ವಿಜಯಪುರ: ವಿಧಾನ ಪರಿಷತ್ ಸದಸ್ಯ, ಬಿಜೆಪಿಗ ಕೇಶವ ಪ್ರಸಾದ್ ಅವರಿದ್ದ ಕಾರನ್ನು ತಡೆದ ರಾಷ್ಟ್ರೀಯ ಹೆದ್ದಾರಿ ಟೋಲ್ ನಾಕಾ ಸಿಬ್ಬಂದಿ ನೀವು ನಿಜವಾದ ಎಂಎಲ್ಸಿ ಅನ್ನಲು ಸಾಕ್ಷಿ ಏನು? ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಎನ್ಎಚ್ 52ರ ವಿಜಯಪುರ ಹೊರವಲಯದ ಹಿಟ್ಟಿನಹಳ್ಳಿ ಬಳಿ ಭಾನುವಾರ ಪ್ರಸಾದ್ರಿದ್ದ ಕಾರನ್ನು ಟೋಲ್ ಸಿಬ್ಬಂದಿ ತಡೆದಿದ್ದರಿಂದ 1 ತಾಸು ಅವರು ಟೋಲ್ ಬಳಿಯೇ ಕಾಯುವಂತಾಯಿತು. ದಾಖಲೆ ತೋರಿಸಿದರೂ ಕಾರಿನ ಮೇಲಿನ ಎಂಎಲ್ಸಿ ಗುರುತಿನ ಚೀಟಿ ಕಿತ್ತು ಗಲಾಟೆ ಮಾಡಿ, ಚಾಲಕನ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಪ್ರಸಾದ್, ಕೊನೆಗೆ ಎಸ್ಪಿಗೆ ಕರೆ ಮಾಡಿದ ಬಳಿಕ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್, ಡಿವೈಎಸ್ಪಿ ಸ್ಥಳಕ್ಕೆ ಬಂದು ವಾಹನ ಬಿಡಿಸಿ ಕಳಿಸಿದ್ದಾರೆ.
09:51 PM (IST) Dec 22
ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಒಂದೇ ದಿನದಲ್ಲಿ ಚಿರತೆ ಸೆರೆ ಹಿಡಿದಿರುವ ಕಾರಣ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
09:11 PM (IST) Dec 22
ಎಚ್ಎಎಲ್ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ, ಭಾರತಕ್ಕೆ ರೆಕ್ಕೆ ನೀಡಿದ ಯುವ ಮಹಾರಾಜರ ದೂರದೃಷ್ಟಿ ಮತ್ತು ದಿಟ್ಟತನ, ಜಯಚಾಮರಾಜೇಂದ್ರ ಒಡೆಯರ್ ತನ್ನ 21ನೇ ವಯಸ್ಸಿಗೆ ಭಾರತದ ಏರೋಸ್ಪೇಸ್ ಪಯಣಕ್ಕೆ ನಾಂದಿ ಹಾಡುವಂತಹ ದಿಟ್ಟ ನಿರ್ಧಾರವೊಂದನ್ನು ಕೈಗೊಂಡರು.
09:10 PM (IST) Dec 22
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಬಾಕಿ ಉಳಿಸಿಕೊಂಡಿದ್ದ ರೂ. 2.67 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಿದೆ. ಪಂಚಾಯತ್ನಿಂದ ನೋಟಿಸ್ ಜಾರಿಯಾದ ಬಳಿಕ, ಆಡಳಿತ ಮಂಡಳಿಯು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸುವ ಮೂಲಕ ದೀರ್ಘಕಾಲದ ವಿವಾದಕ್ಕೆ ತೆರೆ ಎಳೆದಿದೆ.
08:21 PM (IST) Dec 22
ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ (PRR-1) ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಭೂಮಾಲೀಕರಿಗೆ ನೀಡಲಾಗುವ ಪರಿಹಾರದ ವಿವರಗಳನ್ನು ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ದಾಖಲೆ ಸಲ್ಲಿಸಿದ 15 ದಿನಗಳೊಳಗೆ ಪರಿಹಾರ ಇತ್ಯರ್ಥಪಡಿಸುವ ಭರವಸೆಯನ್ನು ನೀಡಲಾಗಿದೆ.
08:11 PM (IST) Dec 22
Sarla Aviation Starts Air Taxi Ground Testing in Bengaluru ಗ್ರೌಂಡ್ ಟೆಸ್ಟಿಂಗ್ ನಡೆಯುತ್ತಿರುವುದರಿಂದ, ಸರ್ಲಾ ಏವಿಯೇಷನ್ನ ಏರ್ ಟ್ಯಾಕ್ಸಿ ಕಾರ್ಯಕ್ರಮವು ಅದರ ಪ್ರಮುಖ ಮೌಲ್ಯೀಕರಣ ಹಂತವನ್ನು ಪ್ರವೇಶಿಸುತ್ತಿದೆ.
07:59 PM (IST) Dec 22
ದುಬೈನ ಹೊರವಲಯದಲ್ಲಿ ಅಲೆದಾಡುತ್ತಿದ್ದ ಒಂದು ವಿಚಿತ್ರ ಪ್ರಾಣಿಯನ್ನು ನೋಡಿದ್ದಾಗಿ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಆ ಪ್ರಾಣಿಯ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಒಂದೇ ದಿನದಲ್ಲಿ 16 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ.
07:54 PM (IST) Dec 22
07:49 PM (IST) Dec 22
ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರವು ರಾಜ್ಯಗಳ ಸಹಕಾರವನ್ನು ಕೋರಿದೆ. ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕವು ಉತ್ತಮ ನಿರ್ಗಮನ ಪ್ರಸ್ತಾಪಕ್ಕಾಗಿ ಕಾಯುತ್ತಿದೆ.
07:17 PM (IST) Dec 22
ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕ ಪತ್ತೆಗೆ ಜಲಮಂಡಳಿ 'ಬ್ಲೂ ಫೋರ್ಸ್' ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4,000ಕ್ಕೂ ಹೆಚ್ಚು ಸ್ಥಳಗಳ ತಪಾಸಣೆ ನಡೆಸಿ ಅನಧಿಕೃತ ನೀರಿನ ಸಂಪರ್ಕಗಳಿಗೆ ಬ್ರೇಕ್ ಹಾಕಿದೆ.
07:08 PM (IST) Dec 22
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಟೇಕಲ್ನಲ್ಲಿ 23.5 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ರಾಜ್ಯದಲ್ಲಿ 2000 ಕೋಟಿ ರೂ. ವೆಚ್ಚದ ರೈಲ್ವೇ ಆಧುನೀಕರಣ ಮತ್ತು ಕೋಲಾರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
06:47 PM (IST) Dec 22
'ತುಪ್ಪದ ಬೆಡಗಿ' ಖ್ಯಾತಿಯ ನಟಿ ರಾಗಿಣಿ ದ್ವಿವೇದಿ, ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸಿದೆ ಮತ್ತು ಕಷ್ಟದ ಸಮಯದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
06:45 PM (IST) Dec 22
ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ 2019ರಿಂದ ಭಾಗಶಃ ಮುಚ್ಚಲಾಗಿದ್ದ ಬೆಂಗಳೂರಿನ ಕಾಮರಾಜ್ ರಸ್ತೆಯು, ಜನವರಿ 2026ರ ಆರಂಭದಲ್ಲಿ ದ್ವಿಮುಖ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲಿದೆ. ಇದು ಎಂಜಿ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತಲಿನ ದಟ್ಟಣೆಯನ್ನು ಕಡಿಮೆ ಮಾಡಲಿದೆ.
06:44 PM (IST) Dec 22
ಬೆಂಗಳೂರು ಮೆಟ್ರೋದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಡಿಸೆಂಬರ್ 23, 2025 ರಿಂದ 6ನೇ ರೈಲು ಸೇವೆಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ, ಜನದಟ್ಟಣೆ ವೇಳೆ ರೈಲುಗಳ ನಡುವಿನ ಅಂತರವು 15 ನಿಮಿಷಗಳಿಂದ 13 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದೆ.
06:12 PM (IST) Dec 22
05:52 PM (IST) Dec 22
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 'ರಾಮೇಶ್ವರಂ ಕೆಫೆ' ವಿರುದ್ಧ ದಾಖಲಾಗಿದ್ದ ಎಫ್ಐಆರ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮೇಲ್ನೋಟಕ್ಕೆ ಆರೋಪಗಳು ಸುಳ್ಳು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತನಿಖೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ.
05:48 PM (IST) Dec 22
ಸಿಎಂ ಸ್ಥಾನದ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಿಎಂ ಬದಲಾವಣೆಯ ಚರ್ಚೆಯೇ ಇಲ್ಲ ಎಂದರು.
05:15 PM (IST) Dec 22
ಬಾಲಿವುಡ್ ನಟಿ ಹುಮಾ ಖುರೇಷಿ ಇತ್ತೀಚೆಗೆ ಧರಿಸಿದ್ದ ಹರಿದು ಚಿಂದಿಯಾದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಗಮನ ಸೆಳೆಯಲು ಯತ್ನಿಸಿರುವ ನಟಿಯ ಈ ಡ್ರೆಸ್ನ ಬೆಲೆ ಕೇಳಿ ಫ್ಯಾನ್ಸ್ ಹೌಹಾರಿದ್ದಾರೆ. ಸೆಲೆಬ್ರಿಟಿಗಳ ವಿಚಿತ್ರ ಫ್ಯಾಷನ್ ಕುರಿತು ಚರ್ಚೆ ಹುಟ್ಟುಹಾಕಿದೆ
05:06 PM (IST) Dec 22
ಕಲಬುರಗಿ ಜಿಲ್ಲೆಯ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಮಠದಲ್ಲಿ, ಎಂಟು ತಿಂಗಳ ನಂತರ ಮರಳಿದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದಾರೆ. ಹೊಸ ಪೀಠಾಧಿಪತಿ ನೇಮಕದ ಚರ್ಚೆಯ ನಡುವೆ ನಡೆದ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
04:23 PM (IST) Dec 22
04:22 PM (IST) Dec 22
ಬಳ್ಳಾರಿಯ ಹುಸೇನ್ ನಗರದಲ್ಲಿ ಮುನ್ನಿ ಎಂಬ 23 ವರ್ಷದ ಗೃಹಿಣಿ ವಿಡಿಯೋ ಮಾಡುತ್ತಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಮನಸ್ಸು ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
03:52 PM (IST) Dec 22
ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಸ್ಪರ್ಧಿಗಳು ಇತರರನ್ನು ನಾಮಿನೇಟ್ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ಸ್ಪಂದನಾ ಸೋಮಣ್ಣರನ್ನು ವೀಕ್ ಎಂದು ಹೇಳಿದರೆ, ರಕ್ಷಿತಾ ಶೆಟ್ಟಿ ಧನುಷ್ ಹೆಸರನ್ನು ತೆಗೆದುಕೊಂಡರು. ಇತ್ತ ರಾಷಿಕಾ, ಗಿಲ್ಲಿ ನಟನನ್ನು ಬಹುದೊಡ್ಡ ಮೋಸಗಾರ ಎಂದಿದ್ದಾರೆ.
03:11 PM (IST) Dec 22
ಬೆಳಗಾವಿಯ ಹಲಗಾ ಗ್ರಾಮವು ಡಿಜಿಟಲ್ ವ್ಯಸನಕ್ಕೆ ಕಡಿವಾಣ ಹಾಕಲು 'ಡಿಜಿಟಲ್ ಆಫ್' ಎಂಬ ಮಾದರಿ ಪ್ರಯೋಗವನ್ನು ಆರಂಭಿಸಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಸೈರನ್ ಮೊಳಗಿಸಿ, ಗ್ರಾಮಸ್ಥರು ಮೊಬೈಲ್ ಮತ್ತು ಟಿವಿಗಳನ್ನು ಆಫ್ ಮಾಡಿ ಮಕ್ಕಳು ಓದುತ್ತಾರೆ.
02:29 PM (IST) Dec 22
ಬಿಗ್ಬಾಸ್ ಮನೆಯಲ್ಲಿ ಜಗಳದಿಂದಲೇ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅವರ ಬಗ್ಗೆ ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಯಾರಿಗೂ ತಿಳಿಯದ ಕೆಲವೊಂದು ಗುಟ್ಟುಗಳನ್ನು ಹೇಳಿದ್ದಾರೆ. ಅವರು ಹೇಳಿದ್ದೇನು?
02:29 PM (IST) Dec 22
ಕ್ರಿಸ್ಮಸ್ ಹಬ್ಬದ ಪ್ರಯುಕ್ತ, ಕೆಎಸ್ಆರ್ಟಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಡಿಸೆಂಬರ್ 22 ರಿಂದ 24ರ ವರೆಗೆ 1000 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ರಾಜ್ಯದ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆಗಳು ಸಂಚರಿಸಲಿದೆ.
02:14 PM (IST) Dec 22
ಮದ್ಯ ಮಾರಾಟ ಇಳಿಕೆಯಿಂದಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಅಬಕಾರಿ ಇಲಾಖೆಯು, ರಾಜ್ಯದ 477 ವೈನ್ ಶಾಪ್ ಹಾಗೂ 92 ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ಲೈಸೆನ್ಸ್ಗಳನ್ನು ಇ-ಹರಾಜು ಮಾಡಲು ಅಧಿಸೂಚನೆ ಹೊರಡಿಸಿದೆ.
02:09 PM (IST) Dec 22
ರಾಜ್ಯದ ವಿಜಯಪುರ ಜಿಲ್ಲೆಯಿಂದ 3 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಹೊಂದಿರುವ ಲಿಂಬೆಹಣ್ಣನ್ನು ಯಶಸ್ವಿಯಾಗಿ ಓಮನ್ಗೆ ರಫ್ತು ಮಾಡಲಾಗಿದೆ. ಈ ಹಿಂದೆ ದುಬೈ ಹಾಗೂ ಯುನೈಟೆಡ್ ಕಿಂಗ್ಡಮ್ಗೂ ರಫ್ತು ಮಾಡಲಾಗಿದೆ.
01:58 PM (IST) Dec 22
01:29 PM (IST) Dec 22
ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದಾಗ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಈ ಸಾವಿಗೆ ಕಾರಣ ಯಾರು? ಮದ್ಯ ನಿಷೇಧದ ಅಗತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
01:02 PM (IST) Dec 22
ಬೆಂಗಳೂರು: 2025ರ ಮುಕ್ತಾಯಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತ ಕ್ರಿಕೆಟ್ ಪಾಲಿಗೆ ಈ ವರ್ಷ ಹಲವು ಅವಿಸ್ಮರಣೀಯ ಕ್ಷಣಗಳು ಸಿಕ್ಕಿವೆ. ಭಾರತ ಕ್ರಿಕೆಟ್ ಪಾಲಿಗೆ ಸಿಕ್ಕ ಐದು ಅಪರೂಪದ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ ಬನ್ನಿ.
12:48 PM (IST) Dec 22
ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್.ವಾಘ್ಮೋರೆಗೆ 'ಟಾಪ್ ಎಕ್ಸಲೆನ್ಸ್ ಅವಾರ್ಡ್' ಲಭಿಸಿದೆ. ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಸಿಕ್ಕ ಮೊದಲ ಅಂತರಾಷ್ಟ್ರೀಯ ಗೌರವ, ಕನ್ನಡ ಲಿಪಿಯ ಸೌಂದರ್ಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಜಾಗತಿಕ ಮನ್ನಣೆ
12:37 PM (IST) Dec 22
ದೆಹಲಿ ಬಾಂಬ್ ಸ್ಪೋಟಕ್ಕೂ ನಿಮಗೂ ಸಂಬಂಧವಿರುವುದು ಪತ್ತೆಯಾಗಿದೆ ಎಂದು ಸುಳ್ಳು ಬೆದರಿಕೆ ಹಾಕಿ, ಸುದೀಪ್ ಅಭಿಮಾನಿಯಿಂದ ಸೈಬರ್ ಕಳ್ಳರು 5.53 ಲಕ್ಷ ರೂಪಾಯಿ ವಂಚಿಸಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಆಗಿದೆ.
12:33 PM (IST) Dec 22
ಸುದೀಪ್ ನೀಡಿದ ಹೇಳಿಕೆ ಸ್ಟಾರ್ ವಾರ್ ಚರ್ಚೆಗೆ ಕಾರಣವಾಗಿದೆ. ಈ ವಿವಾದದ ಕುರಿತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಪ್ರತಿಕ್ರಿಯಿಸಿದ್ದು, ಸುದೀಪ್ ಮಾತುಗಳು ಯಾವುದೇ ನಟನ ವಿರುದ್ಧವಾಗಿರಲಿಲ್ಲ, ಬದಲಿಗೆ ಸಿನಿಮಾ ಪೈರಸಿ ಮತ್ತು ನಕಲಿ ವಿಮರ್ಶೆಗಳ ವಿರುದ್ಧದ ಎಚ್ಚರಿಕೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
12:29 PM (IST) Dec 22
ಯಾದಗಿರಿ ಜಿಲ್ಲೆಯ ಕೆಂಭಾವಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕರು, ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿನಿಯರೊಂದಿಗೆ ಸ್ವಿಮ್ಮಿಂಗ್ ಪೂಲ್ನಲ್ಲಿ ಅರೆಬೆತ್ತಲೆಯಾಗಿ ಮೋಜು-ಮಸ್ತಿ ಮಾಡಿದ್ದಾರೆ. ಈ ಅಸಭ್ಯ ವರ್ತನೆಗೆ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ
12:16 PM (IST) Dec 22
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಅತಿ ವೇಗದಿಂದಾಗಿ ಶಾಲಾ ಮಕ್ಕಳ ಜೀಪ್ ಪಲ್ಟಿಯಾಗಿದ್ದು, ಕೇರಳದ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಜೀಪು ಕಮರಿಗೆ ಬೀಳುವುದು ತಪ್ಪಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
11:43 AM (IST) Dec 22
ಕುಕ್ಕೆ ಸುಬ್ರಹ್ಮಣ್ಯದ ಕಿರುಷಷ್ಠಿ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರುಗಳನ್ನು ಸೇರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರೊಟೊಕಾಲ್ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.
11:41 AM (IST) Dec 22
ಬಿಗ್ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಮತ್ತು ರಜತ್ ಹೊರಬಂದಿದ್ದು, ಅವರು ಅತಿಥಿಗಳಾಗಿದ್ದರು ಎಂಬುದು ಸ್ಪಷ್ಟವಾಗಿದೆ. ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡಲು ತಮ್ಮನ್ನು ಕಳುಹಿಸಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳ ಜೊತೆ ಚೈತ್ರಾ ಹೇಳಿದ್ದೇನು?
11:31 AM (IST) Dec 22
11:01 AM (IST) Dec 22
ಮಂಗಳೂರು ಮಹಾನಗರ ಪಾಲಿಕೆಯು ಕಸ ನಿರ್ವಹಣೆಯನ್ನು ವಹಿಸಿಕೊಂಡ ನಂತರ, ನಗರದಲ್ಲಿ ಮತ್ತೆ 'ಬ್ಲ್ಯಾಕ್ ಸ್ಪಾಟ್'ಗಳು ತಲೆ ಎತ್ತುತ್ತಿವೆ. ಮನೆ-ಮನೆ ಕಸ ಸಂಗ್ರಹಣೆಯಲ್ಲಿನ ವೈಫಲ್ಯ ಮತ್ತು ರಸ್ತೆ ಬದಿಯಲ್ಲೇ ಕಸ ವರ್ಗಾವಣೆಯಿಂದಾಗಿ ಸ್ವಚ್ಛ ಮಂಗಳೂರು ಎಂಬ ಹೆಗ್ಗಳಿಕೆಗೆ ಕುತ್ತು ಬಂದಿದೆ.
10:52 AM (IST) Dec 22
10:32 AM (IST) Dec 22
ಬೆಂಗಳೂರಿನ ಟ್ರಾಫಿಕ್ ನಿವಾರಣೆಗೆ ಉದ್ದೇಶಿಸಲಾದ ಟನಲ್ ರಸ್ತೆ ಯೋಜನೆಗೆ ಅದಾನಿ ಗ್ರೂಪ್ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಅದಾನಿ ವಿರೋಧಿಸುವ ಕಾಂಗ್ರೆಸ್ ಸರ್ಕಾರಕ್ಕೆ ಇದು ರಾಜಕೀಯವಾಗಿ ಇಕ್ಕಟ್ಟನ್ನು ಸೃಷ್ಟಿಸಿದೆ.