ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ಗಳ ಲೋಕಾರ್ಪಣೆ ಇಂದು ನಡೆಯಲಿದೆ. ಕ್ರಸ್ಟ್ಗೇಟ್ ನಿರ್ಮಾಣದ ಹಿನ್ನೆಲೆ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ 12 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ. ಕರ್ನಾಟಕ, ಅಂಧ್ರಪ್ರದೇಶ ಮತ್ತು ತೆಲಂಗಾಣ ಸಿಎಂ ಅವರಿಂದ ಲೋಕಾರ್ಪಣೆ ಮಾಡಲಾಗುತ್ತದೆ. 57.8 ಕೋಟಿ ವೆಚ್ಚದಲ್ಲಿ 33 ಕ್ರಸ್ಟ್ಗೇಟ್ ಗಳನ್ನು ಆಧುನೀಕರಿಸಲಾಗಿದೆ. ಕ್ರಸ್ಟ್ ಗೇಟ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ತು ಮತ್ತು ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಅವರು ಒಂದೇ ವೇದಿಕೆಯಲ್ಲಿ ಸೇರುತ್ತಿದ್ದಾರೆ. ಕರ್ನಾಟಕ ರಾಜ್ಯ ರಾಜಕೀಯ ಸೇರಿದಂತೆ ಇಂದಿನ ಕ್ಷಣ ಕ್ಷಣದ ಸುದ್ದಿ ಅಪ್ಡೇಟ್ ಇಲ್ಲಿದೆ.

10:10 AM (IST) Jun 25
ದಾವಣೆಗೆರೆಯಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಜನರಲ್ಲಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕುಳಿತು ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆರೋಪದಡಿ ಸುಹೇಲ್ ಬಂಧನವಾಗಿದೆ. ಇದರ ಬೆನ್ನಲ್ಲೇ ಆತನ ನಂಬರ್ ಪಾಕಿಸ್ತಾನದ ಗ್ರೂಪ್ಗಳಲ್ಲಿ ಹೇಗೆ ಬಂತೋ ಗೊತ್ತಿಲ್ಲ ಎಂದ ಸಹೋದರ ಹೇಳಿದ್ದಾನೆ.
08:53 AM (IST) Jun 25
ಶಿವಮೊಗ್ಗದಿಂದ ತಿರುಪತಿಗೆ ಹೊರಡಬೇಕಿದ್ದ ವಿಮಾನ ಆರಂಭದಲ್ಲಿ ವಿಳಂಬ ಎಂದು ಬಳಿಕ ರದ್ದುಗೊಳಿಸಿದ ಘಟನೆ ನಡದಿದೆ. ಪರಿಣಾಮ ತಿರುಪತಿ ದರ್ಶನ ಟಿಕೆಟ್ ಪಡೆದು ಕಾಯುತ್ತಿದ್ದ ಭಕ್ತರು ತೀವ್ರ ಪರದಾಡುವಂತಾಗಿದೆ.
08:31 AM (IST) Jun 25
ಕೆಲಸದ ವೇಳೆ ತೀವ್ರ ಎದೆನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಗೆ ಕೆರದೊಯ್ಯಲಾಗಿತ್ತು. ಇಂಜೆಕ್ಷನ್ಗೆ ಸಿದ್ಧತೆ ನಡೆಸುತ್ತಿದ್ದಂತೆ ಕುಳಿತಿದ್ದ ಪೊಲೀಸ್ ಪೇದೆ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
08:19 AM (IST) Jun 25
ಕೇಂದ್ರ ಸರ್ಕಾರ ರಾಜಕೀಯಕ್ಕಾಗಿ ಇಡಿ, ಐಟಿ ಅವರನ್ನು ತಮ್ಮ ವಿರೋಧಿಗಳ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಆರೆಸ್ಸೆಸ್ ಪ್ರಶ್ನಿಸಿದ್ದಕ್ಕೆ ನಾಳೆ ನನ್ನ ಮೇಲೂ ಇಡಿ ದಾಳಿ ಆಗಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಜಾರಕಿಹೊಳಿ ಸಂಬಂಧಿ ಮಲೆ ಇಡಿ ದಾಳಿ ಬಗ್ಗೆ ಖರ್ಗೆ ಹೇಳಿದ್ದೇನು?
08:04 AM (IST) Jun 25
NCERT 6ನೇ ತರಗತಿ ಕನ್ನಡ ಪುಸ್ತಕದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಠ್ಯ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಟ್ಟು, ಪುರಾಣ, ಧಾರ್ಮಿಕ ಕತೆಗಳನ್ನು ಹೇಳಲಾಗುತ್ತಿದೆ ಎಂದು ಶಿಕ್ಷಣ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏನಿದು ಗಲಾಟೆ?
07:48 AM (IST) Jun 25
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆರ್ಎಸ್ಎಸ್ ಆದಾಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕರು ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನನ್ನು 'ಬಲಿತ ದಲಿತ' ಎಂದು ಕರೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದರು.
07:34 AM (IST) Jun 25
ಬೆಂಗಳೂರಿಗರಿಗೆ ಮಹತ್ವದ ಗುಡ್ ನ್ಯೂಸ್ ಇದೆ. ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಟೆಸ್ಟಿಂಗ್ ಪೂರ್ಣಗೊಂಡಿದೆ. ಆಗಸ್ಟ್ ತಿಂಗಳಿನಿಂದ ಪಿಂಕ್ ಲೈನ್ ಮೆಟ್ರೋ ಕಾರ್ಯಾರಂಭಗೊಳ್ಳುತ್ತಿದೆ. ಎಲ್ಲಿಂದ ಎಲ್ಲಿವರೆಗೆ ಈ ಮೆಟ್ರೋ ಸೇವೆ ನೀಡಲಿದೆ?
07:03 AM (IST) Jun 25
ತುಂಗಭದ್ರಾ ಜಲಾಶದ ಕ್ರಸ್ಟ್ ಗೇಟ್ ಲೋಕಾರ್ಪಣೆ ಹಿನ್ನಲೆಯಲ್ಲಿ ಅಹ್ವಾನಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾದಿದೆ. ಉದ್ಘಾಟಕರನ್ನು ಹೊರತುಪಡಿಸಿದರೆ ಶಾಸಕರು ಹಾಗೂ ಸಂಸದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಂದೇ ಸಲ ನಾಲ್ಕು ಗೇಟ್ ಗಳನ್ನ ಒಪನ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ. 1 ಎಸ್ ಪಿ , 2 ಎಎಸ್ಪಿ, 4 ಡಿವೈಎಸ್ಪಿ 14 ಇನ್ಸ್ಪೆಕ್ಟರ್ , 400 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.