LIVE NOW
Published : Sep 17, 2026, 07:01 AM ISTUpdated : Sep 17, 2026, 09:47 AM IST

Karnataka News Live 17 September 2026: ಪೂಜೆಗೆ ಸಜ್ಜಾಗಿದ್ದ ಧಾರವಾಡ ತಹಸೀಲ್ದಾರ್‌ಗೆ ಲೋಕಾ ಶಾಕ್! 5 ಸಾವಿರ ಜನರಿಗೆ ಅನ್ನಸಂತರ್ಪಣೆ ತಯಾರಿ ನಡುವೆ ₹50 ಲಕ್ಷ ಲಂಚ!

ಸಾರಾಂಶ

ಮಡಿಕೇರಿ: ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋದ್ಭವ ಅ.17ರಂದು ರಾತ್ರಿ 7.50ಕ್ಕೆ ನಡೆಯಲಿದೆ. ಭಾಗಮಂಡಲದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ತುಲಾ ಸಂಕ್ರಮಣ-2026ರ ಜಾತ್ರೆಯ ಪ್ರಯುಕ್ತ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟಿಸಲಾಯಿತು.

ಕಾರ್ಯಕ್ರಮಗಳ ವಿವರ: ಸೆ.27ರಂದು ಬೆಳಗ್ಗೆ 8.45ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ ಕಾರ್ಯಕ್ರಮ. ಅ.5ರಂದು ಬೆಳಗ್ಗೆ 10.35ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ.15ರಂದು ಮಧ್ಯಾಹ್ನ 12.35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಕಾರ್ಯಕ್ರಮ, ಅದೇ ದಿನ ಸಂಜೆ 6.03ಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳಿಗೆ ಪೂಜೆ. ಅ.17ರಂದು ರಾತ್ರಿ 7.50ಕ್ಕೆ ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ.

09:47 AM (IST) Sep 17

ಪೂಜೆಗೆ ಸಜ್ಜಾಗಿದ್ದ ಧಾರವಾಡ ತಹಸೀಲ್ದಾರ್‌ಗೆ ಲೋಕಾ ಶಾಕ್! 5 ಸಾವಿರ ಜನರಿಗೆ ಅನ್ನಸಂತರ್ಪಣೆ ತಯಾರಿ ನಡುವೆ ₹50 ಲಕ್ಷ ಲಂಚ!

ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರು 50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಜಮೀನು ಅಭಿವೃದ್ಧಿ ಅನುಮತಿಗಾಗಿ 1 ಕೋಟಿ ರೂ. ಬೇಡಿಕೆ ಇಟ್ಟಿದ್ದ ಅವರು, ಮುಂಗಡ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಮರುದಿನ ಕಚೇರಿಯಲ್ಲಿ ಪೂಜೆ ಮತ್ತು ಅನ್ನಸಂತರ್ಪಣೆಗೆ ಸಿದ್ಧತೆ ನಡೆಸಿದ್ದ ತಹಸೀಲ್ದಾರ್ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.
Read Full Story

09:17 AM (IST) Sep 17

ಲೋಕಸಭೆಗೆ ಸ್ಪರ್ಧಿಸಲ್ಲ, ವಿಧಾನಸಭೆಗೆ ರೆಡಿ; ಜಿ.ಎಂ.ಸಿದ್ದೇಶ್ವರ ಖಡಕ್‌ ಸಂದೇಶ

ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಅಲ್ಲದೆ, ರೈತರ ಹಿತದೃಷ್ಟಿಯಿಂದ ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಇಡಿ ಮತ್ತು ಐಟಿ ದಾಳಿಗಳು ಸ್ವತಂತ್ರ ಸಂಸ್ಥೆಗಳ ಕ್ರಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

08:49 AM (IST) Sep 17

'6 ತಿಂಗಳಲ್ಲಿ ಕೆಲಸ ಮಾಡಿ ಇಲ್ಲದಿದ್ರೆ..' ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಹೈಕಮಾಂಡ್ ನೀಡಿದ ಎಚ್ಚರಿಕೆ ಏನು?

ನೂತನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಕಾರ್ಯವೈಖರಿಯನ್ನು ಆರು ತಿಂಗಳ ಬಳಿಕ ಮೌಲ್ಯಮಾಪನ ಮಾಡಲಾಗುವುದು ಎಂದು ಕೆ.ಸಿ.ವೇಣುಗೋಪಾಲ್‌ ಎಚ್ಚರಿಸಿದ್ದಾರೆ. ಸರಿಯಾಗಿ ಕೆಲಸ ಮಾಡದವರನ್ನು ಬದಲಿಸಿ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story

08:47 AM (IST) Sep 17

ನೆಲಮಂಗಲಕ್ಕೆ ಮೆಟ್ರೋ ಸಂಪರ್ಕ, ಹೊಸ ಫ್ಲೈಓವರ್, ರಸ್ತೆ ಅಗಲೀಕರಣ - ಸಿಎಂ ಡಿಕೆಶಿ ಸ್ಪಂದನೆ

ನೆಲಮಂಗಲದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಲು ಮೆಟ್ರೋ ಸಂಪರ್ಕ, ಫ್ಲೈಓವರ್ ನಿರ್ಮಾಣ ಹಾಗೂ ರಸ್ತೆ ಅಗಲೀಕರಣದ ಕುರಿತು ಶಾಸಕ ಎನ್.ಶ್ರೀನಿವಾಸ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಬಿಡುಗಡೆಗೆ ಸಿದ್ಧರಿರುವುದಾಗಿ ಭರವಸೆ ನೀಡಿದ್ದಾರೆ.
Read Full Story

08:36 AM (IST) Sep 17

ಕೆಂಪುಕಲ್ಲಿನ ಮೇಲೆ ಕನ್ನಡ ಲಿಪಿಯ ಶಾಸನ ಪತ್ತೆ; ಮಠ ಸ್ಥಾಪನೆ, ಪೂಜೆ ವಿವರದ ಮಾಹಿತಿ

ಕೊಪ್ಪಳ ಜಿಲ್ಲೆಯ ಕಾರಟಗಿ ಸಮೀಪದ ಬೇವಿನಾಳ ಗ್ರಾಮದಲ್ಲಿ ಕನಕಗಿರಿ ಅರಸರ ಆಳ್ವಿಕೆಗೆ ಸೇರಿದ ಕ್ರಿ.ಶ. 1701ರ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಕೆಂಪುಕಲ್ಲಿನ ಮೇಲೆ ಕನ್ನಡ ಲಿಪಿಯಲ್ಲಿರುವ ಈ ಶಾಸನವು ಮಠ ಸ್ಥಾಪನೆ ಮತ್ತು ಅರಮನೆಯವರ ಪೂಜೆಯ ವಿವರಗಳನ್ನು ಒಳಗೊಂಡಿದೆ.
Read Full Story

08:24 AM (IST) Sep 17

ಕರಾವಳಿ ರೈಲು ಸಂಪರ್ಕ ಬಲವರ್ಧನೆ - ಸಚಿವ ವಿ. ಸೋಮಣ್ಣ ಮುಂದೆ 4 ಪ್ರಮುಖ ಬೇಡಿಕೆಗಳು!

Indian Railways: ದಕ್ಷಿಣ ಕನ್ನಡ ಮತ್ತು ಕರಾವಳಿ ಭಾಗದ ರೈಲು ಸಂಪರ್ಕ ಬಲಪಡಿಸಲು ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಕಿಶೋರ್‌ ಕುಮಾರ್‌ ಪುತ್ತೂರು ನಾಲ್ಕು ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

Read Full Story

08:10 AM (IST) Sep 17

ಚಿಕ್ಕಮಗಳೂರು & ಸಕಲೇಶಪುರ ರೈಲ್ವೆ ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿ ಅಕ್ರಮ ಆರೋಪ?

ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಭೂಸ್ವಾಧೀನ ಪರಿಹಾರ ವಿತರಣೆಯಲ್ಲಿ ಎಸ್‌ಎಲ್‌ಒ ಮಂಜುನಾಥ್ ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ರೋಹಿತ್ ಬಿ.ಆರ್. ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇದ್ದರೂ ವಾದಿಗೆ ಮಾಹಿತಿ ನೀಡದೆ ಪ್ರತಿವಾದಿಗೆ ಹಣ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

Read Full Story

08:05 AM (IST) Sep 17

ಕರಾವಳಿಯ ಭವಿಷ್ಯ ಬದಲಿಸುತ್ತಾ ನಾಳೆಯ ಮಂಗಳೂರು ಸಂಪುಟ ಸಭೆ? ಈ 3 ಮಹತ್ವದ ಘೋಷಣೆ ಸಾಧ್ಯತೆ?

ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ 2ನೇ ರಾಜ್ಯ ಭಾಷೆ ಸ್ಥಾನಮಾನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಜೊತೆಗೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝೆಡ್‌ ನಿಯಮ ಸಡಿಲಿಕೆ ಘೋಷಣೆಯ ನಿರೀಕ್ಷೆ.

Read Full Story

07:57 AM (IST) Sep 17

Bengaluru - 40 ಲಕ್ಷದ ಚಿನ್ನ ದೋಚಿ, AI ಫೋಟೋ ಕಳುಹಿಸಿದ ನಕಲಿ ಜ್ಯೋತಿಷಿ ವೆಂಕಟೇಶ್

ಚೌಡೇಶ್ವರಿ ದೇವಿ ಪೂಜೆಯ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ವೃದ್ಧೆಯಿಂದ 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾನೆ. ಆಭರಣ ವಾಪಸ್ ಕೇಳಿದಾಗ ತನಗೆ ಅಪಘಾತವಾಗಿದೆ ಎಂದು ಎಐ ಫೋಟೋ ಕಳುಹಿಸಿ ಪರಾರಿಯಾಗಿದ್ದಾನೆ.

Read Full Story

07:42 AM (IST) Sep 17

ಬೆಂಗಳೂರಿನ ಪ್ರತಿಷ್ಠಿತ ಮಾಲ್ ಮತ್ತು ಸಿನಿಮಾ ಮಂದಿರಕ್ಕೆ ಬಿಗ್ ಶಾಕ್! 75 ಸಾವಿರ ದಂಡ

ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಬಳಸಿದ್ದಕ್ಕಾಗಿ ಪಿವಿಆರ್ ಸಿನಿಮಾಸ್‌ಗೆ ಪಾಲಿಕೆ ಅಧಿಕಾರಿಗಳು 75,000 ರೂ. ದಂಡ ವಿಧಿಸಿದ್ದಾರೆ. ಹಾಗೆಯೇ, ಒಳಚರಂಡಿ ತ್ಯಾಜ್ಯ ಸುರಿದಿದ್ದಕ್ಕಾಗಿ ಫೋರಂ ಮಾಲ್ ಸಿಬ್ಬಂದಿಗೆ 50,839 ರೂ. ದಂಡ ಹಾಕಲಾಗಿದೆ.

Read Full Story

More Trending News