Published : Jul 15, 2025, 06:28 AM ISTUpdated : Jul 15, 2025, 11:15 PM IST

Karnataka News Live: 'ಬೆಂಗಳೂರು ಬಿಡುವ ಸಮಯ..' ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾದ ಬೆಂಗಳೂರು vs ಹೈದರಾಬಾದ್‌!

ಸಾರಾಂಶ

ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15 ರು.ನಿಂದ 18ರು.ಗೆ ಏರಿಸಲಾಗಿದೆ. ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20 ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು.

ಹಾಗೆಯೇ, ಅ. 10ರೊಳಗೆ (90 ದಿನ) ಮೀಟರ್‌ನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

11:15 PM (IST) Jul 15

'ಬೆಂಗಳೂರು ಬಿಡುವ ಸಮಯ..' ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾದ ಬೆಂಗಳೂರು vs ಹೈದರಾಬಾದ್‌!

ಬೆಂಗಳೂರಿನಲ್ಲಿರುವ ತಮ್ಮ ಕಚೇರಿಯನ್ನು ತಲುಪಲು ಪ್ರಯತ್ನಿಸುವಾಗ ಎದುರಿಸಿದ ಸಂಚಾರ ತೊಂದರೆಗಳ ಬಗ್ಗೆ ಸೋಶಿಯಲ್‌ ಮೀಡಿಯಾ ಯೂಸರ್‌ ಒಬ್ಬರು ಇತ್ತೀಚೆಗೆ ಪೋಸ್ಟ್‌ ಮಾಡಿದ್ದರು. ಇದರ ಬಗ್ಗೆ ಚರ್ಚೆ ಆರಂಭವಾಗಿದೆ.

 

Read Full Story

10:16 PM (IST) Jul 15

ಜಿಎಸ್‌ಟಿ ಭಾರ - ಗುಟ್ಕಾ, ಸಿಗರೇಟ್‌ ಸಿಗಲ್ಲ, ಈ ದಿನದಿಂದ ಎಲ್ಲವೂ ಬಂದ್‌ ಎಂದ ಅಂಗಡಿ ಮಾಲೀಕರು!

ಯುಪಿಐ ಮೂಲಕ ₹40 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸಿದ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಲು, ಗುಟ್ಕಾ, ಸಿಗರೇಟ್, ಕಾಂಡಿಮೆಂಟ್ಸ್, ಬೇಕರಿ ಅಂಗಡಿಗಳನ್ನು ಬಂದ್‌ ಮಾಡಿ ಹೋರಾಟ ನಡೆಸಲು ವರ್ತಕರು ತೀರ್ಮಾನಿಸಿದ್ದಾರೆ.
Read Full Story

09:51 PM (IST) Jul 15

ಬೆಂಗಳೂರು ಇಲ್ಲದಿದ್ರೆ ಏನಂತೆ, 8 ಸಾವಿರ ಎಕರೆ ಜಾಗ ಕೊಡ್ತೇವೆ ನಮ್ಮಲ್ಲೇ ಏರೋಸ್ಪೇಸ್‌ ಪಾರ್ಕ್‌ ಮಾಡಿ ಎಂದ ಆಂಧ್ರ!

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರಸ್ತಾವಿತ ಏರೋಸ್ಪೇಸ್ ಪಾರ್ಕ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

Read Full Story

08:40 PM (IST) Jul 15

Breaking - ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರಮಂದಿರಕ್ಕೆ ಏಕರೂಪ ದರ ಜಾರಿ, ಸಿನಿಮಾ ಟಿಕೆಟ್‌ಗೆ ಇನ್ನು 200 ರೂಪಾಯಿ!

ರಾಜ್ಯ ಸರ್ಕಾರವು ಎಲ್ಲಾ ಚಿತ್ರಮಂದಿರಗಳಿಗೆ ಏಕರೂಪ ಟಿಕೆಟ್ ದರ ಘೋಷಿಸಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಆದೇಶ ಹೊರಡಿಸಿದೆ.
Read Full Story

08:11 PM (IST) Jul 15

ಮಂಗಳೂರು ಜೈಲಿನೊಳಗೆ ರೌಡಿಸಂ - ಹಣಕ್ಕಾಗಿ ಸಹ ಕೈದಿಗಳಿಂದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ!

ಮಂಗಳೂರು ಸಬ್ ಜೈಲಿನಲ್ಲಿ ಹಣಕ್ಕಾಗಿ ಸಹ ಕೈದಿಗಳಿಂದ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ. ಜುಲೈ 9 ರಂದು ನಡೆದ ಈ ಘಟನೆಯಲ್ಲಿ ಕೈದಿಗಳಿಂದ 50 ಸಾವಿರ ರೂ. ಪೀಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

07:37 PM (IST) Jul 15

ವರ್ಕ್ ಫ್ರಮ್ ಹೋಂ ರೀಲ್ ನೋಡಿ ₹20 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ!

ಮನೆಯಿಂದಲೇ ಕೆಲಸ ಮಾಡುವ ಆಮಿಷವೊಡ್ಡಿ ಇನ್‌ಸ್ಟಾಗ್ರಾಂ ಮೂಲಕ ಮಹಿಳೆಯೊಬ್ಬರಿಗೆ ₹20,62,713 ವಂಚಿಸಲಾಗಿದೆ. ಟೆಲಿಗ್ರಾಂ ಖಾತೆಗಳ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
Read Full Story

07:27 PM (IST) Jul 15

ಕಾಶಿ ಯಾತ್ರೆಗೆ ಹೋಗಿಬರುವ ಕನ್ನಡಿಗರಿಗೆ ಸರ್ಕಾರದಿಂದ ₹5,000 ಸಹಾಯಧನ; ಇಂದಿನಿಂದ ಅರ್ಜಿ ಆಹ್ವಾನ!

ಕರ್ನಾಟಕದಿಂದ ಕಾಶಿ ಯಾತ್ರೆ ಕೈಗೊಂಡ 30,000 ಯಾತ್ರಿಕರಿಗೆ ರಾಜ್ಯ ಸರ್ಕಾರ ₹5,000 ಸಹಾಯಧನ ಘೋಷಿಸಿದೆ. ಜುಲೈ 15 ರಿಂದ ನವೆಂಬರ್ 15 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹ ಯಾತ್ರಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದು.
Read Full Story

07:15 PM (IST) Jul 15

ಕೇವಲ 21,000 ರೂಗೆ ಭಾರತದಲ್ಲಿ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಬುಕಿಂಗ್ ಆರಂಭ

ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಕಾರು ಈಗಾಗಲೇ ಭಾರತಕ್ಕೆ ಎಂಟ್ರಿಕೊಟ್ಟಿದೆ. ಇದೀಗ ವಿನ್‌ಫಾಸ್ಟ್ VF 6 ಹಾಗೂ VF 7 ಕಾರಿನ ಬುಕಿಂಗ್ ಆರಂಭಗೊಂಡಿದೆ. ಕೇವಲ 21,000 ರೂಪಾಯಿಗೆ ವಿನ್‌‌ಫಾಸ್ಟ್ ಕಾರು ನಿಮ್ಮದಾಗಿಸಿಕೊಳ್ಳಬಹುದು.

Read Full Story

06:42 PM (IST) Jul 15

Neha Dhupia - ನಗ್ನ ದೇಹ ಹಾಗೂ ಲೈಂ*ಗಿಕ ಕ್ರಿಯೆಯನ್ನು ಶಾರುಖ್ ಖಾನ್​​ಗೆ ಹೋಲಿಸಿದ ಮಾದಕ ತಾರೆ!

ಮಾದಕತೆಯಿಂದಲೇ ಸದ್ದು ಮಾಡ್ತಿರೋ ನಟಿ ನೇಹಾ ಧೂಪಿಯಾ, ನಗ್ನ ದೇಹ ಹಾಗೂ ಲೈಂ*ಗಿಕ ಕ್ರಿಯೆಯನ್ನು ಶಾರುಖ್ ಖಾನ್​ಗೆ ಹೋಲಿಸಿದ್ದಾರೆ. ಅವರು ಹೇಳಿದ್ದೇನು ನೋಡಿ!

 

Read Full Story

06:38 PM (IST) Jul 15

ಶ್ರೀರಂಗಪಟ್ಟಣದ ದೇಗುಲದ ಬಳಿಯ ನಿರ್ಜನ ಪ್ರದೇಶದಲ್ಲಿ ಪಾರ್ಶ್ವವಾಯು ಪತ್ನಿಗೆ ಹೆರಿಗೆ ಮಾಡಿಸಿದ ಪತಿ!

ಶ್ರೀರಂಗಪಟ್ಟಣದಲ್ಲಿ ಕುಟುಂಬದಿಂದ ತಿರಸ್ಕೃತ ದಂಪತಿಗೆ ನಿರ್ಜನ ಪ್ರದೇಶದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿಯೇ ಹೆರಿಗೆ ಮಾಡಿಸಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
Read Full Story

06:36 PM (IST) Jul 15

ಮೊಬೈಲ್ ನೋಡಿ ಕುರುಡಾದ ವಿದ್ಯಾರ್ಥಿನಿ ವಿಡಿಯೋ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ ವಂದನಾ ರೈ ಕಾರ್ಕಳ!

ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗುವ ಬಗ್ಗೆ ವಂದನಾ ರೈ ಟೀಚರ್ ಮಾಡಿದ್ದ ವಿಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿದ್ದು, ಅವರ ಮುಂದಿನ ಹೇಳಿಕೆ ದಾಖಲಿಸಿದ್ದಾರೆ.

Read Full Story

06:35 PM (IST) Jul 15

ಟೀಕೆಗಳಿಗೆ ಬಗ್ಗದ ಸರ್ಕಾರ, 17,700 ಕೋಟಿ ವೆಚ್ಚದ ಸುರಂಗ ರಸ್ತೆಗೆ ಜಾಗತಿಕ ಬಿಡ್‌ ಆಹ್ವಾನಿಸಿದ ಬೆಂಗಳೂರು ಸಂಸ್ಥೆ!

ಸುರಂಗ ರಸ್ತೆ ಯೋಜನೆಯ ವಿರುದ್ಧ ಸಾರ್ವಜನಿಕ ಟೀಕೆಗಳು ಹೆಚ್ಚುತ್ತಿರುವ ನಡುವೆಯೇ, ಕಾಂಗ್ರೆಸ್ ನೇತೃತ್ವದ ಸರ್ಕಾರವು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೆಚ್ಚಿನ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದೆ.

 

Read Full Story

06:30 PM (IST) Jul 15

ಜನಪ್ರಿಯ ಪಂಚಾಯತ್ ಸಿರೀಸ್ ನಟನಿಗೆ ಹೃದಯಾಘಾತ, ಆಸ್ಪತ್ರೆ ದಾಖಲು

ಇತ್ತೀಚೆಗಷ್ಟೇ ಪಂಚಾಯತ್ ಸೀಸನ್ 4 ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಪಂಚಾಯತ್ ಸೀರಿಸ್‌ನ ನಟ ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿದ್ದಾರೆ.

Read Full Story

06:18 PM (IST) Jul 15

Shower Bath - ಶವರ್​ನಲ್ಲಿ ಸ್ನಾನ ಮಾಡ್ತೀರಾ? ನೀವು ಮಾಡೋ ಈ ಒಂದು ತಪ್ಪು ಜೀವಕ್ಕೆ ಕುತ್ತು! ವೈದ್ಯೆ ಮಾತು ಕೇಳಿ

ನಾವು ಪ್ರತಿನಿತ್ಯ ಮಾಡುವ ಸ್ನಾನದ ಕ್ರಮದಿಂದಲೂ ಅನಾರೋಗ್ಯ ಸಮಸ್ಯೆ ತಂದುಕೊಳ್ಳುತ್ತಿದ್ದೇವೆ ಎನ್ನುವುದು ಗೊತ್ತಿದ್ಯಾ? ಶವರ್​ನಲ್ಲಿ ಸ್ನಾನ ಮಾಡುವ ಪ್ರತಿಯೊಬ್ಬರೂ ಈ ವೈದ್ಯೆಯ ಮಾತು ಕೇಳಲೇಬೇಕು.

 

Read Full Story

05:45 PM (IST) Jul 15

ಅತೀ ಕಡಿಮೆ ಬೆಲೆ ಎಸ್‌ಯುವಿ ನಿಸ್ಸಾನ್ ಮ್ಯಾಗ್ನೈಟ್ ಕಾರಿಗೆ 86,000 ರೂ ಡಿಸ್ಕೌಂಟ್

ನಿಸ್ಸಾನ್ ಮ್ಯಾಗ್ನೈಟ್ ಭಾರತದಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲನ್ನು ದಾಟಿದೆ. ಈ ಸಂಭ್ರಮದಲ್ಲಿರುವ ನಿಸ್ಸಾನ್ ಇಂಡಿಯಾ ಇದೀಗ ಬರೋಬ್ಬರಿ 86,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.  

Read Full Story

05:31 PM (IST) Jul 15

ಸರೋಜಾದೇವಿ ಪ್ರತಿಮೆಗಿಂತ ಹೆಸರುಳಿಸುವ ಕೆಲಸ ಮಾಡ್ತೇವೆ; ರಸ್ತೆಗೆ ಹೆಸರಿಡುವ ಸುಳಿವು ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್!

ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸರೋಜಾದೇವಿ ಅವರ ಕಲಾ ಸೇವೆಯನ್ನು ಸ್ಮರಿಸಿ, ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
Read Full Story

05:24 PM (IST) Jul 15

ರೈತರ ಪ್ರತಿಭಟನೆಗೆ ಮಣಿದ ಸಿದ್ದು, ಏರೋಸ್ಪೇಸ್‌ ಪಾರ್ಕ್‌ಗೆ 1777 ಎಕರೆ ಭೂಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ರೈತರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಮೀನು ನೀಡಲು ಇಚ್ಛಿಸುವ ರೈತರಿಗೆ ಹೆಚ್ಚಿನ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
Read Full Story

05:23 PM (IST) Jul 15

ಕರ್ನಾಟಕ NEET UG 2025 ಕೌನ್ಸೆಲಿಂಗ್ ದಿನಾಂಕ ವಿಸ್ತರಣೆ, ಇನ್ನೆರಡು ದಿನವಷ್ಟೇ ಅವಕಾಶ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) NEET UG 2025 ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಲು ಜುಲೈ 17 ರವರೆಗೆ ಗಡುವನ್ನು ವಿಸ್ತರಿಸಿದೆ. ದಾಖಲೆ ಪರಿಶೀಲನೆ ಜುಲೈ 18 ರಿಂದ 19 ರವರೆಗೆ ನಡೆಯಲಿದೆ. cetonline.karnataka.gov.in ನಲ್ಲಿ ನೋಂದಾಯಿಸಿ.
Read Full Story

05:05 PM (IST) Jul 15

ಕರ್ನಾಟಕದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಗರಣ, ಅನರ್ಹ ವಿದ್ಯಾರ್ಥಿಗಳಿಗೆ 1.3 ಕೋಟಿ ಹಣ!

ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣದಲ್ಲಿ ಕರ್ನಾಟಕದ ಲಿಂಕ್ ಪತ್ತೆಯಾಗಿದೆ. 2021 ಮತ್ತು 2023 ರ ನಡುವೆ 1.3 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಹತೆ ಇಲ್ಲದ 643 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ.
Read Full Story

04:49 PM (IST) Jul 15

ಬೆಂಗಳೂರಲ್ಲಿ ರೈಡ್ ದುಬಾರಿ? 175 ರೂ ಆಟೋ ರದ್ದು ಮಾಡಿ ₹12 ಕೊಟ್ಟು ಬಸ್‌ಲ್ಲಿ ಉದ್ಯಮಿ ಪ್ರಯಾಣ

ಬೆಂಗಳೂರಿನ ಎಥರ್ ಸ್ಕೂಟರ್ ಕಂಪನಿ ಸಹ ಸಂಸ್ಥಾಪಕ ಬೆಂಗಳೂರಿನ ಆಟೋ ಹಾಗೂ ಕ್ಯಾಬ್ ಪ್ರಯಾಣ ದರ ಪ್ರಶ್ನಿಸಿದ್ದಾರೆ. ಕಾರಣ 4 ಕಿಲೋಮೀಟರ್ ದೂರದ ಕಚೇರಿಗೆ ತೆರಳಲು ಆಟೋ ಬುಕ್ ಮಾಡಲು 175 ರೂಪಾಯಿ,  ಬಿಎಂಟಿಸಿ ಬಸ್‌ನಲ್ಲಿ 12 ರೂಪಾಯಿ . 

Read Full Story

04:45 PM (IST) Jul 15

1 ರೂ. ಹೆಚ್ಚು ಪಡೆದು 30 ಸಾವಿರ ದಂಡ ತೆತ್ತ KSRTC! ವಕೀಲ ರಾಕ್ಸ್​, ಸಾರಿಗೆ ಸಂಸ್ಥೆ ಶಾಕ್ಸ್​

ಟಿಕೆಟ್​ ಬೆಲೆಗಿಂದ ಒಂದು ರೂಪಾಯಿ ಹೆಚ್ಚಿಗೆ ಪಡೆದ KSRTC ವಿರುದ್ಧ ವಕೀಲರೊಬ್ಬರು ಕೋರ್ಟ್​ ಮೆಟ್ಟಿಲೇರಿದ್ದು, ಸಾರಿಗೆ ಸಂಸ್ಥೆಗೆ 30 ಸಾವಿರ ರೂಪಾಯಿ ದಂಡ ವಿಧಿಸಿದೆ ಕೋರ್ಟ್​. ಏನಿದು ಕುತೂಹಲದ ಸ್ಟೋರಿ ನೋಡಿ...

 

Read Full Story

04:09 PM (IST) Jul 15

ರಿಯಲ್‌ ಎಸ್ಟೇಟ್‌, ರಾಜಕಾರಣಿಗಳ ಲಾಬಿಗೆ ಮಣಿದ ಸರ್ಕಾರ, ಹೆಬ್ಬಾಳದಲ್ಲಿ ನಮ್ಮ ಮೆಟ್ರೋಗೆ ಸಿಕ್ತು ಬರೀ 9 ಎಕರೆ ಜಾಗ!

ಹೆಬ್ಬಾಳದಲ್ಲಿ ನಮ್ಮ ಮೆಟ್ರೋ ಯೋಜನೆಗೆ ಬೇಕಾದ ಭೂಮಿಯನ್ನು 45 ಎಕರೆಗಳಿಂದ 9 ಎಕರೆಗಳಿಗೆ ಇಳಿಸಲಾಗಿದೆ. ಈ ಕ್ರಮದಿಂದಾಗಿ ಭವಿಷ್ಯದ ಮೂಲಸೌಕರ್ಯ ಸೌಲಭ್ಯಗಳು ನಿಂತುಹೋಗುವ ಆತಂಕ ಎದುರಾಗಿದೆ. ರಿಯಲ್ ಎಸ್ಟೇಟ್ ಲಾಬಿಗಳ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂಬ ಆರೋಪ ಕೇಳಿಬಂದಿದೆ.
Read Full Story

04:02 PM (IST) Jul 15

ಉದ್ಯೋಗ,ಆರ್ಥಿಕವಕಾಶ ಒದಗಿಸುವ ಭಾರತದ ಟಾಪ್ 10 ಸಣ್ಣ ನಗರ, ಸಮೀಕ್ಷೆ ಪ್ರಕಟ

ಮಹಾನಗರ ಹೊರತುಪಡಿಸಿ ಭಾರತದ ಇತರ ನಗರಗಳಲ್ಲಿ ಯಾವ ನಗರ ಹೆಚ್ಚು ಉದ್ಯೋಗವಕಾಶ, ಆರ್ಥಿಕವಕಾಶ ಒದಗಿಸುವ ಭಾರತದ ಟಾಪ್ 10 ನಗರ ಪಟ್ಟಿ ಬಿಡುಗಡೆಯಾಗಿದೆ. ಲಿಂಕ್ಡ್‌ ಇನ್ ಸಿಟೀಸ್ ಆನ್ ದಿ ರೈಸ್ ಪಟ್ಟಿಯಲ್ಲಿ ಸ್ಥಾನ ಪಡೆದ ನಗರ ಯಾವುದು, ಕರ್ನಾಟಕದ ನಗರವಿದೆಯಾ?

Read Full Story

03:58 PM (IST) Jul 15

FBನಲ್ಲಿ ಫ್ರೆಂಡ್ಸ್​- ಎಮೋಜಿ ಮೂಲಕವೇ LOVE - ತರಕಾರಿ ಮಾರಾಟಗಾರನ ಜೊತೆ ಫಿಲಿಪ್ಪೀನ್ಸ್​ ಬೆಡಗಿ ಮದ್ವೆ

ಋಣ ಎಲ್ಲಿ, ಹೇಗೆ ಯಾವ ರೂಪದಲ್ಲಿ ಇರುತ್ತದೆ ಎಂದು ಹೇಳಲಾಗದು ಎನ್ನುವುದಕ್ಕೆ ಈ ಸ್ಟೋರಿ ಉದಾಹರಣೆ. ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಎನ್ನುವುದಕ್ಕೂ ಇದನ್ನು ಉದಾಹರಣೆಯಾಗಿ ಬಳಸಬಹುದು. ಗುಜರಾತ್​ನ ಯುವಕ, ಫಿಲಿಪ್ಪೀನ್ಸ್ ಯುವತಿ ಲವ್​ಸ್ಟೋರಿ ಕೇಳಿ...

 

Read Full Story

03:25 PM (IST) Jul 15

ಫಲಿಸಿತು ಭಾರತೀಯರ ಪ್ರಾರ್ಥನೆ, ನಿಮಿಷ ಪ್ರಿಯಾ ಗಲ್ಲು ಶಿಕ್ಷೆಗೆ ಯೆಮೆನ್ ತಾತ್ಕಾಲಿಕ ಬ್ರೇಕ್

ಕೋಟ್ಯಾಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಭಾರತದ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿದೆ. ಇದೀಗ ಯೆಮೆನ್ ದೇಶ ಕೇರಳದ ನರ್ಸ್‌ ನಿಮಿಷ ಪ್ರಿಯಾಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ.

 

Read Full Story

02:59 PM (IST) Jul 15

ಸಿಗಂದೂರು ಸೇತುವೆ ಉದ್ಘಾಟನೆ - ಪ್ರಣವಾನಂದ ಸ್ವಾಮೀಜಿಗೆ ಬಿಜೆಪಿಯಿಂದ ಅವಮಾನವಾಯ್ತಾ? ಏನಿದು ವಿವಾದ

ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಈಡಿಗ ಸಂಸ್ಥಾನದ ಪ್ರಣವಾನಂದ ಸ್ವಾಮೀಜಿ ಅವರಿಗೆ ಬಿಜೆಪಿ ನಾಯಕರು ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಊಟದ ವ್ಯವಸ್ಥೆ ಮತ್ತು ಸ್ಥಳೀಯ ನಾಯಕರ ವರ್ತನೆಯ ಬಗ್ಗೆ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

02:21 PM (IST) Jul 15

AI ಶಿಕ್ಷಣ ಯೋಜನೆಗೆ ಒತ್ತು ನೀಡಲು ಸುರ್ಜೇವಾಲಾ ಸಲಹೆ - ಸಚಿವ ಮಧು ಬಂಗಾರಪ್ಪ

ನನ್ನ ಇಲಾಖೆ ಬಗ್ಗೆ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಬಹಳ ಖುಷಿ ಪಟ್ರು. ನನಗೆ ಏನು ಟಾರ್ಗೆಟ್ ಕೊಟ್ಟಿದ್ರು ಅದಕ್ಕಿಂತ ಹೆಚ್ಚಾಗಿ ಮಾಡ್ತಿದ್ದೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Read Full Story

02:20 PM (IST) Jul 15

ಮೂಡುಬಿದರೆ ಕಾಲೇಜಿನ ಮೂವರು ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾ*ರ!

ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯ ಮೇಲೆ ಮೂವರು ಉಪನ್ಯಾಸಕರು ಅತ್ಯಾಚಾರವೆಸಗಿ, ವಿಡಿಯೋ ಮತ್ತು ಫೋಟೋಗಳಿಂದ ಬೆದರಿಸಿ ಪದೇ ಪದೇ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಸಂತ್ರಸ್ತೆಯ ಪೋಷಕರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Read Full Story

02:03 PM (IST) Jul 15

ಭಾರತದ ಮೊದಲ ಬಾರಿಗೆ ಟೆಸ್ಲಾ ಎಲೆಕ್ಟ್ರಿಕ್ ಕಾರು ಲಾಂಚ್, ಬೆಲೆ, ನಿರ್ವಹಣಾ ವೆಚ್ಚ ಬಹಿರಂಗ

ಭಾರತದಲ್ಲಿ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಎಲೆಕ್ಟ್ರಿಕ್ ಕಾರು ಶೋ ರೂಂ ಉದ್ಘಾಟನೆಯಾಗಿದೆ. ಇದರ ಜೊತೆಗೆ ಬೆಲೆಯೂ ಬಹಿರಂಗವಾಗಿದೆ. 622 ಕಿಲೋಮೀಟರ್ ಮೈಲೇಜ್ ನೀಡಬಲ್ಲ ಕಾರಿನ ಬೆಲೆ ಹಾಗೂ ನಿರ್ವಹಣೆ ವೆಚ್ಚ ಎಷ್ಟು?

 

Read Full Story

02:01 PM (IST) Jul 15

ಯೆಮೆನ್‌ನಲ್ಲಿ ನಾಳೆ ಗಲ್ಲಿಗೇರಬೇಕಿದ್ದ ಮಲೆಯಾಳಿ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಮುಂದೂಡಿಕೆ!

ಯೆಮೆನ್‌ನಲ್ಲಿ ಜು.16ಕ್ಕೆ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಗಲ್ಲುಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭಾರತ ಸರ್ಕಾರದ ಮಧ್ಯಪ್ರವೇಶ ಮತ್ತು ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಈ ಬೆಳವಣಿಗೆ ನಡೆದಿದೆ. ನಿಮಿಷಾ ಪ್ರಿಯಾ ಉಳಿಸುವ ಪ್ರಯತ್ನ ಮುಂದುವರೆದಿದೆ.

Read Full Story

01:58 PM (IST) Jul 15

Udupi - ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರುಪಾಲು - ಓರ್ವ ಪಾರು

ಮೀನುಗಾರಿಕೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಅಲೆಗಳ ರಭಸಕ್ಕೆ ನೀರುಪಾಲಾದ ದಾರುಣ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.

Read Full Story

01:39 PM (IST) Jul 15

ಅನುಮಾನ ಹೆಚ್ಚಿಸಿದ ಹತ್ಯೆಯಾದ ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಸ್ವಾನಿಶ್ ಭಾಷೆ ಬಯೋ

ತಂದೆಯಿಂದಲೇ ಹತ್ಯೆಯಾದ ಟೆನಿಸ್ ಪಟು ರಾಧಿಕಾ ಯಾದವ್ ಇನ್‌ಸ್ಟಾಗ್ರಾಂ ಬಯೋ ಹಲವು ಅನುಮಾನ ಹೆಚ್ಚಿಸಿದೆ.ಸ್ಪಾನಿಶ್ ಭಾಷೆಯಲ್ಲಿರುವ ಈ ಬಯೋ ಹಾಗೂ ಅದರ ಅರ್ಥ ಹಲವು ಅನುಮಾನ ಮೂಡಿಸಿದೆ.

Read Full Story

01:31 PM (IST) Jul 15

Heart Attack signs - ಗಂಟಲು-ದವಡೆ ನೋವುಗಳೂ ಹೃದಯಾಘಾತಕ್ಕೆ ಮುನ್ಸೂಚನೆ - ಡಾ.ಮಂಜುನಾಥ್ ಮಾತು ಕೇಳಿ...

ಎದೆ ನೋವು, ಎದೆಯುರಿ ಮಾತ್ರವಲ್ಲದೇ ಗಂಟಲು ಮತ್ತು ದವಡೆ ನೋವುಗಳೂ ಹೃದಯಾಘಾತದ ಮುನ್ಸೂಚನೆಯಾಗಿದೆ. ಆದರೆ ಇದು ಯಾವ ಸಮಯದಲ್ಲಿ ಆಗುವ ನೋವು? ಈ ಬಗ್ಗೆ ಹೃದಯ ತಜ್ಞ ಡಾ. ಸಿ.ಎನ್​. ಮಂಜುನಾಥ್​ ಹೇಳಿದ್ದಾರೆ ಕೇಳಿ...

 

Read Full Story

01:30 PM (IST) Jul 15

ಸೆಲ್ಫಿ ಜಗಳದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ ಪ್ರಕರಣ, ನವದಂಪತಿ ವಿಚ್ಛೇದನ!

ಸೇತುವೆ ಮೇಲೆ ಸೆಲ್ಫಿ ವಿಚಾರಕ್ಕೆ ನಡೆದ ಜಗಳದಿಂದಾಗಿ ನವದಂಪತಿ ವಿಚ್ಛೇದನ ಪಡೆದಿದ್ದಾರೆ. ಪತಿಯನ್ನು ನದಿಗೆ ತಳ್ಳಿದ ಆರೋಪ ಎದುರಿಸುತ್ತಿದ್ದ ಪತ್ನಿ, ಕುಟುಂಬದ ಮಾನ ಮರ್ಯಾದೆ ಹರಾಜಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಗುರ್ಜಾಪುರ ಸೇತುವೆ ಘಟನೆಯ ವಿಡಿಯೋ ವೈರಲ್ ಆಗಿತ್ತು.
Read Full Story

01:27 PM (IST) Jul 15

World Youth Skills Day - ಯುವಜನತೆಯ ಸದ್ಬಳಕೆ ದೇಶ ಅಭಿವೃದ್ಧಿಗೆ ರಹದಾರಿ - ಲಕ್ಷ್ಮಣ್ ಲೇಖನ

‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು ೫ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸಬಲವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತಿದೆ.

Read Full Story

01:04 PM (IST) Jul 15

Foetus inside foetus - ಅಮ್ಮನ ಹೊಟ್ಟೆಯಲ್ಲೇ ಮಗು ಪ್ರೆಗ್ನೆಂಟ್​! ವೈದ್ಯಲೋಕಕ್ಕೇ ಸವಾಲು- ಏನಿದು ಕೇಸ್​?

ಅಮ್ಮನ ಗರ್ಭದಲ್ಲಿ ಇರುವಾಗಲೇ ಮಗು ಗರ್ಭಧರಿಸಿರುವ ವಿಚಿತ್ರ ಕೇಸ್​ ಒಂದು ಮಹಾರಾಷ್ಟ್ರದಲ್ಲಿ ನಡೆದಿದ್ದು, ಇಡೀ ವೈದ್ಯಲೋಕವನ್ನೇ ಇದು ಬೆಚ್ಚಿ ಬೀಳಿಸಿದೆ. ಏನಿದು ಪ್ರಕರಣ?

 

Read Full Story

12:38 PM (IST) Jul 15

ಬೆಂಗಳೂರು ಟ್ರಾಫಿಕ್‌ನಲ್ಲಿ 2 ಗಂಟೆ ಸಿಲುಕಿದ ಉದ್ಯಮಿ, ಪರಿಹಾರಕ್ಕೆ 1 ಕೋಟಿ ರೂ ಪ್ರಾಜೆಕ್ಟ್ ಘೋಷಣೆ

ಬೆಂಗಳೂರಿಗೆ ಬಂದವರು ಟ್ರಾಫಿಕ್‌ನಲ್ಲಿ ಸಿಲುಕದೇ ಇರುತ್ತಾರಾ?ಖಂಡಿತ ಸಾಧ್ಯವಿಲ್ಲ. ಇದೀಗ ಖ್ಯಾತ ಉದ್ಯಮಿ ಬೆಂಗಳೂರು ಟ್ರಾಫಿಕ್ ರಸ್ತೆಯ ಒಂದೇ ಕಡೆ ಬರೋಬ್ಬರಿ 2 ಗಂಟೆ ಸಿಲುಕಿದ್ದಾರೆ. ಈ ಪರದಾಟದ ಬೆನ್ನಲ್ಲೇ ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ 1 ಕೋಟಿ ರೂಪಾಯಿ ಪ್ರಾಜೆಕ್ಟ್ ಘೋಷಿಸಿದ್ದಾರೆ.

Read Full Story

12:24 PM (IST) Jul 15

ಪಂಚಮಸಾಲಿ ಮಠದಲ್ಲಿ ಅನೈತಿಕ ಚಟುವಟಿಕೆ ಬಗ್ಗೆ ಸಂದೇಹ ಜಯಮೃತ್ಯುಂಜಯ ಸ್ವಾಮೀಜಿ ಬೆಂಬಲಿಗರ ವಿರುದ್ಧ ಎಫ್‌ಐಆರ್

ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಮತ್ತೆ ಅನೈತಿಕ ಚಟುವಟಿಕೆಗಳ ಸಂದೇಹದಿಂದ ಬೀಗ ಹಾಕಲಾಗಿತ್ತು. ಆದರೆ, ಕೆಲವರು ಬೀಗ ಮುರಿದು ಒಳನುಗ್ಗಿದ್ದಾರೆ. ಈ ಘಟನೆ ಸ್ವಾಮೀಜಿ ಮತ್ತು ಟ್ರಸ್ಟ್ ನಡುವಿನ ತಿಕ್ಕಾಟವನ್ನು ಮತ್ತೆ ಬಯಲಿಗೆಳೆದಿದೆ.
Read Full Story

12:13 PM (IST) Jul 15

ಕಾಂಗ್ರೆಸ್ ಸಾಧನೆಗೆ ಬಿಜೆಪಿ ಟೀಕೆ ಅರ್ಥವಿಲ್ಲ - ಡಿ.ಕೆ.ಶಿವಕುಮಾರ್ ಗುಡುಗು

ಎಲ್ಲ ಹುಳಿಗಳಲ್ಲೇ ಶ್ರೇಷ್ಠವಾದದ್ದು ಲಿಂಬೆ ಹುಳಿ. ನಿಂಬೆಗಿಂತ ಹುಳಿಯಿಲ್ಲ, ದುಂಬಿಗಿಂತ ಕರೆಯಿಲ್ಲ, ಶಂಬುಗಿಂತ ದೊಡ್ಡ ದೇವರಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಣ್ಣುಡಿ ಹೇಳಿದರು.

Read Full Story

12:03 PM (IST) Jul 15

ಎಸ್ಸಿ-ಎಸ್ಟಿ ಸರ್ಕಾರಿ ನೌಕರರ ಮುಂಬಡ್ತಿ ಕೊಡಿ; ಸಿದ್ದರಾಮಯ್ಯಗೆ ವಾರ್ನಿಂಗ್ ಕೊಟ್ಟ ಮಲ್ಲಿಕಾರ್ಜುನ ಖರ್ಗೆ!

ರಾಜ್ಯದಲ್ಲಿ ಎಸ್.ಸಿ./ಎಸ್.ಟಿ. ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ರೋಸ್ಟರ್ ಬಿಂದುಗಳ ಅನುಸರಣೆ ಇಲ್ಲದಿರುವ ಬಗ್ಗೆ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಕೆಲವು ಇಲಾಖೆಗಳಲ್ಲಿ ರೋಸ್ಟರ್ ಅನುಸರಣೆ ಇಲ್ಲದಿರುವುದನ್ನು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Read Full Story

More Trending News