LIVE NOW
Published : Dec 18, 2025, 06:50 AM ISTUpdated : Dec 18, 2025, 04:27 PM IST

Karnataka News Live: ಸಿದ್ದರಾಮಯ್ಯ ಮುಡಾ ಕೇಸ್, ತನಿಖಾಧಿಕಾರಿಗಳು ಸರ್ವಾಧಿಕಾರಿಗಳೇ? ಕೋರ್ಟ್‌ ನಲ್ಲಿ ಸ್ನೇಹಮಯಿ ಕೃಷ್ಣ ಕೆಂಡಾಮಂಡಲ!

ಸಾರಾಂಶ

ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಸುಳ್ಳು ಹೇಳಿ ಜೈಲಿಗೆ ಸೇರಿದ್ದ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಜಾಮೀನು ಸಿಕ್ಕರೂ ಶೂರಿಟಿ ಇಲ್ಲ ದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯ್ಯ ಮಂಕಾ ಗಿದ್ದು, ಮೌನಕ್ಕೆ ಶರಣಾಗಿದ್ದ. ಈಗ 1 ಲಕ್ಷ ಬಾಂಡ್, 2 ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್‌ಗೆ ಶೂರಿಟಿ ನೀಡಲಾಗಿದೆ. ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಡಿ.18 ರಂದು ಚಿನ್ನಯ್ಯ ಬಿಡುಗಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನ.24ರಂದು 1 ಲಕ್ಷ ಬಾಂಡ್, ಇಬ್ಬರ ಶೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು .ಚಿನ್ನಯ್ಯನಿಗೆ ಶೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಕೊರತೆಯಿಂದ ಬಿಡುಗ ಡೆಯಾಗದೇ ಚಿನ್ನಯ್ಯ ಜೈಲಿನಲ್ಲಿದ್ದ. ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್‌ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.

04:27 PM (IST) Dec 18

ಸಿದ್ದರಾಮಯ್ಯ ಮುಡಾ ಕೇಸ್, ತನಿಖಾಧಿಕಾರಿಗಳು ಸರ್ವಾಧಿಕಾರಿಗಳೇ? ಕೋರ್ಟ್‌ ನಲ್ಲಿ ಸ್ನೇಹಮಯಿ ಕೃಷ್ಣ ಕೆಂಡಾಮಂಡಲ!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬವಾಗಿದ್ದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಮತ್ತಷ್ಟು ಕಾಲಾವಕಾಶ ಕೋರಿದೆ.

Read Full Story

04:26 PM (IST) Dec 18

ನನಗೆ ಯಾರ ಜೊತೆಯೂ ಮನಸ್ತಾಪ ಇಲ್ಲ - ರಿಷಬ್ ಜೊತೆಗಿನ ಸಂಬಂಧ ಕುರಿತು ರಾಜ್ ಬಿ ಶೆಟ್ಟಿ ಹೇಳಿದ್ದೇನು?

ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್‌ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್‌ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು ಎಂದರು ರಾಜ್ ಬಿ ಶೆಟ್ಟಿ.

Read Full Story

04:14 PM (IST) Dec 18

ಕೆಲಸ ಬೋರ್‌, ಒತ್ತಡ, ಸಂಬಳ ಕಮ್ಮಿನಾ? - ಬಿಸಿರಕ್ತ.. ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡ್ತಿರೋ ಬೆಂಗಳೂರಿನ ಹುಡುಗ

Gen Z ಪೀಳಿಗೆಯವರಂತೂ ಯಾವುದಕ್ಕೂ ಚಿಂತೆ ಮಾಡೋದಿಲ್ಲ, ಕೇರ್‌ ಮಾಡೋದಿಲ್ಲ, ಜವಾಬ್ದಾರಿ ತಗೊಳಲ್ಲ ಎನ್ನುವ ದೂರು ಇದೆ. ಈಗ ಬೆಂಗಳೂರಿನ ಕನ್ನಡಿಗನೋರ್ವ ಏಕಾಏಕಿ ಕೆಲಸ ಬಿಟ್ಟು, ಸಮಸ್ಯೆ ತಂದುಕೊಂಡಿದ್ದಾರೆ.

 

Read Full Story

03:45 PM (IST) Dec 18

ಕಾರವಾರದಲ್ಲಿ ಚೀನಾ ಜಿಪಿಎಸ್ ಟ್ರ್ಯಾಕರ್ ಹೊಂದಿದ ಸೀಗಲ್ ಹಕ್ಕಿ - ಎಲೆಕ್ಟ್ರಾನಿಕ್ ಡಿವೈಸ್ ಸತ್ಯ ಬಿಚ್ಚಿಟ್ಟ ಎಸ್‌ಪಿ!

ಕಾರವಾರದ ಕಡಲತೀರದಲ್ಲಿ ಜಿಪಿಎಸ್ ಟ್ರ್ಯಾಕರ್ ಅಳವಡಿಸಿದ ಗಾಯಗೊಂಡ ಸೀಗಲ್ ಹಕ್ಕಿಯೊಂದು ಪತ್ತೆಯಾಗಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ತನಿಖೆ ನಡೆಸುತ್ತಿದ್ದು, ಇದು ವೈಜ್ಞಾನಿಕ ಅಧ್ಯಯನದ ಭಾಗವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಭದ್ರತಾ ದೃಷ್ಟಿಯಿಂದಲೂ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.
Read Full Story

03:38 PM (IST) Dec 18

'ಏಕೆ ಕನಸು ಕಾಣುವೆ..' ಯುವ ಹಾಗೂ ನಟಿ ರಿಲೇಷನ್‌ಷಿಪ್‌ ಕುರಿತು 'ರಾಜ್‌ಕುಮಾರ್‌' ಹಾಡು ಹಾಕಿ ತಿವಿದ ಶ್ರೀದೇವಿ ಭೈರಪ್ಪ!

ಯುವ ರಾಜ್‌ಕುಮಾರ್ ಜೊತೆಗಿನ ವಿಚ್ಛೇದನದ ನಡುವೆ, ಶ್ರೀದೇವಿ ಭೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಯುವ ಹಾಗೂ ಮತ್ತೊಬ್ಬ ನಟಿಯ ಸಂಬಂಧದ ಬಗ್ಗೆ ಕೇಳಿದಾಗ, ಡಾ. ರಾಜ್‌ಕುಮಾರ್ ಅವರ ಹಾಡು ಹಾಕಿ ಗಮನಸೆಳೆದಿದ್ದಾರೆ.

Read Full Story

03:36 PM (IST) Dec 18

'ಜೈಲರ್‌ 2'ನಿಂದ ತಮನ್ನಾಗೆ ಗೇಟ್‌ಪಾಸ್.. ರಜನಿಕಾಂತ್ ಚಿತ್ರದ ಸ್ಪಷಲ್‌ ಹಾಡಿಗೆ ಬರಲಿರೋ ನಟಿ ಇವರೇ ನೋಡಿ!

ಜೈಲರ್ 2 ಅಡ್ಡಾದಿಂದ ಹೊಸದೊಂದು ನ್ಯೂಸ್ ಬಂದಿದೆ. ಅದೂ ಜೈಲರ್ ಪಾರ್ಟ್ 2ನಲ್ಲಿ ನಟಿ ತಮನ್ನಾ ಹಾಡು ಇರೋದಿಲ್ಲ ಅಂತ. ಹಾಗಿದ್ರೆ ಹಾಡೇ ಇರೋದಿಲ್ವಾ ಅಥವಾ ತಮನ್ನಾ ಇರೋದಿಲ್ವಾ ಅಂತ ಕೇಳಿದ್ರೆ, ಹಾಡು ಇರಲಿದೆ, ಆದ್ರೆ ತಮನ್ನಾ ಭಾಟಿಯಾ (Tamannah Bhatia) ಅದರಲ್ಲಿ ಇರೋದಿಲ್ಲ ಎಂಬ ಉತ್ತರ ಸಿಕ್ಕಿದೆ.

Read Full Story

03:08 PM (IST) Dec 18

ಸುತ್ತಿ ಬಳಸಿ ನನ್​ ಬಳಿ ಬಂದ್ಲು ಮಾವನ ಮಗಳು, ಆಮೇಲೆ ಏನೆನೆನೋ ಆಗೋಯ್ತು- ರಜತ್​ ಮುಂದೆ ಗಿಲ್ಲಿ ನಟ ಗುಟ್ಟು ರಿವೀಲ್​

ಬಿಗ್‌ಬಾಸ್ ಮನೆಯಲ್ಲಿ ತನ್ನ ಕಾಮಿಡಿಯಿಂದ ಜನಪ್ರಿಯರಾಗಿರುವ ಗಿಲ್ಲಿ ನಟ, ಸಹ ಸ್ಪರ್ಧಿ ಕಾವ್ಯಾ ಶೈವ ಜೊತೆಗಿನ ತಮ್ಮ ಜೋಡಿಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ತನ್ನ 'ಮಾವನ ಮಗಳು' ಎಂದು ಹೇಳಿಕೊಂಡು, ಜಂಟಿಯಾಗಿ ಮನೆಗೆ ಪ್ರವೇಶಿಸಿದ ಕಥೆಯನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.

Read Full Story

03:08 PM (IST) Dec 18

ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!

TB ಡ್ಯಾಂ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆಯಲ್ಲಿ, ತಜ್ಞರ ತಂಡವು ಎಡದಂಡೆ ಕಾಲುವೆ ಮಾರ್ಗವನ್ನು ಪರಿಶೀಲಿಸಿದೆ. ಮುಂದಿನ ಆರು ತಿಂಗಳು ಕಾಲುವೆಗೆ ನೀರು ಸ್ಥಗಿತಗೊಳ್ಳಲಿದ್ದು, ಈ ಅವಧಿಯಲ್ಲಿ ₹430 ಕೋಟಿ ವೆಚ್ಚದಲ್ಲಿ ಕಾಲುವೆಯ ದುರಸ್ತಿ ಮತ್ತು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.

Read Full Story

03:07 PM (IST) Dec 18

BBK 12 - ಹುಚ್ಚುತನದ ಪರಮಾವಧಿ ತೋರಿಸಿದ ರಕ್ಷಿತಾ ಶೆಟ್ಟಿ; ಧ್ರುವಂತ್‌ ಹೇಳಿದ್ದು ಸತ್ಯ ಎಂದ ವೀಕ್ಷಕರು

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ದೊಡ್ಮನೆಯೊಳಗಡೆ ಒಂದು ಸಿನಿಮಾ, ಸೀಕ್ರೇಟ್‌ ರೂಮ್‌ನಲ್ಲಿ ಇನ್ನೊಂದು ಸಿನಿಮಾ ಪ್ರಸಾರವಾಗುತ್ತಿದೆ. ಧ್ರುವಂತ್‌ ಹಾಗೂ ರಕ್ಷಿತಾ ಅವರು ಆಟ ಆಡಿಸಿದಂತೆ, ಸ್ಪರ್ಧಿಗಳು ಆಟ ಆಡುತ್ತಿದ್ದಾರೆ.

 

Read Full Story

02:44 PM (IST) Dec 18

KPTCL ಕೆಲಸ, ಶನಿವಾರ ಬೆಂಗಳೂರಲ್ಲಿ ಕರೆಂಟ್‌ ಇರಲ್ಲ..!

ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆನಗರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

Read Full Story

02:29 PM (IST) Dec 18

'ನೀವು ಕರಾವಳಿಯವರು ಬೆಂಕಿ ಹಚ್ಚೋರು'- ಸಚಿವ ಬೈರತಿ ಸುರೇಶ್; ಶಾಸಕ ಸುನೀಲ್ ಕುಮಾರ್ ಆಕ್ರೋಶ

ಸಚಿವ ಭೈರತಿ ಸುರೇಶ್ ಅವರ 'ಕರಾವಳಿಯವರು ಬೆಂಕಿ ಹಚ್ಚುವವರು' ಎಂಬ ಹೇಳಿಕೆಯು ಸುವರ್ಣಸೌಧದ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

Read Full Story

02:07 PM (IST) Dec 18

ಚಾಮರಾಜನಗರ - ಕೂಲಿ ಕೆಲಸ ಮುಗಿಸಿ ವಾಪಾಸ್ ಹೋಗುವ ವೇಳೆ ಕಾಡಾನೆ ದಾಳಿ; ವ್ಯಕ್ತಿ ದುರ್ಮರಣ

ಹನೂರು ತಾಲೂಕಿನ ಜಲ್ಲಿಪಾಳ್ಯ ಬಳಿ ಕೂಲಿ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಶಿವಮೂರ್ತಿ ಎಂಬುವವರ ಮೇಲೆ ಕಾಡಾನೆಗಳ ಗುಂಪು ದಾಳಿ ನಡೆಸಿದೆ. ಈ ಭೀಕರ ದಾಳಿಯಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
Read Full Story

01:51 PM (IST) Dec 18

ಅಂದು ಸುದೀಪ್​ಗೆ ಆ್ಯಕ್ಸಿಡೆಂಟ್​! Bigg Boss ವೀಕೆಂಡ್​ನಲ್ಲಿ ನಡೆದದ್ದೇನು? ಕಿಚ್ಚನಿಂದ ಶಾಕಿಂಗ್​ ವಿಷ್ಯ ರಿವೀಲ್​

ಒಮ್ಮೆ ಬಿಗ್ ಬಾಸ್ ತೊರೆಯುವುದಾಗಿ ಹೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಕಿಚ್ಚ ಸುದೀಪ್, ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇತ್ತೀಚೆಗೆ, ತಮಗಾದ ಅಪಘಾತದಿಂದ ತೀವ್ರ ಕಾಲುನೋವಿದ್ದರೂ, ಅದನ್ನು ಲೆಕ್ಕಿಸದೆ 'ಸೂಪರ್ ಸಂಡೆ ವಿತ್ ಕಿಚ್ಚ' ಸಂಚಿಕೆಯನ್ನು ನಿಂತುಕೊಂಡೇ ನಿರೂಪಣೆ ಮಾಡಿದೆ ಎಂದಿದ್ದಾರೆ.

Read Full Story

01:48 PM (IST) Dec 18

ಮಲ್ಲಿಕಾರ್ಜುನ ಖರ್ಗೆಗೆ 'ಭಾರತ ರತ್ನ' ನೀಡುವಂತೆ ಕಾಂಗ್ರೆಸ್ ಮುಖಂಡ ಆಗ್ರಹ

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು, ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಧಿ ಜಾರಿಗೆ ತಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ 'ಭಾರತ ರತ್ನ' ನೀಡಲು ಶಿಫಾರಸು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಖರ್ಗೆಯವರನ್ನು ಅಂಬೇಡ್ಕರ್‌ಗೆ ಹೋಲಿಸಿದರು.

Read Full Story

01:34 PM (IST) Dec 18

Bigg Boss ಮನೇಲಿ ಆ ವಿಷಯ ಹೇಳೋಕೆ ಧೈರ್ಯ ಇರೋ ಪ್ರಪಂಚದ ಮೊದಲ ಗಂಡ ಅಂದ್ರೆ ವಿ ರವಿಚಂದ್ರನ್!‌ ಡೌಟ್‌ ಬೇಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಮನೆಯೊಳಗಡೆ ವಿ ರವಿಚಂದ್ರನ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾರ್‌ ಸಿನಿಮಾದಲ್ಲಿ ರಾಶಿಕಾ ಶೆಟ್ಟಿ ಅವರ ತಂದೆ ಪಾತ್ರದಲ್ಲಿ ರವಿಚಂದ್ರನ್‌ ನಟಿಸುತ್ತಿದ್ದಾರೆ. ಪ್ಯಾರ್‌ ಎಂದರೆ ಲವ್‌ ಎಂದರ್ಥ. ಈಗ ರವಿಚಂದ್ರನ್‌ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

 

Read Full Story

01:30 PM (IST) Dec 18

2025ರ ಪ್ರವಾಸೋದ್ಯಮದಲ್ಲಿ ಬೆಂಗಳೂರು ದರ್ಬಾರ್ - ಬಿಸಿನೆಸ್, ವಿರಾಮಕ್ಕೆ ಪ್ರವಾಸಿಗರ ಮೊದಲ ಆಯ್ಕೆ ಸಿಲಿಕಾನ್ ಸಿಟಿ!

ಖ್ಯಾತ ಪ್ರವಾಸೋದ್ಯಮ ಸಂಸ್ಥೆ 'ಕ್ಲಿಯರ್‌ಟ್ರಿಪ್' ವರದಿಯ ಪ್ರಕಾರ, ಬೆಂಗಳೂರು ಈಗ ಬಿಸಿನೆಸ್ ಮತ್ತು ವಿರಾಮ ಪ್ರವಾಸೋದ್ಯಮದಲ್ಲಿ ಭಾರತದ ಅಗ್ರಗಣ್ಯ ನಗರವಾಗಿ ಹೊರಹೊಮ್ಮಿದೆ. ಅತಿ ದೀರ್ಘಾವಧಿಯ ಹೋಟೆಲ್ ವಾಸ್ತವ್ಯ, ಏಕಾಂಗಿ ಪ್ರಯಾಣಿಕರ ನೆಚ್ಚಿನ ತಾಣವಾಗಿದೆ.

Read Full Story

01:25 PM (IST) Dec 18

Karna Serial - ಅಮ್ಮ ಇರಬೇಕು ಅನ್ನೋದು ಇದಕ್ಕೆ ನೋಡಿ - ಮಗ ಕರ್ಣನನ್ನು ಉಳಿಸಿದ ಮಾಲತಿ

ರಮೇಶ್ ರೂಪಿಸಿದ್ದ ಮರು ಮಾಂಗಲ್ಯಧಾರಣೆ ಸಂಚಿನಿಂದ ಕರ್ಣ ಮತ್ತು ನಿತ್ಯಾ ಸಂಕಷ್ಟಕ್ಕೆ ಸಿಲುಕಿದ್ದರು. ಈ ಅಪಾಯದಿಂದ ಮಗನನ್ನು ಪಾರು ಮಾಡಿದ್ದಾಳೆ. ಅಷ್ಟರಲ್ಲಿ ನಿಧಿ, ನಿತ್ಯಾಳ ಕೊರಳಿಗೆ ತಾಳಿ ಹಾಕುವ ಮೂಲಕ ಕರ್ಣನನ್ನು ದೊಡ್ಡ ಗಂಡಾಂತರದಿಂದ ಪಾರುಮಾಡುತ್ತಾಳೆ.

Read Full Story

01:17 PM (IST) Dec 18

ಶಿವಮೊಗ್ಗ - ಕಾಂಗ್ರೆಸ್ ಪ್ರತಿಭಟನೆಯಲ್ಲಿ ಎಎಸ್ಐ ಮಾಂಗಲ್ಯ ಸರ ಕಳುವು - ಕಣ್ಣೀರಿಟ್ಟ ಅಧಿಕಾರಿ, ಕದ್ದವರು ಯಾರು?

ಶಿವಮೊಗ್ಗದಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಬಂದೋಬಸ್ತ್ ವೇಳೆ, ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ 40 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ್ದು, ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
Read Full Story

01:08 PM (IST) Dec 18

Bigg Boss ಗೆಲ್ಲೋರು ಗಿಲ್ಲಿ ನಟ ಅಲ್ಲವೇ ಅಲ್ಲ - ಬಾಂಬ್​ ಸ್ಫೋಟದ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಹೇಳಿದ್ದೇನು?

ಬಿಗ್​ಬಾಸ್​ 12 ಮುಕ್ತಾಯದ ಹಂತದಲ್ಲಿದ್ದು, ಗಿಲ್ಲಿ ನಟ ಗೆಲ್ಲುತ್ತಾರೆಂಬ ಚರ್ಚೆ ಜೋರಾಗಿದೆ. ಆದರೆ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಸ್ಫೋಟಕ ಭವಿಷ್ಯ ನುಡಿದಿದ್ದು, ಈ ಬಾರಿ ಮಹಿಳೆಯೊಬ್ಬರು ವಿನ್ನರ್ ಆಗಲಿದ್ದಾರೆ ಎಂದಿದ್ದಾರೆ. ಈ ಭವಿಷ್ಯವಾಣಿ ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
Read Full Story

01:07 PM (IST) Dec 18

ವೈದ್ಯಾಧಿಕಾರಿಯಿಂದ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!

ವಿಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ವೈದ್ಯಾಧಿಕಾರಿಯ ನಿರಂತರ ಕಿರುಕುಳದಿಂದ ಮನನೊಂದು ಕರ್ತವ್ಯನಿರತ ನರ್ಸ್ ಸುನಿತಾ ಅವರು 20ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Read Full Story

01:02 PM (IST) Dec 18

ಜ್ಯೋತಿಷಿ ಹೇಳಿದ್ದಕ್ಕೆ ಜೀವನದ ದಾರಿ ಬದಲಿಸಿದ Mahanati Show ಗಗನಾ; ರಕ್ಷಿತಾ‌ ಪ್ರೇಮ್, ವಿಜಯ್ ಶಾಕ್

Mahanati Show Gagana Bhari News: ಸಿನಿಮಾ ಕ್ಷೇತ್ರಕ್ಕೂ ಜ್ಯೋತಿಷ್ಯಕ್ಕೂ ನಂಟಿದೆ. ಜ್ಯೋತಿಷಿ ಹೇಳಿದರು ಎಂದು ಸಿನಿಮಾ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಉದಾಹರಣೆ ಇದೆ, ಸಿನಿಮಾದಿಂದ ದೂರ ಇದ್ದ ಉದಾಹರಣೆಯಿದೆ. ಈಗ ಐಟಿ ಕಂಪೆನಿ ಉದ್ಯೋಗ ಬಿಟ್ಟ ಉದಾಹರಣೆ ಕೂಡ ಇದೆ.

Read Full Story

12:51 PM (IST) Dec 18

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಬರೊಲ್ಲ, ಇದು ಕೇವಲ ವದಂತಿ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಳ್ಳಿಹಾಕಿದ್ದಾರೆ. ಮೊಟ್ಟೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

12:33 PM (IST) Dec 18

ನಿರ್ಮಾಪಕ ಹರ್ಷವರ್ಧನ್ 8 ವರ್ಷದ ರಹಸ್ಯ ಬಯಲು! ಕಿಡ್ನಾಪರ್ ಆಗೋದಕ್ಕೂ ಮುನ್ನ ಕಳ್ಳನಾಗಿದ್ದ!

'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಿರ್ಮಾಪಕ ಹರ್ಷವರ್ಧನ್‌ನನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. 2017ರ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಈತ, ತನ್ನ ಪತ್ನಿ, ನಟಿಯೊಬ್ಬರನ್ನು ಅಪಹರಿಸಿದ ಆರೋಪವನ್ನೂ ಎದುರಿಸುತ್ತಿದ್ದನು.

Read Full Story

12:31 PM (IST) Dec 18

ಕಲರ್ಸ್ ಕನ್ನಡದಲ್ಲಿ 'ಬಿಗ್ ಬಾಸ್' ಮುಗಿದ ಬಳಿಕ ಬರಲಿರೋ ಸೀರಿಯಲ್ ಯಾವುದು? ಉತ್ತರ ಇಲ್ಲಿದೆ..

ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ಬಂದಿದೆ. ಯಾರು ವಿನ್ನರ್, ಯಾರು ರನ್ನರ್ ಅಪ್‌, ಯಾರಿಗೆ ಮೂರನೆಯ ಸ್ಥಾನ ಎಂಬುದನ್ನಷ್ಟೇ ತಿಳಿಯುವ ಕುತೂಹಲ ಹಲವು ಸೀರಿಯಲ್‌ ಪ್ರಿಯರಿಗೆ (Serials) ಇದೆ. ಕಾರಣ, ಅವರಿಗೆ ಬಿಗ್‌ ಬಾಸ್‌ಗಿಂತ ಸೀರಿಯಲ್ ಕಥೆಗಳೇ ಇಷ್ಟ. ಅಂಥವರಿಗೆ ಈ ಸ್ಟೋರಿ..

Read Full Story

12:30 PM (IST) Dec 18

ಎಲ್ಲರನ್ನು ನಗಿಸೋ ಗಿಲ್ಲಿ ನಟನ ಮನಸ್ಸಿನಲ್ಲೂ ಹೇಳಲಾಗದಷ್ಟು ನೋವಿದೆ! ದುರಂತ ಪ್ರೇಮಕಥೆ ಯಾರಿಗೂ ಗೊತ್ತಿಲ್ಲ

Bigg Boss Kannada Season 12: ಖ್ಯಾತ ನಟ ವಿ ರವಿಚಂದ್ರನ್‌ ಅವರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಆಗಮಿಸಿದ್ದಾರೆ. ರಾಶಿಕಾ ಶೆಟ್ಟಿ, ವಿ ರವಿಚಂದ್ರನ್‌ ನಟನೆಯ ಪ್ಯಾರ್‌ ಸಿನಿಮಾ ಪ್ರಚಾರಕ್ಕೆಂದು ಅವರು ದೊಡ್ಮನೆಗೆ ಬಂದಿದ್ದಾರೆ. ಆ ವೇಳೆ ಗಿಲ್ಲಿ ನಟ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

Read Full Story

12:09 PM (IST) Dec 18

ಗಿಲ್ಲಿ ಅಂಟೆ ಗಿಲ್ಲಿ - ತೆಲುಗು ಅಭಿಮಾನಿಗಳಿಂದ ಸೂಪರ್ ಸಾಂಗ್ ಬಿಡುಗಡೆ, ಹುಚ್ಚೆದ್ದು ಕುಣಿಯುತ್ತಿರೋ ಫ್ಯಾನ್ಸ್

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವಿಶಿಷ್ಟ ಶೈಲಿಯಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಅವರ ಆಟದ ವೈಖರಿಯನ್ನು ಮೆಚ್ಚಿ ತೆಲುಗು ಭಾಷಿಕರು 'ಗಿಲ್ಲಿ ಅಂಟೆ ಗಿಲ್ಲಿ' ಎಂಬ ಹಾಡನ್ನು ರಚಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

12:08 PM (IST) Dec 18

ರೈತರ ಮಕ್ಕಳನ್ನು ಮದುವೆ ಆಗುವ ಹೆಣ್ಮಕ್ಕಳಿಗೆ 10 ಲಕ್ಷ ಕೊಡುವ ಯೋಜನೆ ಜಾರಿ ಮಾಡಿ - ಪುಟ್ಟಣ್ಣ

ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು, ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ₹10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಳ್ಳಿಗಳಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗದಿರುವ ಸಮಸ್ಯೆ ಬಗೆಹರಿಸಲು ಈ ಯೋಜನೆ ಸಹಕಾರಿ.

Read Full Story

11:59 AM (IST) Dec 18

Karna Serial - ತೇಜಸ್, ನಿತ್ಯಾ ಮುಖಾಮುಖಿ; ಇನ್ನು ಕರ್ಣನಿಗೆ ಉಳಿಗಾಲವೂ ಇಲ್ಲ, ನೆಮ್ಮದಿಯೂ ಇಲ್ಲ!

Karna Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಳ್ಳುವುದೊಂದು, ಆಗುವುದೊಂದು ಎನ್ನೋ ಥರ ಆಗಿದೆ. ಕರ್ಣ-ನಿತ್ಯಾ ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ತೇಜಸ್‌ ಆಗಮನವಾಗಿದೆ, ಈಗ ಕಥೆ ಇನ್ನೊಂದು ತಿರುವು ಪಡೆದುಕೊಳ್ಳಲಿದೆ.

Read Full Story

11:44 AM (IST) Dec 18

ಗ್ಯಾರಂಟಿ ಹೆಸರಲ್ಲಿ ಲೂಟಿ, ಇದು ನುಂಗಣ್ಣಗಳ, ಲೂಟಿಕೋರರ ಸರ್ಕಾರ - ಆರ್ ಅಶೋಕ್ ತೀವ್ರ ವಾಗ್ದಾಳಿ

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖಜಾನೆ ಲೂಟಿ ಮಾಡುತ್ತಿದೆ ಎಂದು ಸುವರ್ಣಸೌಧದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ದಿವಾಳಿಯಾಗಿದ್ದು, ತೆರಿಗೆ ಏರಿಕೆಗೂ ಸರ್ಕಾರ ಮುಂದಾಗಿದೆ ಎಂದರು. 

Read Full Story

10:58 AM (IST) Dec 18

'ಕೋಳಿಗೆ ಚೀಪ್ ಆಗಿ ಮೊಟ್ಟೆ ಇಡು ಅನ್ನೋಕಾಗುತ್ತಾ?' ಮೊಟ್ಟೆಯ ದರದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಶಿಕ್ಷಣ ಸಚಿವರ ಉತ್ತರ

ವಿಧಾನಸಭೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರ ಏರಿಳಿತದ ಕುರಿತು ನಡೆದ ಚರ್ಚೆಯಲ್ಲಿ, ದರ ನಿಯಂತ್ರಣದ ಸವಾಲಿನ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾರ್ಮಿಕವಾಗಿ ಉತ್ತರಿಸಿದರು. ಮೊಟ್ಟೆ ದರವನ್ನು ಸ್ಥಿರವಾಗಿರಿಸಲು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

Read Full Story

10:57 AM (IST) Dec 18

Men Health - ಮೌನ ಶತ್ರು ಪ್ರಾಸ್ಟೇಟ್ ಕ್ಯಾನ್ಸರ್ - ಪುರುಷರು ತಿಳಿದುಕೊಳ್ಳಬೇಕಾದ ಐದು ಪ್ರಮುಖ ವಿಷಯಗಳು

ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಆಗಿದ್ದು, 40 ವರ್ಷ ಮೇಲ್ಪಟ್ಟವರು ಇದರ ಬಗ್ಗೆ ತಿಳಿಯುವುದು ಮುಖ್ಯ. ಈ ಲೇಖನ ಪ್ರಾಸ್ಟೇಟ್ ಕ್ಯಾನ್ಸರ್‌ನ ಕಾರಣಗಳು, ಆರಂಭಿಕ ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣದ ಬಗ್ಗೆ ವಿವರಿಸುತ್ತದೆ.

Read Full Story

10:24 AM (IST) Dec 18

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ - ಕುತೂಹಲ!

Ramesh Jarkiholi meets Siddaramaiah: ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Read Full Story

10:05 AM (IST) Dec 18

ರಾಯಚೂರು - ತಾಯಿ ಬುದ್ದಿವಾದ ಹೇಳಿದಕ್ಕೆ ತುಂಗಭದ್ರಾ ಕಾಲುವೆಗೆ ಹಾರಿ ದುಡುಕಿದ ಮಗಳು!

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ, ತಾಯಿ ಜವಾಬ್ದಾರಿಯಿಂದ ಇರಲು ಹೇಳಿದ ಬುದ್ದಿಮಾತಿಗೆ ಮನನೊಂದು ಬಸಲಿಂಗಮ್ಮ ಎಂಬ 24 ವರ್ಷದ ಯುವತಿ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 16 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read Full Story

09:55 AM (IST) Dec 18

ಅಂದು ಆಶೀರ್ವಾದಕ್ಕೋಸ್ಕರ ಕಾಲಿಗೆ ಬಿದ್ರು, ಇಂದು ಥೂ, ನಿನ್ನ ಫ್ಯಾಮಿಲಿ ಸರ್‌ನೇಮ್‌ ಅಂದ್ರು - ಚೈತ್ರಾ ಕುಂದಾಪುರ ಹೀಗ್ಯಾಕೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ರಜತ್‌, ಚೈತ್ರಾ ಕುಂದಾಪುರ ಜಗಳ ಆಡಿಕೊಂಡಿದ್ದರು. ಆಗ ಚೈತ್ರಾಗೆ ರಜತ್‌ ಸುಳ್ಳಿ, ಕಳ್ಳಿ, ಬಾಸ್‌ ಎಂದೆಲ್ಲ ನಾಮಕರಣ ಮಾಡಿದ್ದರು. ಚೈತ್ರಾ ಮದುವೆಯಲ್ಲಿ ರಜತ್‌ ಅವರು ಅಣ್ಣನಾಗಿ ಶಾಸ್ತ್ರ ಮಾಡಿದ್ರು, ಚೈತ್ರಾ, ರಜತ್‌ ಕಾಲಿಗೆ ಬಿದ್ದರು. ಈಗ ಆಗಿರೋದು ಬೇರೆ.

 

Read Full Story

09:24 AM (IST) Dec 18

ಬೆಂಗಳೂರಿನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ!

ತೆರಿಗೆ ವಂಚನೆ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಬ್ಯಾಸ್ಟಿಯನ್ ಪಬ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈ ಐಟಿ ಅಧಿಕಾರಿಗಳ ತಂಡವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಈ ದಾಳಿಯು ಹಿಂದಿನ ಪ್ರಕರಣಗಳ ಮುಂದುವರಿದ ಭಾಗವೆಂದು ಹೇಳಲಾಗುತ್ತಿದೆ.
Read Full Story

09:05 AM (IST) Dec 18

ಮೋಸ ಮಾಡೋದು ಹೇಳ್ಕೊಟ್ಟಿಲ್ಲ - ‌ ಪತಿ ಯುವ ರಾಜ್‌ಕುಮಾರ್‌, ಆ ನಟಿ ಬಗ್ಗೆ ಶ್ರೀದೇವಿ ಬೈರಪ್ಪ ಖಡಕ್‌ ಪೋಸ್ಟ್

Yuva Rajkumar Wife Sridevi Byrappa: ಶ್ರೀದೇವಿ ಬೈರಪ್ಪ, ನಟ ಯುವರಾಜ್‌ಕುಮಾರ್‌ ನಡುವಿನ ಮನಸ್ತಾಪ, ಡಿವೋರ್ಸ್‌ಗೋಸ್ಕರ ಕೋರ್ಟ್‌ ಮೆಟ್ಟಿಲೇರಿರೋದು ಎಲ್ಲರಿಗೂ ಗೊತ್ತಿದೆ. ಶ್ರೀದೇವಿ ಬೈರಪ್ಪ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ಈ ಬಗ್ಗೆ ಮಾತನಾಡೋದುಂಟು. ಈಗ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.

 

Read Full Story

08:52 AM (IST) Dec 18

BBK 12 - ಬಿಗ್‌ಬಾಸ್ ಮನೆಗೆ ಬಂದ ಸ್ಟಾರ್ ಹೀರೋ - ಗಿಲ್ಲಿಗೆ ಮೋಸ ಆಗ್ತಿದೆ ಎಂದ ಅಭಿಮಾನಿಗಳು

ಕನ್ನಡದ ಸ್ಟಾರ್ ಹೀರೋ ಸಿನಿಮಾದ ಪ್ರಚಾರಕ್ಕಾಗಿ ಬಿಗ್‌ಬಾಸ್ ಮನೆಗೆ ಆಗಮಿಸಿದ್ದಾರೆ. ಆದರೆ ಇದು ಗಿಲ್ಲಿ' ನಟ ಅವರ ಅಭಿಮಾನಿಗಳು ಅಸಮಾಧಾನಕ್ಕೆ ಕಾರಣವಾಗಿದ್ದು, ಬಿಗ್‌ಬಾಸ್ ವಿರುದ್ಧ ಭೇದಭಾವದ ಆರೋಪ ಮಾಡುತ್ತಿದ್ದಾರೆ.

Read Full Story

08:26 AM (IST) Dec 18

ಬೆಂಗಳೂರಲ್ಲಿ ಇಂದು ಇನ್ನಷ್ಟು ಚಳಿ; ತಾಪಮಾನ ಕುಸಿತ, ಈ ಮೂರು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

ಕರ್ನಾಟಕದಾದ್ಯಂತ ಚಳಿ ಮತ್ತು ಮಂಜಿನ ವಾತಾವರಣ ತೀವ್ರಗೊಂಡಿದ್ದು, ಬೆಂಗಳೂರಿನಲ್ಲಿ ತಾಪಮಾನ 14°C ಗೆ ಕುಸಿದಿದೆ. ಹವಾಮಾನ ಇಲಾಖೆಯು ಬೀದರ್, ಹಾವೇರಿ, ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ 'ಶೀತ ಅಲೆ'ಯ ಎಚ್ಚರಿಕೆ ನೀಡಿದ್ದು, ದಟ್ಟ ಮಂಜಿನಿಂದಾಗಿ ಪ್ರಯಾಣಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ.
Read Full Story

08:12 AM (IST) Dec 18

BBK 12 - ಗಿಲ್ಲಿಯ ಚಿತ್ತಾಲ ಪತ್ತಾಲ್ ಆಟಕ್ಕೆ ಸುಸ್ತಾದ ರಾಶಿಕಾ; ಈ ವಾರದ ಕ್ಯಾಪ್ಟನ್ ಯಾರು?

ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸೂರಜ್-ಕಾವ್ಯಾ ಮತ್ತು ರಘು-ಗಿಲ್ಲಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಕೆಟ್ ಹಿಡಿದು ವಸ್ತುಗಳನ್ನು ಸಂಗ್ರಹಿಸುವ ಆಟದಲ್ಲಿ, 'ವೈಪರ್' ತರುವ ವಿಚಾರದಲ್ಲಿ ದೊಡ್ಡ ಜಗಳವೇ ಶುರುವಾಗಿದೆ.

Read Full Story

08:00 AM (IST) Dec 18

‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ

ಕೇಂದ್ರ ಸರ್ಕಾರದ ಆತ್ಮನಿರ್ಭರ ಮತ್ತು ವಿಕಸಿತ ಭಾರತ ಪರಿಕಲ್ಪನೆಗೆ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಶಕ್ತಿ ತುಂಬಲಿದ್ದು, 2030ರೊಳಗೆ 35 ಬಿಲಿಯನ್‌ ಡಾಲರ್‌ ಗಿಂತ ಹೆಚ್ಚು ಹೂಡಿಕೆ ಮಾಡಲು ನಿರ್ಧರಿಸಿದೆ. ಆ ಮೂಲಕ ಮುಂದಿನ 5 ವರ್ಷಗಳಲ್ಲಿ 38 ಲಕ್ಷಕ್ಕೂ ಅಧಿಕ ನೇರ-ಪರೋಕ್ಷ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.

Read Full Story

More Trending News