Published : Apr 28, 2025, 07:15 AM ISTUpdated : Apr 28, 2025, 11:57 PM IST

Karnataka News Live: ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಆನಂದಿಸಿದೆ ಎಂದ ಲಾರಾ!

ಸಾರಾಂಶ

ಕರ್ನಾಟಕದಲ್ಲಿ ಪರೀಕ್ಷೆ ಬರೆಯಲು ಜನಿವಾರ ತೆಗೆಸಿದ ಪ್ರಕರಣ ಭಾರಿ ವಿರೋಧಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ರೈಲ್ವೇ ಇಲಾಖೆ ಪರೀಕ್ಷೆ ಪ್ರವೇಶ ಪತ್ರದಲ್ಲೇ ಮಂಗಳಸೂತ್ರ ಹಾಗೂ ಧಾರ್ಮಿಕ ಚಿಹ್ನೆಗಳಿಗೆ ನಿರ್ಬಂಧ ಹೇರಿದ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಎಪ್ರಿಲ್ 29 ರಂದು ನಡೆಯಲಿರುವ ರೈಲ್ಬೇ ಇಲಾಖೆ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನೇಮಕಾತಿ ಪರೀಕ್ಷೆಗೆ ಈ ನಿರ್ಬಂಧ ಹೇರಲಾಗಿದೆ. ಧಾರ್ಮಿಕ ವಿರೋಧಿ ಧೋರಣೆಯನ್ನು ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಖಂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆದೇಶ ಕೈಬಿಡುವಂತೆ ಆಗ್ರಹಿಸಿದ್ದಾರೆ.  

Karnataka News Live: ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಆನಂದಿಸಿದೆ ಎಂದ ಲಾರಾ!

11:57 PM (IST) Apr 28

ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಆನಂದಿಸಿದೆ ಎಂದ ಲಾರಾ!

ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದರು.

ಪೂರ್ತಿ ಓದಿ

11:27 PM (IST) Apr 28

ಒಂದೇ ಮ್ಯಾಚ್‌ನಲ್ಲಿ ಮೂರು ಅಪರೂಪದ ದಾಖಲೆ ಬರೆದ 14 ವರ್ಷದ ವೈಭವ್!

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಸಿಡಿಸಿ ಹೊಸ ಮೈಲಿಗಲ್ಲು. ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಸಾಧನೆ.

ಪೂರ್ತಿ ಓದಿ

11:16 PM (IST) Apr 28

ವೈಭವ್‌ ಸೂರ್ಯವಂಶಿ 35 ಎಸೆತದ ಶತಕ, ಇನ್ನೂ 25 ಎಸೆತ ಬಾಕಿ ಇರುವಂತೆ 212 ಚಚ್ಚಿದ ರಾಜಸ್ಥಾನ!

14 ವರ್ಷದ ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ಸತತ 5 ಸೋಲುಗಳ ನಂತರ ಜಯ ಸಾಧಿಸಿದೆ. ಗುಜರಾತ್ ತಂಡವು ಗಳಿಸಿದ್ದ 212 ರನ್‌ಗಳ ಗುರಿಯನ್ನು ರಾಜಸ್ಥಾನ್ ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿತು.

ಪೂರ್ತಿ ಓದಿ

10:57 PM (IST) Apr 28

11 ಕಿ.ಮೀಗೆ ಕೇವಲ 166 ರೂ: ಪ್ರಾಮಾಣಿಕ ಆಟೋ ಚಾಲಕನಿಗೆ ಪ್ರಯಾಣಿಕನ ಸಲಾಂ!

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು 11 ಕಿ.ಮೀ. ಪ್ರಯಾಣಕ್ಕೆ ಕೇವಲ ₹166 ಮಾತ್ರ ಪಡೆದಿದ್ದಾರೆ. ಇದು ಸಾಮಾನ್ಯವಾಗಿ ಹೆಚ್ಚಿನ ದರಗಳನ್ನು ವಿಧಿಸುವ ಆಟೋ ಚಾಲಕರಿಂದ ಭಿನ್ನವಾಗಿದೆ. ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪೂರ್ತಿ ಓದಿ

10:38 PM (IST) Apr 28

ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!

14 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ, ಟಿ20 ಇತಿಹಾಸದಲ್ಲೂ ಕಿರಿಯ ಶತಕವೀರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್‌ ಪರ ಆಡಿದ ಅವರು 4 ಬೌಂಡರಿ ಹಾಗೂ 11 ಸಿಕ್ಸರ್‌ಗಳೊಂದಿಗೆ 101 ರನ್ ಬಾರಿಸಿದರು.

ಪೂರ್ತಿ ಓದಿ

10:21 PM (IST) Apr 28

8ನೇ ಕ್ಲಾಸ್‌ ಹುಡುಗನಿಂದ ಐಪಿಎಲ್‌ನಲ್ಲಿ ಫಿಫ್ಟಿ, ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ಎಂಟನೇ ತರಗತಿ ವಿದ್ಯಾರ್ಥಿ ವೈಭವ್‌ ಸೂರ್ಯವಂಶಿ ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಪೂರ್ತಿ ಓದಿ

10:12 PM (IST) Apr 28

ಲಕ್ಷಾಂತರ ಮಂದಿ ಪ್ರಾಣ ಕಾಪಾಡಿದ್ದ ಭಾರತಕ್ಕೇ ಉಲ್ಟಾ ಹೊಡೆದ ಟರ್ಕಿ! ಪಾಕ್​ಗೆ ಶಸ್ತ್ರಾಸ್ತ್ರ ಪೂರೈಕೆ...

ಭೂಕಂಪದ ಸಮಯದಲ್ಲಿ ಟರ್ಕಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾದಾಗ ಭಾರತ ನೆರವಿಗೆ ಧಾವಿಸಿ ಲಕ್ಷಾಂತರ  ಮಂದಿ ಜೀವ ಕಾಪಾಡಿತ್ತು. ಆದರೆ ಅದೀಗ ಪಾಕ್​ ಪರವಾಗಿ ನಿಂತಿದೆ! ಏನಿದು ಸ್ಟೋರಿ? 
 

ಪೂರ್ತಿ ಓದಿ

10:07 PM (IST) Apr 28

ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ

2025 ರ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. 71 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಲಾಯಿತು. ಉಳಿದವರಿಗೆ ಶೀಘ್ರದಲ್ಲೇ ಪ್ರತ್ಯೇಕ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಪೂರ್ತಿ ಓದಿ

08:35 PM (IST) Apr 28

ಪಾಕಿಸ್ತಾನ ನಮಗಿಂತ ಅರ್ಧ ಗಂಟೆ ಅಲ್ಲ, ಅರ್ಧ ದಶಕ ಹಿಂದೆ ಇದೆ: ಅಸಾದುದ್ದೀನ್‌ ಓವೈಸಿ!

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ಓವೈಸಿ ತೀವ್ರವಾಗಿ ಟೀಕಿಸಿದ್ದಾರೆ. ಪಾಕಿಸ್ತಾನ ಭಾರತಕ್ಕಿಂತ 50 ವರ್ಷ ಹಿಂದಿದೆ ಮತ್ತು ಅದರ ಬಜೆಟ್ ಭಾರತದ ಮಿಲಿಟರಿ ಬಜೆಟ್‌ಗೆ ಸಮನಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ

08:10 PM (IST) Apr 28

ಐಪಿಎಲ್‌ನ ಲೀಗ್‌ ಹಂತದಲ್ಲಿ ಒಮ್ಮೆ ಮಾತ್ರವೇ ಟೇಬಲ್‌ ಟಾಪರ್‌ ಆಗಿತ್ತು ಆರ್‌ಸಿಬಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆಡಿದ ಆರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವುದು ಗಮನಾರ್ಹ. 2011ರ ನಂತರ ಮೊದಲ ಬಾರಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ

07:34 PM (IST) Apr 28

'ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವರನ್ನು ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು!'

ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್​ನಲ್ಲಿ ನಡೆಸಿರುವ ನರಮೇಧದ ನಡುವೆಯೇ ರಷ್ಯಾ ಅಧ್ಯಕ್ಷರ ಡೈಲಾಗ್​ ಒಂದು ವೈರಲ್​ ಆಗ್ತಿದೆ. ಏನದು? 

ಪೂರ್ತಿ ಓದಿ

06:54 PM (IST) Apr 28

ಪಹಲ್ಗಾಮ್‌ ಟೆರರಿಸ್ಟ್‌ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್‌

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಸ ವಿಡಿಯೋ ವೈರಲ್ ಆಗಿದ್ದು, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಜಿಪ್‌ಲೈನ್ ಸವಾರಿ ಮಾಡುತ್ತಿದ್ದ ವ್ಯಕ್ತಿಯ ದೃಶ್ಯದಲ್ಲಿ ಗುಂಡಿನ ದಾಳಿ ಮತ್ತು ಜನರು ಓಡಿಹೋಗುವುದು ಕಂಡುಬಂದಿದೆ. ಜಿಪ್‌ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವುದು ಕೂಡ ದಾಖಲಾಗಿದೆ.

ಪೂರ್ತಿ ಓದಿ

06:12 PM (IST) Apr 28

ಸೊಂಪಾದ ರೇಷ್ಮೆಯಂತಹ ಹೊಳೆಯುವ ಕೂದಲಿಗಾಗಿ ಬಳಸಿ ಈರುಳ್ಳಿ ಎಣ್ಣೆ: ಇಲ್ಲಿದೆ ರೆಸಿಪಿ

ಕೂದಲು ಉದುರುವ ಅಥವಾ ಒಣ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಬಳಸಿ.

ಪೂರ್ತಿ ಓದಿ

06:02 PM (IST) Apr 28

ಉಕ್ರೇನ್‌ನಲ್ಲಿ ಮೂರು ದಿನಗಳ ಕದನ ವಿರಾಮ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌!

ಎರಡನೇ ಮಹಾಯುದ್ಧದ ವಿಜಯೋತ್ಸವದ ಆಚರಣೆಯೊಂದಿಗೆ ಹೊಂದಿಕೆಯಾಗುವಂತೆ ಮೇ 8 ರಿಂದ ಮೇ 11 ರವರೆಗೆ ರಷ್ಯಾ ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. "ಮಾನವೀಯ ಪರಿಗಣನೆಗಳ" ಆಧಾರದ ಮೇಲೆ ಕದನ ವಿರಾಮ ಘೋಷಿಸಲಾಗಿದೆ ಎಂದು ಕ್ರೆಮ್ಲಿನ್ ಹೇಳಿದೆ.

ಪೂರ್ತಿ ಓದಿ

05:43 PM (IST) Apr 28

ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಒಲವು ತೋರುತ್ತಿದ್ದೆ ಆದರೆ ಈಗ : ಫಾರುಕ್ ಅಬ್ದುಲ್ಲಾ ಹೇಳಿದ್ದೇನು?

 ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ, ಕಾಶ್ಮೀರಿಗಳು 1947 ರಲ್ಲೇ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಪೂರ್ತಿ ಓದಿ

05:43 PM (IST) Apr 28

ಶಾಸಕ ವಿನಯ್ ಕುಲಕರ್ಣಿಗೂ ಉಂಟು, ಬಂಗಾರದ ವಂಚಕಿ ಐಶ್ವರ್ಯ ಗೌಡ ನಂಟು!

ಐಶ್ವರ್ಯ ಗೌಡ ವಿನಯ್ ಕುಲಕರ್ಣಿ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಕೋಟಿ ಕೋಟಿ ಹಣದ ವ್ಯವಹಾರ ಮಾಡಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನು ಟ್ರ್ಯಾಪ್ ಮಾಡಿದ್ದಲ್ಲದೆ, ಕೇವಲ 3 ವರ್ಷಗಳಲ್ಲಿ 75 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟಿಲ್ಲ.

ಪೂರ್ತಿ ಓದಿ

05:32 PM (IST) Apr 28

ಅಫ್ರಿದಿ ಮೇಲೆ ತಿರುಗಿಬಿದ್ದ ಅಸಾದುದ್ದೀನ್ ಒವೈಸಿ! ಅವನೊಬ್ಬ ಜೋಕರ್ ಎಂದ AIMIM ಮುಖ್ಯಸ್ಥ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶಾಹಿದ್ ಅಫ್ರಿದಿ ಭಾರತದ ಸೇನೆಯ ಮೇಲೆ ಆರೋಪಿಸಿದ್ದಾರೆ. ಈ ಹೇಳಿಕೆಗೆ ಅಸಾದುದ್ದೀನ್ ಒವೈಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಒವೈಸಿ, ಅಫ್ರಿದಿಯನ್ನು 'ಜೋಕರ್' ಎಂದು ಕರೆದಿದ್ದಾರೆ.

ಪೂರ್ತಿ ಓದಿ

05:18 PM (IST) Apr 28

ತಹವ್ವೂರ್ ರಾಣಾ ಕಸ್ಟಡಿ 12 ದಿನ ವಿಸ್ತರಣೆ

26/11 ಭಯೋತ್ಪಾದನಾ ದಾಳಿಯ ಆರೋಪಿ ತಹವ್ವೂರ್ ರಾಣಾ ಅವರ ಕಸ್ಟಡಿಯನ್ನು ಎನ್‌ಐಎ ನ್ಯಾಯಾಲಯವು 12 ದಿನಗಳವರೆಗೆ ವಿಸ್ತರಿಸಿದೆ. ರಾಣಾ ಅವರನ್ನು ಹೆಚ್ಚಿನ ದಾಖಲೆಗಳೊಂದಿಗೆ ಎದುರಿಸಲು ಎನ್‌ಐಎಗೆ ಹೆಚ್ಚಿನ ಸಮಯ ಬೇಕಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಪೂರ್ತಿ ಓದಿ

05:13 PM (IST) Apr 28

ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲ; ರಹೀಂ ಖಾನ್

ಸಚಿವ ರಹೀಂ ಖಾನ್ ಅವರು ಪ್ರಧಾನಿ ಮೋದಿ ಅವರಿಂದ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಅವರು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರ ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದರು.

ಪೂರ್ತಿ ಓದಿ

04:55 PM (IST) Apr 28

ಪಾಕ್ ಡಿಸೈನರ್‌ ಜೊತೆ ಪೋಸ್: ನಟಿ ಕರೀನಾ ಕಪೂರ್ ದುಬೈ ಫೋಟೋಶೂಟ್‌ಗೆ ಭಾರಿ ಆಕ್ರೋಶ

ಪಹಲ್ಗಾಮ್ ದಾಳಿಯ ನಂತರ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಫೋಟೋಗೆ ಪೋಸ್ ನೀಡಿದ ಕರೀನಾ ಕಪೂರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಪೂರ್ತಿ ಓದಿ

04:29 PM (IST) Apr 28

ಶಕ್ತಿ ಯೋಜನೆಗೆ 2000 ಹೊಸ ಬಸ್‌ಗಳು: ಮಹಿಳೆಯರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸರ್ಕಾರ 2000 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಈ ಹೊಸ ಬಸ್‌ಗಳನ್ನು ಹಂಚಿಕೆ ಮಾಡಲಾಗುವುದು.

ಪೂರ್ತಿ ಓದಿ

04:19 PM (IST) Apr 28

ಪೊಲೀಸ್‌ ಅಧಿಕಾರಿಗೆ ಕೈ ಎತ್ತಿದ್ದ ಸಿದ್ದರಾಮಯ್ಯ, ಇದ್ಯಾವ ಸಂವಿಧಾನದಲ್ಲಿದೆ ಸಿಎಂ ಸಾಹೇಬ್ರೇ?

ಬೆಳಗಾವಿಯ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಯೊಬ್ಬರಿಗೆ ಕೈ ಎತ್ತಿದ ಘಟನೆ ನಡೆದಿದೆ. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶಿಸಿ 'ಗೋ ಗೋ ಪಾಕಿಸ್ತಾನ' ಎಂದು ಘೋಷಣೆ ಕೂಗಿದ್ದೇ ಈ ಘಟನೆಗೆ ಕಾರಣ.

ಪೂರ್ತಿ ಓದಿ

03:53 PM (IST) Apr 28

ಶತ್ರುವಿನ ಶತ್ರು ಮಿತ್ರ: ಅಫ್ಘಾನ್ ವಿದೇಶಾಂಗ ಸಚಿವರ ಭೇಟಿ ಮಾಡಿದ ಭಾರತೀಯ ರಾಯಭಾರಿ

ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಭಾರತೀಯ ರಾಜತಾಂತ್ರಿಕರು ಅಫ್ಘಾನಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪೂರ್ತಿ ಓದಿ

03:35 PM (IST) Apr 28

ಕಾಶ್ಮೀರ ಉಗ್ರರ ಗುಂಡೇಟಿಗೆ ಹುತಾತ್ಮರಾದ ಕನ್ನಡಿಗರ ಮಕ್ಕಳಿಗೆ ಉಚಿತ ಶಿಕ್ಷಣ, 10 ಲಕ್ಷ ರೂ. ನೆರವು; ತೇಜಸ್ವಿ ಸೂರ್ಯ!

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಕನ್ನಡಿಗರ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡಲಾಗುವುದು. ಸಂಸದ ತೇಜಸ್ವಿ ಸೂರ್ಯ ಭರತ್ ಭೂಷಣ್ ಅವರ ಕುಟುಂಬಕ್ಕೆ 10 ಲಕ್ಷ ರೂ. ಹಣ ನೆರವು ನೀಡುವುದಾಗಿ ತಿಳಿಸಿದ್ದಾರೆ.

ಪೂರ್ತಿ ಓದಿ

03:09 PM (IST) Apr 28

ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲ, ರಾಜ್ಯ ಸ್ಥಾನಮಾನ ಕೇಳಲ್ಲ; ಸಿಎಂ ಓಮರ್ ಭಾವುಕ

ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ನನಗೆ ರಕ್ಷಣೆ ಕೊಡಲು ಸಾಧ್ಯವಾಗಲಿಲ್ಲ. ನಾನು ಮಡಿದ 26 ಕುಟುಂಬದವರಲ್ಲಿ ಯಾವ ಮುಖದಲ್ಲಿ ಕ್ಷಮ ಕೇಳಲಿ? ಈ ಪರಿಸ್ಥಿತಿಯಲ್ಲಿ ನಾನು ಕೇಂದ್ರ ಸರ್ಕಾರದ ಬಳಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ  ಸಿಎಂ ಓಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಹೇಳಿದ್ದಾರೆ.

ಪೂರ್ತಿ ಓದಿ

02:37 PM (IST) Apr 28

ಗುಜರಾತ್‌ನಲ್ಲಿ 1000 ಕ್ಕೂ ಅಧಿಕ ಬಾಂಗ್ಲಾದೇಶಿ ಅಕ್ರಮ ವಲಸಿಗರ ಬಂಧನ

ಗುಜರಾತ್‌ನಲ್ಲಿ ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ಬಂಧಿಸಿದ್ದಾರೆ. ಅಹ್ಮದಾಬಾದ್ ಮತ್ತು ಸೂರತ್‌ನಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. 

ಪೂರ್ತಿ ಓದಿ

02:26 PM (IST) Apr 28

ಯೂಟ್ಯೂಬರ್ ರಣವೀರ್ ಅಲಹಬಾದಿಯಾಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್

ಭಾರಿ ವಿವಾದ ಸೃಷ್ಟಿಸಿದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾಗೆ ಇದೀಗ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆಯಿಂದ ವಿಚಾರಣೆ ಎದುರಿಸಿದ ರಣವೀರ್‌ಗೆ ಘಟನೆ ಬಳಿಕ ಸಿಕ್ಕ ಅತೀ ದೊಡ್ಡ ರಿಲೀಫ್ ಇದಾಗಿದೆ.

ಪೂರ್ತಿ ಓದಿ

02:23 PM (IST) Apr 28

ರಫೇಲ್ ಎಂ ಒಪ್ಪಂದ: ಭಾರತದ ನೌಕಾದಳಕ್ಕೆ ಹೊಸ ಶಕ್ತಿ

ಭಾರತ ಮತ್ತು ಫ್ರಾನ್ಸ್ ₹63,000 ಕೋಟಿ ಮೊತ್ತದ 26 ರಫೇಲ್ ಎಂ ಯುದ್ಧ ವಿಮಾನಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ರಫೇಲ್ ಎಂ ನೌಕಾದಳದ ಆವೃತ್ತಿಯಾಗಿದ್ದು, ಸಮುದ್ರ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಮೈಕಾ, ಮ್ಯಾಜಿಕ್, ಸೈಡ್‌ವೈಂಡರ್, ASRAAM, AMRAAM ನಂತಹ ಕ್ಷಿಪಣಿಗಳನ್ನು ಹೊತ್ತೊಯ್ಯುತ್ತದೆ.

ಪೂರ್ತಿ ಓದಿ

01:20 PM (IST) Apr 28

ಬೆಟ್ಟಿಂಗ್ ಕಟ್ಟಿ ನೀರು ಬೆರೆಸದೇ 5 ಬಾಟಲಿ ಮದ್ಯ ಸೇವಿಸಿದ ಯುವಕ ಸಾವು!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಐದು ಬಾಟಲ್ ಮದ್ಯವನ್ನು ನೀರು ಬೆರೆಸದೇ ಕುಡಿದ ಯುವಕ ಸಾವನ್ನಪ್ಪಿದ್ದಾನೆ. ಹಣದ ಆಸೆಗಾಗಿ ಬೆಟ್ಟಿಂಗ್ ಕಟ್ಟಿ ಮದ್ಯ ಸೇವನೆ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ.

ಪೂರ್ತಿ ಓದಿ

01:13 PM (IST) Apr 28

ರೈಲ್ವೆ ಪರೀಕ್ಷೆಯಲ್ಲಿ ಜನಿವಾರದ ಜೊತೆ ಕರಿಮಣಿ, ಕಾಲುಂಗುರಕ್ಕೂ ಕುತ್ತು: ರಾಜ್ಯದ ಅಭ್ಯರ್ಥಿಗಳು ನಿರಾಳ

ನಾಳೆಯಿಂದ ರೈಲ್ವೆ ಇಲಾಖೆಯ ನರ್ಸಿಂಗ್‌ ಸೂಪರಿಂಟೆಂಡೆಂಟ್‌ ಹುದ್ದೆಗೆ ಪರೀಕ್ಷೆ ಆರಂಭವಾಗಲಿದ್ದು,  ಜನಿವಾರ, ಕರಿಮಣಿ, ಕಾಲುಂಗುರಕ್ಕೆ ಕುತ್ತು ಬಂದಿದೆ. ಆದರೆ ರಾಜ್ಯದ ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಏನಿದು? 
 

ಪೂರ್ತಿ ಓದಿ

01:03 PM (IST) Apr 28

ಪಹಲ್ಗಾಮ್ ದಾಳಿಯ ನಂತರವೂ ಮತ್ತೆ ಕಾಶ್ಮೀರದತ್ತ ಮುಖ ಮಾಡ್ತಿರುವ ಪ್ರವಾಸಿಗರು

ಏಪ್ರಿಲ್ 22ರ ಭಯೋತ್ಪಾದಕ ದಾಳಿಯ ನಂತರವೂ ಕಾಶ್ಮೀರಕ್ಕೆ ಪ್ರವಾಸಿಗರು ಮರಳುತ್ತಿದ್ದಾರೆ.

ಪೂರ್ತಿ ಓದಿ

12:41 PM (IST) Apr 28

ಭಾರತದ ಸಿದ್ಧತೆ ಪಾಕಿಸ್ತಾನ ಕಂಗಾಲು, ಸೇನಾ ಮುಖ್ಯಸ್ಥ ನಾಪತ್ತೆ ಬೆನ್ನಲ್ಲೇ 5000 ಯೋಧರು ರಾಜೀನಾಮೆ

ಪೆಹಲ್ಗಾಂ ಉಗ್ರರ ದಾಳಿ ಭಾರತದ ಸಹನೆಯ ಕಟ್ಟೆ ಒಡೆದಿದೆ. ಆಕ್ರೋಶ ಹೆಚ್ಚಿಸಿದೆ. ಪ್ರತೀಕಾರ ತೀರಿಸದೆ ವಿರಾಮವಿಲ್ಲ ಎಂದು ಮೋದಿ ಗುಡುಗಿದ್ದಾರೆ. ಇದರ ಜೊತೆಗೆ ಸೇನೆ ಭಾರಿ ಶಸ್ತ್ರಾಸ್ತ್ರಗಳನ್ನು ಗಡಿಗೆ ರವಾನಿಸಿದೆ. ಈ ಎಲ್ಲಾ ತಯಾರಿ ನೋಡಿ ಪಾಕಿಸ್ತಾನ ಸೇನೆ ಬೆಚ್ಚಿ ಬಿದ್ದಿದೆ. ಇದೀಗ ಸೇನಾ ಅಧಿಕಾರಿಗಳು ಯೋಧರು ಸೇರಿ ಪಾಕಿಸ್ತಾನ ಸೇನೆಗೆ 5000 ಮಂದಿ ರಾಜೀನಾಮೆ ನೀಡಿದ್ದಾರೆ.

ಪೂರ್ತಿ ಓದಿ

12:18 PM (IST) Apr 28

ಬೆಂಗಳೂರು ಮೆಟ್ರೋದಲ್ಲಿ ಊಟ ಮಾಡಿದ ಮಹಿಳೆಗೆ ₹500 ದಂಡ ಹಾಕಿದ BMRCL

ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಮೆಟ್ರೋದಲ್ಲಿ ಊಟ ಮಾಡಿದ್ದಕ್ಕಾಗಿ ₹500 ದಂಡ ವಿಧಿಸಲಾಗಿದೆ. ಈ ಘಟನೆಯನ್ನು ಸಹ ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪೂರ್ತಿ ಓದಿ

12:17 PM (IST) Apr 28

ನಟಿಗೆ ಬಟ್ಟೆ ಬಿಚ್ಚಿ ಒಳಉಡುಪಿನಲ್ಲಿ ಕುಳಿತುಕೋ ಎಂದಿದ್ದ ಸಾಜಿದ್ ಖಾನ್

ಬಾಲಿವುಡ್ ನಿರ್ದೇಶಕ ಸಾಜೀದ್ ಖಾನ್ ವಿರುದ್ಧ ಸೀರಿಯಲ್ ನಟಿ ನವೀನಾ ಬೋಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 2004-06ರ ಸುಮಾರಿಗೆ ತಮ್ಮನ್ನು ಮನೆಗೆ ಕರೆಸಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದರು ಎಂದು ನವೀನಾ ಆರೋಪಿಸಿದ್ದಾರೆ.

ಪೂರ್ತಿ ಓದಿ

12:16 PM (IST) Apr 28

ಜಾತಿ ಗಣತಿ ವೇಳೆ ಕಡ್ಡಾಯವಾಗಿ ಮಾದಿಗ ಎಂದೇ ಬರೆಯಿಸಿ: ಎಚ್.ಆಂಜನೇಯ

ಮಾದಿಗ ಸಮುದಾಯದವರು ಕಡ್ಡಾಯವಾಗಿ ಜಾತಿ ಕಾಲಂನಲ್ಲಿ ಮಾದಿಗ ಎಂದೇ ನಮೂದಿಸುವಂತೆ ಮಾಜಿ ಸಚಿವ ಎಚ್.ಆಂಜನೇಯ ಕರೆ ನೀಡಿದರು. 

ಪೂರ್ತಿ ಓದಿ

12:02 PM (IST) Apr 28

ಕುನೋ ಅರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ನಿರ್ವಾ ಚೀತಾ, ವಿಡಿಯೋ

ಅಳಿದಿರುವ ಚೀತಾ ಸಂತತಿಯನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲು ಆಫ್ರಿಕಾದಿಂದ ತಂದಿರುವ ಚೀತಾಗಳ ಪೈಕಿ ಇದೀಗ ನಿರ್ವಾ ಚೀತಾ 5 ಮರಿಗಳಿಗೆ ಜನ್ಮ ನೀಡಿದೆ. ಕುನೋ ರಾಷ್ಟ್ರೀಯ ಅರಣ್ಯದಲ್ಲಿರುವ 5 ಮರಿಗಳ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. 

ಪೂರ್ತಿ ಓದಿ

11:51 AM (IST) Apr 28

ಕರ್ನಾಟಕ ಟು ಕಾಶ್ಮೀರ ವಿಮಾನ ದರ ₹40 ಸಾವಿರದಿಂದ ₹8 ಸಾವಿರಕ್ಕೆ ಕುಸಿತ!

ಕಾಶ್ಮೀರದಲ್ಲಿ ನಡೆದ ಹಿಂದೂ ಪ್ರವಾಸಿಗರ ಹತ್ಯೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಕರ್ನಾಟಕದ ಪ್ರವಾಸಿಗರು ಕಾಶ್ಮೀರ ಪ್ರವಾಸ ರದ್ದುಗೊಳಿಸಿದ್ದರಿಂದ ಬೆಂಗಳೂರು-ಕಾಶ್ಮೀರ ವಿಮಾನ ಟಿಕೆಟ್ ದರ 40,000 ರೂ.ಗಳಿಂದ 8,000 ರೂ.ಗಳಿಗೆ ಇಳಿದಿದೆ. ಹಲವು ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ ಮತ್ತು ಪರ್ಯಾಯ ತಾಣಗಳಿಗೆ ಪ್ರಯಾಣಿಸುತ್ತಿದ್ದಾರೆ.

ಪೂರ್ತಿ ಓದಿ

11:43 AM (IST) Apr 28

IPL ಇತಿಹಾಸದಲ್ಲೇ ಯಾವ ತಂಡವೂ ಮಾಡದ ಅಪರೂಪದ ಸಾಧನೆ ಮಾಡಿದ ಆರ್‌ಸಿಬಿ!

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು. ತವರಿನಿಂದ ಹೊರಗೆ ಸತತ 6 ಪಂದ್ಯಗಳನ್ನು ಗೆದ್ದ ಮೊದಲ ತಂಡ ಎಂಬ ಹೊಸ ದಾಖಲೆ. ಕೃನಾಲ್ ಪಾಂಡ್ಯ ಅಜೇಯ 73 ರನ್ ಗಳಿಸಿ ಪಂದ್ಯಶ್ರೇಷ್ಠ.

ಪೂರ್ತಿ ಓದಿ

11:34 AM (IST) Apr 28

ಗ್ಯಾರಂಟಿ ಯೋಜನೆಗಳಿಂದ ಹಣದ ಕೊರತೆ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಬರೀ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಮೂಲಕವೇ ಆರೋಪಗಳಿಗೆ ಉತ್ತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಪೂರ್ತಿ ಓದಿ

11:24 AM (IST) Apr 28

Reporters Diary: ಹೂಗುಚ್ಛ ನೀಡಲು ಸರ್ಕಾರಿ ಅನುದಾನ ಬೇಕು!

ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಪ್ರಭಾವಿ ಸಚಿವರಿದ್ದಾರೆ. ಈ ಸಚಿವ ಸಾಹೇಬರು ತುಮಕೂರು ಗಡಿ ಮುಟ್ಟಿದಾಗಲೆಲ್ಲ ಹೂಗಳ ನಗು ಮುಖ ಅವರನ್ನು ಸ್ವಾಗತಿಸುವುದು ಕಡ್ಡಾಯ.

ಪೂರ್ತಿ ಓದಿ

More Trending News