LIVE NOW
Published : Jul 18, 2026, 07:01 AM ISTUpdated : Jul 18, 2026, 10:27 AM IST

Karnataka News Live: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪಂಚ ಸೂತ್ರಗಳು - ಖಾಸಗಿ ವಾಹನಗಳಿಗೆ 'ನೋ ಎಂಟ್ರಿ'!

ಸಾರಾಂಶ

ಬೆಂಗಳೂರು: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಪ್ರಸ್ತುತ ಸ್ಥಿರವಾಗಿದೆ. ಕಳೆದ ಮೂರು ದಿನಗಳಿಂದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಉಸಿರಾಟದ ತೊಂದರೆ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಆತಂಕಗೊಂಡಿದ್ದ ಕುಟುಂಬ ಸದಸ್ಯರು, "ನಾವು ನಂಬಿದ ದೇವರೇ ಅವರನ್ನು ಕಾಪಾಡಬೇಕು" ಎಂದು ಪ್ರಾರ್ಥಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ನಿನ್ನೆ ಪತಿ ಎಚ್. ಡಿ. ದೇವೇಗೌಡ, ಪುತ್ರರಾದ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಎಚ್. ಡಿ. ರೇವಣ್ಣ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದರು. ಇಂದು ವೈದ್ಯರು ಮತ್ತೊಮ್ಮೆ ತಪಾಸಣೆ ನಡೆಸಿ ಅಧಿಕೃತ ಹೆಲ್ತ್ ಬುಲೆಟಿನ್ (ವರದಿ) ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಆ ಬಳಿಕವಷ್ಟೇ ಅವರ ಆರೋಗ್ಯದ ನಿಖರ ಮಾಹಿತಿ ಹೊರಬರಲಿದೆ. ಸದ್ಯ ಚೆನ್ನಮ್ಮ ಅವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ವಾಪಸ್ ಆಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಇಡೀ ಕುಟುಂಬಸ್ಥರಿದ್ದಾರೆ.

10:27 AM (IST) Jul 18

ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪಂಚ ಸೂತ್ರಗಳು - ಖಾಸಗಿ ವಾಹನಗಳಿಗೆ 'ನೋ ಎಂಟ್ರಿ'!

ರಾಜಧಾನಿಯ ತೀವ್ರ ಸಂಚಾರ ದಟ್ಟಣೆ ನಿವಾರಿಸಲು, ಸಂಚಾರ ವಿಭಾಗದ ಪೊಲೀಸರು ರಾಜ್ಯ ಸರ್ಕಾರದ ಮುಂದೆ 'ಪಂಚ ಸೂತ್ರ' ಪ್ರಸ್ತಾಪಿಸಿದ್ದಾರೆ. ಕಾರ್ ಪೂಲಿಂಗ್ ಅಧಿಕೃತಗೊಳಿಸುವುದು, ಖಾಸಗಿ ಬಸ್‌ಗಳಿಗೆ ನಗರ ಪ್ರವೇಶ ನಿರ್ಬಂಧ,  ಪರಿಷ್ಕೃತ ದಂಡ ವಿಧಿಸುವುದು ಸೇರಿದಂತೆ ಹಲವು ಪ್ರಮುಖ ಶಿಫಾರಸು ಇದು ಒಳಗೊಂಡಿದೆ.

Read Full Story

10:19 AM (IST) Jul 18

ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕರೂ ಜೈಲೇ ಗತಿ ವಿವರಿಸಿದ ಹೈಕೋರ್ಟ್, ಕೆ.ಆರ್. ನಗರದ ಮೂವರು ಆರೋಪಿಗಳ ಅರ್ಜಿ ವಜಾ

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ ಜಾಮೀನು ಸಿಕ್ಕರೂ ಬಿಡುಗಡೆಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಸಂತ್ರಸ್ತೆ ಅಪಹರಣ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ನಡಾವಳಿ ರದ್ದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
Read Full Story

09:50 AM (IST) Jul 18

ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಏರ್‍‌ಟೆಲ್.. ನಿಮ್ಮ ಜೇಬಿಗೆ ಮತ್ತಷ್ಟು ಕತ್ತರಿ..!

ನೀವು ಏರ್‍‌ಟೆಲ್ ಪೋಸ್ಟ್‌ಪೇಯ್ಡ್ (Airtel Postpaid) ಗ್ರಾಹಕರೇ? ಹಾಗಿದ್ದಲ್ಲಿ ನಿಮಗೊಂದು ಶಾಕಿಂಗ್ ಸುದ್ದಿ ಇದೆ. ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಭಾರ್ತಿ ಏರ್‍‌ಟೆಲ್ ತನ್ನ ಅತ್ಯಂತ ಜನಪ್ರಿಯ ಮತ್ತು ಕೈಗೆಟುಕುವ ದರದ 549 ರೂಪಾಯಿಗಳ ವೈಯಕ್ತಿಕ ಪೋಸ್ಟ್‌ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಸ್ಥಗಿತಗೊಳಿಸಿದೆ.

Read Full Story

09:43 AM (IST) Jul 18

ನಮ್ಮ ಮೆಟ್ರೋದಲ್ಲಿ ಕಠಿಣ ರೂಲ್ಸ್ ಜಾರಿ - ಈ ನಿಯಮ ಉಲ್ಲಂಘಿಸಿದ್ರೆ ₹25,000 ವರೆಗೆ ಭಾರೀ ದಂಡ! ಯಾವ ತಪ್ಪಿಗೆ ಎಷ್ಟು?

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಶಿಸ್ತು ಮತ್ತು ಸುರಕ್ಷತೆಗಾಗಿ BMRCL ನಿಯಮ ಉಲ್ಲಂಘನೆ ದಂಡವನ್ನು 50 ಪಟ್ಟು ಹೆಚ್ಚಿಸಿದೆ. ಹಳಿಗೆ ಜಿಗಿಯುವುದು, ರೀಲ್ಸ್ ಮಾಡುವುದು, ಗೋಡೆಗಳ ಮೇಲೆ ಬರೆಯುವುದು ಮುಂತಾದ ತಪ್ಪುಗಳಿಗೆ ಈಗ ₹2,500 ರಿಂದ ₹25,000 ವರೆಗೆ ದಂಡ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳು 'ಜನ ವಿಶ್ವಾಸ್ ಕಾಯ್ದೆ' ಅಡಿಯಲ್ಲಿ ಜಾರಿಗೆ ಬಂದಿವೆ.
Read Full Story

09:06 AM (IST) Jul 18

ತಪ್ಪು ಯಾರದು ಅನ್ನೋದು ಮುಖ್ಯವಲ್ಲ - ಕರಾವಳಿ ವಿವಾದಕ್ಕೆ ರಾಜ್ ಬಿ. ಶೆಟ್ಟಿ ಕ್ಷಮೆ

'ಕರಾವಳಿ' ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ನಟ ರಾಜ್ ಬಿ. ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ಕಂಟೆಂಟ್ ಇಲ್ಲದ ಕಾರಣ ವಿವಾದ ಸೃಷ್ಟಿಸಲಾಗುತ್ತಿದೆ ಎಂಬ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದ ಅವರು, ಸಿನಿಮಾದ ಪ್ರೀಮಿಯರ್‌ ಶೋ ಮತ್ತು ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
Read Full Story

09:01 AM (IST) Jul 18

ಪಾಕಿಸ್ತಾನದ ಸ್ಟಾರ್‍‌ ಕ್ರಿಕೆಟರ್‍‌‌ಗೆ ICC ಬಿಗ್ ಶಾಕ್.. ಮೊಹಮ್ಮದ್ ನವಾಜ್ ಕ್ರಿಕೆಟ್‌ನಿಂದ ಬ್ಯಾನ್!

ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್‌ರೌಂಡರ್ ಮೊಹಮ್ಮದ್ ನವಾಜ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದೊಡ್ಡ ಶಾಕ್ ನೀಡಿದೆ. ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನವಾಜ್ ಅವರಿಗೆ ಮೂರು ತಿಂಗಳ ಕಾಲ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದೆ

Read Full Story

08:36 AM (IST) Jul 18

ಬೆಂಗಳೂರು-ಮಂಗಳೂರು-ಉಡುಪಿ-ಕಾರವಾರ ನಡುವೆ ವಂದೇ ಭಾರತ್ ರೈಲು - ಸಂಸದರು ಹೇಳಿದ್ದೇನು?

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಕಾರ, ಕೊಂಕಣ ರೈಲ್ವೆಯು ಶೀಘ್ರದಲ್ಲೇ ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯಿದೆ. ಈ ವಿಲೀನದಿಂದ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ನಿರೀಕ್ಷಿಸಲಾಗಿದ್ದು, ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್ ಉದ್ಘಾಟನೆ ವೇಳೆ ಅವರು ಈ ಮಾಹಿತಿ ನೀಡಿದರು.
Read Full Story

08:17 AM (IST) Jul 18

ಮೂಡುಬಿದಿರೆಯ ಅನುಷಾ ಆಚಾರ್ ಸ್ಟಾರ್ಟಪ್‌ಗೆ ರಾಷ್ಟ್ರಪತಿ ಭವನದಿಂದ ಅಹ್ವಾನ! ರಾಷ್ಟ್ರೀಯ ಮನ್ನಣೆ

ಮೂಡುಬಿದಿರೆಯ ಅನುಷಾ ಆಚಾರ್ ಅವರ 'ಮಾವೇದಾಸ್' ಸ್ಟಾರ್ಟಪ್‌ಗೆ ನೀತಿ ಆಯೋಗದ ರಾಷ್ಟ್ರೀಯ ಮನ್ನಣೆ ಲಭಿಸಿದೆ. ಬಾಣಂತನದ ಸಾಂಪ್ರದಾಯಿಕ ಆಹಾರವನ್ನು ನಾವೀನ್ಯತೆಯೊಂದಿಗೆ ಉಳಿಸುವ ಈ ಪ್ರಯತ್ನ, ದೇಶದ 26 ಪ್ರಮುಖ ನಾವೀನ್ಯತೆಗಳಲ್ಲಿ ಒಂದಾಗಿ ಆಯ್ಕೆಯಾಗಿದ್ದು, ಈ ಸಾಧನೆಗಾಗಿ ಅನುಷಾ ಆಚಾರ್ ಅವರು ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಲಿದ್ದಾರೆ.
Read Full Story

08:07 AM (IST) Jul 18

ಹೂವಿನಹಡಗಲಿ - 632 ಸರ್ಕಾರಿ ಶಾಲೆಗಳ ದುಸ್ಥಿತಿ, ಅಪಾಯದಲ್ಲಿ ಮಕ್ಕಳ ಅಕ್ಷರಾಭ್ಯಾಸ!

ಹೂವಿನಹಡಗಲಿ ತಾಲೂಕಿನ ಸರ್ಕಾರಿ ಶಾಲೆಗಳ ಸುರಕ್ಷತೆಯ ಕುರಿತು ನಡೆಸಿದ ಪರಿಶೀಲನೆಯಲ್ಲಿ ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿವೆ. ತಾಲೂಕಿನ 166 ಶಾಲೆಗಳ ಪೈಕಿ 183 ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳ ಜೀವಕ್ಕೆ ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿವೆ.

Read Full Story

07:25 AM (IST) Jul 18

2ನೇ ವಿಮಾನ ನಿಲ್ದಾಣ ಕನಕಪುರಕ್ಕೆ ಬೇಡ; ಸಿಎಂಗೆ ಪತ್ರ ಬರೆದು ಸ್ಥಳ ಹೇಳಿದ ವಿಜಯೇಂದ್ರ

ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದ ಬದಲು ತುಮಕೂರಿನಲ್ಲಿ ಸ್ಥಾಪಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಆದರೆ ಕನಕಪುರದಲ್ಲಿ ಸ್ಥಾಪಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕೆ ಮಾತ್ರ ಲಭ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Read Full Story

More Trending News