ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಸುಳ್ಳು ಹೇಳಿ ಜೈಲಿಗೆ ಸೇರಿದ್ದ ಬುರುಡೆ ಪಾತ್ರಧಾರಿ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ. ಜಾಮೀನು ಸಿಕ್ಕರೂ ಶೂರಿಟಿ ಇಲ್ಲ ದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯ್ಯ ಮಂಕಾ ಗಿದ್ದು, ಮೌನಕ್ಕೆ ಶರಣಾಗಿದ್ದ. ಈಗ 1 ಲಕ್ಷ ಬಾಂಡ್, 2 ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್ಗೆ ಶೂರಿಟಿ ನೀಡಲಾಗಿದೆ. ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಡಿ.18 ರಂದು ಚಿನ್ನಯ್ಯ ಬಿಡುಗಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನ.24ರಂದು 1 ಲಕ್ಷ ಬಾಂಡ್, ಇಬ್ಬರ ಶೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು .ಚಿನ್ನಯ್ಯನಿಗೆ ಶೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಕೊರತೆಯಿಂದ ಬಿಡುಗ ಡೆಯಾಗದೇ ಚಿನ್ನಯ್ಯ ಜೈಲಿನಲ್ಲಿದ್ದ. ಆ.23ರಂದು ಸುದೀರ್ಘ ವಿಚಾರಣೆ ಬಳಿಕ ಬುರುಡೆ ಕೇಸ್ನಲ್ಲಿ ಅನಾಮಿಕ ದೂರುದಾರ ಚಿನ್ನಯ್ಯನನ್ನು ಬಂಧಿಸಲಾಗಿತ್ತು. ಸೆ.6ರಂದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಶಿವಮೊಗ್ಗ ಜೈಲಿಗೆ ಚಿನ್ನಯ್ಯನನ್ನು ಕರೆತರಲಾಗಿತ್ತು.
04:27 PM (IST) Dec 18
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪದ ತನಿಖೆ ವಿಳಂಬವಾಗಿದ್ದಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಮತ್ತಷ್ಟು ಕಾಲಾವಕಾಶ ಕೋರಿದೆ.
04:26 PM (IST) Dec 18
ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಯಾರ ಹೆಸರೂ ಮಿಸ್ ಮಾಡಲಿಲ್ಲ. ಅವರೂ ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಇಂಥದ್ದನ್ನೆಲ್ಲ ಅಲ್ಲಲ್ಲೇ ಬಿಟ್ಟು ಮುಂದಕ್ಕೆ ಹೋಗಬೇಕು ಎಂದರು ರಾಜ್ ಬಿ ಶೆಟ್ಟಿ.
04:14 PM (IST) Dec 18
Gen Z ಪೀಳಿಗೆಯವರಂತೂ ಯಾವುದಕ್ಕೂ ಚಿಂತೆ ಮಾಡೋದಿಲ್ಲ, ಕೇರ್ ಮಾಡೋದಿಲ್ಲ, ಜವಾಬ್ದಾರಿ ತಗೊಳಲ್ಲ ಎನ್ನುವ ದೂರು ಇದೆ. ಈಗ ಬೆಂಗಳೂರಿನ ಕನ್ನಡಿಗನೋರ್ವ ಏಕಾಏಕಿ ಕೆಲಸ ಬಿಟ್ಟು, ಸಮಸ್ಯೆ ತಂದುಕೊಂಡಿದ್ದಾರೆ.
03:45 PM (IST) Dec 18
03:38 PM (IST) Dec 18
ಯುವ ರಾಜ್ಕುಮಾರ್ ಜೊತೆಗಿನ ವಿಚ್ಛೇದನದ ನಡುವೆ, ಶ್ರೀದೇವಿ ಭೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಯುವ ಹಾಗೂ ಮತ್ತೊಬ್ಬ ನಟಿಯ ಸಂಬಂಧದ ಬಗ್ಗೆ ಕೇಳಿದಾಗ, ಡಾ. ರಾಜ್ಕುಮಾರ್ ಅವರ ಹಾಡು ಹಾಕಿ ಗಮನಸೆಳೆದಿದ್ದಾರೆ.
03:36 PM (IST) Dec 18
ಜೈಲರ್ 2 ಅಡ್ಡಾದಿಂದ ಹೊಸದೊಂದು ನ್ಯೂಸ್ ಬಂದಿದೆ. ಅದೂ ಜೈಲರ್ ಪಾರ್ಟ್ 2ನಲ್ಲಿ ನಟಿ ತಮನ್ನಾ ಹಾಡು ಇರೋದಿಲ್ಲ ಅಂತ. ಹಾಗಿದ್ರೆ ಹಾಡೇ ಇರೋದಿಲ್ವಾ ಅಥವಾ ತಮನ್ನಾ ಇರೋದಿಲ್ವಾ ಅಂತ ಕೇಳಿದ್ರೆ, ಹಾಡು ಇರಲಿದೆ, ಆದ್ರೆ ತಮನ್ನಾ ಭಾಟಿಯಾ (Tamannah Bhatia) ಅದರಲ್ಲಿ ಇರೋದಿಲ್ಲ ಎಂಬ ಉತ್ತರ ಸಿಕ್ಕಿದೆ.
03:08 PM (IST) Dec 18
ಬಿಗ್ಬಾಸ್ ಮನೆಯಲ್ಲಿ ತನ್ನ ಕಾಮಿಡಿಯಿಂದ ಜನಪ್ರಿಯರಾಗಿರುವ ಗಿಲ್ಲಿ ನಟ, ಸಹ ಸ್ಪರ್ಧಿ ಕಾವ್ಯಾ ಶೈವ ಜೊತೆಗಿನ ತಮ್ಮ ಜೋಡಿಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ತನ್ನ 'ಮಾವನ ಮಗಳು' ಎಂದು ಹೇಳಿಕೊಂಡು, ಜಂಟಿಯಾಗಿ ಮನೆಗೆ ಪ್ರವೇಶಿಸಿದ ಕಥೆಯನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ.
03:08 PM (IST) Dec 18
TB ಡ್ಯಾಂ ಕ್ರಸ್ಟ್ಡ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ, ತಜ್ಞರ ತಂಡವು ಎಡದಂಡೆ ಕಾಲುವೆ ಮಾರ್ಗವನ್ನು ಪರಿಶೀಲಿಸಿದೆ. ಮುಂದಿನ ಆರು ತಿಂಗಳು ಕಾಲುವೆಗೆ ನೀರು ಸ್ಥಗಿತಗೊಳ್ಳಲಿದ್ದು, ಈ ಅವಧಿಯಲ್ಲಿ ₹430 ಕೋಟಿ ವೆಚ್ಚದಲ್ಲಿ ಕಾಲುವೆಯ ದುರಸ್ತಿ ಮತ್ತು ಸುಧಾರಣಾ ಕಾರ್ಯಗಳನ್ನು ಕೈಗೊಳ್ಳಲು ಯೋಜಿಸಲಾಗಿದೆ.
03:07 PM (IST) Dec 18
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ದೊಡ್ಮನೆಯೊಳಗಡೆ ಒಂದು ಸಿನಿಮಾ, ಸೀಕ್ರೇಟ್ ರೂಮ್ನಲ್ಲಿ ಇನ್ನೊಂದು ಸಿನಿಮಾ ಪ್ರಸಾರವಾಗುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಅವರು ಆಟ ಆಡಿಸಿದಂತೆ, ಸ್ಪರ್ಧಿಗಳು ಆಟ ಆಡುತ್ತಿದ್ದಾರೆ.
02:44 PM (IST) Dec 18
ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆನಗರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
02:29 PM (IST) Dec 18
ಸಚಿವ ಭೈರತಿ ಸುರೇಶ್ ಅವರ 'ಕರಾವಳಿಯವರು ಬೆಂಕಿ ಹಚ್ಚುವವರು' ಎಂಬ ಹೇಳಿಕೆಯು ಸುವರ್ಣಸೌಧದ ಅಧಿವೇಶನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ಈ ಹೇಳಿಕೆಗೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕ್ಷಮೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
02:07 PM (IST) Dec 18
01:51 PM (IST) Dec 18
ಒಮ್ಮೆ ಬಿಗ್ ಬಾಸ್ ತೊರೆಯುವುದಾಗಿ ಹೇಳಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದ ಕಿಚ್ಚ ಸುದೀಪ್, ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಇತ್ತೀಚೆಗೆ, ತಮಗಾದ ಅಪಘಾತದಿಂದ ತೀವ್ರ ಕಾಲುನೋವಿದ್ದರೂ, ಅದನ್ನು ಲೆಕ್ಕಿಸದೆ 'ಸೂಪರ್ ಸಂಡೆ ವಿತ್ ಕಿಚ್ಚ' ಸಂಚಿಕೆಯನ್ನು ನಿಂತುಕೊಂಡೇ ನಿರೂಪಣೆ ಮಾಡಿದೆ ಎಂದಿದ್ದಾರೆ.
01:48 PM (IST) Dec 18
ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು, ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಧಿ ಜಾರಿಗೆ ತಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ 'ಭಾರತ ರತ್ನ' ನೀಡಲು ಶಿಫಾರಸು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಖರ್ಗೆಯವರನ್ನು ಅಂಬೇಡ್ಕರ್ಗೆ ಹೋಲಿಸಿದರು.
01:34 PM (IST) Dec 18
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮನೆಯೊಳಗಡೆ ವಿ ರವಿಚಂದ್ರನ್ ಅವರು ಎಂಟ್ರಿ ಕೊಟ್ಟಿದ್ದಾರೆ. ಪ್ಯಾರ್ ಸಿನಿಮಾದಲ್ಲಿ ರಾಶಿಕಾ ಶೆಟ್ಟಿ ಅವರ ತಂದೆ ಪಾತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದಾರೆ. ಪ್ಯಾರ್ ಎಂದರೆ ಲವ್ ಎಂದರ್ಥ. ಈಗ ರವಿಚಂದ್ರನ್ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
01:30 PM (IST) Dec 18
ಖ್ಯಾತ ಪ್ರವಾಸೋದ್ಯಮ ಸಂಸ್ಥೆ 'ಕ್ಲಿಯರ್ಟ್ರಿಪ್' ವರದಿಯ ಪ್ರಕಾರ, ಬೆಂಗಳೂರು ಈಗ ಬಿಸಿನೆಸ್ ಮತ್ತು ವಿರಾಮ ಪ್ರವಾಸೋದ್ಯಮದಲ್ಲಿ ಭಾರತದ ಅಗ್ರಗಣ್ಯ ನಗರವಾಗಿ ಹೊರಹೊಮ್ಮಿದೆ. ಅತಿ ದೀರ್ಘಾವಧಿಯ ಹೋಟೆಲ್ ವಾಸ್ತವ್ಯ, ಏಕಾಂಗಿ ಪ್ರಯಾಣಿಕರ ನೆಚ್ಚಿನ ತಾಣವಾಗಿದೆ.
01:25 PM (IST) Dec 18
ರಮೇಶ್ ರೂಪಿಸಿದ್ದ ಮರು ಮಾಂಗಲ್ಯಧಾರಣೆ ಸಂಚಿನಿಂದ ಕರ್ಣ ಮತ್ತು ನಿತ್ಯಾ ಸಂಕಷ್ಟಕ್ಕೆ ಸಿಲುಕಿದ್ದರು. ಈ ಅಪಾಯದಿಂದ ಮಗನನ್ನು ಪಾರು ಮಾಡಿದ್ದಾಳೆ. ಅಷ್ಟರಲ್ಲಿ ನಿಧಿ, ನಿತ್ಯಾಳ ಕೊರಳಿಗೆ ತಾಳಿ ಹಾಕುವ ಮೂಲಕ ಕರ್ಣನನ್ನು ದೊಡ್ಡ ಗಂಡಾಂತರದಿಂದ ಪಾರುಮಾಡುತ್ತಾಳೆ.
01:17 PM (IST) Dec 18
01:08 PM (IST) Dec 18
01:07 PM (IST) Dec 18
ವಿಜಯನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ವೈದ್ಯಾಧಿಕಾರಿಯ ನಿರಂತರ ಕಿರುಕುಳದಿಂದ ಮನನೊಂದು ಕರ್ತವ್ಯನಿರತ ನರ್ಸ್ ಸುನಿತಾ ಅವರು 20ಕ್ಕೂ ಹೆಚ್ಚು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಸ್ತುತ ಅವರನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
01:02 PM (IST) Dec 18
Mahanati Show Gagana Bhari News: ಸಿನಿಮಾ ಕ್ಷೇತ್ರಕ್ಕೂ ಜ್ಯೋತಿಷ್ಯಕ್ಕೂ ನಂಟಿದೆ. ಜ್ಯೋತಿಷಿ ಹೇಳಿದರು ಎಂದು ಸಿನಿಮಾ ನಟ-ನಟಿಯರು ಹೆಸರು ಬದಲಾಯಿಸಿಕೊಂಡ ಉದಾಹರಣೆ ಇದೆ, ಸಿನಿಮಾದಿಂದ ದೂರ ಇದ್ದ ಉದಾಹರಣೆಯಿದೆ. ಈಗ ಐಟಿ ಕಂಪೆನಿ ಉದ್ಯೋಗ ಬಿಟ್ಟ ಉದಾಹರಣೆ ಕೂಡ ಇದೆ.
12:51 PM (IST) Dec 18
ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವದಂತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ತಳ್ಳಿಹಾಕಿದ್ದಾರೆ. ಮೊಟ್ಟೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಗುಣಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
12:33 PM (IST) Dec 18
'ನಿನ್ನಲ್ಲೇನೋ ಹೇಳಬೇಕು' ಚಿತ್ರದ ನಿರ್ಮಾಪಕ ಹರ್ಷವರ್ಧನ್ನನ್ನು ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. 2017ರ ಕಳ್ಳತನ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಈತ, ತನ್ನ ಪತ್ನಿ, ನಟಿಯೊಬ್ಬರನ್ನು ಅಪಹರಿಸಿದ ಆರೋಪವನ್ನೂ ಎದುರಿಸುತ್ತಿದ್ದನು.
12:31 PM (IST) Dec 18
ಇನ್ನೇನು ಬಿಗ್ ಬಾಸ್ ಮುಗಿಯುವ ಹಂತಕ್ಕೆ ಬಂದಿದೆ. ಯಾರು ವಿನ್ನರ್, ಯಾರು ರನ್ನರ್ ಅಪ್, ಯಾರಿಗೆ ಮೂರನೆಯ ಸ್ಥಾನ ಎಂಬುದನ್ನಷ್ಟೇ ತಿಳಿಯುವ ಕುತೂಹಲ ಹಲವು ಸೀರಿಯಲ್ ಪ್ರಿಯರಿಗೆ (Serials) ಇದೆ. ಕಾರಣ, ಅವರಿಗೆ ಬಿಗ್ ಬಾಸ್ಗಿಂತ ಸೀರಿಯಲ್ ಕಥೆಗಳೇ ಇಷ್ಟ. ಅಂಥವರಿಗೆ ಈ ಸ್ಟೋರಿ..
12:30 PM (IST) Dec 18
Bigg Boss Kannada Season 12: ಖ್ಯಾತ ನಟ ವಿ ರವಿಚಂದ್ರನ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಆಗಮಿಸಿದ್ದಾರೆ. ರಾಶಿಕಾ ಶೆಟ್ಟಿ, ವಿ ರವಿಚಂದ್ರನ್ ನಟನೆಯ ಪ್ಯಾರ್ ಸಿನಿಮಾ ಪ್ರಚಾರಕ್ಕೆಂದು ಅವರು ದೊಡ್ಮನೆಗೆ ಬಂದಿದ್ದಾರೆ. ಆ ವೇಳೆ ಗಿಲ್ಲಿ ನಟ ತಮ್ಮ ಲವ್ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
12:09 PM (IST) Dec 18
ಬಿಗ್ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ ತಮ್ಮ ವಿಶಿಷ್ಟ ಶೈಲಿಯಿಂದ ಜನಪ್ರಿಯತೆ ಗಳಿಸುತ್ತಿದ್ದಾರೆ. ಅವರ ಆಟದ ವೈಖರಿಯನ್ನು ಮೆಚ್ಚಿ ತೆಲುಗು ಭಾಷಿಕರು 'ಗಿಲ್ಲಿ ಅಂಟೆ ಗಿಲ್ಲಿ' ಎಂಬ ಹಾಡನ್ನು ರಚಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
12:08 PM (IST) Dec 18
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು, ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ₹10 ಲಕ್ಷ ಠೇವಣಿ ಇಡುವ ಯೋಜನೆಯನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಳ್ಳಿಗಳಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಸಿಗದಿರುವ ಸಮಸ್ಯೆ ಬಗೆಹರಿಸಲು ಈ ಯೋಜನೆ ಸಹಕಾರಿ.
11:59 AM (IST) Dec 18
Karna Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಅಂದುಕೊಳ್ಳುವುದೊಂದು, ಆಗುವುದೊಂದು ಎನ್ನೋ ಥರ ಆಗಿದೆ. ಕರ್ಣ-ನಿತ್ಯಾ ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ತೇಜಸ್ ಆಗಮನವಾಗಿದೆ, ಈಗ ಕಥೆ ಇನ್ನೊಂದು ತಿರುವು ಪಡೆದುಕೊಳ್ಳಲಿದೆ.
11:44 AM (IST) Dec 18
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಖಜಾನೆ ಲೂಟಿ ಮಾಡುತ್ತಿದೆ ಎಂದು ಸುವರ್ಣಸೌಧದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆ ದಿವಾಳಿಯಾಗಿದ್ದು, ತೆರಿಗೆ ಏರಿಕೆಗೂ ಸರ್ಕಾರ ಮುಂದಾಗಿದೆ ಎಂದರು.
10:58 AM (IST) Dec 18
ವಿಧಾನಸಭೆಯಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಮೊಟ್ಟೆಯ ದರ ಏರಿಳಿತದ ಕುರಿತು ನಡೆದ ಚರ್ಚೆಯಲ್ಲಿ, ದರ ನಿಯಂತ್ರಣದ ಸವಾಲಿನ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾರ್ಮಿಕವಾಗಿ ಉತ್ತರಿಸಿದರು. ಮೊಟ್ಟೆ ದರವನ್ನು ಸ್ಥಿರವಾಗಿರಿಸಲು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
10:57 AM (IST) Dec 18
ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಆಗಿದ್ದು, 40 ವರ್ಷ ಮೇಲ್ಪಟ್ಟವರು ಇದರ ಬಗ್ಗೆ ತಿಳಿಯುವುದು ಮುಖ್ಯ. ಈ ಲೇಖನ ಪ್ರಾಸ್ಟೇಟ್ ಕ್ಯಾನ್ಸರ್ನ ಕಾರಣಗಳು, ಆರಂಭಿಕ ಲಕ್ಷಣಗಳು, ಚಿಕಿತ್ಸಾ ವಿಧಾನಗಳು ಮತ್ತು ಹೆಚ್ಚಿನ ಬದುಕುಳಿಯುವಿಕೆಯ ಪ್ರಮಾಣದ ಬಗ್ಗೆ ವಿವರಿಸುತ್ತದೆ.
10:24 AM (IST) Dec 18
Ramesh Jarkiholi meets Siddaramaiah: ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ರಹಸ್ಯವಾಗಿ ಭೇಟಿಯಾಗಿದ್ದಾರೆ. ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
10:05 AM (IST) Dec 18
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ, ತಾಯಿ ಜವಾಬ್ದಾರಿಯಿಂದ ಇರಲು ಹೇಳಿದ ಬುದ್ದಿಮಾತಿಗೆ ಮನನೊಂದು ಬಸಲಿಂಗಮ್ಮ ಎಂಬ 24 ವರ್ಷದ ಯುವತಿ ತುಂಗಭದ್ರಾ ಕಾಲುವೆಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 16 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
09:55 AM (IST) Dec 18
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ರಜತ್, ಚೈತ್ರಾ ಕುಂದಾಪುರ ಜಗಳ ಆಡಿಕೊಂಡಿದ್ದರು. ಆಗ ಚೈತ್ರಾಗೆ ರಜತ್ ಸುಳ್ಳಿ, ಕಳ್ಳಿ, ಬಾಸ್ ಎಂದೆಲ್ಲ ನಾಮಕರಣ ಮಾಡಿದ್ದರು. ಚೈತ್ರಾ ಮದುವೆಯಲ್ಲಿ ರಜತ್ ಅವರು ಅಣ್ಣನಾಗಿ ಶಾಸ್ತ್ರ ಮಾಡಿದ್ರು, ಚೈತ್ರಾ, ರಜತ್ ಕಾಲಿಗೆ ಬಿದ್ದರು. ಈಗ ಆಗಿರೋದು ಬೇರೆ.
09:24 AM (IST) Dec 18
09:05 AM (IST) Dec 18
Yuva Rajkumar Wife Sridevi Byrappa: ಶ್ರೀದೇವಿ ಬೈರಪ್ಪ, ನಟ ಯುವರಾಜ್ಕುಮಾರ್ ನಡುವಿನ ಮನಸ್ತಾಪ, ಡಿವೋರ್ಸ್ಗೋಸ್ಕರ ಕೋರ್ಟ್ ಮೆಟ್ಟಿಲೇರಿರೋದು ಎಲ್ಲರಿಗೂ ಗೊತ್ತಿದೆ. ಶ್ರೀದೇವಿ ಬೈರಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಈ ಬಗ್ಗೆ ಮಾತನಾಡೋದುಂಟು. ಈಗ ಮತ್ತೆ ಈ ಬಗ್ಗೆ ಮಾತನಾಡಿದ್ದಾರೆ.
08:52 AM (IST) Dec 18
ಕನ್ನಡದ ಸ್ಟಾರ್ ಹೀರೋ ಸಿನಿಮಾದ ಪ್ರಚಾರಕ್ಕಾಗಿ ಬಿಗ್ಬಾಸ್ ಮನೆಗೆ ಆಗಮಿಸಿದ್ದಾರೆ. ಆದರೆ ಇದು ಗಿಲ್ಲಿ' ನಟ ಅವರ ಅಭಿಮಾನಿಗಳು ಅಸಮಾಧಾನಕ್ಕೆ ಕಾರಣವಾಗಿದ್ದು, ಬಿಗ್ಬಾಸ್ ವಿರುದ್ಧ ಭೇದಭಾವದ ಆರೋಪ ಮಾಡುತ್ತಿದ್ದಾರೆ.
08:26 AM (IST) Dec 18
08:12 AM (IST) Dec 18
ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಸೂರಜ್-ಕಾವ್ಯಾ ಮತ್ತು ರಘು-ಗಿಲ್ಲಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಬಕೆಟ್ ಹಿಡಿದು ವಸ್ತುಗಳನ್ನು ಸಂಗ್ರಹಿಸುವ ಆಟದಲ್ಲಿ, 'ವೈಪರ್' ತರುವ ವಿಚಾರದಲ್ಲಿ ದೊಡ್ಡ ಜಗಳವೇ ಶುರುವಾಗಿದೆ.
08:00 AM (IST) Dec 18
ಕೇಂದ್ರ ಸರ್ಕಾರದ ಆತ್ಮನಿರ್ಭರ ಮತ್ತು ವಿಕಸಿತ ಭಾರತ ಪರಿಕಲ್ಪನೆಗೆ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಶಕ್ತಿ ತುಂಬಲಿದ್ದು, 2030ರೊಳಗೆ 35 ಬಿಲಿಯನ್ ಡಾಲರ್ ಗಿಂತ ಹೆಚ್ಚು ಹೂಡಿಕೆ ಮಾಡಲು ನಿರ್ಧರಿಸಿದೆ. ಆ ಮೂಲಕ ಮುಂದಿನ 5 ವರ್ಷಗಳಲ್ಲಿ 38 ಲಕ್ಷಕ್ಕೂ ಅಧಿಕ ನೇರ-ಪರೋಕ್ಷ ಉದ್ಯೋಗ ಸೃಷ್ಟಿಸಲು ಮುಂದಾಗಿದೆ.