ಬೆಂಗಳೂರು: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಕಳೆದ ಮೂರು ದಿನಗಳಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಉಸಿರಾಟದ ತೊಂದರೆ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಆತಂಕಗೊಂಡಿದ್ದ ಕುಟುಂಬ ಸದಸ್ಯರು, "ನಾವು ನಂಬಿದ ದೇವರೇ ಅವರನ್ನು ಕಾಪಾಡಬೇಕು" ಎಂದು ಪ್ರಾರ್ಥಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ನಿನ್ನೆ ಪತಿ ಎಚ್. ಡಿ. ದೇವೇಗೌಡ, ಪುತ್ರರಾದ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಎಚ್. ಡಿ. ರೇವಣ್ಣ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದರು. ಇಂದು ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿ ಅಧಿಕೃತ ಹೆಲ್ತ್ ಬುಲೆಟಿನ್ (ವರದಿ) ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಆ ಬಳಿಕವಷ್ಟೇ ಅವರ ಆರೋಗ್ಯದ ನಿಖರ ಮಾಹಿತಿ ಹೊರಬರಲಿದೆ. ಸದ್ಯ ಚೆನ್ನಮ್ಮ ಅವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ವಾಪಸ್ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇಡೀ ಕುಟುಂಬಸ್ಥರಿದ್ದಾರೆ.
11:55 PM (IST) Jul 18
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ, ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ಬಳಿಗಾರ ಅವರು ಶಾಸಕರ ಸಭೆಯ ನಂತರ ಹೃದಯಾಘಾತದಿಂದ ನಿಧನರಾದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
11:18 PM (IST) Jul 18
10:04 PM (IST) Jul 18
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ವೈಎಸ್ವಿ ದತ್ತ, ಅವರ ಸಾವಿನ ಕುರಿತು ಜ್ಯೋತಿಷಿಗಳು ನುಡಿದಿದ್ದ ಭವಿಷ್ಯ ನಿಜವಾದ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
09:40 PM (IST) Jul 18
09:15 PM (IST) Jul 18
ಮಧ್ಯಪ್ರದೇಶ ಹೈಕೋರ್ಟ್ನ ಐತಿಹಾಸಿಕ ತೀರ್ಪಿನ ಪ್ರಕಾರ, ಫಾಸ್ಟ್ಟ್ಯಾಗ್ನಲ್ಲಿ ತಾಂತ್ರಿಕ ದೋಷದಿಂದ ಹೆಚ್ಚುವರಿ ಹಣ ಕಡಿತವಾದರೆ ವಾಹನ ಸವಾರರಿಗೆ ಶೇ. 100ರಷ್ಟು ಮರುಪಾವತಿ ಮಾಡಬೇಕು. ಅದೇಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
09:09 PM (IST) Jul 18
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಹಾಗೂ 72 ವರ್ಷಗಳ ಕಾಲ ಅವರ ಬಾಳಸಂಗಾತಿಯಾಗಿದ್ದ ಚೆನ್ನಮ್ಮ ಅವರು ನಿಧನರಾಗಿದ್ದಾರೆ. ರಾಜಕೀಯದಿಂದ ದೂರ ಉಳಿದಿದ್ದ ಅವರ ಅಗಲಿಕೆಗೆ, ಪುತ್ರ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಭಾವುಕರಾಗಿದ್ದಾರೆ.
08:42 PM (IST) Jul 18
07:56 PM (IST) Jul 18
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕನ್ನಡದ 'ಮಿಥ್ಯ' ಚಿತ್ರವು ಅತ್ಯುತ್ತಮ ಕನ್ನಡ ಸಿನಿಮಾ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದರೊಂದಿಗೆ, ಮಮ್ಮುಟ್ಟಿ, ಯಾಮಿ ಗೌತಮ್, ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ-ನಟಿ ಎನಿಸಿದ್ದಾರೆ.
07:51 PM (IST) Jul 18
ನಟ ದರ್ಶನ್ಚಾಮುಂಡೇಶ್ವರಿಯ ಪರಮ ಭಕ್ತ. ಅದರಲ್ಲೂ ಆಷಾಢ ಮಾಸದ ಮೊದಲ ಶುಕ್ರವಾರ ಮತ್ತು ಕೊನೆ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಮಾಡಿ ಪಾವನ ಆಗೋದನ್ನ ರೂಡಿಸಿಕೊಂಡಿದ್ರು. ಆದ್ರೆ ಜೈಲು ಸೇರಿದ್ಮೇಲೆ ಇದೆಲ್ಲಾ ಹೇಗೆ ಸಾಧ್ಯವಾಗುತ್ತೆ. ಹೀಗಾಗಿ ಈಗ ಪತ್ನಿ ವಿಜಯಲಕ್ಷ್ಮೀ ಗಂಡನ ಸಂಪ್ರದಾಯವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
07:35 PM (IST) Jul 18
ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಮತವಿದೆ ಎಂಬ ವದಂತಿಗಳಿಗೆ ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಅದೇನೆಂದು ನೋಡೋಣ ಬನ್ನಿ!
07:28 PM (IST) Jul 18
07:10 PM (IST) Jul 18
ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು 72 ವರ್ಷಗಳ ದಾಂಪತ್ಯದ ನಂತರ ನಿಧನರಾದರು. ಅಂತಿಮ ಕ್ಷಣಗಳಲ್ಲಿ ಪತ್ನಿಯ ಪಕ್ಕದಲ್ಲೇ ಇದ್ದ ದೇವೇಗೌಡರು, ಹಣೆಗೆ ಕುಂಕುಮವಿಟ್ಟು, ಹೂ ಮುಡಿಸಿ ಭಾವುಕರಾಗಿ ವಿದಾಯ ಹೇಳಿದರು.
06:46 PM (IST) Jul 18
06:37 PM (IST) Jul 18
06:26 PM (IST) Jul 18
ಸೋನಮ್ ವಾಂಗ್ಚುಕ್ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ, ಅವರ ಆದಾಯದ ಮೂಲ, ಯೂಟ್ಯೂಬ್ ಚಾನೆಲ್ನಿಂದ ಗಳಿಕೆ, ಅಂದಾಜು ನಿವ್ವಳ ಮೌಲ್ಯದ ಬಗ್ಗೆ ಅನೇಕರು ಕುತೂಹಲಗೊಂಡಿದ್ದಾರೆ. ಅವರ ಹೋರಾಟದ ಜತೆ ಆರ್ಥಿಕ ವಿವರಗಳ ಕುರಿತು ಇಲ್ಲಿದೆ ಮಾಹಿತಿ.
06:23 PM (IST) Jul 18
06:05 PM (IST) Jul 18
HD Deve Gowda wife Chennamma death: 'ಮಣ್ಣಿನ ಮಗ' ಎಂದೇ ಖ್ಯಾತರಾದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಹಾಸನದ ಒಂದು ಪುಟ್ಟ ಹಳ್ಳಿಯಿಂದ ದೆಹಲಿಯ ಕೆಂಪುಕೋಟೆಯವರೆಗೆ ಬೆಳೆದ ಅವರ ರಾಜಕೀಯ ಪ್ರಯಾಣ ಅಷ್ಟು ಸುಲಭದ್ದಾಗಿರಲಿಲ್ಲ. ಹೂವಿನ ಹಾಸಿಗೆಯಂತಿರದ ಈ ಕಠಿಣ ಹಾದಿಯಲ್ಲಿ ನೆರಳಾಗಿ, ಶಕ್ತಿಯಾಗಿ ನಿಂತವರು ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ.
06:02 PM (IST) Jul 18
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ದಿವಂಗತ ಚೆನ್ನಮ್ಮ ಅವರ ಆಪ್ತ ಸಂಬಂಧಿ ದ್ಯಾವಮ್ಮ, ಅವರ ಬಾಲ್ಯದ ದಿನಗಳು, ಗ್ರಾಮೀಣ ಆಟಗಳು, ಸರಳ ಮದುವೆ ಮತ್ತು ಹಳ್ಳಿಯ ಮೇಲಿನ ಅವರ ಅಕ್ಕರೆಯ ಬಗ್ಗೆ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
05:50 PM (IST) Jul 18
ಇಂಗ್ಲಿಷ್ ಸಾಹಿತ್ಯದಲ್ಲಿ ಪಿಎಚ್ಡಿ ಮತ್ತು ಬಹು ಪದವಿಗಳನ್ನು ಪಡೆದ ಡಾ. ಇ. ತಿರುಮಲೈ ರಾಜ, ಕಡಿಮೆ ಸಂಬಳಕ್ಕೆ ಗುತ್ತಿಗೆ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಅವರು ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಈ ಸ್ಟೋರಿ ನಮ್ಮ ಶಿಕ್ಷಣ ವ್ಯವಸ್ಥೆಯ ಕಠೋರ ವಾಸ್ತವ ಬಯಲು ಮಾಡಿದೆ.
05:41 PM (IST) Jul 18
05:28 PM (IST) Jul 18
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಹೃದಯಾಘಾತದಿಂದ ಸಂಜೆ 4 ಗಂಟೆಗೆ ನಿಧನರಾಗಿದ್ದಾರೆ.
05:18 PM (IST) Jul 18
ಹಂಸಲೇಖ ಅವರಿಗೆ ದೇಶದ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಇದೀಗ ಮತ್ತೊಮ್ಮೆ ಜೋರಾಗಿದೆ. ಈ ಬಾರಿ ಈ ಅಭಿಯಾನಕ್ಕೆ ಚಾಲನೆ ನೀಡಿರುವವರು ನಟ ನೆನಪಿರಲಿ ಪ್ರೇಮ್.
04:49 PM (IST) Jul 18
Gangavathi Road Widening: ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ.
04:39 PM (IST) Jul 18
ಮಾರುಕಟ್ಟೆಯಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗುತ್ತಿದ್ದು, ನಿಮ್ಮ ಕೈಯಲ್ಲಿರುವ 500 ರೂಪಾಯಿ ನೋಟು ಅಸಲಿಯೋ ಅಥವಾ ನಕಲಿಯೋ ಎಂಬ ಆತಂಕ ನಿಮಗಿದೆಯೇ? ಭಾರತೀಯ ರಿಸರ್ವ್ ಬ್ಯಾಂಕ್ ಅಸಲಿ ನೋಟುಗಳನ್ನು ಗುರುತಿಸಲು ಕೆಲವು ಪ್ರಮುಖ ರಹಸ್ಯ ಫೀಚರ್ಸ್ಗಳನ್ನು ನೀಡಿದೆ. ಈ ಕುರಿತು ಸಂಪೂರ್ಣ ವಿವರ.
04:38 PM (IST) Jul 18
Mother Promise: ಸ್ಯಾಂಡಲ್ವುಡ್ನ ನಟ ರಾಕ್ಷಸ ಡಾಲಿ ಧನಂಜಯ ನಿರ್ಮಿಸಿ, ಪ್ರಮುಖ ಪಾತ್ರದಲ್ಲೂ ಅಭಿನಯಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
04:14 PM (IST) Jul 18
Harshika Poonacha Pregnancy: ಇದೊಂದು ಸೊಗಸಾದ ಚಿಂತನೆಯಷ್ಟೇ. ಇಲ್ಲಿ ಪುರಾಣವನ್ನು ತಿರುಚುವ ದುರುದ್ದೇಶ ಇಲ್ಲ. ಸದ್ಯ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಪೂಣಚ್ಚ ಮಾತುಗಳಿವು.
04:08 PM (IST) Jul 18
ಗಣಿತದಲ್ಲಿ ಕೇವಲ 51 ಅಂಕ ಪಡೆದಿದ್ದ ಪವನ್ ಕುಮಾರ್ ಚಂದನಾ, ಇಸ್ರೋದಲ್ಲಿನ ಕೆಲಸ ತೊರೆದು 'ಸ್ಕೈರೂಟ್ ಏರೋಸ್ಪೇಸ್' ಸ್ಥಾಪಿಸಿದರು. ಸವಾಲುಗಳನ್ನು ಮೆಟ್ಟಿ ನಿಂತು, 'ವಿಕ್ರಮ್-I' ರಾಕೆಟ್ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಖಾಸಗಿ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯ ಬರೆದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು
02:59 PM (IST) Jul 18
Actress Saathvika: ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸಾತ್ವಿಕಾ ಅವರು ತಂದೆ ಓಂ ಪ್ರಕಾಶ್ ರಾವ್ ಹಾಗೂ ತಾಯಿ ರೇಖಾ ದಾಸ್ ಅವರನ್ನು ಒಂದು ಮಾಡಬೇಕು ಎಂದು ಯೋಚಿಸಿದ್ದರಂತೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.
02:42 PM (IST) Jul 18
ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್ ಅವರ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಬಲವಂತವಾಗಿ ಅಂತ್ಯಗೊಳಿಸಿದ್ದಾರೆ. ಈ ಘಟನೆಯು ನಾಲ್ಕು ದಶಕಗಳ ಹಿಂದೆ ಲಡಾಖ್ನ ಹಿತಕ್ಕಾಗಿ ಅವರ ತಂದೆ ಸೋನಂ ವಾಂಗ್ಚಾಲ್ ನಡೆಸಿದ ಐತಿಹಾಸಿಕ ಉಪವಾಸವನ್ನು ನೆನಪಿಸುತ್ತದೆ.
01:48 PM (IST) Jul 18
Bengaluru University student protest: ಜಂತರ್ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರು ವಿವಿ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ
01:33 PM (IST) Jul 18
01:31 PM (IST) Jul 18
01:03 PM (IST) Jul 18
12:46 PM (IST) Jul 18
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಕಾರಣ, ನ್ಯಾಯಾಲಯದ ಆದೇಶದಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸನ್ನು ಕೂಡ್ಲಿಗಿಯಲ್ಲಿ ಜಪ್ತಿ ಮಾಡಲಾಗಿದೆ.
12:43 PM (IST) Jul 18
ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.
12:42 PM (IST) Jul 18
11:44 AM (IST) Jul 18
ಕಳೆದ 25 ವರ್ಷಗಳಿಂದ ಕೆಬಿಸಿ ಕೋಟ್ಯಂತರ ಭಾರತೀಯರ ಕನಸಿನ ವೇದಿಕೆಯಾಗಿದೆ. ಜುಲೈ 3, 2000 ರಂದು ಮೊದಲ ಬಾರಿಗೆ ಶುರುವಾದ ಈ ಪಯಣ ಈಗ 17 ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿ 18ನೇ ಸೀಸನ್ಗೆ ಕಾಲಿಟ್ಟಿದೆ. ವಿಶೇಷವೆಂದರೆ, ಈ ಪೈಕಿ 16 ಸೀಸನ್ಗಳನ್ನು ಅಮಿತಾಭ್ ಬಚ್ಚನ್ ಅವರೇ ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ.
11:12 AM (IST) Jul 18
Chennamma health updates: ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮರ ಆರೋಗ್ಯ ಸ್ಥಿರವಾಗಿದೆ ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಿಳಿಸಿದೆ. ಆರೋಗ್ಯ ಚೇತರಿಕೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಆ ವಿವರ ಇಲ್ಲಿದೆ.
10:47 AM (IST) Jul 18
10:35 AM (IST) Jul 18
ತೆಲಂಗಾಣದ ಆಸಿಫಾಬಾದ್ ಜಿಲ್ಲೆಯಲ್ಲಿ, ಚಹಾ ಕುಡಿಯಲು 20 ರೂಪಾಯಿ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ, ಮಸಾದಿ ಸೋಮಯ್ಯ ಎಂಬ 65 ವರ್ಷದ ವೃದ್ಧರ ಮೇಲೆ ಕೊಡಲಿಯಿಂದ ದಾಳಿ ಮಾಡಿ ಶಿರಚ್ಛೇದ ಮಾಡಿದ್ದಾನೆ.