸ್' ವ್ಯವಸ್ಥೆ ಜಾರಿಗೆ ತರಲಾಗಿದೆ. ಕ್ಯಾಂಪಸ್ ನಿರ್ವಹಣೆ ಮತ್ತು ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಂದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
11:45 AM (IST) Jun 29
10:55 AM (IST) Jun 29
08:45 AM (IST) Jun 29
08:30 AM (IST) Jun 29
07:38 AM (IST) Jun 29
06:51 AM (IST) Jun 29
06:17 AM (IST) Jun 29
ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಜು.2ರವರೆಗೆ ಉತ್ತಮ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ಮತ್ತೊಂದೆಡೆ ರಾಯಚೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
06:08 AM (IST) Jun 29
06:01 AM (IST) Jun 29
05:54 AM (IST) Jun 29
05:48 AM (IST) Jun 29