LIVE NOW
Published : Dec 22, 2025, 06:48 AM ISTUpdated : Dec 22, 2025, 09:51 PM IST

Karnataka News Live: ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ

ಸಾರಾಂಶ

ವಿಜಯಪುರ: ವಿಧಾನ ಪರಿಷತ್ ಸದಸ್ಯ, ಬಿಜೆಪಿಗ ಕೇಶವ ಪ್ರಸಾದ್‌ ಅವರಿದ್ದ ಕಾರನ್ನು ತಡೆದ ರಾಷ್ಟ್ರೀಯ ಹೆದ್ದಾರಿ ಟೋಲ್‌ ನಾಕಾ ಸಿಬ್ಬಂದಿ ನೀವು ನಿಜವಾದ ಎಂಎಲ್‌ಸಿ ಅನ್ನಲು ಸಾಕ್ಷಿ ಏನು? ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಎನ್‌ಎಚ್‌ 52ರ ವಿಜಯಪುರ ಹೊರವಲಯದ ಹಿಟ್ಟಿನಹಳ್ಳಿ ಬಳಿ ಭಾನುವಾರ ಪ್ರಸಾದ್‌ರಿದ್ದ ಕಾರನ್ನು ಟೋಲ್‌ ಸಿಬ್ಬಂದಿ ತಡೆದಿದ್ದರಿಂದ 1 ತಾಸು ಅವರು ಟೋಲ್‌ ಬಳಿಯೇ ಕಾಯುವಂತಾಯಿತು. ದಾಖಲೆ ತೋರಿಸಿದರೂ ಕಾರಿನ ಮೇಲಿನ ಎಂಎಲ್‌ಸಿ ಗುರುತಿನ ಚೀಟಿ ಕಿತ್ತು ಗಲಾಟೆ ಮಾಡಿ, ಚಾಲಕನ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಪ್ರಸಾದ್‌, ಕೊನೆಗೆ ಎಸ್‌ಪಿಗೆ ಕರೆ ಮಾಡಿದ ಬಳಿಕ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್‌, ಡಿವೈಎಸ್ಪಿ ಸ್ಥಳಕ್ಕೆ ಬಂದು ವಾಹನ ಬಿಡಿಸಿ ಕಳಿಸಿದ್ದಾರೆ.

 

09:51 PM (IST) Dec 22

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಒಂದೇ ದಿನದಲ್ಲಿ ಚಿರತೆ ಸೆರೆ ಹಿಡಿದಿರುವ ಕಾರಣ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

 

Read Full Story

09:11 PM (IST) Dec 22

ಎಚ್‌ಎಎಲ್‌ ಸ್ಥಾಪನಾ ದಿನ - ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ

‌ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ, ಭಾರತಕ್ಕೆ ರೆಕ್ಕೆ ನೀಡಿದ ಯುವ ಮಹಾರಾಜರ ದೂರದೃಷ್ಟಿ ಮತ್ತು ದಿಟ್ಟತನ, ಜಯಚಾಮರಾಜೇಂದ್ರ ಒಡೆಯರ್‌ ತನ್ನ 21ನೇ ವಯಸ್ಸಿಗೆ ಭಾರತದ ಏರೋಸ್ಪೇಸ್‌ ಪಯಣಕ್ಕೆ ನಾಂದಿ ಹಾಡುವಂತಹ ದಿಟ್ಟ ನಿರ್ಧಾರವೊಂದನ್ನು ಕೈಗೊಂಡರು.

Read Full Story

09:10 PM (IST) Dec 22

ಕುಕ್ಕೆ ದೇಗುಲದ ತೆರಿಗೆ ವಿವಾದ ತೆರೆ, ನೋಟಿಸ್‌ ಬೆನ್ನಲ್ಲೇ ಗ್ರಾಮ ಪಂಚಾಯತ್‌ಗೆ 2.67 ಕೋಟಿ ಪಾವತಿಸಿದ ಆಡಳಿತ ಮಂಡಳಿ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಬಾಕಿ ಉಳಿಸಿಕೊಂಡಿದ್ದ ರೂ. 2.67 ಕೋಟಿ ಆಸ್ತಿ ತೆರಿಗೆಯನ್ನು ಪಾವತಿಸಿದೆ. ಪಂಚಾಯತ್‌ನಿಂದ  ನೋಟಿಸ್ ಜಾರಿಯಾದ ಬಳಿಕ,  ಆಡಳಿತ ಮಂಡಳಿಯು ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸುವ ಮೂಲಕ ದೀರ್ಘಕಾಲದ ವಿವಾದಕ್ಕೆ ತೆರೆ ಎಳೆದಿದೆ.

Read Full Story

08:21 PM (IST) Dec 22

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ - ಭೂಸ್ವಾಧೀನಕ್ಕೆ ವೇಗ; ಎಕರೆಗೆ ₹15.60 ಕೋಟಿವರೆಗೂ ಸಿಗಲಿದೆ ಪರಿಹಾರ!

ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ (PRR-1) ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಂಡಿದ್ದು, ಭೂಮಾಲೀಕರಿಗೆ ನೀಡಲಾಗುವ ಪರಿಹಾರದ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಾಖಲೆ ಸಲ್ಲಿಸಿದ 15 ದಿನಗಳೊಳಗೆ ಪರಿಹಾರ ಇತ್ಯರ್ಥಪಡಿಸುವ ಭರವಸೆಯನ್ನು ನೀಡಲಾಗಿದೆ.

Read Full Story

08:11 PM (IST) Dec 22

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌

Sarla Aviation Starts Air Taxi Ground Testing in Bengaluru ಗ್ರೌಂಡ್‌ ಟೆಸ್ಟಿಂಗ್‌ ನಡೆಯುತ್ತಿರುವುದರಿಂದ, ಸರ್ಲಾ ಏವಿಯೇಷನ್‌ನ ಏರ್ ಟ್ಯಾಕ್ಸಿ ಕಾರ್ಯಕ್ರಮವು ಅದರ ಪ್ರಮುಖ ಮೌಲ್ಯೀಕರಣ ಹಂತವನ್ನು ಪ್ರವೇಶಿಸುತ್ತಿದೆ.

 

Read Full Story

07:59 PM (IST) Dec 22

ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ - ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!

ದುಬೈನ ಹೊರವಲಯದಲ್ಲಿ ಅಲೆದಾಡುತ್ತಿದ್ದ ಒಂದು ವಿಚಿತ್ರ ಪ್ರಾಣಿಯನ್ನು ನೋಡಿದ್ದಾಗಿ ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ಆ ಪ್ರಾಣಿಯ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಒಂದೇ ದಿನದಲ್ಲಿ 16 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ.

Read Full Story

07:54 PM (IST) Dec 22

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!

ಕರ್ನಾಟಕದ ಮಾಜಿ ಆಫ್ ಸ್ಪಿನ್ನರ್ ಕೆ. ಗೌತಮ್ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸುಮಾರು 14 ವರ್ಷಗಳ ಕಾಲ ಕರ್ನಾಟಕ, ಟೀಮ್ ಇಂಡಿಯಾ ಹಾಗೂ ಐಪಿಎಲ್‌ನಲ್ಲಿ ಆಡಿದ ಅವರು, ಇತ್ತೀಚೆಗೆ ಅವಕಾಶಗಳ ಕೊರತೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Read Full Story

07:49 PM (IST) Dec 22

ಕೊಂಕಣ ರೈಲ್ವೆ ಭಾರತೀಯ ರೈಲ್ವೇ ವಿಲೀನಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಬೇಕು - ಸಚಿವ ಅಶ್ವಿನಿ ವೈಷ್ಣವ್

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರವು ರಾಜ್ಯಗಳ ಸಹಕಾರವನ್ನು ಕೋರಿದೆ. ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಒಪ್ಪಿಗೆ ಸೂಚಿಸಿದ್ದು, ಕರ್ನಾಟಕವು ಉತ್ತಮ ನಿರ್ಗಮನ ಪ್ರಸ್ತಾಪಕ್ಕಾಗಿ ಕಾಯುತ್ತಿದೆ.  

Read Full Story

07:17 PM (IST) Dec 22

ಬೆಂಗಳೂರಲ್ಲಿ ಅಖಾಡಕ್ಕಿಳಿದ 'ಬ್ಲೂ ಫೋರ್ಸ್' - ಜಲಮಂಡಳಿ ನೀರುಗಳ್ಳರಿಗೆ ಕರ್ಮ ರಿಟರ್ನ್ಸ್ ಫಿಕ್ಸ್!

ಅಕ್ರಮ ನೀರು ಮತ್ತು ಒಳಚರಂಡಿ ಸಂಪರ್ಕ ಪತ್ತೆಗೆ ಜಲಮಂಡಳಿ 'ಬ್ಲೂ ಫೋರ್ಸ್' ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 4,000ಕ್ಕೂ ಹೆಚ್ಚು ಸ್ಥಳಗಳ ತಪಾಸಣೆ ನಡೆಸಿ ಅನಧಿಕೃತ ನೀರಿನ ಸಂಪರ್ಕಗಳಿಗೆ ಬ್ರೇಕ್ ಹಾಕಿದೆ.

Read Full Story

07:08 PM (IST) Dec 22

ರಾಜ್ಯಾದ್ಯಂತ 2000 ಕೋಟಿ ವೆಚ್ಚದಲ್ಲಿ ರೈಲ್ವೆ ವಿದ್ಯುದ್ದೀಕರಣ, ಆಧುನೀಕರಣ, ಕೋಲಾರದಲ್ಲಿ ರೈಲ್ವೆ ಫ್ಯಾಕ್ಟರಿ?

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಟೇಕಲ್‌ನಲ್ಲಿ 23.5 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ, ರಾಜ್ಯದಲ್ಲಿ  2000 ಕೋಟಿ ರೂ. ವೆಚ್ಚದ ರೈಲ್ವೇ ಆಧುನೀಕರಣ ಮತ್ತು ಕೋಲಾರದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

Read Full Story

06:47 PM (IST) Dec 22

ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ - ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?

'ತುಪ್ಪದ ಬೆಡಗಿ' ಖ್ಯಾತಿಯ ನಟಿ ರಾಗಿಣಿ ದ್ವಿವೇದಿ, ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸಿದೆ ಮತ್ತು ಕಷ್ಟದ ಸಮಯದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

Read Full Story

06:45 PM (IST) Dec 22

ಬರೋಬ್ಬರಿ 6 ವರ್ಷಗಳ ಬಳಿಕ ಸಂಚಾರಕ್ಕೆ ಮುಕ್ತವಾಗಲಿದೆ ಬೆಂಗಳೂರಿನ ಕಾಮರಾಜ್‌ ರಸ್ತೆ!

ನಮ್ಮ ಮೆಟ್ರೋ ಕಾಮಗಾರಿಯಿಂದಾಗಿ 2019ರಿಂದ ಭಾಗಶಃ ಮುಚ್ಚಲಾಗಿದ್ದ ಬೆಂಗಳೂರಿನ ಕಾಮರಾಜ್ ರಸ್ತೆಯು, ಜನವರಿ 2026ರ ಆರಂಭದಲ್ಲಿ ದ್ವಿಮುಖ ಸಂಚಾರಕ್ಕೆ ಸಂಪೂರ್ಣವಾಗಿ ತೆರೆಯಲಿದೆ. ಇದು ಎಂಜಿ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ ಸುತ್ತಮುತ್ತಲಿನ ದಟ್ಟಣೆಯನ್ನು ಕಡಿಮೆ ಮಾಡಲಿದೆ.

Read Full Story

06:44 PM (IST) Dec 22

ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗ - 6ನೇ ರೈಲು ಸೇರ್ಪಡೆ, ಇನ್ಮುಂದೆ 13 ನಿಮಿಷಕ್ಕೊಂದು ರೈಲು ಸಂಚಾರ!

ಬೆಂಗಳೂರು ಮೆಟ್ರೋದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಡಿಸೆಂಬರ್ 23, 2025 ರಿಂದ 6ನೇ ರೈಲು ಸೇವೆಗೆ ಸೇರ್ಪಡೆಯಾಗಲಿದೆ. ಇದರಿಂದಾಗಿ, ಜನದಟ್ಟಣೆ ವೇಳೆ ರೈಲುಗಳ ನಡುವಿನ ಅಂತರವು 15 ನಿಮಿಷಗಳಿಂದ 13 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಪ್ರಯಾಣಿಕರ ಕಾಯುವ ಸಮಯ ಕಡಿಮೆಯಾಗಲಿದೆ.

Read Full Story

06:12 PM (IST) Dec 22

Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ - ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?

ಬಿಗ್​ಬಾಸ್​ ಸೀಸನ್​ 12ಕ್ಕೆ ಅತಿಥಿಗಳಾಗಿ ಪ್ರವೇಶಿಸಿದ್ದ ರಜತ್​ ಮತ್ತು ಚೈತ್ರಾ ಕುಂದಾಪುರ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎರಡನೇ ಬಾರಿಯ ಬಿಗ್​ಬಾಸ್​ ಅನುಭವವನ್ನು ಹಂಚಿಕೊಂಡ ಅವರು, ಸೀಸನ್ 11 ಕ್ಕಿಂತ 10 ಪಟ್ಟು ಹೆಚ್ಚು ಸಂಭಾವನೆ ಪಡೆದಿರುವುದಾಗಿ ರಜತ್ ಬಹಿರಂಗಪಡಿಸಿದ್ದಾರೆ.
Read Full Story

05:52 PM (IST) Dec 22

ರಾಮೇಶ್ವರಂ ಕೆಫೆಗೆ ಬಿಗ್ ರಿಲೀಫ್ - ವಿಮಾನ ನಿಲ್ದಾಣ ಮಳಿಗೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 'ರಾಮೇಶ್ವರಂ ಕೆಫೆ' ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ತನಿಖೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಮೇಲ್ನೋಟಕ್ಕೆ ಆರೋಪಗಳು ಸುಳ್ಳು ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ತನಿಖೆಯನ್ನು ಸ್ಥಗಿತಗೊಳಿಸಲು ಆದೇಶಿಸಿದೆ.

Read Full Story

05:48 PM (IST) Dec 22

ಶಾಸಕ ಕೆ.ಎನ್ ರಾಜಣ್ಣ-ಡಿಕೆಶಿ ಭೇಟಿಯಲ್ಲಿ ತಪ್ಪಿಲ್ಲ, ಸಿಎಂ ಸ್ಥಾನ ಬದಲಾವಣೆ ವಿಷಯದ ಚರ್ಚೆ ಇಲ್ಲ - ಶಾಸಕ ಪೊನ್ನಣ್ಣ

ಸಿಎಂ ಸ್ಥಾನದ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,   ಸಿಎಂ ಬದಲಾವಣೆಯ ಚರ್ಚೆಯೇ ಇಲ್ಲ ಎಂದರು.

Read Full Story

05:15 PM (IST) Dec 22

ಚಿಂದಿ ಬಟ್ಟೆ ಧರಿಸಿ ಜಾಲತಾಣದಲ್ಲಿ ಚಿಂದಿ ಉಡಾಯಿಸಿದ Toxic ನಟಿ - ಬೆಲೆ ಕೇಳಿದ್ರೆ ಹೌಹಾರಿ ಹೋಗ್ತೀರಾ!

ಬಾಲಿವುಡ್ ನಟಿ ಹುಮಾ ಖುರೇಷಿ ಇತ್ತೀಚೆಗೆ ಧರಿಸಿದ್ದ ಹರಿದು ಚಿಂದಿಯಾದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಫ್ಯಾಷನ್ ಹೆಸರಿನಲ್ಲಿ ಗಮನ ಸೆಳೆಯಲು ಯತ್ನಿಸಿರುವ ನಟಿಯ ಈ ಡ್ರೆಸ್‌ನ ಬೆಲೆ ಕೇಳಿ ಫ್ಯಾನ್ಸ್​ ಹೌಹಾರಿದ್ದಾರೆ. ಸೆಲೆಬ್ರಿಟಿಗಳ ವಿಚಿತ್ರ ಫ್ಯಾಷನ್ ಕುರಿತು ಚರ್ಚೆ ಹುಟ್ಟುಹಾಕಿದೆ

Read Full Story

05:06 PM (IST) Dec 22

ಕಲಬುರಗಿ - ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ

ಕಲಬುರಗಿ ಜಿಲ್ಲೆಯ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಮಠದಲ್ಲಿ, ಎಂಟು ತಿಂಗಳ ನಂತರ ಮರಳಿದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದಾರೆ. ಹೊಸ ಪೀಠಾಧಿಪತಿ ನೇಮಕದ ಚರ್ಚೆಯ ನಡುವೆ ನಡೆದ ಈ ಘಟನೆ  ಹಲವು ಅನುಮಾನಗಳಿಗೆ ಕಾರಣವಾಗಿದೆ.

Read Full Story

04:23 PM (IST) Dec 22

'ಯಾವುದಾದರೂ ಪುಸ್ತಕ ಸುಟ್ಟುಹಾಕಿದ್ದರೆ ಅದರು ಹೇಳಿ ಹೋಗು ಕಾರಣ..' ಲೇಖಕಿಯ ಪೋಸ್ಟ್‌ಗೆ ಭಾರೀ ಕಾಮೆಂಟ್ಸ್‌!

ರವಿ ಬೆಳಗರೆಯವರ 'ಹೇಳಿ ಹೋಗು ಕಾರಣ' ಪುಸ್ತಕವು ಯುವಜನರಲ್ಲಿ ಇಂದಿಗೂ ಜನಪ್ರಿಯವಾಗಿದೆ. ಇತ್ತೀಚೆಗೆ ಲೇಖಕಿ ಪೂರ್ಣಿಮಾ ಹೆಗ್ಗಡೆ ಅವರು ಈ ಪುಸ್ತಕವನ್ನು ತಾನು ಸುಟ್ಟುಹಾಕಿದ್ದೆ ಎಂದು ಹೇಳಿಕೊಂಡಿದ್ದು, ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
Read Full Story

04:22 PM (IST) Dec 22

ಗಂಡನೂ ಇಲ್ಲ, ಪ್ರೇಮಿಯೂ ಸೇರಿಸ್ತಿಲ್ಲ; 'ಯಾರಿಗೆ ಬೇಕು ಈ ಲೋಕ'ವೆಂದು ಲೈವ್‌ನಲ್ಲಿ ನೇಣಿಗೆ ಶರಣಾದ ಗೃಹಿಣಿ!

ಬಳ್ಳಾರಿಯ ಹುಸೇನ್ ನಗರದಲ್ಲಿ ಮುನ್ನಿ ಎಂಬ 23 ವರ್ಷದ ಗೃಹಿಣಿ ವಿಡಿಯೋ ಮಾಡುತ್ತಲೇ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಮನಸ್ಸು ಘಟನೆಗೆ ಕಾರಣ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Read Full Story

03:52 PM (IST) Dec 22

Bigg Boss ಬಿಗ್​ ಟ್ವಿಸ್ಟ್​ - ಜಾಹ್ನವಿ ಹಾದಿ ಹಿಡಿದ್ರಾ ಅಶ್ವಿನಿ ಗೌಡ? ಗಿಲ್ಲಿ ಬಹಳ ಮೋಸಗಾರ ಅಂದದ್ದು ಯಾರು?

ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಸ್ಪರ್ಧಿಗಳು ಇತರರನ್ನು ನಾಮಿನೇಟ್ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ಸ್ಪಂದನಾ ಸೋಮಣ್ಣರನ್ನು ವೀಕ್ ಎಂದು ಹೇಳಿದರೆ, ರಕ್ಷಿತಾ ಶೆಟ್ಟಿ ಧನುಷ್ ಹೆಸರನ್ನು ತೆಗೆದುಕೊಂಡರು. ಇತ್ತ ರಾಷಿಕಾ, ಗಿಲ್ಲಿ ನಟನನ್ನು ಬಹುದೊಡ್ಡ ಮೋಸಗಾರ ಎಂದಿದ್ದಾರೆ.

Read Full Story

03:11 PM (IST) Dec 22

ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ - ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!

ಬೆಳಗಾವಿಯ ಹಲಗಾ ಗ್ರಾಮವು ಡಿಜಿಟಲ್ ವ್ಯಸನಕ್ಕೆ ಕಡಿವಾಣ ಹಾಕಲು 'ಡಿಜಿಟಲ್ ಆಫ್' ಎಂಬ ಮಾದರಿ ಪ್ರಯೋಗವನ್ನು ಆರಂಭಿಸಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಸೈರನ್ ಮೊಳಗಿಸಿ, ಗ್ರಾಮಸ್ಥರು ಮೊಬೈಲ್ ಮತ್ತು ಟಿವಿಗಳನ್ನು ಆಫ್ ಮಾಡಿ ಮಕ್ಕಳು ಓದುತ್ತಾರೆ. 

Read Full Story

02:29 PM (IST) Dec 22

Bigg Bossನಲ್ಲಿ ಅಶ್ವಿನಿ ಗೌಡ ವ್ಯವಹಾರದ ಕುರಿತು ಯಾರೂ ತಿಳಿಯದ ಬಹುದೊಡ್ಡ ಸೀಕ್ರೆಟ್​ ಬಿಚ್ಚಿಟ್ಟ ಅಭಿಷೇಕ್​!

ಬಿಗ್​ಬಾಸ್​ ಮನೆಯಲ್ಲಿ ಜಗಳದಿಂದಲೇ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅವರ ಬಗ್ಗೆ ಸಹ ಸ್ಪರ್ಧಿ ಅಭಿಷೇಕ್​ ಶ್ರೀಕಾಂತ್​ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಯಾರಿಗೂ ತಿಳಿಯದ ಕೆಲವೊಂದು ಗುಟ್ಟುಗಳನ್ನು  ಹೇಳಿದ್ದಾರೆ. ಅವರು ಹೇಳಿದ್ದೇನು? 

Read Full Story

02:29 PM (IST) Dec 22

ಕ್ರಿಸ್‌ಮಸ್‌ ಹಿನ್ನಲೆ, ಕೆಸ್ಸಾರ್ಟಿಸಿ ಪ್ರಯಾಣಿಕರಿಗೆ ಗುಡ್‌ನ್ಯೂಸ್‌!

ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ, ಕೆಎಸ್‌ಆರ್‌ಟಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಡಿಸೆಂಬರ್‌ 22 ರಿಂದ 24ರ ವರೆಗೆ 1000 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಿಂದ ರಾಜ್ಯದ ಹಾಗೂ ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆಗಳು ಸಂಚರಿಸಲಿದೆ.

Read Full Story

02:14 PM (IST) Dec 22

ಮಹಿಳಾ ಆಯೋಗ ವಿರೋಧಕ್ಕೂ ಡೋಂಟ್ ಕೇರ್ , 569 ಮದ್ಯದ ಲೈಸೆನ್ಸ್ ಇ-ಹರಾಜು; ಸರ್ಕಾರದ ಖಜಾನೆಗೆ ಬರಲಿದೆಯೇ ₹1,000 ಕೋಟಿ?

ಮದ್ಯ ಮಾರಾಟ ಇಳಿಕೆಯಿಂದಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿರುವ ಅಬಕಾರಿ ಇಲಾಖೆಯು, ರಾಜ್ಯದ 477 ವೈನ್‌ ಶಾಪ್‌ ಹಾಗೂ 92 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಧಿಸೂಚನೆ ಹೊರಡಿಸಿದೆ. 

Read Full Story

02:09 PM (IST) Dec 22

ಓಮನ್‌ ಮಾರುಕಟ್ಟೆಗೆ ಲಗ್ಗೆ ಇಟ್ಟ ವಿಜಯಪುರದ ಲಿಂಬೆ ಹಣ್ಣು!

ರಾಜ್ಯದ ವಿಜಯಪುರ ಜಿಲ್ಲೆಯಿಂದ 3 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಹೊಂದಿರುವ ಲಿಂಬೆಹಣ್ಣನ್ನು ಯಶಸ್ವಿಯಾಗಿ ಓಮನ್‌ಗೆ ರಫ್ತು ಮಾಡಲಾಗಿದೆ. ಈ ಹಿಂದೆ ದುಬೈ ಹಾಗೂ ಯುನೈಟೆಡ್ ಕಿಂಗ್‌ಡಮ್‌ಗೂ ರಫ್ತು ಮಾಡಲಾಗಿದೆ.

Read Full Story

01:58 PM (IST) Dec 22

ಕೊಪ್ಪಳ - ಆಟವಾಡುತ್ತಿದ್ದ 6 ವರ್ಷದ ಮಗು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!

ಕೊಪ್ಪಳದ ಹಮಾಲರ ಕಾಲೋನಿಯಲ್ಲಿ, ಆರು ವರ್ಷದ ಬಾಲಕನೊಬ್ಬ ಪಾರಿವಾಳ ಹಿಡಿಯಲು ಹೋಗಿ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
Read Full Story

01:29 PM (IST) Dec 22

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು - ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಬಿದ್ದಾಗ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಈ ಸಾವಿಗೆ ಕಾರಣ ಯಾರು? ಮದ್ಯ ನಿಷೇಧದ ಅಗತ್ಯತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Read Full Story

01:02 PM (IST) Dec 22

2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!

ಬೆಂಗಳೂರು: 2025ರ ಮುಕ್ತಾಯಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತ ಕ್ರಿಕೆಟ್ ಪಾಲಿಗೆ ಈ ವರ್ಷ ಹಲವು ಅವಿಸ್ಮರಣೀಯ ಕ್ಷಣಗಳು ಸಿಕ್ಕಿವೆ. ಭಾರತ ಕ್ರಿಕೆಟ್‌ ಪಾಲಿಗೆ ಸಿಕ್ಕ ಐದು ಅಪರೂಪದ ಕ್ಷಣಗಳನ್ನು ಮತ್ತೊಮ್ಮೆ ಮೆಲುಕು ಹಾಕೋಣ ಬನ್ನಿ.

 

Read Full Story

12:48 PM (IST) Dec 22

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ

ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವ ಕ್ಯಾಲಿಗ್ರಫಿ ಪ್ರದರ್ಶನದಲ್ಲಿ ಕನ್ನಡ ಕ್ಯಾಲಿಗ್ರಾಫರ್ ಸುರೇಶ್ ಎಸ್.ವಾಘ್ಮೋರೆಗೆ 'ಟಾಪ್ ಎಕ್ಸಲೆನ್ಸ್ ಅವಾರ್ಡ್' ಲಭಿಸಿದೆ. ಕನ್ನಡ ಕ್ಯಾಲಿಗ್ರಫಿ ಕ್ಷೇತ್ರಕ್ಕೆ ಸಿಕ್ಕ ಮೊದಲ ಅಂತರಾಷ್ಟ್ರೀಯ ಗೌರವ, ಕನ್ನಡ ಲಿಪಿಯ ಸೌಂದರ್ಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಜಾಗತಿಕ ಮನ್ನಣೆ

Read Full Story

12:37 PM (IST) Dec 22

ಕಿಚ್ಚ ಸುದೀಪ್ ಅಭಿಮಾನಿಗೆ ದೆಹಲಿ ಸ್ಪೋಟದ ನಂಟು; ಡಿಜಿಟಲ್ ಅರೆಸ್ಟ್ ಮಾಡಿ ₹5.5 ಲಕ್ಷ ಪಂಗನಾಮ!

ದೆಹಲಿ ಬಾಂಬ್ ಸ್ಪೋಟಕ್ಕೂ ನಿಮಗೂ ಸಂಬಂಧವಿರುವುದು ಪತ್ತೆಯಾಗಿದೆ ಎಂದು ಸುಳ್ಳು ಬೆದರಿಕೆ ಹಾಕಿ, ಸುದೀಪ್ ಅಭಿಮಾನಿಯಿಂದ ಸೈಬರ್ ಕಳ್ಳರು 5.53 ಲಕ್ಷ ರೂಪಾಯಿ ವಂಚಿಸಿದ್ದಾರೆ. ದಕ್ಷಿಣ ಸಿಇಎನ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

Read Full Story

12:33 PM (IST) Dec 22

ಮಾರ್ಕ್ ಸುದೀಪ್ ಆಡಿದ ಮಾತುಗಳನ್ನು ಡಿಕೋಡ್ ಮಾಡಿದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ

ಸುದೀಪ್ ನೀಡಿದ ಹೇಳಿಕೆ ಸ್ಟಾರ್ ವಾರ್ ಚರ್ಚೆಗೆ ಕಾರಣವಾಗಿದೆ. ಈ ವಿವಾದದ ಕುರಿತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಪ್ರತಿಕ್ರಿಯಿಸಿದ್ದು, ಸುದೀಪ್ ಮಾತುಗಳು ಯಾವುದೇ ನಟನ ವಿರುದ್ಧವಾಗಿರಲಿಲ್ಲ, ಬದಲಿಗೆ ಸಿನಿಮಾ ಪೈರಸಿ ಮತ್ತು ನಕಲಿ ವಿಮರ್ಶೆಗಳ ವಿರುದ್ಧದ ಎಚ್ಚರಿಕೆಯಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

12:29 PM (IST) Dec 22

ಯಾದಗಿರಿ - ಪ್ರವಾಸಕ್ಕೆ ಹೋದ ವಿದ್ಯಾರ್ಥಿನಿಯರೊಂದಿಗೆ ಜಲಕ್ರೀಡೆ! ಶಿಕ್ಷಕರ ಅಸಭ್ಯ ವರ್ತನೆಗೆ ಪೋಷಕರು ಕೆಂಡಾಮಂಡಲ!

ಯಾದಗಿರಿ ಜಿಲ್ಲೆಯ ಕೆಂಭಾವಿ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಶಿಕ್ಷಕರು, ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿನಿಯರೊಂದಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅರೆಬೆತ್ತಲೆಯಾಗಿ ಮೋಜು-ಮಸ್ತಿ ಮಾಡಿದ್ದಾರೆ. ಈ ಅಸಭ್ಯ ವರ್ತನೆಗೆ ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ

Read Full Story

12:16 PM (IST) Dec 22

ಚಿಕ್ಕಮಗಳೂರು ಮುಳ್ಳಯ್ಯನಗಿರಿ ರಸ್ತೆಯಲ್ಲಿ ಪ್ರವಾಸಿ ಜೀಪ್ ಪಲ್ಟಿ; ಕೇರಳದ ಆರು ಶಾಲಾ ಮಕ್ಕಳಿಗೆ ಗಾಯ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಅತಿ ವೇಗದಿಂದಾಗಿ ಶಾಲಾ ಮಕ್ಕಳ ಜೀಪ್ ಪಲ್ಟಿಯಾಗಿದ್ದು, ಕೇರಳದ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಜೀಪು ಕಮರಿಗೆ ಬೀಳುವುದು ತಪ್ಪಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story

11:43 AM (IST) Dec 22

ಕುಕ್ಕೆ ದೇವಳ ಆಮಂತ್ರಣ ಪತ್ರಿಕೆ ವಿವಾದ; ಪ್ರೊಟೊಕಾಲ್ ಹೆಸರಲ್ಲಿ ಅನ್ಯಧರ್ಮೀಯರ ಆಹ್ವಾನಕ್ಕೆ ತೀವ್ರ ವಿರೋಧ!

ಕುಕ್ಕೆ ಸುಬ್ರಹ್ಮಣ್ಯದ ಕಿರುಷಷ್ಠಿ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರುಗಳನ್ನು ಸೇರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಪ್ರೊಟೊಕಾಲ್ ಹೆಸರಿನಲ್ಲಿ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ. 

Read Full Story

11:41 AM (IST) Dec 22

Bigg Bossಗೆ ಚೈತ್ರಾ ಕುಂದಾಪುರರನ್ನು ಪುನಃ ಕಳಿಸಿದ್ದು ಯಾಕೆ? ಕೊನೆಗೂ ದೊಡ್ಡ ರಹಸ್ಯ ಬಿಚ್ಚಿಟ್ಟ ಚೈತ್ರಾ

ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ಮತ್ತು ರಜತ್​ ಹೊರಬಂದಿದ್ದು, ಅವರು ಅತಿಥಿಗಳಾಗಿದ್ದರು ಎಂಬುದು ಸ್ಪಷ್ಟವಾಗಿದೆ. ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡಲು ತಮ್ಮನ್ನು ಕಳುಹಿಸಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳ ಜೊತೆ ಚೈತ್ರಾ ಹೇಳಿದ್ದೇನು? 

Read Full Story

11:31 AM (IST) Dec 22

ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ

ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನ ಮತ್ತು ಬೆಳ್ಳಿ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಈ ದಾಖಲೆಯ ಏರಿಕೆಯು ಮಧ್ಯಮ ವರ್ಗದವರಿಗೆ ಆಭರಣ ಖರೀದಿಯನ್ನು ಕಷ್ಟಕರವಾಗಿಸಿದ್ದು, ಹೂಡಿಕೆದಾರರು ಇದನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ.
Read Full Story

11:01 AM (IST) Dec 22

ಸ್ವಚ್ಛ ಮಂಗಳೂರು ಮತ್ತೆ ಮಲೀನ - ರಸ್ತೆಗಳಲ್ಲಿ ರಾಶಿ ಬಿದ್ದ ಕಸ, ಇದಕ್ಕೆ ಹೊಣೆ ಯಾರು?

ಮಂಗಳೂರು ಮಹಾನಗರ ಪಾಲಿಕೆಯು ಕಸ ನಿರ್ವಹಣೆಯನ್ನು ವಹಿಸಿಕೊಂಡ ನಂತರ, ನಗರದಲ್ಲಿ ಮತ್ತೆ 'ಬ್ಲ್ಯಾಕ್‌ ಸ್ಪಾಟ್‌'ಗಳು ತಲೆ ಎತ್ತುತ್ತಿವೆ. ಮನೆ-ಮನೆ ಕಸ ಸಂಗ್ರಹಣೆಯಲ್ಲಿನ ವೈಫಲ್ಯ ಮತ್ತು ರಸ್ತೆ ಬದಿಯಲ್ಲೇ ಕಸ ವರ್ಗಾವಣೆಯಿಂದಾಗಿ ಸ್ವಚ್ಛ ಮಂಗಳೂರು ಎಂಬ ಹೆಗ್ಗಳಿಕೆಗೆ ಕುತ್ತು ಬಂದಿದೆ.

Read Full Story

10:52 AM (IST) Dec 22

BBK 12 - ಆಗರ್ಭ ಶ್ರೀಮಂತೆ ಅಶ್ವಿನಿ ಗೌಡ ಬಿಗ್‌ಬಾಸ್‌ನಿಂದ ಪಡೆಯುತ್ತಿರೋ ಸಂಭಾವನೆ ಎಷ್ಟು?

ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸ್ಪರ್ಧಿ ಎನ್ನಲಾದ ಅಶ್ವಿನಿ ಗೌಡ ಆಗರ್ಭ ಶ್ರೀಮಂತೆಯಾಗಿದ್ದು, 150 ಮನೆಗಳಿಂದ ಬಾಡಿಗೆ ಪಡೆಯುತ್ತಾರೆ. ಈ ಲೇಖನವು ಅವರ ವೈಯಕ್ತಿಕ ಜೀವನ ಮತ್ತು ಬಿಗ್‌ಬಾಸ್ ಮನೆಯಲ್ಲಿ ಅವರು ಪ್ರತಿ ವಾರ ಪಡೆಯುತ್ತಿರುವ ಅಂದಾಜು ಸಂಭಾವನೆಯ ಕುರಿತು ಚರ್ಚಿಸುತ್ತದೆ.
Read Full Story

10:32 AM (IST) Dec 22

ವಿವಾದಿತ ಬೆಂಗಳೂರು ಟನಲ್ ರಸ್ತೆ ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!

ಬೆಂಗಳೂರಿನ ಟ್ರಾಫಿಕ್ ನಿವಾರಣೆಗೆ ಉದ್ದೇಶಿಸಲಾದ ಟನಲ್ ರಸ್ತೆ ಯೋಜನೆಗೆ ಅದಾನಿ ಗ್ರೂಪ್ ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಅದಾನಿ ವಿರೋಧಿಸುವ ಕಾಂಗ್ರೆಸ್ ಸರ್ಕಾರಕ್ಕೆ ಇದು ರಾಜಕೀಯವಾಗಿ ಇಕ್ಕಟ್ಟನ್ನು ಸೃಷ್ಟಿಸಿದೆ.

Read Full Story

More Trending News